ವಾಮಾಚಾರ ಪ್ರಯೋಗ ಎಂಬ ಪದವೇ ದಿಗಿಲು ಹುಟ್ಟಿಸುವಂಥದ್ದು. ಏಕೆಂದರೆ ಹೀಗೆ ವಾಮಾಚಾರ ಮಾಡಿದರೆ ಸಮಸ್ಯೆಗಳು ಹೇಗಾಗುತ್ತವೆ ಅಂದರೆ, ಕೆನ್ನೆ ಮೇಲೆ ಪೆಟ್ಟು ಬಿದ್ದ ಅನುಭವ ಆಗುತ್ತದೆ. ಆದರೆ ಹೊಡೆದವರು ಯಾರು ಎಂಬುದು ಕಣ್ಣಿಗೆ ಕಾಣಲ್ಲ. ಎದುರು ನಿಂತು ಬಡಿದಾಡುವ ಶತ್ರುವಾದರೆ ಹೇಗೋ ಎದುರಿಸಬಹುದು. ಆದರೆ ಹೀಗೆ ಕಣ್ಣಿಗೆ ಕಾಣದ ಸಮಸ್ಯೆ ಎದುರಿಸುವುದು ಹೇಗೆ?
ದುಷ್ಟಶಕ್ತಿ ಪ್ರಯೋಗ, ವಾಮಾಚಾರ ಪ್ರಯೋಗ ಇವೆಲ್ಲವನ್ನೂ ನಂಬದವರು ಹೆಚ್ಚು. ಆದರೆ ಕೆಲವು ಸಲ ಜ್ಯೋತಿಷ್ಯದಲ್ಲಿ ಸಮಸ್ಯೆ ಏನು ಎಂಬುದನ್ನು ಪತ್ತೆ ಮಾಡಲು ಆಗುವುದಿಲ್ಲ. ಹೆಚ್ಚು ಸ್ಪಷ್ಟವಾಗಿ ಹೇಳಬೇಕೆಂದರೆ, ಜಾತಕದಲ್ಲಿ ಯಾವುದೇ ಗ್ರಹದೋಷ- ಗೃಹ ವಾಸ್ತು ದೋಷ ಇಲ್ಲದಿದ್ದರೂ ತೊಂದರೆ ಆಗುತ್ತಿರುತ್ತದೆ. ಅದಕ್ಕೆ ಕೃತ್ರಿಮ ಪ್ರಯೋಗ ಆಗಿರುವ ಸಾಧ್ಯತೆ ಇರುತ್ತದೆ.ಬಹಳ ಜನಕ್ಕೆ ತಮ್ಮ ಮೇಲೆ ಪ್ರಯೋಗ ಆಗಿದೆ ಎಂಬ ಅನುಮಾನ ಮೂಡಿದರೂ ಹೇಳಿಕೊಳ್ಳಲು ಎಂಥದ್ದೋ ನಾಚಿಕೆ ಅಥವಾ ಸಂಕೋಚ ಇರುತ್ತದೆ. ಆದ್ದರಿಂದ ಈ ಲೇಖನದಲ್ಲಿ ಕೆಲವು ಲಕ್ಷಣಗಳನ್ನು ತಿಳಿಸಲಾಗುವುದು.ಇಂಥ ಸಮಸ್ಯೆ ಜಾತಕದಲ್ಲಿ ಗೊತ್ತಾಗುವುದಿಲ್ಲ ಎಂದು ಈಗಾಗಲೇ ಹೇಳಿಯಾಗಿದೆ. ಪ್ರಶ್ನಶಾಸ್ತ್ರದ ಮೂಲಕ ಅದನ್ನು ತಿಳಿದುಕೊಂಡು ಶಾಶ್ವತವಾದ ಪರಿಹಾರ ಮಾಡಬೇಕಾಗುತ್ತದೆ. ಇರಲಿ, ಮೊದಲಿಗೆ ವಾಮಾಚಾರ ಪ್ರಯೋಗ ಆಗಿರಬಹುದಾದ ಲಕ್ಷಣಗಳನ್ನು ತಿಳಿದುಕೊಳ್ಳಿ.
