ಹೊಸದಿಲ್ಲಿ: ಇಸ್ಲಾಂನಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಲಿಂಗ ತಾರತಮ್ಯ ಇಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಸುಪ್ರೀಂಕೋರ್ಟ್ಗೆ ತಿಳಿಸಿದೆ. ಮುಸ್ಲಿಂ ಮಹಿಳೆಯರು ಕೂಡ ಮಸೀದಿಗಳಿಗೆ ಪ್ರವೇಶಿಸಿ ನಮಾಜ್ ಸಲ್ಲಿಸಲು ಅವಕಾಶವಿದೆ. ಆದರೆ ಮಸೀದಿಗಳಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಇರುವಂತಿಲ್ಲ ಎಂದು ಅದು ಹೇಳಿದೆ.
ಮಸೀದಿಗಳಲ್ಲಿ ಸಹ- ಪ್ರಾರ್ಥನೆಗೆ ಅವಕಾಶ ನೀಡುವುದು ಇಸ್ಲಾಮಿಕ್ ಗ್ರಂಥಗಳು ಮತ್ತು ತತ್ವಗಳಲ್ಲಿ ಅನುಸರಣೆಯ ನಿಯಮಗಳಲ್ಲಿ ಇಲ್ಲ ಎಂದು ಮಂಡಳಿ ಪ್ರತಿಪಾದಿಸಿದೆ.
“ಧಾರ್ಮಿಕ ಗ್ರಂಥಗಳು, ಬೋಧನೆಗಳು ಮತ್ತು ಇಸ್ಲಾಂ ಅನುಯಾಯಿಗಳ ಧಾರ್ಮಿಕ ನಂಬಿಕೆಗಳನ್ನು ಪರಿಗಣಿಸಿದಾಗ, ಮಸೀದಿಗಳ ಒಳಗೆ ನಮಾಜ್ ಸಲ್ಲಿಸಲು ಮಹಿಳೆಯರು ಮಸೀದಿ ಪ್ರವೇಶಿಸುವುದಕ್ಕೆ ಅನುಮತಿ ಇದೆ. ಹೀಗಾಗಿ, ಮುಸ್ಲಿಂ ಮಹಿಳೆಯರು ಪ್ರಾರ್ಥನೆಗಾಗಿ ಮಸೀದಿ ಪ್ರವೇಶಿಸುವುದಕ್ಕೆ ಮುಕ್ತರಾಗಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಲಭ್ಯವಿರುವ ಅಂತಹ ಸೌಲಭ್ಯದ ಹಕ್ಕನ್ನು ಬಳಸಿಕೊಳ್ಳುವುದು ಆಕೆಯ ಆಯ್ಕೆಗೆ ಬಿಟ್ಟ ವಿಷಯ” ಎಂದು ಮಂಡಳಿ ಪರವಾಗಿ ವಕೀಲ ಎಂಆರ್ ಶಂಷದ್ ಸಲ್ಲಿಸಿರುವ ಅಫಿಡವಿಟ್ನಲ್ಲಿ ಹೇಳಲಾಗಿದೆ.
“ಮುಸ್ಲಿಂ ಪುರುಷರಿಗೆ ನಿಯಮಗಳಿದ್ದರೂ, ಮುಸ್ಲಿಂ ಮಹಿಳೆಯರು ಸಾಮೂಹಿಕವಾಗಿ ಐದು ಬಾರಿ ಪ್ರಾರ್ಥನೆಗೆ ಸೇರಬೇಕು ಎಂದು ಇಸ್ಲಾಂನಲ್ಲಿ ಕಡ್ಡಾಯವಾಗಿ ಹೇಳಿಲ್ಲ. ಹಾಗೆಯೇ ಶುಕ್ರವಾರದಂದು ನಡೆಯುವ ವಾರದ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದು ಕೂಡ ಮಹಿಳೆಯರಿಗೆ ಕಡ್ಡಾಯವಾಗಿಲ್ಲ. ಮುಸ್ಲಿಂ ಮಹಿಳೆಯರಿಗೆ ವಿಭಿನ್ನ ಸ್ಥಾನ ನೀಡಲಾಗಿದೆ, ಏಕೆಂದರೆ ಇಸ್ಲಾಂ ಬೋಧನೆಗಳ ಪ್ರಕಾರ ಆಕೆಗೆ ಮಸೀದಿ ಅಥವಾ ಮನೆ ಇರಲಿ, ತನ್ನ ಇಚ್ಛೆಗೆ ತಕ್ಕಂತೆ ಎಲ್ಲಿ ಪ್ರಾರ್ಥನೆ ಸಲ್ಲಿಸಿದರೂ ಅದೇ ಧಾರ್ಮಿಕ ಕೃಪೆಗಳನ್ನು ಪಡೆಯಲು ಆಕೆ ಅರ್ಹಳಾಗಿರುತ್ತಾಳೆ” ಎಂದು ಅಫಿಡವಿಟ್ ತಿಳಿಸಿದೆ.
ಮೆಕ್ಕಾ ಮತ್ತು ಮದೀನಾಗಳಲ್ಲಿ ಮಹಿಳೆಯರು, ಪುರುಷ ಯಾತ್ರಾರ್ಥಿಗಳ ಜತೆಗೇ ಹಜ್ ಯಾತ್ರೆ ನಡೆಸಲು ಅವಕಾಶವಿದೆ. ಹೀಗಿರುವಾಗ ಮಸೀದಿಗಳಲ್ಲಿ ಕೂಡ ಪುರುಷರ ಜತೆ ಮಹಿಳೆಯರು ಕೂಡ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಎಂದು ಕೆಲವು ಅರ್ಜಿದಾರರು ವಾದಿಸಿದ್ದರು. ಇದನ್ನು ನಿರಾಕರಿಸಿರುವ ಮಂಡಳಿ, ಮೆಕ್ಕಾ ಮತ್ತು ಮದೀನಾ ಪವಿತ್ರ ತಾಣಗಳಿಗೆ ಇಸ್ಲಾಂನಲ್ಲಿ ಬೇರೆಯದೇ ಸ್ಥಾನವಿದೆ ಎಂದು ಹೇಳಿದೆ.
“ಯಾವುದೇ ಧಾರ್ಮಿಕ ಗ್ರಂಥವು ಯಾವುದೇ ಮಸೀದಿಗಳಲ್ಲಿ ಮಹಿಳೆಯರು ಮತ್ತು ಪುರುಷರು ಮುಕ್ತವಾಗಿ ಬೆರೆಯಲು ಅಧಿಕಾರ ನೀಡುವುದಿಲ್ಲ. ಮದೀನಾದ ಆನ್- ನಬಾವಿ ಮಸೀದಿಯು ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಸ್ಥಳ/ ಕೋಣೆಗಳನ್ನು ಹೊಂದಿದೆ. ಅಷ್ಟಲ್ಲದೆ, ಆನ್ ನಬಾವಿ ಮಸೀದಿಯಲ್ಲಿ ರಾವ್ದಾಹ್ಗೆ ಕೂಡ ಪ್ರತ್ಯೇಕ ವ್ಯವಸ್ಥೆ ಇದೆ. ಅದು ಜಿಯಾರತ್ ಮಾಡಲು ಪುರುಷರು ಹಾಗೂ ಮಹಿಳೆಯರಿಗೆ ಬೇರೆ ಬೇರೆ ಸಮಯಗಳನ್ನು ನಿಗದಿ ಮಾಡಲಾಗಿರುತ್ತದೆ” ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಾದಿಸಿದೆ.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…