Featured

ಮಲಗಿದ್ದಾಗ ಹತ್ತು ಬಾರಿ ಹಾವು ಕಚ್ಚಿ ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ – vishwanews24

ಹತ್ತು ಬಾರಿ ಹಾವು ಕಚ್ಚಿ ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಮೀರತ್ ನಲ್ಲಿ ಹತ್ತು ಬಾರಿ ಹಾವು ಕಚ್ಚಿ ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಎರಡು ದಿನಗಳ ಹಿಂದೆ ಅಮಿತ್ ಅಲಿಯಾಸ್ ವಿಕ್ಕಿ ಕಶ್ಯಪ್ ಎಂಬಾತ ಮಲಗಿದ್ದಾಗ ಹಾವು ಕಚ್ಚಿ ಸಾವನ್ನಪ್ಪಿದ್ದಾನೆ ಎಂಬ ಸುದ್ದಿ ಬಂದಿತ್ತು. ಅಮಿತ್ ಗೆ ಹತ್ತು ಬಾರಿ ಹಾವು ಕಚ್ಚಿತ್ತು. ಪ್ರಕರಣದಲ್ಲಿ ಹಾವು ವಿಲನ್ ಆಗಿತ್ತು. ಆದ್ರೆ ಪ್ರಕರಣದ ತನಿಖೆ ಶುರುವಾದಾಗ ನಿಜವಾದ ವಿಲನ್ ಯಾರು ಎಂಬ ಸತ್ಯ ಹೊರಗೆ ಬಿದ್ದಿದೆ. ವಾಸ್ತವವಾಗಿ ಹಾವಿನ ಪಾತ್ರ ಇಲ್ಲಿ ಏನೂ ಇಲ್ಲ. ಎಲ್ಲ ವಿಕ್ಕಿ ಪತ್ನಿಯ ಕೈವಾಡ.

ಪತಿ ವಿಕ್ಕಿಯನ್ನು ಹತ್ಯೆ ಮಾಡಿದ ರವಿತಾ ನಂತ್ರ ಹಾಸಿಗೆ ಮೇಲೆ ಹಾವು ಬಿಟ್ಟಿದ್ದಾಳೆ. ಹತ್ತು ಬಾರಿ ಹಾವು ಕಚ್ಚಿ ವಿಕ್ಕಿ ಸಾವನ್ನಪ್ಪಿದ್ದಾನೆ ಅಂತ ಎಲ್ಲರನ್ನು ನಂಬಿಸಿದ್ದಾಳೆ. ಆದ್ರೆ ಪೋಸ್ಟ್ ಮಾರ್ಟಮ್  ವರದಿ ಸತ್ಯವನ್ನು ಬಿಚ್ಚಿಟ್ಟಿದೆ. ಮೀರತ್ ಜಿಲ್ಲೆಯ ಬಹಸೂಮಾ ಪೊಲೀಸ್ ಠಾಣಾ ವ್ಯಾಪ್ತಿಯ ಅಕ್ಬರ್ಪುರ್ ಸಾದತ್ ಗ್ರಾಮದ ಯುವಕ ಅಮಿತ್. ಕೂಲಿ ಕೆಲಸ ಮಾಡುತ್ತಿದ್ದ ಅಮಿತ್ ರಾತ್ರಿ 10 ಗಂಟೆ ಸುಮಾರಿಗೆ ಮನೆಗೆ ಬಂದಿದ್ದಾನೆ. ನಿತ್ಯದಂತೆ ಊಟ ಮಾಡಿ ಅಮಿತ್ ನಿದ್ರೆಗೆ ಜಾರಿದ್ದಾನೆ. ಬೆಳಿಗ್ಗೆ ಅಮಿತ್ ಹೆಣವಾಗಿದ್ದಾನೆ. ಹಾಸಿಗೆ ಮೇಲೆ ಜೀವಂತ ಹಾವು ಕೂಡ ಕಾಣಿಸಿಕೊಂಡಿದೆ. ಊರವರೆಲ್ಲ ಹಾವು ಕಚ್ಚಿ ಅಮಿತ್ ಸಾವನ್ನಪ್ಪಿದ್ದಾನೆ ಅಂತ ಭಾವಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಕೂಡ ವೈರಲ್ ಆಗಿತ್ತು. ಯುವಕನ ಶವದ ಬಳಿ ಹಾವೊಂದು ಕಾಣಿಸಿಕೊಂಡಿದ್ದಲ್ಲದೆ, ಅಮಿತ್ ಗೆ ಅದು ಕಚ್ಚುತ್ತಿರೋದನ್ನು ವಿಡಿಯೋದಲ್ಲಿ ಜನ ನೋಡಿದ್ದರು. ಹಾವು 10 ಬಾರಿ ಕಚ್ಚಿದೆ ಅಂದ್ರೆ ಅದಕ್ಕೆ ಎಷ್ಟು ದ್ವೇಷವಿತ್ತು, ಯಾಕೆ ಹೀಗಾಯ್ತು ಅಂತ ಜನರು ನಾನಾ ರೀತಿ ಮಾತನಾಡಿದ್ದರು.

