ಉಡುಪಿ: ನೈಜೀರಿಯಾದಿಂದ ಅಕ್ರಮವಾಗಿ ನುಸುಳು ಕೋರರಿಂದ ಎರಡು ಕೆಜಿ ಕೊಕೇನ್ ವಶ ಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಿಗೆ ಅನಧಿಕೃತವಾಗಿ ಪ್ಲಾಟ್ ಬಾಡಿಗೆ ಕೊಟ್ಟ ಮಣಿಪಾಲದ ಬಾರ್ ಮಾಲೀಕ, ಹೆರ್ಗ ನಿವಾಸಿಯನ್ನು ಎನ್.ಸಿ.ಬಿ ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತ ವ್ಯಕ್ತಿ ಶೀಲ್ ಮೀರಾ ರೋಡ್ ಶಾಹಿ ಹೋಟೆಲ್ ಮೇಲಿರುವ ಶೀತಲ್ ಸಾಯಿ ಸೊಸೈಟಿಯಲ್ಲಿ ಮಾದಕ ವಸ್ತು ಪತ್ತೆ ಪ್ರಕರಣದ ಆರೋಪಿಗಳಿಗೆ ವಾಸ್ತವ್ಯಕ್ಕೆ ಅಕ್ರಮವಾಗಿ ಮನೆ ನೀಡಿದ್ದ ಆರೋಪದಲ್ಲಿ ಮಣಿಪಾಲದ ಹೋಟೆಲ್ ಉದ್ಯಮಿ ದಿನೇಶ್ ಭಾಸ್ಕರ್ ಶೆಟ್ಟಿ ಅವರನ್ನು ಎನ್ಸಿಬಿ ಪೊಲೀಸರು ಬಂಧಿಸಿದ್ದರು.
ಬಾರ್ ಮಾಲೀಕ ತನ್ನ ಬಾರ್ಗಳಿಗೆ ಡ್ರಗ್ಸ್ ಗಳನ್ನು ಕೂಡ ಇದೇ ಬಂಧಿತ ವ್ಯಕ್ತಿಗಳಿಂದ ಮಣಿಪಾಲಕ್ಕೆ ತರಿಸಿಕೊಂಡು ಅವ್ಯಾಹತವಾಗಿ ಮಾರಾಟ ಮಾಡಿದ್ದಾಗಿ ಎನ್ಸಿಬಿ ತನಿಖೆಯಿಂದ ಹೊರಬಂದಿದೆ.
ಸದ್ಯ ಬಾರ್ ಮಾಲೀಕ ಮುಂಬಯಿಯ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಡ್ರಗ್ಸ್ ಪೆಡ್ಲರ್ ಅವರ ಬ್ಯಾಂಕ್ ಖಾತೆಯಲ್ಲಿ ಬಾರ್ ಮಾಲೀಕ ಲಕ್ಷಾಂತರ ರೂ ವಹಿವಾಟು ನಡೆಸಿದ್ದ ಎಂದು ಪೊಲೀಸ್ ತನಿಖೆಯಲ್ಲಿ ಬಹಿರಂಗವಾಗಿದೆ.
ದಿನೇಶ್ ಭಾಸ್ಕರ್ ಶೆಟ್ಟಿ ಅವರ ಮನೆಯಲ್ಲಿ ಮಾದಕ ವಸ್ತು ಕಳ್ಳಸಾಗಣೆದಾರರೊಬ್ಬ ಹಲವು ವರ್ಷಗಳಿಂದ ಒಪ್ಪಂದವಿಲ್ಲದೆ ವಾಸವಾಗಿದ್ದರು. ಮಾದಕ ವಸ್ತು ಕಳ್ಳಸಾಗಣೆದಾರರಿಂದ 4 ನಕಲಿ ಪಾಸ್ಪೋರ್ಟ್ಗಳು ಮತ್ತು ನಕಲಿ ಆಧಾರ್ ಕಾರ್ಡ್ಗಳನ್ನು ವಶಪಡಿಸಿಕೊಳ್ಳಲಾಗಿತ್ತು ಎನ್ನಲಾಗಿದೆ.
ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…
ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…
ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…
ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…
ಧರ್ಮಸ್ಥಳ ಪ್ರಕರಣ : ವಿಠಲ್ ಗೌಡ ವಿರುದ್ಧ ಅರೆಸ್ಟ್ ವಾರಂಟ್: ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…