ಮಲ್ಪೆ, : ಧಾರ್ಮಿಕತೆಯೆಂದು ಜಾತಿಯತೆ ಬೋಧಿಸುವ ಧರ್ಮ ದಲಿತರನ್ನು ಕ್ರೂರವಾಗಿ ಹಿಂಸೆ ಮಾಡಿದೆ. ಸಹಾನುಭೂತಿ, ಸಮಾನತೆ ಮತ್ತು ಸ್ವಾತಂತ್ರ್ಯ ಈ ಮೂರು ಅಂಶಗಳಿಲ್ಲದ ಧರ್ಮದ ಹೆಸರಿನಲ್ಲಿ ಸಂವಿಧಾನದ ಬುಡಕ್ಕೆ ಕೈಹಾಕಿದರೆ ನಿಮ್ಮನ್ನು ಸುಟ್ಟು ಬೂದಿ ಮಾಡುವ ದಲಿತರ ದಂಡು ಸಿದ್ದವಿದೆ ಎಂದು ಜನಪರ ಹೋರಾಟಗಾರ ಜಯನ್ ಮಲ್ಪೆಎಚ್ಚರಿಕೆ ನೀಡಿದ್ದಾರೆ.
ಅಂಬೇಡ್ಕರ್ ಯುವಸೇನೆಯ ಜಿಲ್ಲಾ ಘಟಕದ ವತಿಯಿಂದ ಮಲ್ಪೆ ಗಾಂಧಿ ಶತಾಬ್ಧಿ ಶಾಲಾ ಮೈದಾನದಲ್ಲಿ ಶುಕ್ರವಾರ ಮಕ್ಕಳ ಜೊತೆ ಆಯೋಜಿಸಲಾದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ವರ 68ನೇ ಪರಿನಿರ್ವಾಣ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.
ಧರ್ಮ ಇರುವುದು ಮನುಷ್ಯನಿಗಾಗಿ, ಮನುಷ್ಯನಿರುವುದು ಧರ್ಮಕ್ಕಲ್ಲ. ನಿಮ್ಮ ಧರ್ಮದಲ್ಲಿರುವ ಅಸಮಾನತೆ ಜಗತ್ತಿನ ಯಾವ ಧರ್ಮದಲ್ಲೂ ಸಿಗುವುದಿಲ್ಲ ಎಂದ ಜಯನ್ ಮಲ್ಪೆ ಇಂದಿನ ನಿಮ್ಮ ಧರ್ಮಕ್ಕೆ ದೇವರು, ನೀತಿ ಎರಡೂ ಇಲ್ಲ. ಇಂತಹ ಸ್ಥಿತಿ ಕೇವಲ ಮಾನವನ ಮನಸ್ಸಿನ ಪತನಕ್ಕೆ ದಾರಿ ಮಾಡಿಕೊಡುತ್ತದೆ ಎಂದರು.
ಹಿರಿಯ ದಲಿತ ಮುಖಂಡ ಕೆ.ಕರುಣಾಕರ ಮಾಸ್ತರ್ ಮಾತನಾಡಿ, ಸಂವಿಧಾನ ಉಳಿದರೆ ಮಾತ್ರ ನಮ್ಮ ಬದುಕು. ಮಕ್ಕಳು ಅಂಬೇಡ್ಕರ್ ಚಿಂತನೆ ಯೊಂದಿಗೆ ಸಾಮಾಜಿಕ ಹೋರಾಟದಿಂದ ಜಾಗೃತಿ ಮಾಡಬೇಕು ಎಂದು ತಿಳಿಸಿದರು.
