ಮಂಗಳೂರು: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯು ವಿಮಾನಯಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತಿದ್ದರೂ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಗಳು ಮಂಗಳೂರು-ಮಸ್ಕತ್ ಸೇರಿದಂತೆ ಮಾರ್ಚ್ 10ರ ನಿಗದಿತ ಸೇವೆಗಳನ್ನು ಘೋಷಿಸಿವೆ. ಅಲ್ಲದೆ, ಭಾರತ ಮತ್ತು ಯುಎಇ ನಡುವೆ ಹೆಚ್ಚುವರಿ ವಿಮಾನಗಳ ಸಂಚಾರಕ್ಕೂ ಯೋಜನೆ ರೂಪಿಸಿವೆ.
‘ಗಲ್ಫ್ ನ್ಯೂಸ್’ ವರದಿಯ ಪ್ರಕಾರ, ಸೌದಿ ಅರೇಬಿಯಾ ಮತ್ತು ಓಮನ್ ವಾಯುಪ್ರದೇಶಗಳು ಮುಕ್ತವಾಗಿವೆ. ಹೀಗಾಗಿ ಎರಡೂ ವಿಮಾನಯಾನ ಸಂಸ್ಥೆಗಳು ಆಯ್ದ ಕಾರ್ಯಾಚರಣೆಗಳನ್ನು ಮುಂದುವರಿಸಲು ಸಾಧ್ಯವಾಗಿದೆ. ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್ಪ್ರೆಸ್ ಜಂಟಿಯಾಗಿ ಜಿದ್ದಾಗೆ 14 ವಿಮಾನಗಳನ್ನು ಓಡಿಸಲಿವೆ. ಅದೇ ರೀತಿ, ಮಂಗಳೂರು-ಮಸ್ಕತ್-ಮಂಗಳೂರು (IX817 / IX818) ಸೇರಿದಂತೆ ಮಸ್ಕತ್ಗೆ ಒಟ್ಟು 14 ವಿಮಾನಗಳು ಸಂಚರಿಸಲಿವೆ.
ಇದನ್ನೂ ಓದಿ:👇
ಮಾರ್ಚ್ 10 ರಂದು, ಏರ್ ಇಂಡಿಯಾ ಸಂಸ್ಥೆಯು ದೆಹಲಿಯಿಂದ ಒಂದು ಸುತ್ತಿನ ಪ್ರಯಾಣ ಹಾಗೂ ಮುಂಬೈನಿಂದ ಜೆದ್ದಾಗೆ ಎರಡು ಸುತ್ತಿನ ವಿಮಾನಯಾನ ಸೇವೆಗಳನ್ನು ನಡೆಸಲಿದೆ. ಇನ್ನು ಏರ್ ಇಂಡಿಯಾ ಎಕ್ಸ್ಪ್ರೆಸ್ ಬೆಂಗಳೂರು, ಹೈದರಾಬಾದ್, ಮಂಗಳೂರು ಮತ್ತು ಕೋಝಿಕ್ಕೋಡ್ನಿಂದ ಜೆದ್ದಾ ಸೇವೆಗಳನ್ನು ನಿರ್ವಹಿಸಲಿದ್ದು, ಮಂಗಳೂರು-ಜೆದ್ದಾ-ಮಂಗಳೂರು (IX845 / IX846) ವಿಮಾನವು ಕೂಡ ಇಂದಿನ ವೇಳಾಪಟ್ಟಿಯಲ್ಲಿದೆ.
ಮಸ್ಕತ್ಗೆ ಸಂಬಂಧಿಸಿದಂತೆ, ಏರ್ ಇಂಡಿಯಾ ಎಕ್ಸ್ಪ್ರೆಸ್ ಸಂಸ್ಥೆಯು ದೆಹಲಿ, ಕಣ್ಣೂರು, ಕೊಚ್ಚಿ, ಕೋಝಿಕ್ಕೋಡ್, ಮುಂಬೈ, ತಿರುವನಂತಪುರಂ, ತಿರುಚಿರಾಪಳ್ಳಿ ಮತ್ತು ಮಂಗಳೂರಿನಿಂದ ನಿಗದಿತ ವಿಮಾನಯಾನ ಸೇವೆಗಳನ್ನು ನಡೆಸಲಿದೆ. ಮಂಗಳೂರು-ಮಸ್ಕತ್ ವಿಮಾನವು ಕೂಡ ಈ ನಿಗದಿತ ಕಾರ್ಯಾಚರಣೆಯ ಭಾಗವಾಗಿದೆ.
