Featured

ಮಂಗಳೂರು : ಹಿಂದೂಯೇತರರು ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿನ ವ್ಯವಹಾರದಿಂದ ದೂರವಿರಿ : ಡಾ.ಭರತ್ ಶೆಟ್ಟಿ – Vishwanews24

ಹಿಂದೂಯೇತರರು ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿನ ವ್ಯವಹಾರದಿಂದ ದೂರವಿರಿ” : ಡಾ.ಭರತ್ ಶೆಟ್ಟಿ

ಮಂಗಳೂರು : ಹಿಂದೂಯೇತರರು ಹಿಂದೂ ಧಾರ್ಮಿಕ ಕ್ಷೇತ್ರಗಳಲ್ಲಿನ ವ್ಯವಹಾರದಿಂದ ದೂರವಿರ ಬೇಕೆಂದು ಶಾಸಕ ಡಾ, ಭರತ್ ಶೆಟ್ಟಿ ಹೇಳಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಡಾ ಭರತ್ ಹಿಂದೂ ಸಮಾಜದ ಪಾರಂಪರಿಕ ಪುಣ್ಯ ಕ್ಷೇತ್ರಗಳು, ಧಾರ್ಮಿಕ ಕ್ಷೇತ್ರಗಳಲ್ಲಿ ಹಾಗೂ ಇಲ್ಲಿನ ಜಾತ್ರಾ ಮಹೋತ್ಸವದ ಸಂದರ್ಭ ಮಾಡುತ್ತಿದ್ದ ವ್ಯಾಪಾರ ವಹಿವಾಟು ಇನ್ನು ಮುಂದೆ ಹಿಂದೂಯೇತರ ವ್ಯಾಪಾರಿಗಳು ಕೈ ಬಿಡಬೇಕು, ಇದು ಹಿಂದೂ ಸಮಾಜದ ಶ್ರದ್ಧಾ ಭಕ್ತಿಯ ಕೇಂದ್ರವಾಗಿದೆ.ಹಿಂದೂಗಳಿಗೆ ಮಾತ್ರ ಅವಕಾಶವಿರಬೇಕು. ಇತರಡೆ ಮಾಡಿಕೊಂಡು ಹೋಗುವುದಾದರೆ ಅಭ್ಯಂತರವಿಲ್ಲ ಎಂದಿದ್ದಾರೆ. ಧಾರ್ಮಿಕ ನಂಬಿಕೆಯಿಂದ ಹಿಂದೂ ಸಮಾಜದವರು ದೈವ ದೇವರ ದರ್ಶನಕ್ಕೆ ಬರುತ್ತಾರೆ.

ಇಂತಹ ಸಂದರ್ಭ ಮೂರ್ತಿ ಪೂಜೆ ನಂಬದ, ನಿತ್ಯ ಅವಹೇಳನ ಮಾಡುತ್ತಾ ,ಸಾಮಾಜಿಕ ಜಾಲತಾಣದಲ್ಲಿ ಅಸಭ್ಯವಾಗಿ ಚಿತ್ರಿಸುವ ಹಿಂದೂಯೇತರ ಜನರಿಂದ ದೇವರಿಗೆ ಹೂ,ಹಣ್ಣು,ಕಾಯಿ ಮತ್ತಿತರ ವಸ್ತುಗಳನ್ನು ಕೊಂಡು ಅರ್ಪಿಸಿದರೆ ದೇವರೂ ಸ್ವೀಕರಿಸಲಾರ. ಇಲ್ಲಿ ಕೇವಲ ದುಡ್ಡು ಮಾಡುವ ಸ್ಥಳವಲ್ಲ.ಬದಲಾಗಿ ನಂಬಿಕೆ, ಶ್ರದ್ಧೆಯೂ ಇರಬೇಕು. ಧಾರ್ಮಿಕ ದತ್ತಿ ಇಲಾಖೆಯ ಕಾಯಿದೆಯನ್ವಯ ದೇವಸ್ಥಾನ ಹಾಗೂ ಧಾರ್ಮಿಕ ಶ್ರದ್ಧಾಕೇಂದ್ರದ ಸುತ್ತ ಹಿಂದೂ ಬಾಂಧವರಿಗೆ ಮಾತ್ರ ಇರುವ ಅವಕಾಶವನ್ನು ಸರಕಾರ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂದು ಒತ್ತಾಯಿಸಿದ್ದಾರೆ. ಮುಸ್ಲಿಂರ ಖಟ್ಟರ್ ಪದ್ದತಿಯಾದ ಹಲಾಲ್ ನಿಷೇಧ ಹೋರಾಟ ಸಂದರ್ಭ ಮುಸ್ಲಿಂ ಸಮಾಜಕ್ಕೆ ಬೆಂಬಲ ನೀಡಿದವರು, ಇದೀಗ ಹಿಂದೂಗಳಿಗೂ ವ್ಯಾಪಾರಕ್ಕೆ ಬೆಂಬಲ ನೀಡಿ ತಮ್ಮ ಜಾತ್ಯಾತೀತತೆಯನ್ನು ಸಾಬೀತು ಪಡಿಸಬೇಕು.

ಇಂದು ಹಿಂದೂ ಧರ್ಮದವರು ಮಾಡುತ್ತಿರುವ ಅಭಿಯಾನದ ವಿರುದ್ದ ದೂರು ದಾಖಲಿಸಿದವರು ಮುಂದೆ ದೇವಸ್ಥಾನ ಸಮಿತಿ, ವ್ಯಾಪಾರದಲ್ಲೂ ಮೀಸಲಾತಿ ತನ್ನಿ ಎಂದರೂ ಆಶ್ಚರ್ಯವಿಲ್ಲ. ಈ ನಿಟ್ಟಿನಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗದಳವು ಹಿಂದೂ ಆಂಗಡಿಗಳಿಗೆ ಭಗಧ್ವಜ ಕಟ್ಟಿರುವುದು ಅಪರಾಧವಲ್ಲ .ಸರಕಾರದ ಹಿಂದೂ ವಿರೋಧಿ ನಡೆಯನ್ನು ಸವಾಲಾಗಿ ಸ್ವೀಕರಿಸಿ ನ್ಯಾಯಾಲಯದ ಮುಂದೆ ಪ್ರಶ್ನಿಸಿ ನ್ಯಾಯಾಲಯಕ್ಕೂ ಮನವರಿಕೆ ಮಾಡಿ ತಡೆಯಾಜ್ಞೆ ತಂದಿರುವುದು ಹಿಂದೂ ಸಮಾಜಕ್ಕೆ ಸಿಕ್ಕಿದ ಜಯವಾಗಿದೆ.

ನ್ಯಾಯಲಯವೂ ಇದನ್ನು ಪರಿಗಣಿಸಿ ತಡೆ ನೀಡಿದ್ದು ಹಿಂದೂಗಳ ವಿರುದ್ದ ಹೋದ ಸರಕಾರಕ್ಕೂ ನ್ಯಾಯಾಲಯದ ಅದೇಶದಿಂದ ಮುಖಭಂಗವಾಗಿದೆ ಎಂದು ತಿಳಿಸಿದ್ದಾರೆ.

Vishwa News 24

Recent Posts

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ -vishwanews24

ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…

2 hours ago

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ -vishwanews24

ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…

2 hours ago

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ -vishwanews24

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…

3 hours ago

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ -vishwanews24

ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…

3 hours ago

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ -vishwanews24

ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ  ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…

3 hours ago

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ -vishwanews24

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…

3 hours ago