Featured

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆಯೂ ಮಂಗಳೂರು-ಮಸ್ಕತ್ ವಿಮಾನ ಯಾನ ಆರಂಭಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ – vishwanews24

ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆಯೂ ಮಂಗಳೂರು-ಮಸ್ಕತ್ ವಿಮಾನ ಯಾನ ಆರಂಭಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್

ಮಂಗಳೂರು: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯು ವಿಮಾನಯಾನ ಕಾರ್ಯಾಚರಣೆಗಳ ಮೇಲೆ ಪರಿಣಾಮ ಬೀರುತ್ತಿದ್ದರೂ, ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಗಳು ಮಂಗಳೂರು-ಮಸ್ಕತ್ ಸೇರಿದಂತೆ ಮಾರ್ಚ್ 10ರ ನಿಗದಿತ ಸೇವೆಗಳನ್ನು ಘೋಷಿಸಿವೆ. ಅಲ್ಲದೆ, ಭಾರತ ಮತ್ತು ಯುಎಇ ನಡುವೆ ಹೆಚ್ಚುವರಿ ವಿಮಾನಗಳ ಸಂಚಾರಕ್ಕೂ ಯೋಜನೆ ರೂಪಿಸಿವೆ.

‘ಗಲ್ಫ್ ನ್ಯೂಸ್’ ವರದಿಯ ಪ್ರಕಾರ, ಸೌದಿ ಅರೇಬಿಯಾ ಮತ್ತು ಓಮನ್ ವಾಯುಪ್ರದೇಶಗಳು ಮುಕ್ತವಾಗಿವೆ. ಹೀಗಾಗಿ ಎರಡೂ ವಿಮಾನಯಾನ ಸಂಸ್ಥೆಗಳು ಆಯ್ದ ಕಾರ್ಯಾಚರಣೆಗಳನ್ನು ಮುಂದುವರಿಸಲು ಸಾಧ್ಯವಾಗಿದೆ. ಏರ್ ಇಂಡಿಯಾ ಮತ್ತು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಜಂಟಿಯಾಗಿ ಜಿದ್ದಾಗೆ 14 ವಿಮಾನಗಳನ್ನು ಓಡಿಸಲಿವೆ. ಅದೇ ರೀತಿ, ಮಂಗಳೂರು-ಮಸ್ಕತ್-ಮಂಗಳೂರು (IX817 / IX818) ಸೇರಿದಂತೆ ಮಸ್ಕತ್‌ಗೆ ಒಟ್ಟು 14 ವಿಮಾನಗಳು ಸಂಚರಿಸಲಿವೆ.

ಇದನ್ನೂ ಓದಿ:👇

ಮಾರ್ಚ್ 10 ರಂದು, ಏರ್ ಇಂಡಿಯಾ ಸಂಸ್ಥೆಯು ದೆಹಲಿಯಿಂದ ಒಂದು ಸುತ್ತಿನ ಪ್ರಯಾಣ ಹಾಗೂ ಮುಂಬೈನಿಂದ ಜೆದ್ದಾಗೆ ಎರಡು ಸುತ್ತಿನ ವಿಮಾನಯಾನ ಸೇವೆಗಳನ್ನು ನಡೆಸಲಿದೆ. ಇನ್ನು ಏರ್ ಇಂಡಿಯಾ ಎಕ್ಸ್‌ಪ್ರೆಸ್ ಬೆಂಗಳೂರು, ಹೈದರಾಬಾದ್, ಮಂಗಳೂರು ಮತ್ತು ಕೋಝಿಕ್ಕೋಡ್‌ನಿಂದ ಜೆದ್ದಾ ಸೇವೆಗಳನ್ನು ನಿರ್ವಹಿಸಲಿದ್ದು, ಮಂಗಳೂರು-ಜೆದ್ದಾ-ಮಂಗಳೂರು (IX845 / IX846) ವಿಮಾನವು ಕೂಡ ಇಂದಿನ ವೇಳಾಪಟ್ಟಿಯಲ್ಲಿದೆ.

