ಮಂಗಳೂರು: ಮುಲ್ಕಿ ಕೊಳ್ನಾಡು ನಿವಾಸಿ, ಆಟೊ ರಿಕ್ಷಾ ಚಾಲಕ ಮುಹಮ್ಮದ್ ಶರೀಫ್ ರನ್ನು ಬಾಡಿಗೆ ನೆಪದಲ್ಲಿ ಕರೆದೊಯ್ದು ಮಂಜೇಶ್ವರದ ಕುಂಜತ್ತೂರಿನಲ್ಲಿ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಹತ್ಯೆಗೈದು ಬಾವಿಗೆ ಎಸೆದಿರುತ್ತಾರೆ. ಈ ಪ್ರಕರಣದ ಸುದ್ದಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೋ ರಿಕ್ಷಾ ಓಡಿಸಿ ದುಡಿಯುವಂತಹ ಚಾಲಕರನ್ನು ಬೆಚ್ಚಿ ಬೀಳಿಸಿದೆ. ಕೊಲೆ ಆರೋಪಿಗಳನ್ನು ಪೊಲೀಸ್ ಇಲಾಖೆ ಶೀಘ್ರ ಬಂಧಿಸಿ ಪ್ರಕರಣವನ್ನು ಸಮಗ್ರ ತನಿಖೆಗೊಳಪಡಿಸಬೇಕು ಎಂದು ಡಿವೈಎಫ್ಐ ದ.ಕ. ಜಿಲ್ಲಾ ಸಮಿತಿ ಒತ್ತಾಯಿಸಿದೆ.
ನಿರ್ಜನ ಪ್ರದೇಶದಲ್ಲಿ ಆಟೋ ಚಾಲಕರನ್ನು ಕೊಲೆ ನಡೆಸಿರುವ ಇಂತಹ ಪ್ರಕರಣಗಳು ದಕ ಜಿಲ್ಲೆಯಲ್ಲಿ ಮೊದಲದೇನಲ್ಲ. ಈ ಹಿಂದೆಯೂ ಬಹುತೇಕ ಆಟೋ ರಿಕ್ಷಾ ಚಾಲಕರನ್ನು ಗುರಿಯಾಗಿಸಿ ಬಾಡಿಗೆ ನೆಪದಲ್ಲಿ ಕರದೊಯ್ದು ಕೊಲೆ ನಡೆಸಿರುವ ಘಟನೆಗಳು ನಿರಂತರವಾಗಿ ನಡೆದಿದೆ. ನಾಟೇಕಲ್ ನಲ್ಲಿ ಇದಾಯತ್, ತೊಕ್ಕೊಟ್ಟಿನಲ್ಲಿ ಲ್ಯಾನ್ಸಿ, ನೆತ್ತರಕೆರೆಯ ರಿಫಾಯಿ ಹೀಗೆ ಅಮಾಯಕ ರಿಕ್ಷಾ ಚಾಲಕರ ಸಾಲು ಸಾಲು ಕೊಲೆಗಳು ಈ ಜಿಲ್ಲೆಯಲ್ಲಿ ಸಂಭವಿಸಿವೆ. ಬಹುತೇಕ ಘಟನೆಗಳು ಜಿಲ್ಲೆಯ ಮತೀಯ ಧ್ರುವೀಕರಣದ ರಾಜಕಾರಣಕ್ಕೆ ಅತೀ ಸುಲಭವಾಗಿ ಸಿಗುವ ಬಡ ಆಟೋ ರಿಕ್ಷಾ ಚಾಲಕರನ್ನೇ ಗುರಿಯಾಗಿಸಿ ನಡೆಸಿರುವ ಕೊಲೆಗಳೇ ಅತೀ ಹೆಚ್ಚು. ದಿನದ ದುಡಿಮೆಗಾಗಿ ಕಷ್ಟಪಟ್ಟು ದುಡಿಯುವ ಆಟೋ ರಿಕ್ಷಾ ಚಾಲಕರ ಪ್ರಾಣಕ್ಕೆ ಬೆಲೆನೇ ಇಲ್ಲದಂತಾಗಿದೆ. ಆಳುವ ಸರಕಾರಗಳೂ ಈ ಅಸಂಘಟಿತ ವರ್ಗಕ್ಕೆ ಯಾವೊಂದು ಸೌಕರ್ಯಗಳನ್ನು ಕಲ್ಪಿಸದೇ ಇರೋದು ದುರದೃಷ್ಟಕರ. ಕನಿಷ್ಟಪಕ್ಷ ಕೊಲೆಯಾದ ಕುಟುಂಬಗಳಿಗೆ ಆರ್ಥಿಕ ಪರಿಹಾರನೂ ಕೊಡದೆ ಇರುವ ಕ್ರಮ ದಿನನಿತ್ಯ ದುಡಿಯುವ ಆಟೋ ರಿಕ್ಷಾ ಚಾಲಕರನ್ನು ಕಂಗೆಡಿಸಿದೆ ಎಂದು ಡಿವೈಎಫ್ ಐ ಹೇಳಿದೆ.
ಈ ಎಲ್ಲಾ ಹಿನ್ನಲೆಯಲ್ಲಿ ಆಟೋ ರಿಕ್ಷಾ ಚಾಲಕ ಮುಹಮ್ಮದ್ ಶರೀಫ್ ಕೊಲೆ ಪ್ರಕರಣವನ್ನು ಜಿಲ್ಲಾಡಳಿತ, ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸಮಗ್ರ ತನಿಖೆಗೊಳಪಡಿಸಬೇಕು. ಕೊಲೆಗಟುಕರನ್ನು ಅತೀ ಶೀಘ್ರ ಪತ್ತೆ ಹಚ್ಚಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ಹಾಗೂ ಸಂತ್ರಸ್ತ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ಒದಗಿಸಬೇಕೆಂದು ಡಿವೈಎಫ್ಐ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್, ಕಾರ್ಯದರ್ಶಿ ಸಂತೋಷ್ ಬಜಾಲ್ ಜಂಟಿ ಪತ್ರಿಕಾ ಪ್ರಕಟನೆಯಲ್ಲಿ ಒತ್ತಾಯಿಸಿದ್ದಾರೆ.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…