ದಲಿತ ಹಕ್ಕುಗಳ ಹೋರಾಟ ಸಮಿತಿಯ ಸಜೀವ ಬಳ್ಕೂರು ಮಾತನಾಡಿ, ಅಂಬೇಡ್ಕರರ ಮೀಸಲಾತಿಯ ಲಾಭ ಪಡೆದ ಬಹುತೇಕ ವಿದ್ಯಾವಂತರು, ದಲಿತ ನೌಕರರು, ಅಧಿಕಾರಿಗಳ, ರಾಜಕಾರಣಿಗಳ ದೊಡ್ಡ ವರ್ಗವಿದ್ದರೂ ದಲಿತ ಸಮಾಜ ವಿಘಟನೆಗೊಂಡಿರುವುದು ಅಂಬೇಡ್ಕರ್ಗೆ ಎಸಗಿದ ದ್ರೋಹ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಂಬೇಡ್ಕರ್ ಯುವಸೇನೆಯ ಸ್ಥಾಪಕ ಅಧ್ಯಕ್ಷ ಹರೀಶ್ ಸಾಲ್ಯಾನ್ ಮಾತನಾಡಿ, ಸತಿ ಪದ್ಧತಿ, ದೇವದಾಸಿ ಪದ್ಧತಿ, ವಿಧವಾ ಪದ್ಧತಿ, ಶಿಶುಹತ್ಯೆ ಗಳಂತಹ ಘೋರ ಕೃತ್ಯಗಳು ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಕಟ್ಟು ಪಾಡಿನ ವಿರುದ್ಧ ಮತ್ತು ಮಹಿಳೆಯರಿಗೆ ಶಿಕ್ಷಣ ಹಾಗೂ ಆಸ್ತಿಯ ಹಕ್ಕು ನೀಡಿದ ಅಂಬೇಡ್ಕರ್ ಮಹಿಳಾ ವಿಮೋಚನೆಗಾಗಿ ಶ್ರಮಿಸಿದ ನಾಯಕ ಎಂದು ತಿಳಿಸಿದರು.
ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಗಣೇಶ್ ನೆರ್ಗಿ ಮಾತನಾಡಿದರು. ದಲಿತ ಮುಖಂಡರಾದ ಸಂತೋಷ್ ಕಪ್ಪೆಟ್ಟು, ರವಿ ಲಕ್ಷ್ಮೀನಗರ, ಸುಮಿತ್ ನೆರ್ಗಿ, ದಯಾಕರ್ ಮಲ್ಪೆ, ಸಾಧು ಚಿಟ್ಪಾಡಿ, ವಿನಯ ಕೊಡಂಕೂರು, ಜಯ ಸಾಲ್ಯಾನ್, ಪ್ರಸಾದ್ ಮಲ್ಪೆ, ಅನಂತ ಕುಂದರ್ ನೆರ್ಗಿ, ಈಶ್ವರ್ ಗದಗ, ಗುಣವಂತ ತೊಟ್ಟಂ, ಬಿ.ಎನ್.ಪ್ರಶಾಂತ್, ಸುಶೀಲ್ ಕುಮಾರ್, ದೀಪಕ್ ಕೊಡವೂರು, ಮಿಥುನ್ ಲಕ್ಷ್ಮೀನಗರ, ಅರುಣ್ ಸಾಲ್ಯಾನ್, ಮೋಹನ್ ಗುಜ್ಜರಬೆಟ್ಟು, ಶಶಿಕಲಾ ತೊಟ್ಟಂ, ಸಂಕಿ ತೊಟ್ಟಂ, ಶಕಿ ಕಪ್ಪೆಟ್ಟು, ಕಿರಣ, ಸತೀಶ್ ಬೈಲಕೆರೆ, ಹರೀಶ್ ತೊಟ್ಟಂ, ಶಿಕ್ಷಕ ರಕ್ಷಕ ಸಂಘದ ರವಿರಾಜ್, ಅಶೋಕ್ ಕೋಟ್ಯಾನ್, ಮುಖೋಪದ್ಯಾಯರಾದ ಪ್ರೇಮಾನಂದ, ವೇದಾವತಿ, ಪೂರ್ಣಿಮ ಮೊದಲಾದವರು ಉಪಸ್ಥಿತರಿದ್ದರು.
ವಾದಿರಾಜ್ ಪಾಳೆಕಟ್ಟೆ ಸ್ವಾಗತಿಸಿದರು. ಸತೀಶ್ ಕಪ್ಪೆಟ್ಟು ವಂದಿಸಿದರು.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…