Featured

ಮದ್ಯ ಇಟ್ಟುಕೊಳ್ಳಲು ಶಿರೂರು ಮಠ ಬಾರ್ ಆಂಡ್ ರೆಸ್ಟೋರೆಂಟ್ ಅಲ್ಲ : ಬಾರ್ಕೂರು ಶ್ರೀ

ಕಾರವಾರ: ಉಡುಪಿಯ ಶಿರೂರು ಶ್ರೀ ಮೃತಪಟ್ಟ ಐದು ದಿನಗಳಲ್ಲಿ ಮಠದಲ್ಲಿ ನಾಲ್ಕೂವರೆ ಲಕ್ಷ ರೂ. ಮದ್ಯ ಸಿಕ್ಕಿದೆ ಎಂಬುದು ಅಸಂಬದ್ಧ. ನಾಲ್ಕೂವರೆ ಲಕ್ಷದಷ್ಟು ಮದ್ಯ ಇಟ್ಟುಕೊಳ್ಳಲು ಅದೇನು ಬಾರ್ ಆಂಡ್ ರೆಸ್ಟೋರೆಂಟ್ ಅಲ್ಲ. ಇದು ಸಾಧ್ಯವೇ ಇಲ್ಲ ಅಂತ ಬಾರ್ಕೂರು ಮಠದ ಪೀಠಾಧಿಪತಿ ಸಂತೋಷ್ ಗುರೂಜಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಅಂಕೋಲದ ಬಾಸ್ಗೋಡಿನಲ್ಲಿ ಪಹರೆ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಉಡುಪಿಯ ಶಿರೂರು ಶ್ರೀ ವಿಧಿವಶರಾದ ಮೇಲೆ ಅವರ ಮೇಲೆ ಇರುವ ಹಗೆತನ ಕಡಿಮೆಯಾಗಿಲ್ಲ. ಶ್ರೀಗಳು ಸತ್ತಮೇಲೂ ಆರೋಪ ನಡೆಯುತ್ತಿದೆ ಎಂದರೆ ಅವರು ಸಾಯುವ ಮುಂಚೆ ಬೇರೆ ಶಕ್ತಿ ಕೆಲಸ ಮಾಡಿದೆ. ಯಾವ ಮಠದವರೂ ಮಾಡಿದ್ದಾರೋ ಅಥವಾ ಬೇರೆಯವರು ಮಾಡಿದ್ದಾರೋ ಗೊತ್ತಿಲ್ಲ. ಒಂದು ಸಮುದಾಯದವರಿಗೆ ಗುರುಗಳಾಗಿರುವ ಸ್ವಾಮೀಜಿ ಅವರ ಹತ್ಯೆಯಾಗಿದೆ. ಪೊಲೀಸರಿಗೆ ಅಷ್ಟ ಮಠಗಳು ಸಹಕಾರ ನೀಡಬೇಕೇ ವಿನಾಃ ಬೇರೆ ರೀತಿ ಮಾಡಬಾರದು ಅಂತ ಹಳಿದ್ರು.

ರಮ್ಯ ಶಟ್ಟಿಯನ್ನು ಅಪರಾಧಿ ಎಂದು ಬಿಂಬಿತ ಮಾಡಲಾಗಿದೆ. ಆಕೆ ಆರೀತಿ ಇಲ್ಲ. ಆಕೆ ಒಂದು ಹೆಣ್ಣುಮಗಳಾಗಿ ಹೇಳಬೇಕೆಂದರೆ ಚಿನ್ನದ ಮೊಟ್ಟೆ ಇಡುವ ಕೋಳಿಯನ್ನ ಕುತ್ತಿಗೆ ಕೊಯ್ದು ಹಾಕುವಷ್ಟು ದಡ್ಡಿಯಲ್ಲ. ಮಠದಲ್ಲಿ ನಾಲ್ಕೂವರೆ ಲಕ್ಷದಷ್ಟು ಮದ್ಯ ಇಟ್ಟುಕೊಳ್ಳಲು ಅದೇನು ಬಾರ್ ಆಂಡ್ ರೆಸ್ಟೋರೆಂಟ್ ಅಲ್ಲ. ಇದು ಸಾಧ್ಯವೇ ಇಲ್ಲ. ಗಡಿಬಿಡಿಯಲ್ಲಿ ಎಲ್ಲರೂ ತಂದು ಅಲ್ಲಿ ಇಟ್ಟಿದ್ದಾರೆ. ಎಲ್ಲರೂ ಅಲ್ಲಿ ಬಾಟಲಿ ಇಡಲು ಹೋಗಿ ಅಸಂಬದ್ಧವಾಗಿದೆ. ಮಠದಲ್ಲಿ ತುಳಸಿದಳ ಬೀಳಿಸುವುದಕ್ಕಿಂತ ಹೆಚ್ಚಾಗಿ ಬಾಟಲಿ ಬೀಳಿಸಿದ್ದು, ಅವರನ್ನು ದೂಷಣೆ ಮಾಡುವುದಕ್ಕಿಂತ ಹೆಚ್ಚಾಗಿ ಹಿಂದೂ ಧರ್ಮದ ಮೇಲೆ ಬಿದ್ದಿರುವ ಆಘಾತ ಎಂದು ಟೀಕಿಸಿದ್ರು.

