Featured

ಮುಸ್ಲಿಂ ಬಾಲಕಿಯರು 16ನೇ ವಯಸ್ಸಿಗೇ ವಿವಾಹವಾಗಲು ಅರ್ಹ : ಪಂಜಾಬ್‌- ಹರ್ಯಾಣ ಹೈಕೋರ್ಟ್ ಮಹತ್ವದ ತೀರ್ಪು – Vishwanews24

ಮುಸ್ಲಿಂ ಬಾಲಕಿಯರು 16ನೇ ವಯಸ್ಸಿಗೇ ವಿವಾಹಕ್ಕೆ ಅರ್ಹ..

ಯುವಕನಿಗೆ 21 ವರ್ಷ ವಯಸ್ಸಾಗಿರಬೇಕು..

ಚಂಡೀಗಢ: ‘ಮುಸ್ಲಿಂ ಬಾಲಕಿಯರು 16ನೇ ವಯಸ್ಸಿಗೇ ವಿವಾಹವಾಗಲು ಅರ್ಹ. ಯುವಕರು 21 ವರ್ಷಕ್ಕೆ ವಿವಾಹಕ್ಕೆ ಅರ್ಹರಾಗುತ್ತಾರೆ’ ಎಂದು ಪಂಜಾಬ್‌-ಹರ್ಯಾಣಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪಠಾಣ್‌ಕೋಟ್‌ ಮೂಲದ ಮುಸ್ಲಿಂ ಜೋಡಿಯ ವಿವಾಹಕ್ಕೆ ಸಂಬಂಧಿಸಿದ ಅರ್ಜಿ ಇತ್ಯರ್ಥಗೊಳಿಸಿದ ನ್ಯಾ| ಜಸ್ಜೀತ್‌ ಸಿಂಗ್‌ ಬೇಡಿ ಅವರ ಏಕಸದಸ್ಯ ಪೀಠ, ‘ಈ ಜೋಡಿಯು ಕೇವಲ ಕುಟುಂಬದ ಸದಸ್ಯರ ಇಚ್ಛೆಯ ವಿರುದ್ಧ ವಿವಾಹವಾಗಿದೆ ಎಂದರೆ ವಿವಾಹವನ್ನು ಅಮಾನ್ಯ ಮಾಡಲು ಆಗದು. ಸಂವಿಧಾನದತ್ತ ಹಕ್ಕನ್ನು ಅವರಿಂದ ಕಸಿದುಕೊಳ್ಳಲು ಆಗದು’ ಎಂದು ಹೇಳಿದೆ.

ಇಸ್ಲಾಮಿಕ್‌ ಶರಿಯಾ ನಿಯಮಗಳ ಪ್ರಕಾರ, ಮುಸ್ಲಿಂ ಬಾಲಕಿಯರ ವೈವಾಹಿಕ ನಿಯಮಗಳನ್ನು ಮುಸ್ಲಿಂ ವೈಯಕ್ತಿಕ ಕಾನೂನು ನಿರ್ಧರಿಸುತ್ತದೆ. ‘ಮೊಹಮ್ಮಡನ್‌ ಕಾನೂನು ತತ್ವ’ ಪುಸ್ತಕದ 195ನೇ ಪರಿಚ್ಛೇದದ ಪ್ರಕಾರ ಬಾಲಕಿಯು 16ನೇ ವಯಸ್ಸಿನಲ್ಲಿ ಮದುವೆಗೆ ಅರ್ಹಳಾಗುತ್ತಾಳೆ. ಯುವಕನಿಗೆ 21 ವರ್ಷ ಆಗಿರಬೇಕು ಎಂಬ ನಿಯಮವಿದೆ. ಈ ವಯಸ್ಸಿನಲ್ಲಿ ಪರಸ್ಪರ ಒಪ್ಪಿದವರನ್ನು ವಿವಾಹವಾಗಲು ಬಾಲಕಿ ಹಾಗೂ ಯುವಕ ಹಕ್ಕು ಹೊಂದಿರುತ್ತಾರೆ’ ಎಂದು ಪೀಠ ಹೇಳಿದೆ.

ಅಲ್ಲದೆ, ಮದುವೆ ಆಗಿರುವ ಬಾಲಕಿ-ಯುವಕಗೆ ಪೊಲೀಸ್‌ ಭದ್ರತೆ ನೀಡಬೇಕು ಎಂದೂ ಪಠಾಣ್‌ಕೋಟ್‌ ಪೊಲೀಸರಿಗೆ ಸೂಚಿಸಿದೆ.

‘2022ರ ಜೂ.8ರಂದು ನಾವು ಮದುವೆ ಆಗಿದ್ದೆವು. ಆದರೆ ಮದುವೆಗೆ ವಿರುದ್ಧವಾಗಿರುವ ಕುಟುಂಬದಿಂದ ನಮಗೆ ಬೆದರಿಕೆ ಬರುತ್ತಿದೆ’ ಎಂದು ನವವಿವಾಹಿತ ಜೋಡಿ ಅರ್ಜಿ ಸಲ್ಲಿಸಿತ್ತು. 16ನೇ ವಯಸ್ಸಿಗೇ ವಯಸ್ಕ ಮಾನ್ಯತೆ ಲಭಿಸುತ್ತದೆ ಎಂದು ಮುಸ್ಲಿಂ ಕಾನೂನನ್ನು ಉಲ್ಲೇಖಿಸಿ ಜೋಡಿಯು ವಾದ ಮಂಡಿಸಿತ್ತು.

