Featured

ಮಿಕ್ಸಿ ಸ್ಫೋಟದ ಆರೋಪಿ ಅನೂಪ್ ಕುಮಾರ್ ವಿರುದ್ಧ NIA ತನಿಖೆ ಯಾಕಿಲ್ಲ : SDPI ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ – Vishwanews24

ಮಿಕ್ಸಿ ಸ್ಫೋಟದ ಆರೋಪಿ ಅನೂಪ್ ಕುಮಾರ್ ವಿರುದ್ಧ NIA ತನಿಖೆ ಯಾಕಿಲ್ಲ :  ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್

ಬೆಂಗಳೂರು: ಇತ್ತೀಚೆಗೆ ಕೊರಿಯರ್ ಆಫೀಸ್’ನಲ್ಲಿ ನಡೆದ ಮಿಕ್ಸಿ ಸ್ಫೋಟದ ಆರೋಪಿ ಅನೂಪ್ ಕುಮಾರ್ ವಿರುದ್ಧ UAPA ಕಾಯ್ದೆ ಹಾಗೂ NIA ತನಿಖೆ ಯಾಕಿಲ್ಲ ಎಂದು ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಪ್ರಶ್ನಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಬಿಡುಗಡೆಗೊಳಿಸಿರುವ ಅವರು, ತನ್ನ ಪ್ರೀತಿಯನ್ನು ಹುಡುಗಿ ನಿರಾಕರಿಸಿದ ಕಾರಣದಿಂದ ಆಕೆಯನ್ನು ಕೊಲ್ಲುವ ದುರುದ್ದೇಶದಿಂದ ಮಿಕ್ಸಿಯಲ್ಲಿ ಬಾಂಬ್ ಅಳವಡಿಸಿ ಕೊರಿಯರ್’ನಲ್ಲಿ ಕಳಿಸಿಕೊಟ್ಟು ಅದು ಕೊರಿಯರ್ ಆಫೀಸ್’ನಲ್ಲಿ ಸ್ಫೋಟಗೊಂಡು ಕೊರಿಯರ್ ಮಾಲಿಕ ತೀವ್ರವಾಗಿ ಗಾಯಗೊಂಡಿದ್ದಾರೆ. ಮಿಕ್ಸಿ ಬಾಂಬ್ ನಡೆಸಿದ ಅನೂಪ್’ನಿಗೆ ಬಾಂಬ್ ಒದಗಿಸಿದವರು ಯಾರು? ಅಥವಾ ಈತನಿಗೆ ಬಾಂಬ್ ತಯಾರಿಸಲು ಕಲಿಸಿಕೊಟ್ಟವರು ಯಾರು? ಆತನ ಹಿನ್ನೆಲೆ ಏನು? ಬಾಂಬ್ ತಯಾರಿಸಿ ಕೊರಿಯರ್ ಮೂಲಕ ಕಳುಹಿಸುವ ಉದ್ದೇಶ ಏನಾಗಿತ್ತು? ಎಂಬುದನ್ನು ಕೂಲಂಕಷ ತನಿಖೆಗೆ ಒಳಪಡಿಸಬೇಕು. ಇದೇ ಸಂಧರ್ಭದಲ್ಲಿ ಅಲ್ಪಸಂಖ್ಯಾತ ಸಮುದಾಯದ ಯುವಕರು ಏನಾದರೂ ಸಣ್ಣಪುಟ್ಟ ತಪ್ಪು ಮಾಡಿದರೆ ಅದನ್ನು ಗಂಭೀರವಾಗಿ ಪರಿಗಣಿಸಿ ಅವರ ಮೇಲೆ ಕಠಿಣ ಕಾಯ್ದೆ ಹಾಕಿ ಅವರ ಜನ್ಮ ಜಾಲಾಡುವ ಸರ್ಕಾರ ಮತ್ತು ಪೋಲಿಸ್ ಇಲಾಖೆ ಅನೂಪ್ ವಿಚಾರದಲ್ಲಿ ಯಾಕೆ ಕಠಿಣ ಕಾಯ್ದೆ ಹಾಕಿ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಕುಕ್ಕರ್ ಸ್ಫೋಟವಾದಾಗ ಅರಚಾಡಿದ್ದ ಮಾಧ್ಯಮಗಳು ಮತ್ತು ಬಿಜೆಪಿ ಪ್ರತಿನಿಧಿಗಳು ಮತ್ತು ಸಂಘಪರಿವಾರ ಸಂಘಟನೆಗಳು ಹಾಸನದ ಮಿಕ್ಸಿ ಸ್ಫೋಟದ ಬಗ್ಗೆ ಮೃದು ಧೋರಣೆ ತೋರುವುದರ ಹಿಂದಿನ ಷಡ್ಯಂತ್ರವೇನು ಎಂದು ಅವರು ಪ್ರಶ್ನಿಸಿದ್ದಾರೆ.