ಪೇಜಾವರ ಶ್ರೀ ವಿರುದ್ಧ ಕಿಡಿ:
ಪೇಜಾವರ ಶ್ರೀಗಳು ಶಿರೂರು ಶ್ರೀಗಳನ್ನು ಸ್ವಾಮಿಗಳೇ ಅಲ್ಲ ಎಂದಿದ್ದಾರೆ. ಮೊನ್ನೆ ನಡೆದ ಪರ್ಯಾಯದಲ್ಲಿ ಅವರನ್ನು ಯಾಕೆ ಕೂರಿಸಿದ್ದರು? 43 ವರ್ಷ ಪೀಠದಲ್ಲಿ ಶಿರೂರು ಶ್ರೀಗಳಿದ್ದರು ಇಲ್ಲಿವರೆಗೆ ಯಾಕೆ ಪೇಜಾವರ ಶ್ರೀಗಳು ಹೇಳಲಿಲ್ಲ. ಎಲ್ಲರೂ ಒಂದಲ್ಲ ಒಂದು ದಿನ ತಪ್ಪು ಮಾಡಿರಬಹುದು. ಆದರೇ ವಿಧಿವಶರಾದ ಮೇಲೆ ಎತ್ತಿ ಆಡುವುದು ಸೌಜನ್ಯವಲ್ಲ. ಶಿರೂರು ಶ್ರೀಗಳನ್ನು ಮುಂಚೆಯೇ ಸರಿಮಾಡಬೇಕಿತ್ತು. ಪೀಠದಿಂದ ಇಳಿಸಬೇಕಿತ್ತು. ಒತ್ತಡ ಹೇರಬೇಕಿತ್ತು. ಆಜ್ಞೆ ಹೊರಡಿಸಬಹುದಿತ್ತು. ಆದರೇ ಈಗ ಸನ್ಯಾಸಿಯಲ್ಲ ಎನ್ನುವುದು ಸರಿಯಲ್ಲ ಅಂದು ಪೇಜಾವರ ಶ್ರೀ ವಿರುದ್ಧ ಕಿಡಿಕಾರಿದ್ರು.

 

ಇಲ್ಲಿಯವರೆಗೆ ಅವರು ಬದುಕಿದ್ದಾಗ ಶಿರೂರು ಶ್ರೀ ಕುಡುಕ ಎಂದು ಹೇಳಿದ ಇತಿಹಾಸ ಉಡುಪಿಯಲ್ಲಿಲ್ಲ. ಶಿರೂರು ಶ್ರೀಗಳಿಗೆ ಆರೋಗ್ಯ ಸರಿಯಿಲ್ಲದ ಕಾರಣ ಪಟ್ಟದ ದೇವರನ್ನು ಬೇರೊಬ್ಬ ಸ್ವಾಮೀಜಿಗೆ ಕೊಟ್ಟದ್ದು ನಿಜ. ಆದರೇ ಮರಳಿ ನೀಡದ್ದಕ್ಕೆ ವಕೀಲ ರವಿ ಕಿರಣ್ ಮುರಡೇಶ್ವ ರನ್ನು ಭೇಟಿ ಮಾಡಿ ಕೇಸ್ ಹಾಕಲು ತೀರ್ಮಾನ ಆಗಿತ್ತು. ಅದು ಮಠಾಧೀಶರಿಗೆ ಸರಿಬರಲಿಲ್ಲ ಅಂತ ಹೇಳಿದ ಅವರು, ಶಿರೂರು ಮಠಕ್ಕೆ ಬಾಲ ಸನ್ಯಾಸಿಗಳನ್ನು ಪೀಠಾಧಿಪತಿ ಮಾಡುವ ಬದಲು ವಯಸ್ಕರನ್ನು ಪೀಠಾಧಿಪತಿ ಮಾಡುವ ಕುರಿತು ಪೇಜಾವರ ಶ್ರೀಗಳ ಮಾತಿಗೆ ಸಹಮತ ವ್ಯಕ್ತಪಡಿಸಿದ್ರು.