ಮರಣೋತ್ತರ ಪರೀಕ್ಷೆ ವೇಳೆ ಸತ್ಯ ಬಯಸಲು : ಪೋಸ್ಟ್ ಮಾರ್ಟಮ್ ವರದಿ ನೋಡಿ ಪೊಲೀಸರು ದಂಗಾದ್ರು. ಇದ್ರಲ್ಲಿ ಅಮಿತ್ ಸಾವು ಹಾವುಕಚ್ಚಿ ಆಗ್ಲಿಲ್ಲ, ಕತ್ತು ಹಿಸುಕಿ ಆಗಿದೆ ಅಂತಿತ್ತು. ತಕ್ಷಣ ಅಲರ್ಟ್ ಆದ ಪೊಲೀಸರು ತನಿಖೆ ಶುರು ಮಾಡಿದ್ರು. ಆಗ ಒಂದೊಂದೇ ಸುಳಿವು ಸಿಕ್ತಾ ಹೋಯ್ತು. ಪೊಲೀಸರ ಕಣ್ಣು ಮೊದಲು ಬಿದ್ದಿದ್ದು ಅಮಿತ್ ಪತ್ನಿ ರವಿತಾ ಮೇಲೆ.

ಸಾಕ್ಷ್ಯ ಮುಚ್ಚಲು ಹಾವಿನ ಬಳಕೆ : ಅಮಿತ್ ಪತ್ನಿ ರವಿತಾ ಹಾಗೂ ಅದೇ ಊರಿನ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಆಗ ರವಿತಾ ಸತ್ಯ ಹೊರ ಹಾಕಿದ್ದಾಳೆ. ರವಿತಾಗೆ ಅದೇ ಗ್ರಾಮದ ಯುವಕನ ಜೊತೆ ಅಕ್ರಮ ಸಂಬಂಧವಿತ್ತು. ಇವರಿಬ್ಬರ ಪ್ರೀತಿಗೆ ಅಮಿತ್ ಅಡ್ಡಿಯಾಗಿದ್ದ. ಅಮಿತ್ ನನ್ನು ಮುಗಿಸಿ ತಮ್ಮ ದಾರಿ ಸುಗಮಗೊಳಿಸಿಕೊಳ್ಳಲು ಪ್ರೇಮಿಗಳು ಪ್ಲಾನ್ ಮಾಡಿದ್ರು. ಅಮಿತ್ ಸಾವು ದುರ್ಘಟನೆ ಎಂದು ಬಿಂಬಿಸಲು ಮುಂದಾದ್ರು. ಮಾರುಕಟ್ಟೆಯಿಂದ ಹಾವೊಂದನ್ನು ಖರೀದಿ ಮಾಡಿದ್ದ ಇವರು, ಅಮಿತ್ ಕತ್ತು ಹಿಸುಕಿ ಹತ್ಯೆ ಮಾಡಿದ್ರು. ನಂತ್ರ ಅವನ ಬೆಡ್ ಮೇಲೆ ಹಾವನ್ನು ಇಟ್ಟಿದ್ದರು. ಅಷ್ಟೇ ಅಲ್ಲ ಇದ್ರ ವಿಡಿಯೋ ಮಾಡಿ, ಸಾಕ್ಷ್ಯವಾಗಿ ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದರು. ಆರಂಭದಲ್ಲಿ ಎಲ್ಲರೂ ಅಮಿತ್ ಹಾವು ಕಚ್ಚಿ ಸತ್ತಿದ್ದಾನೆ ಎಂಬುದನ್ನು ನಂಬಿದ್ದರಿಂದ ರವಿತಾ ದಾರಿ ಸುಗಮವಾಯ್ತು. ಆದ್ರೆ ಪೊಲೀಸ್ ಕೈಗೆ ಸಿಕ್ಕಿಬಿದ್ದ ರವಿತಾ ಈಗ ಜೈಲೂಟ ತಿನ್ನುವಂತಾಗಿದೆ. ಇಬ್ಬರೂ ತಮ್ಮ ತಪ್ಪು ಒಪ್ಪಿಕೊಂಡಿದ್ದಾರೆ.

