ಮಿಥುನ ರಾಶಿಯಲ್ಲಿ ಕಂಕಣ ಸೂರ್ಯಗ್ರಹಣ..! ರಾಶಿ ಪರಿಹಾರ ಕ್ರಮಗಳು ಇಲ್ಲಿವೆ ನೋಡಿ..

ಗ್ರಹಣಾನಂತರ ಸೂಕ್ತ ಪರಿಹಾರ ಕ್ರಮಗಳನ್ನು ಮಾಡಿದರೆ ಗ್ರಹಣದಿಂದ ಉಂಟಾಗುವ ಸಮಸ್ಯೆಗಳನ್ನು ನಿವಾರಿಸಬಹುದು ಎಂದು ಜ್ಯೋತಿಷ್ಯಶಾಸ್ತ್ರ ತಿಳಿಸುತ್ತದೆ. ಹಾಗಾದರೆ ಗ್ರಹಣದ ಪರಿಣಾಮವನ್ನು ಎದುರಿಸುವ ರಾಶಿಗಳು ಯಾವುವು? ಯಾವ ನಕ್ಷತ್ರದಲ್ಲಿ ಗ್ರಹಣ ನಡೆಯಲಿದೆ ಹಾಗೂ ಗ್ರಹಣ ಮೋಕ್ಷದ ನಂತರ ಯಾವ ಪರಿಹಾರ ಮಾಡಬೇಕು ಎನ್ನುವುದರ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ.

​ಮಿಥುನ ರಾಶಿಯಲ್ಲಿ ಸೂರ್ಯಗ್ರಹಣ

ಗ್ರಹಣವು ಖಗೋಳದಲ್ಲಿ ನಡೆಯುವ ಘಟನೆಯೇ ಆದರೂ ಹಿಂದಿನಿಂದಲೂ ಪಾಲಿಸಿಕೊಂಡು ಬಂದ ನಂಬಿಕೆಗಳನ್ನು ತಳ್ಳಿಹಾಕಲಾಗುವುದಿಲ್ಲ. ಸೂರ್ಯನು ಜೂನ್‌ 14 ರಂದು ಮಿಥುನ ರಾಶಿಯನ್ನು ಪ್ರವೇಶಿಸಿರುತ್ತಾನೆ. ಹಾಗಾಗಿ ಈ ಗ್ರಹಣವು ಕೂಡಾ ಮಿಥುನ ರಾಶಿ, ಮೃಗಶಿರಾ ನಕ್ಷತ್ರದಲ್ಲಿ ನಡೆಯಲಿದೆ. ಹಾಗಾಗಿ ಈ ರಾಶಿ ನಕ್ಷತ್ರದವರ ಮೇಲೆ ಗ್ರಹಣವು ಹೆಚ್ಚು ಪರಿಣಾಮ ಬೀರಲಿದೆ. ಗ್ರಹಣ ಪೂರ್ಣಗೊಂಡ ನಂತರ ಸೂರ್ಯನು ಜೂನ್‌ 21ರಂದು ರಾತ್ರಿ ಆರಿದ್ರಾ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಜೊತೆಗೆ ಚಿತ್ರಾ ನಕ್ಷತ್ರ, ಧನಿಷ್ಠಾ, ಆರಿದ್ರಾ ಹಾಗೂ ರೋಹಿಣಿ ನಕ್ಷತ್ರದ ಮೇಲೂ ಪರಿಣಾಮ ಬೀರುವುದು.

