Featured

ಮುಸ್ಲಿಂ ಬಾಲಕಿಯರು 16ನೇ ವಯಸ್ಸಿಗೇ ವಿವಾಹವಾಗಲು ಅರ್ಹ : ಪಂಜಾಬ್‌- ಹರ್ಯಾಣ ಹೈಕೋರ್ಟ್ ಮಹತ್ವದ ತೀರ್ಪು – Vishwanews24

ಮುಸ್ಲಿಂ ಬಾಲಕಿಯರು 16ನೇ ವಯಸ್ಸಿಗೇ ವಿವಾಹಕ್ಕೆ ಅರ್ಹ..

ಯುವಕನಿಗೆ 21 ವರ್ಷ ವಯಸ್ಸಾಗಿರಬೇಕು..

ಚಂಡೀಗಢ: ‘ಮುಸ್ಲಿಂ ಬಾಲಕಿಯರು 16ನೇ ವಯಸ್ಸಿಗೇ ವಿವಾಹವಾಗಲು ಅರ್ಹ. ಯುವಕರು 21 ವರ್ಷಕ್ಕೆ ವಿವಾಹಕ್ಕೆ ಅರ್ಹರಾಗುತ್ತಾರೆ’ ಎಂದು ಪಂಜಾಬ್‌-ಹರ್ಯಾಣಾ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಪಠಾಣ್‌ಕೋಟ್‌ ಮೂಲದ ಮುಸ್ಲಿಂ ಜೋಡಿಯ ವಿವಾಹಕ್ಕೆ ಸಂಬಂಧಿಸಿದ ಅರ್ಜಿ ಇತ್ಯರ್ಥಗೊಳಿಸಿದ ನ್ಯಾ| ಜಸ್ಜೀತ್‌ ಸಿಂಗ್‌ ಬೇಡಿ ಅವರ ಏಕಸದಸ್ಯ ಪೀಠ, ‘ಈ ಜೋಡಿಯು ಕೇವಲ ಕುಟುಂಬದ ಸದಸ್ಯರ ಇಚ್ಛೆಯ ವಿರುದ್ಧ ವಿವಾಹವಾಗಿದೆ ಎಂದರೆ ವಿವಾಹವನ್ನು ಅಮಾನ್ಯ ಮಾಡಲು ಆಗದು. ಸಂವಿಧಾನದತ್ತ ಹಕ್ಕನ್ನು ಅವರಿಂದ ಕಸಿದುಕೊಳ್ಳಲು ಆಗದು’ ಎಂದು ಹೇಳಿದೆ.

ಇಸ್ಲಾಮಿಕ್‌ ಶರಿಯಾ ನಿಯಮಗಳ ಪ್ರಕಾರ, ಮುಸ್ಲಿಂ ಬಾಲಕಿಯರ ವೈವಾಹಿಕ ನಿಯಮಗಳನ್ನು ಮುಸ್ಲಿಂ ವೈಯಕ್ತಿಕ ಕಾನೂನು ನಿರ್ಧರಿಸುತ್ತದೆ. ‘ಮೊಹಮ್ಮಡನ್‌ ಕಾನೂನು ತತ್ವ’ ಪುಸ್ತಕದ 195ನೇ ಪರಿಚ್ಛೇದದ ಪ್ರಕಾರ ಬಾಲಕಿಯು 16ನೇ ವಯಸ್ಸಿನಲ್ಲಿ ಮದುವೆಗೆ ಅರ್ಹಳಾಗುತ್ತಾಳೆ. ಯುವಕನಿಗೆ 21 ವರ್ಷ ಆಗಿರಬೇಕು ಎಂಬ ನಿಯಮವಿದೆ. ಈ ವಯಸ್ಸಿನಲ್ಲಿ ಪರಸ್ಪರ ಒಪ್ಪಿದವರನ್ನು ವಿವಾಹವಾಗಲು ಬಾಲಕಿ ಹಾಗೂ ಯುವಕ ಹಕ್ಕು ಹೊಂದಿರುತ್ತಾರೆ’ ಎಂದು ಪೀಠ ಹೇಳಿದೆ.

ಅಲ್ಲದೆ, ಮದುವೆ ಆಗಿರುವ ಬಾಲಕಿ-ಯುವಕಗೆ ಪೊಲೀಸ್‌ ಭದ್ರತೆ ನೀಡಬೇಕು ಎಂದೂ ಪಠಾಣ್‌ಕೋಟ್‌ ಪೊಲೀಸರಿಗೆ ಸೂಚಿಸಿದೆ.

