ಮತ್ತೆ ಸುದ್ದಿಯಾದ ವಿವದಾತ್ಮಕ ನಟ ಶಾರುಕ್ ಖಾನ್. ಮತ್ತೊಂದು ಕೇಸ್ ಫಿಕ್ಸ್ !
ಮುಂಬೈ: ಬಾಲಿವುಡ್ ಬಾದ್ಶಾ ಶಾರೂಕ್ ಖಾನ್ ವಿರುದ್ಧ ಸಿಖ್ ಸಮುದಾಯದವರು ದೂರು ದಾಖಲಿಸಿದ್ದಾರೆ.
‘ಝೀರೋ’ ಚಿತ್ರದ ಟ್ರೇಲರ್ ನಲ್ಲಿ ಶಾರೂಕ್ ‘ಕಿರ್ ಪನ್’ ಧರಿಸಿದ್ದಕ್ಕೆ ದೆಹಲಿಯ ಸಿಖ್ ಗುರುದ್ವಾರ ಮ್ಯಾನೇಜ್ಮೆಂಟ್ ಕಮಿಟಿಯ ಜನರಲ್ ಸೆಕ್ರೆಟರಿ ಮಂಜಿದರ್ ಸಿಂಗ್ ಸಿರಸಾ ಶಾರೂಕ್ ಹಾಗೂ ನಿರ್ದೇಶಕ ಆನಂದ್ ಎಲ್ ರೈ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಿದ್ದಾರೆ.
ಸಿಖ್ ಸಮುದಾಯದವರು ಝೀರೋ ಚಿತ್ರದ ಟ್ರೈಲರ್ ತಮ್ಮ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ದೂರು ನೀಡುತ್ತಿದ್ದರು. ಹಾಗಾಗಿ ದೆಹಲಿಯ ನಾರ್ತ್ ಆವೆನ್ಯೂ ಪೊಲೀಸ್ ಠಾಣೆಯಲ್ಲಿ ಶಾರೂಕ್ ಹಾಗೂ ಆನಂದ್ ವಿರುದ್ಧ ದೂರು ದಾಖಲಾಗಿದೆ.
ಚಿತ್ರದ ಟ್ರೈಲರ್ ನಲ್ಲಿ ಶಾರೂಕ್ ಗತ್ರಾ ಕಿರ್ ಪನ್ ಧರಿಸಿದ್ದಾರೆ. ವಿಶ್ವಾದ್ಯಂತ ಸಿಖ್ ಸಮುದಾಯದವರು ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಿಖ್ ಸಂಪ್ರದಾಯದ ಪ್ರಕಾರ ಗತ್ರ ಕಿರ್ ಪನ್ ಕೇವಲ ಅಮ್ರಿತ್ದರಿ ಸಿಖ್ ಜನರು ಧರಿಸುವುದು. ಹಾಗಾಗಿ ಶಾರೂಕ್ ಹಾಗೂ ಆನಂದ್ ವಿರುದ್ಧ ದೂರು ದಾಖಲಿಸಬೇಕೆಂದು ಪೊಲೀಸರಿಗೆ ಮಂಜಿದರ್ ಒತ್ತಾಯಿಸಿದ್ದಾರೆ.
ಝೀರೋ ಚಿತ್ರದ ಟ್ರೈಲರ್ ನಲ್ಲಿ ಶಾರೂಕ್ ಗತ್ರ ಕಿರ್ ಪನ್ ಧರಿಸಿದ ಕಾರಣ ವಿಳಂಬ ಮಾಡದೇ ಈ ಟ್ರೇಲರ್ ಪ್ರದರ್ಶನ ಮಾಡುವುದನ್ನು ನಿಲ್ಲಿಸಬೇಕೆಂದು ಮಂಜಿದರ್ ಸಿಂಗ್ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಈ ಚಿತ್ರದಲ್ಲಿ ನಟಿ ಶ್ರೀದೇವಿ, ರಾಣಿ ಮುಖರ್ಜಿ, ಕಾಜೋಲ್, ಅಲಿಯಾ ಭಟ್, ಅಭಯ್ ಡಿಯೋಲ್, ಆರ್. ಮಾಧವನ್ ಹಾಗೂ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಶಾರೂಕ್ಗೆ ನಾಯಕಿಯಾಗಿ ಅನುಷ್ಕಾ ಶರ್ಮಾ ಹಾಗೂ ಕತ್ರಿನಾ ಕೈಫ್ ನಟಿಸಿದ್ದು, ಡಿಸೆಂಬರ್ 21ರಂದು ಚಿತ್ರ ಬಿಡುಗಡೆಯಾಗಲಿದೆ.
2028ಕ್ಕೆ ರಾಜ್ಯದಲ್ಲಿ ಇದೇ ಡಿ.ಕೆ. ಶಿವಕುಮಾರ್ ಹಾಗೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ : ಡಿ.ಕೆ.ಶಿವಕುಮಾರ್ ವಿಶ್ವಾಸ ಬೆಂಗಳೂರು: '2028ಕ್ಕೆ ರಾಜ್ಯದಲ್ಲಿ…
ಬೆಳ್ತಂಗಡಿ : ಡೋರ್ ಲಾಕ್ ಆಗಿ ಕಾರಿನೊಳಗೆ ಸಿಲುಕಿಕೊಂಡ ಮಗು; ಗ್ಲಾಸ್ ಒಡೆದು ರಕ್ಷಣೆ ಬೆಳ್ತಂಗಡಿ: ಕುವೆಟ್ಟು ಗ್ರಾಮದ ಮದ್ದಡ್ಕದಲ್ಲಿ…
ತೈಲ ದರ ಹೆಚ್ಚಳದಿಂದ ಲಾಭ ಇರೋದು ರಾಜ್ಯಕ್ಕೆ ,ಕೇಂದ್ರಕ್ಕಲ್ಲ: ಆರ್. ಅಶೋಕ್ ಸಮರ್ಥನೆ ಬೆಂಗಳೂರು: ತೈಲ ದರ ಹೆಚ್ಚಳದಿಂದ ಕೇಂದ್ರಕ್ಕೆ…
ಬಕ್ರೀದ್ ಹಬ್ಬದ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಪ್ರಾಣಿ ಬಲಿ, ರಸ್ತೆ ತಡೆದು ನಮಾಝ್ಗೆ ಅವಕಾಶವಿಲ್ಲ: ಯೋಗಿ ಆದಿತ್ಯನಾಥ್ ಲಕ್ನೋ: ಬಕ್ರೀದ್…
ಉಡುಪಿ : ಕೇಂದ್ರ ಮೋದಿ ಸರ್ಕಾರದಿಂದ ಪೆಟ್ರೋಲ್ ದರ ಹೆಚ್ಚಳಕ್ಕೆ ನವೀನ್ ಸಾಲಿಯಾನ್ ಖಂಡನೆ ಉಡುಪಿ: ದೇಶದಲ್ಲಿ ಮತ್ತೆ ಇಂಧನ…
ಕೊಲ್ಲೂರು : ಅಪಘಾತದಿಂದ ಮೃತಪಟ್ಟ ಮಹಿಳೆಯ ಚಿನ್ನಾಭರಣ ಕಳವು ಪ್ರಕರಣ : ಆರೋಪಿ ಬಂಧನ ಉಡುಪಿ: ಬೈಂದೂರು ತಾಲೂಕು ಕೊಲ್ಲೂರು…