Vishwa News 24

Recent Posts

ವಿಧಾನ ಪರಿಷತ್‌ ನೂತನ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ – vishwanews24

ವಿಧಾನ ಪರಿಷತ್‌ ನೂತನ ಸಭಾಪತಿಯಾಗಿ ಸಲೀಂ ಅಹಮದ್ ಆಯ್ಕೆ ಬೆಂಗಳೂರು: ಬಸವರಾಜ ಹೊರಟ್ಟಿ ಅವರ ರಾಜೀನಾಮೆಯಿಂದ ತೆರವಾಗಿದ್ದ ವಿಧಾನ ಪರಿಷತ್‌…

10 hours ago

15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ ಪ್ರಕ್ರಿಯೆಗೆ ಚಾಲನೆ :  ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ – vishwanews24

15,000 ಸರ್ಕಾರಿ ಶಿಕ್ಷಕರ ಬೃಹತ್ ನೇಮಕಾತಿ :  ಆ.18ರಿಂದ ಅರ್ಜಿ ಸಲ್ಲಿಕೆ ಆರಂಭ ಬೆಂಗಳೂರು : ರಾಜ್ಯದ ಸರ್ಕಾರಿ ಶಾಲೆಗಳಲ್ಲಿ…

10 hours ago

ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ – vishwanews24

ಕರ್ನಾಟಕದ 17 ಪೊಲೀಸ್ ಅಧಿಕಾರಿ, ಸಿಬ್ಬಂದಿಗೆ ಪ್ರತಿಷ್ಠಿತ ರಾಷ್ಟ್ರಪತಿ ಪದಕ ಗೌರವ ಬೆಂಗಳೂರು : ದೇಶದ 80ನೇ ಸ್ವಾತಂತ್ರ್ಯ ದಿನೋತ್ಸವದ…

11 hours ago

ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸಿಎಂ ಡಿಕೆಶಿ ಸೂಚನೆ – vishwanews24

 ಏಳೆಂಟು ಜಿಲ್ಲೆಯ ಅಡಿಕೆ ಬೆಳೆಗಾರರ ಮೇಲೆ ಪರಿಣಾಮ ಗುಟ್ಕಾ ನಿಷೇಧ ಆದೇಶ ಶೀಘ್ರದಲ್ಲೇ ಹಿಂಪಡೆಯಲು ಸಿಎಂ ಡಿಕೆಶಿ ಸೂಚನೆ ಬೆಂಗಳೂರು…

11 hours ago

ಉಡುಪಿ:ಮಾದಕ ದ್ರವ್ಯ ಪ್ರಕರಣ :  ಪಿಐಟಿ–ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿಯ ಬಂಧನ – vishwanews24

ಉಡುಪಿ:ಮಾದಕ ದ್ರವ್ಯ ಪ್ರಕರಣ :  ಪಿಐಟಿ ಎನ್‌ಡಿಪಿಎಸ್ ಕಾಯ್ದೆಯಡಿ ಆರೋಪಿ ಬಂಧನ ಕಲಬುರಗಿಯ ಕೇಂದ್ರ ಕಾರಾಗೃಹದಲ್ಲಿ ಬಂಧನದಲ್ಲಿರಿಸಲು ಆದೇಶ ಉಡುಪಿ:…

11 hours ago

ಕುದುರೆಮುಖ ಆಫ್ ರೋಡಿಂಗ್ ಚಟುವಟಿಕೆ ವಿರುದ್ಧ ತೀವ್ರ ಆಕ್ರೋಶ – vishwanews24

ಕುದುರೆಮುಖದಲ್ಲಿ ಅನಧಿಕೃತ ಜೀಪುಗಳ ಆಫ್ ರೋಡಿಂಗ್ .. ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಸ್ಥಳೀಯರು, ಪರಿಸರ ಪ್ರೇಮಿಗಳ ಒತ್ತಾಯ ಮೋಜು-ಮಸ್ತಿಗಾಗಿ ಸೂಕ್ಷ್ಮ ಪರಿಸರದಲ್ಲಿ…

13 hours ago