Featured

ಮುಸ್ಲಿಂ ಯುವಕನಿಂದ ಪೆಟ್ರೋಲ್ ಇಲ್ಲದೇ 150 ಕಿ.ಮೀ ಚಲಿಸುವ ವಿಶೇಷ ‘ಮೋದಿ ಬೈಕ್’..

ಮೀರತ್: ಪೆಟ್ರೋಲ್ ಮತ್ತು ಡೀಸೆಲ್ ದರಗಳು ಗಗನಕ್ಕೇರಿರುವ ಈ ಹೊತ್ತಿನಲ್ಲಿ ಪೆಟ್ರೋಲೇ ಇಲ್ಲದೇ ಬರೊಬ್ಬರಿ 150 ಕಿ.ಮೀ ಸಾಗುವ ನೂತನ ಬೈಕ್ ವೊಂದನ್ನು ಮೀರತ್ ನ ಎಂಜಿನಿಯರಿಂಗ್ ವಿದ್ಯಾರ್ಥಿಯೋರ್ವ ಕಂಡು ಹಿಡಿದಿದ್ದಾನೆ.
ಈ ಮುಸ್ಲಿಂ ಯುವಕನಿಗೆ ಪ್ರಧಾನಿ ನರೇಂದ್ರ ಮೋದಿ ಎಂದರೆ ಅಚ್ಚು ಮೆಚ್ಚು. ದೇಶಕ್ಕಾಗಿ ಏನನ್ನಾದರೂ ಸಾಧಿಸಬೇಕು ಎಂದು ಹಂಬಲಿಸುತ್ತಿದ್ದ ಯುವಕ ವಿದ್ಯುತ್ ಚಾಲಿತ ಬೈಕ್ ಕಂಡುಹಿಡಿದಿದ್ದಾರೆ.
ಈ ವಿಶೇಷ ಬ್ಯಾಟರಿ ಚಾಲಿತ ಇ-ಬೈಕ್ ಅನ್ನು ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಎಂಜಿನಿಯರಿಂಗ್ ವಿದ್ಯಾರ್ಥಿ ವಕಾರ್ ಅಹಮದ್ ಸಂಶೋಧಿಸಿದ್ದು, ಈ ವಿಶೇಷ ಬೈಕ್ ಗೆ ‘ಮೋದಿ ಬೈಕ್’ ಎಂದು ನಾಮಕರಣ ಮಾಡಿದ್ದಾನೆ. ಸ್ವತಃ ಮೆಕಾನಿಕಲ್ ಎಂಜಿನಿಯಪ್ ಆಗಿರುವ ವಕಾರ್ ಅಹ್ಮದ್  ತನ್ನ ವಿದ್ಯಾಭ್ಯಾಸವನ್ನೇ ಬಂಡವಾಳವಾಗಿಸಿಕೊಂಡು ವಿಶೇಷ ಇ-ಬೈಕ್ ಆವಿಷ್ಕರಣೆಗೆ ಮುಂದಾಗಿದ್ದಾನೆ.
ತನ್ನ ನಿರಂತರ ಪರಿಶೋಧನೆ ಮತ್ತು ಪರಿಶ್ರಮದ ಫಲವಾಗಿ ವಕಾರ್ ಇದೀಗ ವಿಶೇಷ ಬೈಕ್ ತಯಾರಿಸಿದ್ದು, ಈ ಬ್ಯಾಟರಿ ಚಾಲಿತ ಬೈಕ್ ಅನ್ನು 3 ಗಂಟೆ ಚಾರ್ಜ್ ಮಾಡಿದರೆ ಸಾಕು ಬರೊಬ್ಬರಿ 150 ಕಿ.ಮೀ ಚಲಿಸಲಿದೆ. ಪ್ರಸ್ತುತ ಆಟೋ ಮೊಬೈಲ್ ಇಂಜಿನಿಯರಿಂಗ್ ಮಾಡುತ್ತಿದ್ದ ಯುವಕ ಕಂಡುಹಿಡಿದ ಬೈಕ್ ಈಗ ರಸ್ತೆಯಲ್ಲಿ ಸುತ್ತಾಡುತ್ತಿದ್ದು, ಪೆಟ್ರೋಲ್ ಇಲ್ಲದೇ ಚಲಿಸುತ್ತಿರುವ ಬೈಕ್ ನೋಡಿ ಜನ ಅಚ್ಚರಿ ಪಡುತ್ತಿದ್ದಾರೆ.  ಪ್ರಧಾನಿ ಸಹ ಶಹಬ್ಬಾಸ್ ನೀಡಿದ್ದಾರೆ. ಈ ಬೈಕ್‌ ಗೆ ಇಂಜಿನ್ ಇಲ್ಲ. ಲ್ಯಾಟ್ ಟಾಪ್ ಅಥವ ಮೊಬೈಲ್ ರೀತಿ ಜಾರ್ಜ್ ಹಾಕಬೇಕು.
ಈ ಬಗ್ಗೆ ಹೆಮ್ಮೆಯಿಂದ ಮಾತನಾಡಿರುವ ಬೈಕ್ ಸಂಶೋಧಕ ವಕಾರ್ ಅಹ್ಮದ್, ‘ಈ ಬೈಕ್‌ ಗೆ  ಇಂಜಿನ್ ಇಲ್ಲ. ಲ್ಯಾಟ್ ಟಾಪ್ ಅಥವಾ ಮೊಬೈಲ್ ರೀತಿ ಜಾರ್ಜ್ ಹಾಕಬೇಕು. ಮೂರು ಗಂಟೆ ಜಾರ್ಜ್  ಮಾಡಿದರೆ 150 ಕಿಮೀ ಸಂಚಾರ ಸಾಧ್ಯ. ಇದಕ್ಕೆ ಕೇವಲ  20 ರೂ. ಖರ್ಚು ತಗಲುತ್ತದೆ. ಅಂದರೆ ಕೇವಲ 20 ರೂ. ವೆಚ್ಚದಲ್ಲಿ 150 ಕಿ ಮೀ ಪ್ರಯಾಣ ಮಾಡಬಹುದು. ನನಗೆ ಪ್ರಧಾನಿ ಮೋದಿ ಎಂದರೆ ಅಚ್ಚು ಮೆಚ್ಚು ಹೀಗಾಗಿ ಈ ವಿಶೇಷ ಬೈಕ್ ಗೆ ಮೋದಿ ಬೈಕ್ ಎಂದು ನಾಮಕರಣ ಮಾಡಿದ್ದೇನೆ. ಈ ಬೈಕ್ ದರ  70 ರಿಂದ 75 ಸಾವಿರ ರೂ. ಆಗಲಿದ್ದು ಮಾರುಕಟ್ಟೆಗೆ ತರುವ ಪ್ರಯತ್ನಗಳು ನಡೆಯುತ್ತಿದೆ. ಈಗಾಗಲೇ ಈ ಸಂಬಂಧ ಹಲವು ಕಂಪನಿಗಳ ಜೊತೆ ಮಾತುಕತೆ ನಡೆಸಿದ್ದೇನೆ. ಶೀಘ್ರ ಒಪ್ಪಂದ ಮಾಡಿಕೊಂಡು ಈ ಬೈಕ್ ಅನ್ನು ಮಾರುಕಟ್ಟೆಗೆ ಪರಿಚಯಿಸುತ್ತೇನೆ ಎಂದು ಹೇಳಿದ್ದಾರೆ.
Vishwa News 24