ಮುಖದಲ್ಲಿ ವಿಕಾರತೆ ವಾಮಾಚಾರ ಪ್ರಯೋಗ ಆಗಿದೆ ಅಂದರೆ ದೈಹಿಕ ಬದಲಾವಣೆಗಳು ಮೊದಲ ಹಂತದಲ್ಲೇ ಗೋಚರವಾಗುತ್ತದೆ. ವಿಪರೀತ ಕೂದಲು ಉದುರುತ್ತದೆ. ಮುಖದಲ್ಲೊಂದು ವಿಕಾರತೆ ಕಾಣಿಸುತ್ತದೆ. ನಿತ್ಯವೂ ಗಮನಿಸುವವರಿಗೆ ಈ ಬದಲಾವಣೆ ಬಹಳ ಬೇಗ ಗೊತ್ತಾಗುತ್ತದೆ. ಜೀವ ಕಳೆ ಅಂತ ಏನು ಹೇಳ್ತೀವಿ ಅದು ಇಲ್ಲದಂತಾಗುತ್ತದೆ.
ಮನೆಯಲ್ಲಿ ಬಳಕೆಯಾಗದ ಸ್ಥಳದಲ್ಲಿ ಪೊಟ್ಟಣ ಕಟ್ಟಿರುವಂತೆ ಕುಂಕುಮ, ಅರಿಶಿನ, ನಿಂಬೆಹಣ್ಣು, ಗೊಂಬೆ, ಭಸ್ಮ, ದಾರ ಸುತ್ತಿಟ್ಟ ಮಡಿಕೆ, ಸೂಜಿ ಚುಚ್ಚಿದ ವಸ್ತು, ಮೊಟ್ಟೆ, ಮೆಣಸಿನಕಾಯಿ ಪದೇಪದೇ ಸಿಕ್ಕರೆ ಖಂಡಿತಾ ಈ ಬಗ್ಗೆ ಒಂದು ಅನುಮಾನ ಮೂಡಬೇಕು. ಏಕೆಂದರೆ ಇವೆಲ್ಲ ವಸ್ತುಗಳು ಕೃತ್ರಿಮ ಪ್ರಯೋಗದ ಮುನ್ಸೂಚನೆಗಳು.
ಉಡುಪಿ ಕೃಷ್ಣ ಮಠದಲ್ಲಿ ತಪ್ತಮುದ್ರಾಧಾರಣೆ ಉಡುಪಿ: ಆಷಾಢ ಶುಕ್ಲ ಪ್ರಥಮ ಏಕಾದಶಿ ಅಂಗವಾಗಿ ಉಡುಪಿ ಜಿಲ್ಲೆಯ ಪ್ರಮುಖ ಮಠಗಳಲ್ಲಿ ತಪ್ತ…
ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ಮಂಗಳೂರು: ರೌಡಿಶೀಟರ್ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ ಘಟನೆ ನಗರದ ಲಾಲ್ ಬಾಗ್ ಸಿಗ್ನಲ್ ಬಳಿ…
ಹವಾಮಾನ ವೈಪರೀತ್ಯದಿಂದಾಗಿ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಪುನರಾರಂಭ ಅಮರನಾಥ :ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ಆರು ದಿನಗಳಿಂದ ನಿರಂತರ ಮಳೆ,…
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನವದೆಹಲಿ: ನೀಟ್ ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳ ಆಕ್ರೋಶ ಭುಗಿಲೆದ್ದ…
ಕಾಮನ್ವೆಲ್ತ್ ಗೇಮ್ಸ್ 2026 : ಭಾರತದ ಪದಕದ ಖಾತೆ ತೆರೆದ ಝಂದು ಕುಮಾರ್: ಪ್ಯಾರಾ ಪವರ್ಲಿಫ್ಟಿಂಗ್ನಲ್ಲಿ ಕಂಚಿನ ಸಾಧನೆ ಗ್ಲಾಸ್ಕೊ…
ಅಯೋಧ್ಯೆ ಶ್ರೀರಾಮ ಮಂದಿರ ಧಾರ್ಮಿಕ ಸಮಿತಿಯಲ್ಲಿ ಪೇಜಾವರ ಶ್ರೀಗಳಿಗೆ ಸ್ಥಾನ ಅಯೋಧ್ಯೆ: ಶ್ರೀ ರಾಮಮಂದಿರದ ಪೂಜಾ ವಿಧಿವಿಧಾನಗಳು ಹಾಗೂ ಧಾರ್ಮಿಕ…