ಇದನ್ನೂ ಓದಿ:👇
ನಿಗದಿತ ಸೇವೆಗಳ ಜೊತೆಗೆ, ಮಾರ್ಚ್ 10 ರಂದು ಭಾರತದ ವಿವಿಧ ನಗರಗಳು ಮತ್ತು ಯುಎಇ ನಡುವೆ 32 ಹೆಚ್ಚುವರಿ ವಿಮಾನಗಳನ್ನು ಘೋಷಿಸಲಾಗಿದೆ. ಇವುಗಳಿಗೆ ಭಾರತೀಯ ಮತ್ತು ಸ್ಥಳೀಯ ನಿಯಂತ್ರಕ ಪ್ರಾಧಿಕಾರಗಳಿಂದ ಅಗತ್ಯ ಅನುಮತಿ ಪಡೆಯಲಾಗಿದೆ. ಏರ್ ಇಂಡಿಯಾ ದುಬೈಗೆ 10 ಹೆಚ್ಚುವರಿ ವಿಮಾನಗಳನ್ನು ಓಡಿಸಿದರೆ, ಏರ್ ಇಂಡಿಯಾ ಎಕ್ಸ್ಪ್ರೆಸ್ ಅಬುಧಾಬಿ, ಶಾರ್ಜಾ ಮತ್ತು ರಾಸ್ ಅಲ್ ಖೈಮಾಗೆ 18 ಹೆಚ್ಚುವರಿ ವಿಮಾನಗಳು ಸಂಚರಿಸಲಿವೆ.
ಪಶ್ಚಿಮ ಏಷ್ಯಾದ ಇತರ ಕೆಲವು ಸ್ಥಳಗಳಿಗೆ ಏರ್ ಇಂಡಿಯಾ ಗ್ರೂಪ್ ಮಾರ್ಚ್ 13 ರವರೆಗೆ ತನ್ನ ನಿಗದಿತ ಕಾರ್ಯಾಚರಣೆಗಳನ್ನು ರದ್ದುಗೊಳಿಸಿದೆ. ರದ್ದಾದ ವಿಮಾನಗಳಲ್ಲಿ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಭವಿಷ್ಯದ ದಿನಾಂಕಗಳಲ್ಲಿ ಮರು-ಬುಕಿಂಗ್ ಮಾಡಲು ಅವಕಾಶ ನೀಡಲಾಗಿದ್ದು, ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಅಥವಾ ಪೂರ್ಣ ಹಣ ಮರುಪಾವತಿ ಪಡೆಯುವ ಆಯ್ಕೆಯನ್ನು ನೀಡಲಾಗಿದೆ.
ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ಏರ್ ಇಂಡಿಯಾದ ಅಧಿಕೃತ ವೆಬ್ಸೈಟ್ ಅನ್ನು ಸಂಪರ್ಕಿಸಬಹುದು.
ಇದನ್ನೂ ಓದಿ:👇
ಬೆಳಪು ಪ್ರದೇಶದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳೊಂದಿಗೆ ಘಟಕ ನಿರ್ಮಿಸಿದರೆ ನಮ್ಮಿಂದ ಯಾವುದೇ ವಿರೋಧ ಇರುವುದಿಲ್ಲ : ದೇವಿಪ್ರಸಾದ್ ಶೆಟ್ಟಿ ಮೂಳೂರು…
ಪ್ರಿಯಕರನ ಜೊತೆ ಸೇರಿ ಗಂಡನ ಮನೆಗೆ ಕನ್ನಹಾಕಿದ ಪತ್ನಿ; 21 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ಬೆಳಗಾವಿ: ಪ್ರಿಯಕರನ ಜೊತೆ…
ದೇಶದ ಜಾತ್ಯತೀತ ಮೌಲ್ಯಗಳನ್ನು ರಕ್ಷಿಸಲು ಕಾಂಗ್ರೆಸ್ ಪಕ್ಷ ಸದಾ ಸಮಾನ ಚಿಂತನೆಯ ಪಕ್ಷಗಳೊಂದಿಗೆ ಕೈಜೋಡಿಸಿದೆ : ಬಿ.ಕೆ.ಹರಿಪ್ರಸಾದ್ ಬೆಂಗಳೂರು: ‘ಬಿಜೆಪಿ…
ಪಡುಬಿದ್ರಿ: ಕಿಶೋರ್ ಆಳ್ವ ಅವರಿಗೆ ಪ್ರತಿಷ್ಠಿತ ಮಹಾತ್ಮ ಗಾಂಧಿ ಸಬರಮತಿ ಸಂತ ಪ್ರಶಸ್ತಿ ಪ್ರದಾನ ಪಡುಬಿದ್ರಿ: ಸನಾತನ ಫೌಂಡೇಶನ್ನ ಅಧ್ಯಕ್ಷ,…
ವಿವಾಹಿತ ಮಹಿಳೆ ಜತೆ ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ಶವವಾಗಿ ಪತ್ತೆ ಬೆಂಗಳೂರು: ಲಿವ್ ಇನ್ ರಿಲೇಶನ್ಶಿಪ್ನಲ್ಲಿದ್ದ ಯುವಕ ನೇಣುಬಿಗಿದ…
ಪಶ್ಚಿಮ ಬಂಗಾಳದ ರಾಜಕೀಯ ಇತಿಹಾಸದಲ್ಲಿ ಹೊಸ ಪರ್ವ.. ಬಿಜೆಪಿ ಮೊದಲ ಸಿಎಂ ಆಗಿ ಪ್ರಮಾಣ ಸ್ವೀಕಾರ.. ಐತಿಹಾಸಿಕ ಕ್ಷಣಕ್ಕೆ ಮೋದಿ,…