ಯಾರು ದೇಶಪ್ರೇಮಿ, ದೇಶದ್ರೋಹಿ ಹಿಂದುಗಳ ಮಕ್ಕಳ ಆಧಾರದಲ್ಲಿ ನಿರ್ಧರಿಸುವುದು ಖಂಡನೀಯ – ಸಂತೋಷ್ ಗುರೂಜಿ ಹೇಳಿಕೆಗೆ ಅನ್ಸಾರ್ ಉಡುಪಿ ತಿರುಗೇಟು
ಉಡುಪಿ : ಮೂರು ಮಕ್ಕಳನ್ನು ಹೊಂದದ ಹಿಂದೂಗಳೆಲ್ಲ ದೇಶದ್ರೋಹಿಗಳು ಎಂದು ಭಾರತೀಯರ ದೇಶಪ್ರೇಮವನ್ನು ಅವರು ಹೆತ್ತಮಕ್ಕಳ ಸಂಖ್ಯೆಯ ಆಧಾರದ ಮೇಲೆ ಪರಿಗಣನೆಗೆ ತೆಗೆದುಕೊಳ್ಳಬೇಕು ಎಂಬ ವಿವಾದಾತ್ಮಕ ಅಸಂವಿಧಾನಾತ್ಮಕ ಹೇಳಿಕೆ ನೀಡಿದ ಸಂತೋಷ್ ಗುರೂಜಿಯವರ ಹೇಳಿಕೆ ಖಂಡನೀಯ ಎಂದು ಅನ್ಸಾರ್ ಅಹ್ಮದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಾರತದ ರಕ್ಷಣೆಗೆ, ಭಾರತದ ಅಭಿವೃದ್ದಿಗೆ ಅದೆಷ್ಟೋ ಹಿಂದೂ ಸಮಾಜದ ಸಾದು ಸಂತರು, ಸ್ವಾಮೀಜಿಗಳು ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದಾರೆ. ಅವರೆಲ್ಲ ಸನ್ಯಾಸತ್ವ ಸ್ವೀಕರಿಸಿ ದೇಶದ ಅಭಿವೃದ್ದಿಗೆ, ಹಿಂದೂ ಸಮಾಜದ ಅಭಿವೃದ್ದಿಗೆ ಶ್ರಮಿಸಿದವರು. ಅವರೆಲ್ಲರಿಗೆ ಸಂಸಾರ ಮಕ್ಕಳು ಎಂಬುದು ಇಲ್ಲ.
ಹಾಗಾದರೆ ಅವರೆಲ್ಲರೆಲ್ಲರನ್ನೂ ದೇಶ ದ್ರೋಹಿಗಳು ಅಂತ ಭಾವಿಸಬೇಕೇ,? ಅಲ್ಲದೇ ಸಂತೋಷ್ ಗುರೂಜಿಯವರಿಗೆ ಎಷ್ಟು ಮಕ್ಕಳಿದ್ದಾರೆ. ಒಂದು ವೇಳೆ ಮಕ್ಕಳು ಇಲ್ಲವೆಂದಾದರೆ ನಾವು ಅವರನ್ನು ದೇಶ ಪ್ರೇಮಿ ಅಂತ ಪರಿಗಣಿಸಬೇಕೋ, ದೇಶ ದ್ರೋಹಿಅಂತ ಪರಿಗಣಿಸಬೇಕೋ ಎಂದು ಅನ್ಸಾರ್ ಪ್ರಶ್ನಿಸಿದ್ದಾರೆ.
ಕುಂದಾಪುರ: ನಿಂತ ಲಾರಿಗಳಿಗೆ ಬಸ್ ಢಿಕ್ಕಿ: ಎರಡು ಸಾವು, ಹಲವರಿಗೆ ಗಾಯ ಕುಂದಾಪುರ: ಮರವಂತೆ ಸಮುದ್ರ ಕಿನಾರೆಯ ಎದುರಿನ ರಾಷ್ಟ್ರೀಯ…
ರೇಣುಕಾಸ್ವಾಮಿ ಹತ್ಯೆ ಪ್ರಕರಣ : ಜಾಮೀನಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋದ ದರ್ಶನ್ ನವದೆಹಲಿ : ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು…
ದ. ಕ, ಉಡುಪಿ ಸೇರಿದಂತೆ 5 ದಿನಗಳ ಕಾಲ ಭಾರೀ ಮಳೆಯ ಮುನ್ಸೂಚನೆ ; 25 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ …
ಉಡುಪಿ ಶ್ರೀಕೃಷ್ಣ ದರ್ಶನಕ್ಕೆ ನೂತನ ಸರತಿ ಸಾಲು ಹಾಗೂ ಐಡಿ ಆಧಾರಿತ ಪ್ರವೇಶ ವ್ಯವಸ್ಥೆ ಉದ್ಘಾಟನೆ ಉಡುಪಿ : ಶ್ರೀ…
ಮಂಗಳೂರು: ಸ್ಕೂಟರ್ ಸವಾರನಿಗೆ ಖಾರದ ಪುಡಿ ಎರಚಿ ದರೋಡೆ; ಪ್ರಕರಣ ದಾಖಲು ಮಂಗಳೂರು: ಗುರುಪುರ ಬಂಗ್ಲಗುಡ್ಡೆ ಬಳಿ ಸ್ಕೂಟರ್ ಸವಾರರೊಬ್ಬರಿಗೆ…
ಪಿಯು ವಿದ್ಯಾರ್ಥಿನಿಯರ ನಾಪತ್ತೆ ಪ್ರಕರಣ: ಸಿಐಡಿ ತನಿಖೆಗೆ ಆದೇಶ 8 ತಿಂಗಳ ಹಿಂದೆ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳು ಬೆಂಗಳೂರು: ನಗರದ ವಿದ್ಯಾರಣ್ಯಪುರ…