Featured

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆಯೂ ಮಂಗಳೂರು-ಮಸ್ಕತ್ ವಿಮಾನ ಯಾನ ಆರಂಭಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ – vishwanews24

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆಯೂ ಮಂಗಳೂರು-ಮಸ್ಕತ್ ವಿಮಾನ ಯಾನ ಆರಂಭಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್

ಮಂಗಳೂರು: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯು ವಿಮಾನಯಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತಿದ್ದರೂ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಗಳು ಮಂಗಳೂರು-ಮಸ್ಕತ್ ಸೇರಿದಂತೆ ಮಾರ್ಚ್ 10ರ ನಿಗದಿತ ಸೇವೆಗಳನ್ನು ಘೋಷಿಸಿವೆ. ಅಲ್ಲದೆ, ಭಾರತ ಮತ್ತು ಯುಎಇ ನಡುವೆ ಹೆಚ್ಚುವರಿ ವಿಮಾನಗಳ ಸಂಚಾರಕ್ಕೂ ಯೋಜನೆ ರೂಪಿಸಿವೆ.

‘ಗಲ್ಫ್ ನ್ಯೂಸ್’ ವರದಿಯ ಪ್ರಕಾರ, ಸೌದಿ ಅರೇಬಿಯಾ ಮತ್ತು ಓಮನ್ ವಾಯುಪ್ರದೇಶಗಳು ಮುಕ್ತವಾಗಿವೆ. ಹೀಗಾಗಿ ಎರಡೂ ವಿಮಾನಯಾನ ಸಂಸ್ಥೆಗಳು ಆಯ್ದ ಕಾರ್ಯಾಚರಣೆಗಳನ್ನು ಮುಂದುವರಿಸಲು ಸಾಧ್ಯವಾಗಿದೆ. ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜಂಟಿಯಾಗಿ ಜಿದ್ದಾಗೆ 14 ವಿಮಾನಗಳನ್ನು ಓಡಿಸಲಿವೆ. ಅದೇ ರೀತಿ, ಮಂಗಳೂರು-ಮಸ್ಕತ್-ಮಂಗಳೂರು (IX817 / IX818) ಸೇರಿದಂತೆ ಮಸ್ಕತ್‌ಗೆ ಒಟ್ಟು 14 ವಿಮಾನಗಳು ಸಂಚರಿಸಲಿವೆ.

ಇದನ್ನೂ ಓದಿ:👇

ಮಾರ್ಚ್ 10 ರಂದು, ಏರ್ ಇಂಡಿಯಾ ಸಂಸ್ಥೆಯು ದೆಹಲಿಯಿಂದ ಒಂದು ಸುತ್ತಿನ ಪ್ರಯಾಣ ಹಾಗೂ ಮುಂಬೈನಿಂದ ಜೆದ್ದಾಗೆ ಎರಡು ಸುತ್ತಿನ ವಿಮಾನಯಾನ ಸೇವೆಗಳನ್ನು ನಡೆಸಲಿದೆ. ಇನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೆಂಗಳೂರು, ಹೈದರಾಬಾದ್, ಮಂಗಳೂರು ಮತ್ತು ಕೋಝಿಕ್ಕೋಡ್‌ನಿಂದ ಜೆದ್ದಾ ಸೇವೆಗಳನ್ನು ನಿರ್ವಹಿಸಲಿದ್ದು, ಮಂಗಳೂರು-ಜೆದ್ದಾ-ಮಂಗಳೂರು (IX845 / IX846) ವಿಮಾನವು ಕೂಡ ಇಂದಿನ ವೇಳಾಪಟ್ಟಿಯಲ್ಲಿದೆ.

ಮಸ್ಕತ್‌ಗೆ ಸಂಬಂಧಿಸಿದಂತೆ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ದೆಹಲಿ, ಕಣ್ಣೂರು, ಕೊಚ್ಚಿ, ಕೋಝಿಕ್ಕೋಡ್, ಮುಂಬೈ, ತಿರುವನಂತಪುರಂ, ತಿರುಚಿರಾಪಳ್ಳಿ ಮತ್ತು ಮಂಗಳೂರಿನಿಂದ ನಿಗದಿತ ವಿಮಾನಯಾನ ಸೇವೆಗಳನ್ನು ನಡೆಸಲಿದೆ. ಮಂಗಳೂರು-ಮಸ್ಕತ್ ವಿಮಾನವು ಕೂಡ ಈ ನಿಗದಿತ ಕಾರ್ಯಾಚರಣೆಯ ಭಾಗವಾಗಿದೆ.

ಇದನ್ನೂ ಓದಿ:👇

ನಿಗದಿತ ಸೇವೆಗಳ ಜೊತೆಗೆ, ಮಾರ್ಚ್ 10 ರಂದು ಭಾರತದ ವಿವಿಧ ನಗರಗಳು ಮತ್ತು ಯುಎಇ ನಡುವೆ 32 ಹೆಚ್ಚುವರಿ ವಿಮಾನಗಳನ್ನು ಘೋಷಿಸಲಾಗಿದೆ. ಇವುಗಳಿಗೆ ಭಾರತೀಯ ಮತ್ತು ಸ್ಥಳೀಯ ನಿಯಂತ್ರಕ ಪ್ರಾಧಿಕಾರಗಳಿಂದ ಅಗತ್ಯ ಅನುಮತಿ ಪಡೆಯಲಾಗಿದೆ. ಏರ್ ಇಂಡಿಯಾ ದುಬೈಗೆ 10 ಹೆಚ್ಚುವರಿ ವಿಮಾನಗಳನ್ನು ಓಡಿಸಿದರೆ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಬುಧಾಬಿ, ಶಾರ್ಜಾ ಮತ್ತು ರಾಸ್ ಅಲ್ ಖೈಮಾಗೆ 18 ಹೆಚ್ಚುವರಿ ವಿಮಾನಗಳು ಸಂಚರಿಸಲಿವೆ.