​ರಾಶಿಗಳ ಮೇಲೆ ಫಲಾಫಲ

ಶುಭ ಫಲ ಪಡೆಯುವ ರಾಶಿಗಳು: ಸಿಂಹ, ಕನ್ಯಾ, ಮಕರ, ಮೇಷ

ಮಿಶ್ರಫಲ ಪಡೆಯುವ ರಾಶಿಗಳು: ತುಲಾ, ಧನುಸ್ಸು, ಕುಂಭ, ವೃಷಭ

ಅಶುಭ ಫಲ ಪಡೆಯುವ ರಾಶಿಗಳು: ಮಿಥುನ, ಕಟಕ, ವೃಶ್ಚಿಕ, ಮೀನ

 

ಗ್ರಹಣದ ಸಮಯದಲ್ಲಿ ಆರು ಗ್ರಹಗಳಾದ ಗುರು, ಶನಿ, ಮಂಗಳ, ಶುಕ್ರ, ರಾಹು ಮತ್ತು ಕೇತು ವಕ್ರಿಯಾಗಿ ಚಲಿಸುತ್ತವೆ. ಅದೇ ಸಮಯದಲ್ಲಿ ಈ ಗ್ರಹಣವು ಮೇಷ, ಕನ್ಯಾ, ಮಕರ ಮತ್ತು ಸಿಂಹ ರಾಶಿಗೆ ಬಹಳ ಶುಭವಾಗಿರುತ್ತದೆ.

​ಸೂರ್ಯಗ್ರಹಣ ಸಮಯದಲ್ಲಿ ಏನು ಮಾಡಬೇಕು

ಸೂರ್ಯಗ್ರಹಣಕ್ಕೂ ಮೊದಲು ಸ್ನಾನ ಮಾಡಿ, ದೇವರನ್ನು ಪ್ರಾರ್ಥಿಸಬೇಕು. ನಿಮ್ಮ ಇಷ್ಟದೇವರ ಮಂತ್ರವನ್ನು ಭಕ್ತಿಯಿಂದ ಪಠಿಸಿದರೂ ತುಂಬಾ ಒಳ್ಳೆಯದು. ಶನಿವಾರದಂದು ರಾತ್ರಿ 10 ಗಂಟೆ 4 ನಿಮಿಷಕ್ಕೆ ಗ್ರಹಣ ಸೂತಕ ಕಾಲವು ಆರಂಭವಾಗುವುದರಿಂದ ಈ ಸಮಯದವರೆಗೂ ಆಹಾರ ಸೇವಿಸಬಹುದು. ಗ್ರಹಣ ಸ್ಪರ್ಶಕಾಲ ಬೆಳಗ್ಗೆ 10 ಗಂಟೆ 4 ನಿಮಿಷದಿಂದ ಆರಂಭವಾಗುವುದರಿಂದ ತದನಂತರ ಯಾವುದೇ ಆಹಾರ ಸೇವನೆ ಮಾಡಬಾರದು. ಆದರೆ ಗರ್ಭಿಣಿಯರಿಗೆ, ವೃದ್ಧರಿಗೆ ಹಾಗೂ ಮಕ್ಕಳಿಗೆ ಆಹಾರ ಸೇವನೆಯಲ್ಲಿ ವಿನಾಯಿತಿ ಇದೆ. ಉಳಿದಂತಹ ಆಹಾರವನ್ನು ವ್ಯರ್ಥ ಮಾಡಬಾರದೆಂದಿದ್ದರೆ ತುಳಸಿ ದಳವನ್ನು ಹಾಕಿಡಬಹುದು. ಮಕ್ಕಳು ಮತ್ತು ಗರ್ಭಿಣಿಯರು ಮನೆಯಿಂದ ಹೊರಬರದಿರುವುದೇ ಕ್ಷೇಮ. ಜೊತೆಗೆ ಯಾರೂ ಕೂಡಾ ಬರಿಗಣ್ಣಿನಿಂದ ಗ್ರಹಣವನ್ನು ನೋಡುವ ಸಾಹಸ ಮಾಡದಿರಿ.