‘2022ರ ಜೂ.8ರಂದು ನಾವು ಮದುವೆ ಆಗಿದ್ದೆವು. ಆದರೆ ಮದುವೆಗೆ ವಿರುದ್ಧವಾಗಿರುವ ಕುಟುಂಬದಿಂದ ನಮಗೆ ಬೆದರಿಕೆ ಬರುತ್ತಿದೆ’ ಎಂದು ನವವಿವಾಹಿತ ಜೋಡಿ ಅರ್ಜಿ ಸಲ್ಲಿಸಿತ್ತು. 16ನೇ ವಯಸ್ಸಿಗೇ ವಯಸ್ಕ ಮಾನ್ಯತೆ ಲಭಿಸುತ್ತದೆ ಎಂದು ಮುಸ್ಲಿಂ ಕಾನೂನನ್ನು ಉಲ್ಲೇಖಿಸಿ ಜೋಡಿಯು ವಾದ ಮಂಡಿಸಿತ್ತು.

Vishwa News 24

Recent Posts

ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನ ನಮ್ಮ ಸರಕಾರ ಪ್ರಾಮಾಣಿಕವಾಗಿ ಮಾಡುತ್ತಿದೆ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ – vishwanews24

ಗ್ಯಾರಂಟಿ ಯೋಜನೆಗಳಿಂದ ಮಹಿಳಾ ಸಬಲೀಕರಣ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಗಳೂರು: ಮಹಿಳೆಯರನ್ನು ಸಬಲೀಕರಣ ಮಾಡುವ ಕೆಲಸವನ್ನು ನಮ್ಮ ಸರಕಾರ ಪ್ರಾಮಾಣಿಕವಾಗಿ…

10 hours ago

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು – vishwanews24

ಒಣಗಿದ ದಾಸವಾಳ ನುಂಗಿ ಆರೂವರೆ ತಿಂಗಳ ಮಗು ಉಸಿರುಗಟ್ಟಿ ಸಾವು ಮೈಸೂರು: ಒಣಗಿದ ದಾಸವಾಳ ಹೂನುಂಗಿ ಮಗು ಉಸಿರುಗಟ್ಟಿ ಸಾವನ್ನಪ್ಪಿದ…

10 hours ago

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ – vishwanews24

ಏ. 2ರಂದು ಕುಂದಾಪುರ ಭಂಡಾರ್‌ಕಾರ್ಸ್ ಕಾಲೇಜಿನಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ ಉಡುಪಿ : ಜಿಲ್ಲಾಡಳಿತ, ಜಿಪಂ, ಕೌಶಲ್ಯಾಭಿವೃದ್ಧಿ, ಉದ್ಯಮ…

10 hours ago

ಅಡುಗೆ ಅನಿಲದ ಅಭಾವ – ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ – vishwanews24

ಅಡುಗೆ ಅನಿಲದ ಅಭಾವ - ತಾತ್ಕಾಲಿಕವಾಗಿ ಸೌದೆ ಒಲೆ ಬಳಸುವಂತೆ ಸಚಿವ ಕೆ.ಹೆಚ್. ಮುನಿಯಪ್ಪ ಮನವಿ ಬೆಂಗಳೂರು : ಗಲ್ಫ್…

11 hours ago

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ – ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ : ಪೊಲೀಸ್ ಆಯುಕ್ತ – vishwanews24

ತೊಕ್ಕೊಟ್ಟು : ಆರಿಫ್ ಕೊಲೆ ಪ್ರಕರಣ ; ಆರು ಆರೋಪಿಗಳು ಭಾಗಿ - ಸಿಸಿಬಿ ಎಸಿಪಿ ತಂಡದಿಂದ ಮುಂದಿನ ತನಿಖೆ…

11 hours ago

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ – vishwanews24

ಕಾಪು : ಇಲಿ ಪಾಷಾಣ ಸೇವಿಸಿ ವ್ಯಕ್ತಿ ಆತ್ಮಹತ್ಯೆ ಕಾಪು: ಉಳಿಯಾರಗೋಳಿ ಗ್ರಾಮದ ನೀಲಾಧರ ಬಂಗೇರ (58) ಇಲಿ ಪಾಷಾಣ…

12 hours ago