ಹೊಸದಿಲ್ಲಿ: ಇಸ್ಲಾಂನಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಲಿಂಗ ತಾರತಮ್ಯ ಇಲ್ಲ ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಎಐಎಂಪಿಎಲ್ಬಿ) ಸುಪ್ರೀಂಕೋರ್ಟ್ಗೆ ತಿಳಿಸಿದೆ. ಮುಸ್ಲಿಂ ಮಹಿಳೆಯರು ಕೂಡ ಮಸೀದಿಗಳಿಗೆ ಪ್ರವೇಶಿಸಿ ನಮಾಜ್ ಸಲ್ಲಿಸಲು ಅವಕಾಶವಿದೆ. ಆದರೆ ಮಸೀದಿಗಳಲ್ಲಿ ಪುರುಷರು ಮತ್ತು ಮಹಿಳೆಯರು ಒಟ್ಟಿಗೆ ಇರುವಂತಿಲ್ಲ ಎಂದು ಅದು ಹೇಳಿದೆ.
ಮಸೀದಿಗಳಲ್ಲಿ ಸಹ- ಪ್ರಾರ್ಥನೆಗೆ ಅವಕಾಶ ನೀಡುವುದು ಇಸ್ಲಾಮಿಕ್ ಗ್ರಂಥಗಳು ಮತ್ತು ತತ್ವಗಳಲ್ಲಿ ಅನುಸರಣೆಯ ನಿಯಮಗಳಲ್ಲಿ ಇಲ್ಲ ಎಂದು ಮಂಡಳಿ ಪ್ರತಿಪಾದಿಸಿದೆ.
“ಧಾರ್ಮಿಕ ಗ್ರಂಥಗಳು, ಬೋಧನೆಗಳು ಮತ್ತು ಇಸ್ಲಾಂ ಅನುಯಾಯಿಗಳ ಧಾರ್ಮಿಕ ನಂಬಿಕೆಗಳನ್ನು ಪರಿಗಣಿಸಿದಾಗ, ಮಸೀದಿಗಳ ಒಳಗೆ ನಮಾಜ್ ಸಲ್ಲಿಸಲು ಮಹಿಳೆಯರು ಮಸೀದಿ ಪ್ರವೇಶಿಸುವುದಕ್ಕೆ ಅನುಮತಿ ಇದೆ. ಹೀಗಾಗಿ, ಮುಸ್ಲಿಂ ಮಹಿಳೆಯರು ಪ್ರಾರ್ಥನೆಗಾಗಿ ಮಸೀದಿ ಪ್ರವೇಶಿಸುವುದಕ್ಕೆ ಮುಕ್ತರಾಗಿದ್ದಾರೆ. ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಲಭ್ಯವಿರುವ ಅಂತಹ ಸೌಲಭ್ಯದ ಹಕ್ಕನ್ನು ಬಳಸಿಕೊಳ್ಳುವುದು ಆಕೆಯ ಆಯ್ಕೆಗೆ ಬಿಟ್ಟ ವಿಷಯ” ಎಂದು ಮಂಡಳಿ ಪರವಾಗಿ ವಕೀಲ ಎಂಆರ್ ಶಂಷದ್ ಸಲ್ಲಿಸಿರುವ ಅಫಿಡವಿಟ್ನಲ್ಲಿ ಹೇಳಲಾಗಿದೆ.