​ಗ್ರಹಣ ದೋಷ ನಿವಾರಣಾ ಕ್ರಮಗಳು

ಗ್ರಹಣ ಮೋಕ್ಷವಾದ ನಂತರ ಮನೆಯನ್ನು ಶುದ್ಧಿ ಮಾಡಿ, ಸ್ನಾನ ಮಾಡಿದ ನಂತರ ಪೂಜಾ ಕೋಣೆಯನ್ನೂ ಗಂಗಾಜಲದಿಂದ ಶುದ್ಧಗೊಳಿಸಬೇಕು. ಸ್ನಾನ ಮಾಡುವ ನೀರಿಗೆ ಪಟಿಕದ ಪುಡಿ, ಚಿಟಿಕೆಯಷ್ಟು ಕಲ್ಲುಪ್ಪು ಹಾಗೂ ಒಂದು ಚಿಟಿಕೆ ಅರಿಶಿಣ ಹಾಕಿ ಸ್ನಾನ ಮಾಡಿದರೆ ಗ್ರಹಣದಿಂದ ದೇಹದ ಮೇಲೆ ಉಂಟಾದ ಕೆಟ್ಟ ಪರಿಣಾಮಗಳು ದೂರವಾಗುವುದು.

ದುರ್ಗಾ ದೇವಿಯು ದುಷ್ಟಶಕ್ತಿಗಳನ್ನು ನಿವಾರಿಸುವುದರಿಂದ ದುರ್ಗಾದೇವಿಯನ್ನು ದೀಪ ಬೆಳಗಿಸಿ ಆರಾಧಿಸಿದರೆ ಒಳ್ಳೆಯದು. ಗ್ರಹಣ ಮೋಕ್ಷವಾದ ನಂತರ ಶಿವದೇವಾಲಯಕ್ಕೆ ಭೇಟಿ ನೀಡಿ, ಎಣ್ಣೆಯನ್ನು ಅಥವಾ ಗೋಧಿಯನ್ನು ದಾನ ಮಾಡಿದರೆ ಉತ್ತಮ.

ಮೊದಲೇ ತಿಳಿಸಿದಂತೆ ಗರ್ಭಿಣಿ ಮಹಿಳೆಯರು ಮನೆಯಿಂದ ಹೊರಗೆ ಬರಬಾರದು. ಆಹಾರ ಸೇವಿಸಬಾರದು ಎಂಬ ನಿಯಮವಿದೆಯಾದರೂ, ನಿರ್ಜಲೀಕರಣ, ಇನ್ನಿತರ ಸಮಸ್ಯೆಗಳು ಕಾಣಿಸಿಕೊಳ್ಳಬಹುದಾದ್ದರಿಂದ ದ್ರವಾಹಾರ, ಎಳನೀರು, ಹಣ್ಣುಗಳು ಸೇರಿದಂತೆ, ಕುದಿಸಿ ಆರಿಸಿದ ಉಗುರು ಬೆಚ್ಚನೆಯ ನೀರು ಕುಡಿದರೆ ಉತ್ತಮ.

ಇನ್ನೊಂದು ಮುಖ್ಯವಾದ ಸಂಗತಿಯೆಂದರೆ ಗ್ರಹಣದ ಸಮಯದಲ್ಲಿ ಲೈಂಗಿಕ ಕ್ರಿಯೆಯಲ್ಲಿ ತೊಡಗಬಾರದು. ಯಾಕೆಂದರೆ ಗ್ರಹಣವು ಅಶುಭವೆಂದು ಪರಿಗಣಿಸಲಾಗುವುದರಿಂದ, ಈ ಸಮಯದಲ್ಲಿ ಗರ್ಭಧಾರಣೆಯಾದರೆ ಜನಿಸಿದ ಮಗುವಿಗೆ ತೊಂದರೆಯಾಗಬಹುದು ಎಂಬ ನಂಬಿಕೆ ಇದೆ. ಗ್ರಹಣದ ಸಮಯದಲ್ಲಿ ಆಹಾರ ಸೇವನೆಯೂ ನಿಷಿದ್ಧವಾಗಿರುವ ಕಾರಣ, ಈ ಸಮಯದಲ್ಲಿ ಆಹಾರ ಸೇವನೆ ಮಾಡುವುದರಿಂದ ಅಜೀರ್ಣದ ಸಮಸ್ಯೆ ಉಂಟಾಗಬಹುದು. ಗ್ರಹಣದ ಸಮಯದಲ್ಲಿ ಮನೆಯನ್ನು ಸ್ವಚ್ಛ ಮಾಡಬೇಡಿ. ಗ್ರಹಣ ಮೋಕ್ಷದ ನಂತರವೇ ಮನೆಯನ್ನು ಸ್ವಚ್ಛಮಾಡಿ.