Vishwa News 24

Recent Posts

ಕಾರ್ಕಳ: ಹೋಟೆಲ್‌ನ ಜೂಜಾಟ ಅಡ್ಡೆಯ ಮೇಲೆ ಪೊಲೀಸರ ದಾಳಿ ; ಆರು ಮಂದಿ ಅರೆಸ್ಟ್‌ – vishwanews24

ಕಾರ್ಕಳ: ಹೋಟೆಲ್‌ನ ಜೂಜಾಟ ಅಡ್ಡೆಯ ಮೇಲೆ ಪೊಲೀಸರ ದಾಳಿ ; ಆರು ಮಂದಿ ಅರೆಸ್ಟ್‌ ಕಾರ್ಕಳ: ಕಾರ್ಕಳ ತಾಲೂಕಿನ ನಿಟ್ಟೆ…

10 hours ago

ಕಾಂಗ್ರೆಸ್ ನನಗೆ ದೇವಾಲಯ ಇದ್ದಂತೆ  ; ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ: ಪ್ರದೀಪ್ ಈಶ್ವರ್‌ – vishwanews24

ಕಾಂಗ್ರೆಸ್ ನನಗೆ ದೇವಾಲಯ ಇದ್ದಂತೆ  ; ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ: ಪ್ರದೀಪ್ ಈಶ್ವರ್‌ ಬೆಂಗಳೂರು: ಸಚಿವ ಸ್ಥಾನ ಸಿಗದ…

11 hours ago

ಕಾಪು: ಆ. 9ರಂದು ಯುವವಾಹಿನಿ ಟ್ರೋಫಿ ಚೆಸ್ ಪಂದ್ಯಾವಳಿ – vishwanews24

ಕಾಪು: ಆ. 9ರಂದು ಯುವವಾಹಿನಿ ಟ್ರೋಫಿ ಚೆಸ್ ಪಂದ್ಯಾವಳಿ ಕಾಪು: ಯುವವಾಹಿನಿ (ರಿ.) ಕಾಪು ಘಟಕದ ನೇತೃತ್ವದಲ್ಲಿ ಶ್ರೀ ನಾರಾಯಣಗುರು…

11 hours ago

ಮಣಿಪಾಲ: ಯುವಕರ ಮೇಲೆ ಹಲ್ಲೆ ; ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ – vishwanews24

ಮಣಿಪಾಲ: ಯುವಕರ ಮೇಲೆ ಹಲ್ಲೆ ; ನಾಲ್ವರು ಇಂಜಿನಿಯರಿಂಗ್ ವಿದ್ಯಾರ್ಥಿಗಳ ಬಂಧನ ಮಣಿಪಾಲ: ಜನನಿ ಬಾರ್ & ರೆಸ್ಟೋರೆಂಟ್ ಎದುರು…

12 hours ago

ಶಾಸಕರು ರಾಜೀನಾಮೆ ನೀಡಿದರೆ ಎರಡೇ ನಿಮಿಷದಲ್ಲಿ ಅಂಗೀಕಾರ : ರಾಜೀನಾಮೆ ನೀಡುವ ಶಾಸಕರಿಗೆ ಸಿಎಂ ಖಡಕ್ ವಾರ್ನಿಂಗ್ – vishwanews24

ಶಾಸಕರು ರಾಜೀನಾಮೆ ನೀಡಿದರೆ ಎರಡೇ ನಿಮಿಷದಲ್ಲಿ ಅಂಗೀಕಾರ : ರಾಜೀನಾಮೆ ನೀಡುವ ಶಾಸಕರಿಗೆ ಸಿಎಂ ಖಡಕ್ ವಾರ್ನಿಂಗ್ ಬೆಂಗಳೂರು: ಶಾಸಕರು…

14 hours ago

ರಾಜ್ಯದ ಅತಿವೃಷ್ಟಿ / ಬರ ಪರಿಸ್ಥಿತಿ ಅವಲೋಕನಕ್ಕೆ ಸಚಿವರಿಗೆ ಜಿಲ್ಲೆಗಳ ಹೊಣೆ: ತಕ್ಷಣ ಪ್ರವಾಸಕ್ಕೆ ಸಿಎಂ ಸೂಚನೆ – vishwanews24

ರಾಜ್ಯದ ಬರ ಪರಿಸ್ಥಿತಿ ಅಧ್ಯಯನಕ್ಕೆ ಸಚಿವರಿಗೆ ಜಿಲ್ಲೆಗಳ ಹೊಣೆ : ತಕ್ಷಣ ಪ್ರವಾಸಕ್ಕೆ ಸಿಎಂ ಸೂಚನೆ ಬೆಂಗಳೂರು: ರಾಜ್ಯದಲ್ಲಿನ ಅತಿವೃಷ್ಟಿ /…

14 hours ago