“ಮುಸ್ಲಿಂ ಪುರುಷರಿಗೆ ನಿಯಮಗಳಿದ್ದರೂ, ಮುಸ್ಲಿಂ ಮಹಿಳೆಯರು ಸಾಮೂಹಿಕವಾಗಿ ಐದು ಬಾರಿ ಪ್ರಾರ್ಥನೆಗೆ ಸೇರಬೇಕು ಎಂದು ಇಸ್ಲಾಂನಲ್ಲಿ ಕಡ್ಡಾಯವಾಗಿ ಹೇಳಿಲ್ಲ. ಹಾಗೆಯೇ ಶುಕ್ರವಾರದಂದು ನಡೆಯುವ ವಾರದ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವುದು ಕೂಡ ಮಹಿಳೆಯರಿಗೆ ಕಡ್ಡಾಯವಾಗಿಲ್ಲ. ಮುಸ್ಲಿಂ ಮಹಿಳೆಯರಿಗೆ ವಿಭಿನ್ನ ಸ್ಥಾನ ನೀಡಲಾಗಿದೆ, ಏಕೆಂದರೆ ಇಸ್ಲಾಂ ಬೋಧನೆಗಳ ಪ್ರಕಾರ ಆಕೆಗೆ ಮಸೀದಿ ಅಥವಾ ಮನೆ ಇರಲಿ, ತನ್ನ ಇಚ್ಛೆಗೆ ತಕ್ಕಂತೆ ಎಲ್ಲಿ ಪ್ರಾರ್ಥನೆ ಸಲ್ಲಿಸಿದರೂ ಅದೇ ಧಾರ್ಮಿಕ ಕೃಪೆಗಳನ್ನು ಪಡೆಯಲು ಆಕೆ ಅರ್ಹಳಾಗಿರುತ್ತಾಳೆ” ಎಂದು ಅಫಿಡವಿಟ್ ತಿಳಿಸಿದೆ.
ಮೆಕ್ಕಾ ಮತ್ತು ಮದೀನಾಗಳಲ್ಲಿ ಮಹಿಳೆಯರು, ಪುರುಷ ಯಾತ್ರಾರ್ಥಿಗಳ ಜತೆಗೇ ಹಜ್ ಯಾತ್ರೆ ನಡೆಸಲು ಅವಕಾಶವಿದೆ. ಹೀಗಿರುವಾಗ ಮಸೀದಿಗಳಲ್ಲಿ ಕೂಡ ಪುರುಷರ ಜತೆ ಮಹಿಳೆಯರು ಕೂಡ ಪ್ರಾರ್ಥನೆ ಸಲ್ಲಿಸಲು ಅವಕಾಶವಿದೆ ಎಂದು ಕೆಲವು ಅರ್ಜಿದಾರರು ವಾದಿಸಿದ್ದರು. ಇದನ್ನು ನಿರಾಕರಿಸಿರುವ ಮಂಡಳಿ, ಮೆಕ್ಕಾ ಮತ್ತು ಮದೀನಾ ಪವಿತ್ರ ತಾಣಗಳಿಗೆ ಇಸ್ಲಾಂನಲ್ಲಿ ಬೇರೆಯದೇ ಸ್ಥಾನವಿದೆ ಎಂದು ಹೇಳಿದೆ.
“ಯಾವುದೇ ಧಾರ್ಮಿಕ ಗ್ರಂಥವು ಯಾವುದೇ ಮಸೀದಿಗಳಲ್ಲಿ ಮಹಿಳೆಯರು ಮತ್ತು ಪುರುಷರು ಮುಕ್ತವಾಗಿ ಬೆರೆಯಲು ಅಧಿಕಾರ ನೀಡುವುದಿಲ್ಲ. ಮದೀನಾದ ಆನ್- ನಬಾವಿ ಮಸೀದಿಯು ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಸ್ಥಳ/ ಕೋಣೆಗಳನ್ನು ಹೊಂದಿದೆ. ಅಷ್ಟಲ್ಲದೆ, ಆನ್ ನಬಾವಿ ಮಸೀದಿಯಲ್ಲಿ ರಾವ್ದಾಹ್ಗೆ ಕೂಡ ಪ್ರತ್ಯೇಕ ವ್ಯವಸ್ಥೆ ಇದೆ. ಅದು ಜಿಯಾರತ್ ಮಾಡಲು ಪುರುಷರು ಹಾಗೂ ಮಹಿಳೆಯರಿಗೆ ಬೇರೆ ಬೇರೆ ಸಮಯಗಳನ್ನು ನಿಗದಿ ಮಾಡಲಾಗಿರುತ್ತದೆ” ಎಂದು ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ವಾದಿಸಿದೆ.
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…
ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು :…
ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್ಪೋರ್ಟ್…
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್ಜೆಟ್ (Spice Jet) ವಿಮಾನದಲ್ಲಿ…