Recent Posts

ಬೈಕಂಪಾಡಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ – vishwanews24

ಬೈಕಂಪಾಡಿಯಲ್ಲಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ ಸುರತ್ಕಲ್: ಬೈಕಂಪಾಡಿಯಲ್ಲಿ ನಡೆದಿದ್ದ ಕೇರಳದ ಜ್ಯುವೆಲ್ಲರಿ ಉದ್ಯಮಿ ವಿಕಾಸ್ ಅವರ…

3 hours ago

ಕರ್ನಾಟಕ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ  – vishwanews24

ಕರ್ನಾಟಕ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ  ಉಡುಪಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ…

3 hours ago

ವಿಧಾನ ಪರಿಷತ್ ಸಭಾ​​ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ – vishwanews24

ವಿಧಾನ ಪರಿಷತ್ ಸಭಾ​​ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ವಿಧಾನ ಪರಿಷತ್​​ ಕಲಾಪ…

4 hours ago

ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು – vishwanews24

ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು ಬೆಂಗಳೂರು : ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿಯ ಜನನಿಬಿಡ…

5 hours ago

ಹಿಂದೂ ಸಂಘಟನೆಗಳ ಮುಖಂಡರಿಗೆ ಜಿಲ್ಲೆ ಪ್ರವೇಶ ನಿಷೇಧ: ಉಡುಪಿ ಜಿಲ್ಲಾ ವಿಹಿಂಪ–ಬಜರಂಗದಳ ತೀವ್ರ ಖಂಡನೆ – vishwanews24

ಹಿಂದೂ ಸಂಘಟನೆಗಳ ಮುಖಂಡರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿಷೇಧಿಸಿರುವುದು ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿ : ದಿನೇಶ್ ಮೆಂಡನ್ ಆರೋಪ…

5 hours ago

ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರ ಪ್ರವೇಶ ನಿರ್ಬಂಧ: ವಿಹಿಂಪ ಖಂಡನೆ – vishwanews24

ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರನ್ನು ನಿರ್ಬಂಧಿಸಿರುವುದು ಖಂಡನೀಯ : ಸುನಿಲ್ ಕೆ.ಆರ್ ಉಡುಪಿ: ಕಾಪು ಪ್ರಖಂಡದ ಬಜರಂಗದಳದ ವತಿಯಿಂದ…

5 hours ago