ಕಾಪು: ನಮ್ಮ ಕಾಪು ಸ್ವಚ್ಛ ಕಾಪು ಅಭಿಯಾನದಡಿ ರಾಜ್ಯಮಟ್ಟದಲ್ಲಿ ಹೆಸರು ಪಡೆದಿರುವ ಕಾಪು ಪುರಸಭೆ ಸ್ವಚ್ಛತೆಯಲ್ಲಿ ಹೆಸರು ಪಡಿದಿದೆ, ಆದರೇ ಕಾಪುವಿನ ಹೃದಯ ಭಾಗ ಸಾವಿರಾರು ಜನ ನಡೆದುಹೋಗುವ ಪೇಟೆಯ ಮಧ್ಯಭಾಗದಲ್ಲಿ ನಿರ್ಮಾಣವಾದ ಕಟ್ಟಡದ ಒಳಚರಂಡಿ ನೀರು, ಶೌಚಲಯದ ನೀರು ರಸ್ತೆಯ ಬದಿಯಲ್ಲಿ ವಿರಾಜಮಾನವಾಗಿ ಹರಿದು ಜನರನ್ನ ಮೂಗುಮುಚ್ಚಿಸಿಕೊಂಡು ನಡೆಯುವಂತೆ ಮಾಡಿದೆ.
ಹಾಗಾದರೇ ಆ ಕಟ್ಟಡ ಯಾವುದಂತೀರ ಕಾಪು ಪೇಟೆಯ ರಿಕ್ಷಾ ನಿಲ್ದಾಣದ ಬಳಿ ತಲೆ ಎತ್ತಿರುವ ಪ್ರತಿಷ್ಠಿತ ಪಿಡಬ್ಲ್ಯುಡಿ ಗುತ್ತಿದಾರನ ಒಡೆತನದ ಜನಾರ್ಧನ ಕಾಂಪ್ಲೆಕ್ಸ್. ಹೌದು ಕಳೆದ ಒಂದು ವಾರದಿಂದ ಈ ಭಾಗದಲ್ಲಿ ಗಬ್ಬು ವಾಸನೆ ಮೂಗಿಗೆ ಬಡಿಯುವಂತೆ ಶೌಚಲಯದ ನೀರು ಮ್ಯಾನ್ ಹೋಲ್ ನಿಂದ ಹೊರಬಿದ್ದು ಅತ್ಯಂತ ಕೆಟ್ಟ ರೀತಿಯಲ್ಲಿ ವಾಸನೆ ಹೊಡೆಯುತ್ತಿದೆ ಮಾತ್ರವಲ್ಲದೆ ಈ ಕಟ್ಟಡದಲ್ಲಿರುವರುವ ಕೆಲವು ಕಚೇರಿಗಳಿಗೆ ತೆರಳಬೇಕಾದರೆ ಆ ನೀರನ್ನ ತುಳಿದುಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಆದರೇ ಸ್ವಚ್ಛ ಕಾಪು ಎಂದು ಬೊಬ್ಬೆಹೊಡೆದುಕೊಂಡು ಹೋಗುವ ಕಾಪು ಪುರಸಭೆ ಮುಖ್ಯಾಧಿಕಾರಿಗಳು, ಅಂಗಡಿ ಮುಂಗಟ್ಟುಗಳಿಗೆ, ಬೀದಿ ವ್ಯಾಪರಿಗಳಿಗೆ, ಹೋಟೆಲ್ ಮಾಲಕರಿಗೆ ಪ್ಲಾಸ್ಟೀಕ್ ಮತ್ತು ಸ್ವಚ್ಛತೆಯ ವಿಚಾರವಾಗಿ ಸದಾ ಕಿರಿಕ್ ಮಾಡುತ್ತಿರುವಾಗ ಈ ಗುತ್ತಿಗೆದಾರನ ಸಂಕೀರ್ಣದಲ್ಲಿ ಹೊರಸೂಸುವ ಈ ನೀರಿನ ಬಗ್ಗೆ ಮಾತ್ರ ಯಾವುದೇ ಕ್ರಮ ಕೈಗೊಳ್ಳದಿರುವುದು ಟೀಕೆಗೆ ಗುರಿಯಾಗಿದೆ.