ಪಶ್ಚಿಮ ಏಷ್ಯಾದ ಇತರ ಕೆಲವು ಸ್ಥಳಗಳಿಗೆ ಏರ್ ಇಂಡಿಯಾ ಗ್ರೂಪ್ ಮಾರ್ಚ್ 13 ರವರೆಗೆ ತನ್ನ ನಿಗದಿತ ಕಾರ್ಯಾಚರಣೆಗಳನ್ನು ರದ್ದುಗೊಳಿಸಿದೆ. ರದ್ದಾದ ವಿಮಾನಗಳಲ್ಲಿ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಭವಿಷ್ಯದ ದಿನಾಂಕಗಳಲ್ಲಿ ಮರು-ಬುಕಿಂಗ್ ಮಾಡಲು ಅವಕಾಶ ನೀಡಲಾಗಿದ್ದು, ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಅಥವಾ ಪೂರ್ಣ ಹಣ ಮರುಪಾವತಿ ಪಡೆಯುವ ಆಯ್ಕೆಯನ್ನು ನೀಡಲಾಗಿದೆ.

ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ಏರ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ಅನ್ನು ಸಂಪರ್ಕಿಸಬಹುದು.

ಇದನ್ನೂ ಓದಿ:👇

Vishwa News 24

Recent Posts

ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್‌ ಹಾಗೂ ಬೈಕ್ ಢಿಕ್ಕಿ; ಸವಾರ ಮೃತ್ಯು, ಸಹ ಸವಾರ ಗಂಭೀರ -vishwanews24

ಬೆಳ್ತಂಗಡಿ: ಕೆಎಸ್ಸಾರ್ಟಿಸಿ ಬಸ್‌ ಹಾಗೂ ಬೈಕ್ ಢಿಕ್ಕಿ; ಸವಾರ ಮೃತ್ಯು, ಸಹ ಸವಾರ ಗಂಭೀರ ಬೆಳ್ತಂಗಡಿ: ನೀರಚಿಲುಮೆಯ ತಿರುವಿನಲ್ಲಿ ಕೆಎಸ್ಸಾರ್ಟಿಸಿ…

13 hours ago

ಮೂಡುಬಿದಿರೆ: ಮನೆಯಲ್ಲಿ ಸಿಲಿಂಡರ್ ಸ್ಫೋಟ; ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ -vishwanews24

ಮೂಡುಬಿದಿರೆ: ಮನೆಯಲ್ಲಿ ಸಿಲಿಂಡರ್ ಸ್ಫೋಟ; ಮೂವರಿಗೆ ಗಾಯ, ಓರ್ವನ ಸ್ಥಿತಿ ಗಂಭೀರ ಮೂಡುಬಿದಿರೆ : ಮನೆಯಲ್ಲಿನ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ…

13 hours ago

ಉಡುಪಿ : ಮರಕ್ಕೆ ಬೈಕ್ ಢಿಕ್ಕಿ ; ಯುವಕ ಮೃತ್ಯು -vishwanews24

ಉಡುಪಿ : ಮರಕ್ಕೆ ಬೈಕ್ ಢಿಕ್ಕಿ ; ಯುವಕ ಮೃತ್ಯು ಉಡುಪಿ: ಮಣಿಪಾಲದಿಂದ ಪರ್ಕಳ ಕಡೆಗೆ ತೆರಳುತ್ತಿದ್ದ ಬುಲೆಟ್ ಬೈಕ್…

13 hours ago

ಉಡುಪಿ: ಸಾಯಿರಾಜ್ ಸೊಸೈಟಿ ಸಿಇಒ ಆತ್ಮಹತ್ಯೆ ಪ್ರಕರಣ:ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಕೋಟ್ಯಂತರ ರೂಪಾಯಿ ನಷ್ಟ ;  ಡೆತ್ ನೋಟ್ ನಲ್ಲಿ ಬಹಿರಂಗ! -vishwanews24

ಉಡುಪಿ: ಸಾಯಿರಾಜ್ ಸೊಸೈಟಿ ಸಿಇಒ ಆತ್ಮಹತ್ಯೆ ಪ್ರಕರಣ.. ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ಕೋಟ್ಯಂತರ ರೂಪಾಯಿ ನಷ್ಟ ;  ಡೆತ್ ನೋಟ್ ನಲ್ಲಿ…

14 hours ago

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ – vishwanews24

ಉಡುಪಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೆಸಿಟಿಯು ನೇತೃತ್ವದಲ್ಲಿ ಜೈಲ್ ಭರೋ ಪ್ರತಿಭಟನೆ; ಕಾರ್ಯಕರ್ತರು ಪೊಲೀಸ್ ವಶಕ್ಕೆ ಉಡುಪಿ: ಕೇಂದ್ರ…

1 day ago

ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ – vishwanews24

ಕಾಪು: ಎಲ್ಲೂರಿನಲ್ಲಿ ಮನೆಯ ಮೇಲ್ಛಾವಣಿ ಕುಸಿತ; ಮಹಿಳೆ ಪವಾಡಸದೃಶ ಪಾರು, ಲಕ್ಷಾಂತರ ರೂ. ನಷ್ಟ ಕಾಪು,: ಎಲ್ಲೂರಿನ ರೇವತಿ ಕುಂದರ್…

2 days ago