Featured

ಮುಂದೊಂದು ದಿನ ನಾವು ಚಂದ್ರನನ್ನು ತಲುಪುವ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ : ಪ್ರಧಾನಿ -Vishwanews24

ಬೆಂಗಳೂರು: ಮುಂದೊಂದು ದಿನ ನಾವು ಚಂದ್ರನನ್ನು ತಲುಪುವ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ. ವಿಜ್ಞಾನದಲ್ಲಿ ಸೋಲೆಂಬ ಪ್ರಶ್ನೆಯೇ ಇಲ್ಲ. ಸತತ ಪ್ರಯತ್ನದಿಂದ ಸಾಧನೆ ಖಂಡಿತ ಸಾಧ್ಯ. ನೀವು ನಿಮ್ಮ ಪ್ರಯೋಗಗಳನ್ನು ಮುಂದುವರೆಸಿ ಎಂದು ಪ್ರಧಾನಿ ನರೇಂದ್ರ ಮೋದಿ ಇಸ್ರೋ ವಿಜ್ಞಾನಿಗಳಿಗೆ ಆತ್ಮವಿಶ್ವಾಸ ತುಂಬಿದ್ದಾರೆ.

ವಿಜ್ಞಾನದಲ್ಲಿ ಪ್ರಯೋಗಗಳು ನಡೆಯುತ್ತಿರಬೇಕು. ವಿಜ್ಞಾನಕ್ಕೆ ಎಂದಿಗೂ ಸೋಲಿಲ್ಲ. ಪ್ರಯತ್ನದಿಂದಲೇ ಸಾಧನೆ ಸಾಧ್ಯ. ಖಂಡಿತ ಭವಿಷ್ಯದಲ್ಲಿ ಚಂದ್ರನನ್ನು ನಾವು ತಲುಪಿಯೇ ತಲುಪುತ್ತೇವೆ. ಇಸ್ರೋ ವಿಜ್ಞಾನಿಗಳ ಕುಟುಂಬಸ್ಥರ ಪ್ರೋತ್ಸಾಹಕ್ಕೆ ನಾವು ಕೃತಜ್ಞರು. ವಿಜ್ಞಾನಿಗಳೇ ನನಗೆ ಪ್ರೇರಣೆ. ನಿಮ್ಮ ಪರಿಶ್ರಮ ವ್ಯರ್ಥವಾಗಿಲ್ಲ. ನೀವು ಈಗ ಕಲಿತ ಪಾಠದಿಂದ ಇನ್ನಷ್ಟು ದೃಢವಾಗಿ ಗುರಿಯನ್ನು ತಲುಪುತ್ತೀರಿ. ಫಲಿತಾಂಶದ ಬಗ್ಗೆ ಯೋಚಿಸದೆ ನಿರಂತರವಾಗಿ ಪ್ರಯತ್ನ ಮುಂದುವರೆಸಿ ಎಂದಿದ್ದಾರೆ. ನಿಮ್ಮ ಕಣ್ಣುಗಳು ಎಲ್ಲವನ್ನೂ ಹೇಳುತ್ತಿದ್ದವು: ನಿಮ್ಮ ಶ್ರಮವನ್ನು ಭಾರತವೇ ಹಾಡಿಹೊಗಳುತ್ತಿದೆ. ರಾತ್ರಿ ನಿಮ್ಮ ಮನಸ್ಥಿತಿ ಅರ್ಥ ಮಾಡಿಕೊಂಡಿದ್ದೇನೆ. ಲ್ಯಾಂಡರ್ ಸಂಪರ್ಕ ಕಳೆದುಕೊಂಡಾಗ ನಾನಿದ್ದೆ. ಆಗ ನಿಮ್ಮ ಕಣ್ಣುಗಳು, ನಿಮ್ಮ ಮುಖಭಾವವೇ ನಿಮ್ಮ ನೋವನ್ನು ಹೇಳುತ್ತಿತ್ತು. ಹೀಗಾಗಿ ನಾನು ನಿಮ್ಮೊಂದಿಗೆ ಹೆಚ್ಚುಕಾಲ ಇರಲಿಲ್ಲ. ಆದರೆ, ಇಂದು ಮತ್ತೆ ನಿಮ್ಮೊಂದಿಗೆ ಕಾಲ ಕಳೆಯಬೇಕೆಂದು ಬಂದಿದ್ದೇನೆ. ನೀವೆಲ್ಲರೂ ನನಗೆ ಸ್ಫೂರ್ತಿಯಾಗಿದ್ದೀರಿ. ಇಡೀ ಭಾರತರ ನಿಮ್ಮೊಂದಿಗಿದೆ  ಎಂದು ಮೋದಿ ಹೇಳಿದ್ದಾರೆ.

ನಿಮ್ಮ ಪರಿಶ್ರಮದ ಬಗ್ಗೆ ಭಾರತೀಯರಿಗೆ ಗೊತ್ತಿದೆ. ಅಡೆತಡೆಗಳಿಂದ ಉತ್ಸಾಹ ಕಡಿಮೆಯಾಗಿಲ್ಲ, ಹೆಚ್ಚಾಗಿದೆ. ಚಂದ್ರನನ್ನು ಮುಟ್ಟುವ ನಮ್ಮ ಆಸೆ ಇಮ್ಮಡಿಯಾಗಿದೆ. ನೀವು ಮಾಡಿರುವ ಕೆಲಸ ಈವರೆಗೆ ಯಾರೂ ಮಾಡಿಲ್ಲ. ಇಂದಿನ ಕಲಿಕೆ ನಮ್ಮನ್ನು ಇನ್ನಷ್ಟು ಗಟ್ಟಿ ಮಾಡುತ್ತದೆ. ಚಂದ್ರನ ಮೇಲೆ ನೀರಿದೆ ಎಂದು ತೋರಿಸಿದ್ದು ನೀವು. ನನಗಿಂತ ಹೆಚ್ಚು ಶ್ರಮ, ಹೆಚ್ಚು ಗುರಿ ನಿಮಗಿದೆ. ನಿಮ್ಮಿಂದ ಪ್ರೇರಣೆ ಪಡೆಯಲು ನಾನಿಲ್ಲಿಗೆ ಬಂದಿದ್ದೇನೆ ಎಂದು ಪ್ರಧಾನಿ ಮೋದಿ ಇಸ್ರೋ ವಿಜ್ಞಾನಿಗಳಿಗೆ ಆತ್ಮವಿಶ್ವಾಸ ತುಂಬಿದ್ದಾರೆ.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

4 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

4 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

4 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

4 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

4 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

4 days ago