Featured

ಮುಸ್ಲಿಂ ಯುವಕನಿಂದ ಪೆಟ್ರೋಲ್ ಇಲ್ಲದೇ 150 ಕಿ.ಮೀ ಚಲಿಸುವ ವಿಶೇಷ ‘ಮೋದಿ ಬೈಕ್’..

ಮೀರತ್: ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಗನಕ್ಕೇರಿರುವ ಈ ಹೊತ್ತಿನಲ್ಲಿ ಪೆಟ್ರೋಲೇ ಇಲ್ಲದೇ ಬರೊಬ್ಬರಿ 150 ಕಿ.ಮೀ ಸಾಗುವ ನೂತನ ಬೈಕ್ ವೊಂದನ್ನು ಮೀರತ್ ನ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಕಂಡು ಹಿಡಿದಿದ್ದಾನೆ.
ಈ ಮುಸ್ಲಿಂ ಯುವಕನಿಗೆ ಪ್ರಧಾನಿ ನರೇಂದ್ರ ಮೋದಿ ಎಂದರೆ ಅಚ್ಚು ಮೆಚ್ಚು. ದೇಶಕ್ಕಾಗಿ ಏನನ್ನಾದರೂ ಸಾಧಿಸಬೇಕು ಎಂದು ಹಂಬಲಿಸುತ್ತಿದ್ದ ಯುವಕ ವಿದ್ಯುತ್ ಚಾಲಿತ ಬೈಕ್ ಕಂಡುಹಿಡಿದಿದ್ದಾರೆ.
ಈ ವಿಶೇಷ ಬ್ಯಾಟರಿ ಚಾಲಿತ ಇ-ಬೈಕ್ ಅನ್ನು ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿ ವಕಾರ್ ಅಹಮದ್ ಸಂಶೋಧಿಸಿದ್ದು, ಈ ವಿಶೇಷ ಬೈಕ್ ಗೆ ‘ಮೋದಿ ಬೈಕ್’ ಎಂದು ನಾಮಕರಣ ಮಾಡಿದ್ದಾನೆ. ಸ್ವತಃ ಮೆಕಾನಿಕಲ್ ಎಂಜಿನಿಯಪ್ ಆಗಿರುವ ವಕಾರ್ ಅಹ್ಮದ್  ತನ್ನ ವಿದ್ಯಾಭ್ಯಾಸವನ್ನೇ ಬಂಡವಾಳವಾಗಿಸಿಕೊಂಡು ವಿಶೇಷ ಇ-ಬೈಕ್ ಆವಿಷ್ಕರಣೆಗೆ ಮುಂದಾಗಿದ್ದಾನೆ.
ತನ್ನ ನಿರಂತರ ಪರಿಶೋಧನೆ ಮತ್ತು ಪರಿಶ್ರಮದ ಫಲವಾಗಿ ವಕಾರ್ ಇದೀಗ ವಿಶೇಷ ಬೈಕ್ ತಯಾರಿಸಿದ್ದು, ಈ ಬ್ಯಾಟರಿ ಚಾಲಿತ ಬೈಕ್ ಅನ್ನು 3 ಗಂಟೆ ಚಾರ್ಜ್ ಮಾಡಿದರೆ ಸಾಕು ಬರೊಬ್ಬರಿ 150 ಕಿ.ಮೀ ಚಲಿಸಲಿದೆ. ಪ್ರಸ್ತುತ ಆಟೋ ಮೊಬೈಲ್ ಇಂಜಿನಿಯರಿಂಗ್ ಮಾಡುತ್ತಿದ್ದ ಯುವಕ ಕಂಡುಹಿಡಿದ ಬೈಕ್ ಈಗ ರಸ್ತೆಯಲ್ಲಿ ಸುತ್ತಾಡುತ್ತಿದ್ದು, ಪೆಟ್ರೋಲ್ ಇಲ್ಲದೇ ಚಲಿಸುತ್ತಿರುವ ಬೈಕ್ ನೋಡಿ ಜನ ಅಚ್ಚರಿ ಪಡುತ್ತಿದ್ದಾರೆ.  ಪ್ರಧಾನಿ ಸಹ ಶಹಬ್ಬಾಸ್ ನೀಡಿದ್ದಾರೆ. ಈ ಬೈಕ್‌ ಗೆ ಇಂಜಿನ್ ಇಲ್ಲ. ಲ್ಯಾಟ್ ಟಾಪ್ ಅಥವ ಮೊಬೈಲ್ ರೀತಿ ಜಾರ್ಜ್ ಹಾಕಬೇಕು.
ಈ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಬೈಕ್ ಸಂಶೋಧಕ ವಕಾರ್ ಅಹ್ಮದ್, ‘ಈ ಬೈಕ್‌ ಗೆ  ಇಂಜಿನ್ ಇಲ್ಲ. ಲ್ಯಾಟ್ ಟಾಪ್ ಅಥವಾ ಮೊಬೈಲ್ ರೀತಿ ಜಾರ್ಜ್ ಹಾಕಬೇಕು. ಮೂರು ಗಂಟೆ ಜಾರ್ಜ್  ಮಾಡಿದರೆ 150 ಕಿಮೀ ಸಂಚಾರ ಸಾಧ್ಯ. ಇದಕ್ಕೆ ಕೇವಲ  20 ರೂ. ಖರ್ಚು ತಗಲುತ್ತದೆ. ಅಂದರೆ ಕೇವಲ 20 ರೂ. ವೆಚ್ಚದಲ್ಲಿ 150 ಕಿ ಮೀ ಪ್ರಯಾಣ ಮಾಡಬಹುದು. ನನಗೆ ಪ್ರಧಾನಿ ಮೋದಿ ಎಂದರೆ ಅಚ್ಚು ಮೆಚ್ಚು ಹೀಗಾಗಿ ಈ ವಿಶೇಷ ಬೈಕ್ ಗೆ ಮೋದಿ ಬೈಕ್ ಎಂದು ನಾಮಕರಣ ಮಾಡಿದ್ದೇನೆ. ಈ ಬೈಕ್ ದರ  70 ರಿಂದ 75 ಸಾವಿರ ರೂ. ಆಗಲಿದ್ದು ಮಾರುಕಟ್ಟೆಗೆ ತರುವ ಪ್ರಯತ್ನಗಳು ನಡೆಯುತ್ತಿದೆ. ಈಗಾಗಲೇ ಈ ಸಂಬಂಧ ಹಲವು ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಶೀಘ್ರ ಒಪ್ಪಂದ ಮಾಡಿಕೊಂಡು ಈ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತೇನೆ ಎಂದು ಹೇಳಿದ್ದಾರೆ.
Vishwa News 24