ಕೆಲವು ದಿನಗಳ ಹಿಂದೆ ಪುತ್ತೂರು ಉಪ ವಲಯ ಅರಣ್ಯಧಿಕಾರಿ ಸಂಜೀವ ಕಾಣಿಯೂರು ಎಂಬವರು ಸಾಮಾಜಿಕ ಜಾಲತಾಣದಲ್ಲಿ ಭಜನೆಯ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಾರೆ ಎಂದು ಆರೋಪಿಸಿ ಮುರಳಿಕೃಷ್ಣ ಹಸಂತಡ್ಕ ನೇತೃತ್ವದ ಸಂಘಪರಿವಾರ ಕಾರ್ಯಕರ್ತರ ಗುಂಪು ಸಂಜೀವರವರ ಮನೆ ಮುಂದೆ ಬಾಂಬ್ ಎಸೆದಿದ್ದರು. ಪೊಲೀಸರಿಗೆ ಅಲ್ಲಿ ಜೀವಂತ ಬಾಂಬ್ ಕೂಡ ಸಿಕ್ಕಿದೆ ಎಂದು ಪತ್ರಿಕಾ ಮಾಧ್ಯಮಗಳಲ್ಲಿ ವರದಿಯಾಗಿದೆ. ಹೀಗಿದ್ದರೂ ಇದರ ವಿರುದ್ಧ ಸರ್ಕಾರ ಮತ್ತು ಪೊಲೀಸರು ಕಠಿಣ ಕ್ರಮ ಕೈಗೊಳ್ಳದೆ ಅವರಿಗೆ ಬೆಂಬಲವಾಗಿ ನಿಂತಿರುವುದು ದುರದೃಷ್ಟಕರ ಎಂದು ಅವರು ಹೇಳಿದ್ದಾರೆ.

ಸಂಜೀವ ಕಾಣಿಯೂರು ಮನೆ ಮೇಲೆ ನಡೆದ ಸ್ಫೋಟದ ತನಿಖೆ ಏನಾಯಿತು? ಎಷ್ಟು ಜನರ ಬಂಧನ ನಡೆದಿದೆ?, ಮಿಕ್ಸಿ ಬಾಂಬ್ ನಡೆಸಿದ ಅನೂಪ್’ನಿಗೆ ಬಾಂಬ್ ಒದಗಿಸಿದವರು ಯಾರು? ಅಥವಾ ಈತನಿಗೆ ಬಾಂಬ್ ತಯಾರಿಸಲು ಕಲಿಸಿಕೊಟ್ಟವರು ಯಾರು? ಆತನ ಹಿನ್ನೆಲೆ ಏನು ಎಂಬುದನ್ನು ಪೋಲಿಸ್ ಇಲಾಖೆ ಕೂಡಲೇ ಬಹಿರಂಗ ಪಡಿಸಬೇಕು ಹಾಗೂ ಆತನ ವಿರುದ್ಧ UAPA ಕಾಯ್ದೆ ಅಡಿಯಲ್ಲಿ ಬಂಧಿಸಿ ಪ್ರಕರಣವನ್ನು NIA ತನಿಖೆಗೆ ವಹಿಸಿಕೊಡಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

2 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

3 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

3 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

3 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

3 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

3 days ago