ತುಮಕೂರು: ಸೋಲನ್ನ ಸ್ಪೂರ್ತಿ ಎಂದು ಸ್ವೀಕಾರ ಮಾಡಬೇಕು. ಒಂದು ಸೋಲಿಗೆ ಅಂಜಬಾರದು. ಸೋತರೂ ಮತಕೊಟ್ಟ 6.9 ಲಕ್ಷ ಜನರಿಗೆ ನನ್ನ ನಮಸ್ಕಾರ. ನಾನು 15 ಚುನಾವಣೆಗೆ ನಿಂತಿದ್ದಿನಿ. ಸೋಲು ಗೆಲುವು ಸಾಮಾನ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ತುಮಕೂರಿನಲ್ಲಿ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಇನ್ನು ಮೂರ್ನಾಲ್ಕು ತಿಂಗಳಲ್ಲಿ ದೈವೇಚ್ಛೆ ಏನೋ ನಡೀತದೆ. ಮಧ್ಯಂತರ ಚುನಾವಣೆ ಬರೋದು ಗ್ಯಾರಂಟಿ. ಅದಕ್ಕೆ ನೀವೆಲ್ಲಾ ತಯಾರಾಗಬೇಕು ಎಂದು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತ ರಿಗೆ ಜೆಡಿಎಸ್ ವರಿಷ್ಠ ದೇವೇಗೌಡರು ಕರೆ ನೀಡಿದರು. ಬಡವರ ಕಷ್ಟಕ್ಕೆ ಸ್ಪಂಧಿಸುವಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಹೇಳುತ್ತೆನೆ. ಅವರು ಈ ರಾಜ್ಯದ 6.5 ಕೋಟಿ ಜನರ ಮುಖ್ಯಮಂತ್ರಿ ನಮ್ಮಲ್ಲಿ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ, ಬಡವರಿಗೆ ಮೋಸ ಮಾಡಬಾರದು ಎಂದರು.
ಮಾಧ್ಯಮಗಳಿಂದ ಪ್ರಧಾನಿ ನರೇಂದ್ರ ಅವರು ರಾಷ್ಟ್ರಪಿತ ಆಗಿದ್ದಾರೆ. ವಿಶ್ವದಲ್ಲಿ ಗಾಂಧಿಜಿಗೆ ಮಾತ್ರ ರಾಷ್ಟ್ರಪಿತ ಅಂತಿದ್ರು. ಯಾರಿಗೂ ಆ ಪದವನ್ನು ಬಳಕೆ ಮಾಡುವ ಅಧಿಕಾರ ಇಲ್ಲ ಕಾಂಗ್ರೆಸ್ ಗೂ ಇಲ್ಲ ನನಗೂ ಇಲ್ಲ ಎಂದು ಹೇಳಿದರು. ಪಕ್ಷದ ಕಾರ್ಯಕರ್ತರೇ ನೀವು ಪ್ರಾಮಾಣಿಕವಾಗಿ ಕೆಲಸ ಮಾಡಿ ಮುಂದೆ ನಿಮ್ಮದೆ ಸರ್ಕಾರ ಬರುತ್ತೆ ಸಿಎಂ ಯಡಿಯೂರಪ್ಪ ನವರು ಅಕ್ಟೋಬರ್ 10,11,12 ಮೂರು ದಿನ ಮಾತ್ರ ಅಧಿವೇಶನ ಇಟ್ಟುಕೊಂಡಿದ್ದಾರೆ. ಇದು ದುರಂತದ ವಿಚಾರ. ಮೂರು ದಿನಕ್ಕೆ 9 ತಿಂಗಳ ಬಜೆಟ್ ಅನುಮೋದನೆ ಮಾಡಬೇಕು ಎಂದರು.
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…
ಸ್ವಕ್ಷೇತ್ರದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಮೀರ್ ಅಹ್ಮದ್ ಭಾಗಿ ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ…
ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ ಅಡಿಕೆ ಬೆಲೆ ಕುಸಿಯಲ್ಲ, ಬೆಳೆಗಾರರಿಗೆ ಸಮಸ್ಯೆ…
2047ರ ವೇಳೆಗೆ ಅಭಿವೃದ್ಧಿ ಹೊಂದಿದ ರಾಷ್ಟ್ರವನ್ನು ನಿರ್ಮಿಸುತ್ತೇವೆ : ಪ್ರಧಾನಿ ಮೋದಿ ನವದೆಹಲಿ: 2047ರ ವೇಳೆಗೆ ‘ವಿಕಸಿತ ಭಾರತ’ದ ಕನಸನ್ನು…