Recent Posts

ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ – vishwanews24

ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ ಕುಂದಾಪುರ: ಮರವಂತೆ ಸಮುದ್ರ ಕಿನಾರೆಯ ಎದುರಿನ‌ ರಾಷ್ಟ್ರೀಯ…

44 minutes ago

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋದ ದರ್ಶನ್‌ – vishwanews24

ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಜಾಮೀನಿಗಾಗಿ ಸುಪ್ರೀಂ ಕೋರ್ಟ್‌ ಮೊರೆ ಹೋದ ದರ್ಶನ್‌ ನವದೆಹಲಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು…

50 minutes ago

ದ. ಕ, ಉಡುಪಿ ಸೇರಿದಂತೆ  5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ; 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ – vishwanews24

ದ. ಕ, ಉಡುಪಿ ಸೇರಿದಂತೆ  5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ; 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ …

1 hour ago

ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಸರತಿ ಸಾಲು ಹಾಗೂ ಐಡಿ ಆಧಾರಿತ ಪ್ರವೇಶ ವ್ಯವಸ್ಥೆ ಉದ್ಘಾಟನೆ – vishwanews24

ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಸರತಿ ಸಾಲು ಹಾಗೂ ಐಡಿ ಆಧಾರಿತ ಪ್ರವೇಶ ವ್ಯವಸ್ಥೆ ಉದ್ಘಾಟನೆ ಉಡುಪಿ : ಶ್ರೀ…

4 hours ago

ಮಂಗಳೂರು: ಸ್ಕೂಟರ್‌ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ; ಪ್ರಕರಣ ದಾಖಲು – vishwanews24

ಮಂಗಳೂರು: ಸ್ಕೂಟರ್‌ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ; ಪ್ರಕರಣ ದಾಖಲು ಮಂಗಳೂರು: ಗುರುಪುರ ಬಂಗ್ಲಗುಡ್ಡೆ ಬಳಿ ಸ್ಕೂಟರ್ ಸವಾರರೊಬ್ಬರಿಗೆ…

4 hours ago

ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ – vishwanews24

ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ 8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಬೆಂಗಳೂರು: ನಗರದ ವಿದ್ಯಾರಣ್ಯಪುರ…

4 hours ago