Vishwa News 24

Recent Posts

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ – vishwanews24

ಶನಿವಾರ ಶಾಲಾ ಸಮಯ ಬದಲಿಸಿದ ಶಿಕ್ಷಣ ಇಲಾಖೆ ; ಇನ್ನು ಮುಂದೆ ಶನಿವಾರ ಅರ್ಧದಿನ ಮಾತ್ರ ಶಾಲೆ ಬೆಂಗಳೂರು: ಶಾಲಾ…

46 minutes ago

ಸುರತ್ಕಲ್ ಬಾಲಕಿ ಆತ್ಮಹತ್ಯೆ ಪ್ರಕರಣ : ಪೋಷಕರ ನಡೆ ಕುರಿತು ವಿಷಾದ ವ್ಯಕ್ತಪಡಿಸಿದ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ – vishwanews24

ಸುರತ್ಕಲ್ ಬಾಲಕಿ ಆತ್ಮಹತ್ಯೆ ಪ್ರಕರಣ : ಪೋಷಕರ ನಡೆ ಕುರಿತು ವಿಷಾದ ವ್ಯಕ್ತಪಡಿಸಿದ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಮಂಗಳೂರು …

56 minutes ago

ಗೃಹಲಕ್ಷ್ಮಿ ಯೋಜನೆಯಲ್ಲಿ ಯಾವುದೇ ಗೋಲ್‌ಮಾಲ್ ಆಗಿಲ್ಲ:  ಮಹಿಳಾ & ಮಕ್ಕಳಾಭಿವೃದ್ಧಿ ಇಲಾಖೆ ಸ್ಪಷ್ಟನೆ  – vishwanews24

ಗೃಹಲಕ್ಷ್ಮಿ ಯೋಜನೆಯಲ್ಲಿ ಗೋಲ್‌ಮಾಲ್ ಆಗಿಲ್ಲ:  ಮಹಿಳಾ & ಮಕ್ಕಳಾಭಿವೃದ್ಧಿ ಇಲಾಖೆ ಸ್ಪಷ್ಟನೆ  ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಲ್ಲಿ ಮಹಾಲೋಪವಾಗಿದೆ ಅಂತ ಸಿಎಜಿ…

1 hour ago

ನನ್ನ , ಡಿ.ಕೆ.ಶಿವಕುಮಾರ್ ಮಧ್ಯೆ ಯಾವುದೇ ವ್ಯವಹಾರಿಕ ಸಂಬಂಧ ಇಲ್ಲ , ಆತ್ಮೀಯತೆಯೂ ಇಲ್ಲ : ವಿಜಯೇಂದ್ರ – vishwanews24

ನನ್ನ , ಡಿ.ಕೆ.ಶಿವಕುಮಾರ್ ಮಧ್ಯೆ ಯಾವುದೇ ವ್ಯವಹಾರಿಕ ಸಂಬಂಧ ಇಲ್ಲ , ಆತ್ಮೀಯತೆಯೂ ಇಲ್ಲ : ವಿಜಯೇಂದ್ರ ಮಂಗಳೂರು :…

1 hour ago

ಅಯೋಧ್ಯಾ ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗ ಆರೋಪ: ಎಂಟು ಆರೋಪಿಗಳ ಬಂಧನ – vishwanews24

ಅಯೋಧ್ಯಾ ರಾಮ ಮಂದಿರದಲ್ಲಿ ದೇಣಿಗೆ ದುರುಪಯೋಗ ಆರೋಪ: ಎಂಟು ಆರೋಪಿಗಳ ಬಂಧನ ಅಯೋಧ್ಯೆ: ಅಯೋಧ್ಯೆ ರಾಮ ಮಂದಿರಕ್ಕೆ ಭಕ್ತಾದಿಗಳು ನೀಡಿದ್ದ…

1 hour ago

ಆರ್‌ ಎಸ್‌ ಎಸ್ ವಿವಿಧ ಆಯಾಮಗಳಲ್ಲಿ ಸಮಾಜ ಸೇವೆ ನಡೆಸಿಕೊಂಡು ಬಂದಿದೆ : ಸತ್ಯಜಿತ್ ಸುರತ್ಕಲ್ – vishwanews24

ಆರ್‌ ಎಸ್‌ ಎಸ್ ವಿವಿಧ ಆಯಾಮಗಳಲ್ಲಿ ಸಮಾಜ ಸೇವೆ ನಡೆಸಿಕೊಂಡು ಬಂದಿದೆ : ಸತ್ಯಜಿತ್ ಸುರತ್ಕಲ್ ಮಂಗಳೂರು: ರಾಷ್ಟ್ರೀಯ ಸ್ವಯಂಸೇವಕ…

2 hours ago