Vishwa News 24

Recent Posts

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ – vishwanews24

ದೇವೇಗೌಡರ ಕುರಿತು ಕಾಂಗ್ರೆಸ್ ಮೊಸಳೆ ಕಣ್ಣೀರು ಸುರಿಸುವ ಅವಶ್ಯಕತೆ ಇಲ್ಲ: ಬಿ.ವೈ.ವಿಜಯೇಂದ್ರ ಬೆಂಗಳೂರು,: ಕರ್ನಾಟಕದ ಕಾಂಗ್ರೆಸ್ ಪಕ್ಷದ ಉಸ್ತುವಾರಿ ಸುರ್ಜೇವಾಲ…

12 hours ago

ಕಾರವಾರ – ಮಡಗಾಂವ್ ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ – vishwanews24

ಕಾರವಾರ - ಮಡಗಾಂವ್  ವಿಶೇಷ ರೈಲು ಸೇವೆ ಇನ್ನು ಮುಂದೆ ಖಾಯಂ ಶಿರಸಿ: ಕಾರವಾರ ಮತ್ತು ಮಡಗಾಂವ್ ನಡುವೆ ಸಂಚರಿಸುತ್ತಿದ್ದ ವಿಶೇಷ…

12 hours ago

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ: ರಾಜಣ್ಣ ಖಡಕ್ ಹೇಳಿಕೆ – vishwanews24

ಡಿಕೆಶಿ ಸಂಪುಟದಲ್ಲಿ ಸಚಿವ ಸ್ಥಾನಕ್ಕಾಗಿ ಯಾವುದೇ ಬೇಡಿಕೆ ಇಟ್ಟಿಲ್ಲ, ಸ್ಪರ್ಧೆಯಲ್ಲೂ ಇಲ್ಲ: ರಾಜಣ್ಣ ಖಡಕ್ ಹೇಳಿಕೆ ಬೆಂಗಳೂರು: ನೂತನ ಮುಖ್ಯಮಂತ್ರಿ ಡಿ.…

13 hours ago

ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ;  ₹23.67 ಲಕ್ಷ ಮೌಲ್ಯದ ಸೊತ್ತು ವಶ – vishwanews24

ಬೆಳ್ತಂಗಡಿ ಮನೆ ಕಳ್ಳತನ ಪ್ರಕರಣ : ಇಬ್ಬರು ಅಂತರಾಜ್ಯ ಕಳ್ಳರ ಬಂಧನ ;  ₹23.67 ಲಕ್ಷ ಮೌಲ್ಯದ ಸೊತ್ತು ವಶ…

15 hours ago

ಉಡುಪಿ : ಯುವಕ ನಾಪತ್ತೆ – vishwanews24

ಉಡುಪಿ : ಯುವಕ ನಾಪತ್ತೆ ಉಡುಪಿ : ಮೂಲತಃ ನೇಪಾಳ ದೇಶದವರಾದ, ಪ್ರಸ್ತುತ ಮಣಿಪಾಲದ ಲಕ್ಷಿö್ಮÃಶ ನಗರದಲ್ಲಿರುವ ಹೋಟೆಲ್ ಒಂದರಲ್ಲಿ…

15 hours ago

ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ  ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ – vishwanews24

ಉಡುಪಿ: ಜೂನ್ 9 ರಿಂದ ಕರ್ನಾಟಕದಾದ್ಯಂತ ಖಾಸಗಿ ಬಸ್ ಪ್ರಯಾಣ ದರ  ಏರಿಕೆ : ಕುಯಿಲಾಡಿ ಸುರೇಶ್ ನಾಯಕ್ ಉಡುಪಿ…

15 hours ago