ಗ್ರಾಹಕರಿಗೆ ತೊಂದರೆ
ಈ ಕಟ್ಟಡದ ಮೊದಲನೇ ಮಹಡಿಯಲ್ಲಿ ಕೆನರಾ ಬ್ಯಾಂಕ್ ಕಾರ್ಯ ನಿರ್ವಹಿಸುತ್ತಿದೆ, ಮಾತ್ರವಲ್ಲದೆ ಮೆಡಿಕಲ್, ಜನರಲ್ ಸ್ಟೋರ್ಸ್,ಟೈಲರಿಂಗ್ ಶಾಪ್, ಜ್ಯುವೆಲ್ಲರಿ ಅಂಗಡಿಗಳು, ಇತರ ಕಚೇರಿಗಳು ಇದೆ. ದಿನಂಪ್ರತಿ ನೂರಾರು ಗ್ರಾಹಕರು ಇಲ್ಲಿ ಬಂದು ಹೋಗುವವರು ಇದ್ದಾg, ಅವರಿಗೆಲ್ಲರಿಗೂ ಈ ಗಬ್ಬು ವಾಸನೆಯ ನೀರಿನಿಂದ ಪಾದ ತೊಳೆದು ಮೂಗು ಮುಚ್ಚಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ.ಆದರೂ ಕೂಡ ಪುರಸಭೆ ಮಾತ್ರ ಕಣ್ಣಿದ್ದು ಕುರುಡುತನ ಪ್ರದರ್ಶಿಸುತ್ತಿರುವುದು ಮಾತ್ರ ವಿಪರ್ಯಾಸ.
ಕಳೆದ ಮೂರು ದಿನದಿಂದ ಈ ಭಾಗದಲ್ಲಿ ಮ್ಯಾನ್ ಹೋಲ್ ತೆರೆದುಕೊಂಡಿದ್ದ ನಿನ್ನೆಯ ದಿನ ಪಾದಚಾರಿಯೊಬ್ಬ ನಡೆದುಕೊಂಡು ಹೋಗುವಾಗ ಕುಸಿದು ಬಿದ್ದ ಘಟನೆಯೂ ನಡೆದಿದೆ.
ಒಟ್ಟಾರೆಯಾಗಿ ಸ್ವಚ್ಛ ಕಾಪುವಿನ ಅಭಿಯಾನದಡಿ ಪುರಸಭೆ ಉಳ್ಳವರಿಗೊಂದು ನ್ಯಾಯ,ಇಲ್ಲದವರಿಗೊಂದು ನ್ಯಾಯ ಮಾಡುತ್ತಿರುವುದು ಸಾರ್ವಜನಿಕರ ಅಕ್ರೋಶಕ್ಕೆ ಕಾರಣವಾಗಿದೆ.
‘ಕರ್ನಾಟಕ ಬಂದ್’ಗೆ ನಮ್ಮ ಬೆಂಬಲವಿಲ್ಲ: ಕರವೇ ಪ್ರವೀಣ್ ಶೆಟ್ಟಿ ಸ್ಪಷ್ಟನೆ ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ…
ವೋಟರ್ ಲಿಸ್ಟ್ನಿಂದ ತಮ್ಮ ಹೆಸರು ಕೈಬಿಡಲಾಗಿದೆ : ನಟ ಪ್ರಕಾಶ್ ರಾಜ್ ಆರೋಪಕ್ಕೆ ಚುನಾವಣಾಧಿಕಾರಿ ಸ್ಪಷ್ಟನೆ ಬೆಂಗಳೂರು: ಮತದಾರರ ಪಟ್ಟಿಯಿಂದ…
ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಚಿವ ಸಂಪುಟಕ್ಕೆ…
ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್ ಚಂದ್ರಶೇಖರನ್ ರಾಜೀನಾಮೆ ಹೊಸದಿಲ್ಲಿ: ಟಾಟಾ ಸನ್ಸ್ ಅಧ್ಯಕ್ಷ ಸ್ಥಾನಕ್ಕೆ ಎನ್. ಚಂದ್ರಶೇಖರನ್ ಅವರು…
ಉಡುಪಿ: ಆ.14 ರಂದು ನೇರ ಸಂದರ್ಶನ ಉಡುಪಿ: ನಗರದ ನಿಟ್ಟೂರು ರಾ.ಹೆ 66 ರ ಆಭರಣ ಮೋಟಾರ್ಸ್ ಪ್ರೆöÊವೇಟ್ ಲಿ.ನಲ್ಲಿ…
ಮೀನುಗಾರರಿಗೆ ಸೀಮೆಎಣ್ಣೆ ಒದಗಿಸಲು ಸಂಸದರಿಂದ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಮನವಿ ಕುಂದಾಪುರ: ರಾಜ್ಯದ ಸಾಂಪ್ರದಾಯಿಕ ನಾಡ ದೋಣಿ…