ಮಸ್ಕತ್‌ಗೆ ಸಂಬಂಧಿಸಿದಂತೆ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಂಸ್ಥೆಯು ದೆಹಲಿ, ಕಣ್ಣೂರು, ಕೊಚ್ಚಿ, ಕೋಝಿಕ್ಕೋಡ್, ಮುಂಬೈ, ತಿರುವನಂತಪುರಂ, ತಿರುಚಿರಾಪಳ್ಳಿ ಮತ್ತು ಮಂಗಳೂರಿನಿಂದ ನಿಗದಿತ ವಿಮಾನಯಾನ ಸೇವೆಗಳನ್ನು ನಡೆಸಲಿದೆ. ಮಂಗಳೂರು-ಮಸ್ಕತ್ ವಿಮಾನವು ಕೂಡ ಈ ನಿಗದಿತ ಕಾರ್ಯಾಚರಣೆಯ ಭಾಗವಾಗಿದೆ.

ಇದನ್ನೂ ಓದಿ:👇

ನಿಗದಿತ ಸೇವೆಗಳ ಜೊತೆಗೆ, ಮಾರ್ಚ್ 10 ರಂದು ಭಾರತದ ವಿವಿಧ ನಗರಗಳು ಮತ್ತು ಯುಎಇ ನಡುವೆ 32 ಹೆಚ್ಚುವರಿ ವಿಮಾನಗಳನ್ನು ಘೋಷಿಸಲಾಗಿದೆ. ಇವುಗಳಿಗೆ ಭಾರತೀಯ ಮತ್ತು ಸ್ಥಳೀಯ ನಿಯಂತ್ರಕ ಪ್ರಾಧಿಕಾರಗಳಿಂದ ಅಗತ್ಯ ಅನುಮತಿ ಪಡೆಯಲಾಗಿದೆ. ಏರ್ ಇಂಡಿಯಾ ದುಬೈಗೆ 10 ಹೆಚ್ಚುವರಿ ವಿಮಾನಗಳನ್ನು ಓಡಿಸಿದರೆ, ಏರ್ ಇಂಡಿಯಾ ಎಕ್ಸ್‌ಪ್ರೆಸ್ ಅಬುಧಾಬಿ, ಶಾರ್ಜಾ ಮತ್ತು ರಾಸ್ ಅಲ್ ಖೈಮಾಗೆ 18 ಹೆಚ್ಚುವರಿ ವಿಮಾನಗಳು ಸಂಚರಿಸಲಿವೆ.

ಪಶ್ಚಿಮ ಏಷ್ಯಾದ ಇತರ ಕೆಲವು ಸ್ಥಳಗಳಿಗೆ ಏರ್ ಇಂಡಿಯಾ ಗ್ರೂಪ್ ಮಾರ್ಚ್ 13 ರವರೆಗೆ ತನ್ನ ನಿಗದಿತ ಕಾರ್ಯಾಚರಣೆಗಳನ್ನು ರದ್ದುಗೊಳಿಸಿದೆ. ರದ್ದಾದ ವಿಮಾನಗಳಲ್ಲಿ ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರಿಗೆ ಭವಿಷ್ಯದ ದಿನಾಂಕಗಳಲ್ಲಿ ಮರು-ಬುಕಿಂಗ್ ಮಾಡಲು ಅವಕಾಶ ನೀಡಲಾಗಿದ್ದು, ಯಾವುದೇ ಹೆಚ್ಚುವರಿ ಶುಲ್ಕ ವಿಧಿಸಲಾಗುವುದಿಲ್ಲ. ಅಥವಾ ಪೂರ್ಣ ಹಣ ಮರುಪಾವತಿ ಪಡೆಯುವ ಆಯ್ಕೆಯನ್ನು ನೀಡಲಾಗಿದೆ.

ಪ್ರಯಾಣಿಕರು ಹೆಚ್ಚಿನ ಮಾಹಿತಿಗಾಗಿ ಏರ್ ಇಂಡಿಯಾದ ಅಧಿಕೃತ ವೆಬ್‌ಸೈಟ್ ಅನ್ನು ಸಂಪರ್ಕಿಸಬಹುದು.

ಇದನ್ನೂ ಓದಿ:👇

Vishwa News 24

Recent Posts

ಲಂಡನ್ ಕೋರ್ಟ್‌ನಲ್ಲಿ ಬ್ಯಾಂಕ್ ಆಫ್ ಇಂಡಿಯಾಗೆ ಗೆಲುವು : ನೀರವ್ ಮೋದಿಗೆ 100 ಕೋಟಿ ರೂ. ಪಾವತಿಸಲು ಆದೇಶ – vishwanews24

ಲಂಡನ್ ಕೋರ್ಟ್‌ನಲ್ಲಿ ಬ್ಯಾಂಕ್ ಆಫ್ ಇಂಡಿಯಾಗೆ ಗೆಲುವು : ನೀರವ್ ಮೋದಿಗೆ 100 ಕೋಟಿ ರೂ. ಪಾವತಿಸಲು ಆದೇಶ ಲಂಡನ್…

32 minutes ago

ಮಂಗಳೂರು/ಉಡುಪಿ: ಐವನ್ ಡಿಸೋಜಾ ರಿಗೆ ಸಚಿವ ಸ್ಥಾನ ನೀಡುವಂತೆ ಬಿ ಕೆ ಹರಿಪ್ರಸಾದ್ ಗೆ ಕಥೊಲಿಕ್ ಸಭಾ ಮನವಿ – vishwanews24

ಮಂಗಳೂರು/ಉಡುಪಿ: ಐವನ್ ಡಿಸೋಜಾ ರಿಗೆ ಸಚಿವ ಸ್ಥಾನ ನೀಡುವಂತೆ ಬಿ ಕೆ ಹರಿಪ್ರಸಾದ್ ಗೆ ಕಥೊಲಿಕ್ ಸಭಾ ಮನವಿ ಮಂಗಳೂರು/ಉಡುಪಿ:…

44 minutes ago

ಉಡುಪಿ: ಮೀನುಗಾರಿಕೆ ಇಲಾಖೆಯ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ – vishwanews24

ಉಡುಪಿ: ಮೀನುಗಾರಿಕೆ ಇಲಾಖೆಯ ವಿವಿಧ ಸೌಲಭ್ಯಗಳಿಗೆ ಅರ್ಜಿ ಆಹ್ವಾನ ಉಡುಪಿ: ಜಿಲ್ಲೆಯ ಅರ್ಹ ಮೀನುಗಾರರ ಆರ್ಥಿಕ ಮತ್ತು ಸಾಮಾಜಿಕ ಸಬಲೀಕರಣಕ್ಕಾಗಿ…

59 minutes ago

ಜೂ. 24ರಿಂದ 26ರ ವರೆಗೆ ಕರಾವಳಿಗೆ ಆರೆಂಜ್ ಅಲರ್ಟ್ ಘೋಷಣೆ – vishwanews24

ಜೂ. 24ರಿಂದ 26ರ ವರೆಗೆ ಕರಾವಳಿಗೆ ಆರೆಂಜ್ ಅಲರ್ಟ್ ಘೋಷಣೆ  ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆಗಳಲ್ಲಿ ಮಂಗಳವಾರ…

1 hour ago

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : ಎನ್‌ಐಎ ಅಧಿಕಾರಿಗಳಿಂದ ಮೂವರ ವಿಚಾರಣೆ – vishwanews24

ಸುಹಾಸ್‌ ಶೆಟ್ಟಿ ಹತ್ಯೆ ಪ್ರಕರಣ : ಎನ್‌ಐಎ ಅಧಿಕಾರಿಗಳಿಂದ ಮೂವರ ವಿಚಾರಣೆ ಮಂಗಳೂರು: ಬಜಪೆಯಲ್ಲಿ ನಡೆದ ಹಿಂದೂ ಸಂಘಟನೆಯ ಕಾರ್ಯಕರ್ತ…

1 hour ago

ಪುತ್ತೂರು: ನಾಪತ್ತೆಯಾಗಿದ್ದ ಸಾಕುನಾಯಿ ಪತ್ತೆ ಮಾಡಿದ ವ್ಯಕ್ತಿಗೆ 50 ಸಾ. ರೂ. ಹಸ್ತಾಂತರ – vishwanews24

ಪುತ್ತೂರು: ಸಾಕುನಾಯಿ ಪತ್ತೆ ಮಾಡಿದ ವ್ಯಕ್ತಿಗೆ 50 ಸಾ. ರೂ. ಹಸ್ತಾಂತರ ಪುತ್ತೂರು: ಇಲ್ಲಿನ ಕಬಕ ಸಮೀಪದ ಪೋಳ್ಯ ನಿವಾಸಿ,…

1 hour ago