Featured

ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗೆಲುವಿಗೆ ಶ್ರಮಿಸಿ : ಆಸ್ಕರ್ ಫೆರ್ನಾಂಡಿಸ್ – Vishwanews24

ಉಡುಪಿ: ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ವಿಭಾಗದ ಪದಾಧಿಕಾರಿಗಳ ಸಭೆ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಅಧ್ಯಕ್ಷರಾದ ಇಸ್ಮಾಯಿಲ್ ಆತ್ರಾಡಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಸಭೆಯಲ್ಲಿ ಭಾಗವಹಿಸಿದ ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರಾದ ರಾಜ್ಯಸಭಾ ಸದಸ್ಯ ಓಸ್ಕರ್ ಫೆರ್ನಾಂಡಿಸ್ರವರು ದೇಶ ಎದುರಿಸುತ್ತಿರುವ ಸಮಸ್ಯೆಗಳ ಜೊತೆಯಲ್ಲಿ ಯುಪಿಎ ಸರಕಾರದ ಸೋನಿಯಾ ಗಾಂಧಿಯವರ ಮತ್ತು ಡಾ| ಮನಮೋಹನ್ ಸಿಂಗ್ರವರ ನೇತೃತ್ವದಲ್ಲಿ ಜಾರಿಗೆ ತಂದ ಕಾರ್ಯಕ್ರಮಗಳನ್ನು ವಿವರಿಸಿ ರಾಹುಲ್ ಗಾಂಧಿಯವರನ್ನು ಭವಿಷ್ಯದ ನಾಯಕರಾಗಿ ಆಯ್ಕೆಯಾಗುವರೆ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ರ ಗೆಲುವಿಗೆ ಶ್ರಮಿಸುವಂತೆ ಕರೆ ನೀಡಿದರು.

ಸಭೆಯಲ್ಲಿ ಮಾತನಾಡಿದ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ಎಂ.ಎ. ಗಫೂರ್ ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದ ಅವರು ಮತ ವಿಭಜನೆಯಾಗದಂತೆ ತಡೆಯುವುದರ ಜೊತೆಯಲ್ಲಿ ಒಗ್ಗಟ್ಟನಿಂದ ಅಭ್ಯರ್ಥಿಯ ಗೆಲುವಿಗೆ ಶ್ರಮಿಸುವಂತೆ ಒತ್ತಾಯಿಸಿದರು.

ಸಭೆಯಲ್ಲಿ ಕೆ.ಪಿ.ಸಿ.ಸಿ. ಕಾರ್ಯದರ್ಶಿಗಳಾದ ವೆರೋನಿಕಾ ಕರ್ನೇಲಿಯೋ, ಮುರಳಿ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ದಿನೇಶ್ ಪುತ್ರನ್, ಮುಸ್ಲಿಂ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ. ಮೊಯಿದಿನಬ್ಬ, ಹಸನ್ ಮಣಿಪುರ, ಹಬೀಬ್ ಅಲಿ, ರೋಶನಿ ಒಲಿವರ್, ತಬ್ರೇಜ್ ನಾಗೂರ್, ಮುಷ್ತಾಕ್ ಅಹ್ಮದ್, ರಿಯಾಜ್ ಪಳ್ಳಿ, ಆಬಿದ್ ಆಲಿ, ಇಬ್ರಾಹಿಂ ಮನ್ಹಾರ್, ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷರಾದ ಗುಲಾಂ ಆಹಮ್ಮದ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿಶ್ವಾಸ್ ವಿ. ಅಮೀನ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಬಿ. ನರಸಿಂಹ ಮೂರ್ತಿ, ಹರೀಶ್ ಕಿಣಿ, ನ್ಯಾಯವಾದಿ ಹರೀಶ್ ಶೆಟ್ಟಿ ಪಾಂಗಳ, ಶಶಿಧರ ಶೆಟ್ಟಿ ಎಲ್ಲೂರು, ಭಾಸ್ಕರ್ ರಾವ್ ಕಿದಿಯೂರು ಮೊದಲಾದವರು ಉಪಸ್ಥಿತರಿದ್ದರು. ಸ್ಟೀವನ್ ಉದ್ಯಾವರ ಸ್ವಾಗತಿಸಿ ಲೋಬೋರವರು ವಂದಿಸಿದರು.

Vishwa News 24

Recent Posts

ಉಡುಪಿಯ ಪ್ರಥಮ ಮಹಿಳಾ ಕಮರ್ಷಿಯಲ್ ಪೈಲಟ್ ಆಗಿ ಕೌಡೂರಿನ ಶೈನಿ ಅಸ್ಮಾ ಸಲ್ಡಾನಾ – vishwanews24

ಉಡುಪಿಯ ಪ್ರಥಮ ಮಹಿಳಾ ಕಮರ್ಷಿಯಲ್ ಪೈಲಟ್ ಆಗಿ ಕೌಡೂರಿನ ಶೈನಿ ಅಸ್ಮಾ ಸಲ್ಡಾನಾ ಕಾರ್ಕಳ: ಕೌಡೂರು ರಂಗನಪಲೆಯ ಶೈನಿ ಅಸ್ಮಾ…

5 minutes ago

ನವಿಮುಂಬಯಿ: ಉಡುಪಿ ಪುತ್ತಿಗೆ ಶ್ರೀಪಾದರಿಂದ ಚಾತುರ್ಮಾಸ ವ್ರತ ಸ್ವೀಕಾರ – vishwanews24

ನವಿಮುಂಬಯಿ: ಉಡುಪಿ ಪುತ್ತಿಗೆ ಶ್ರೀಪಾದರಿಂದ ಚಾತುರ್ಮಾಸ ವ್ರತ ಸ್ವೀಕಾರ ಉಡುಪಿ: ಶ್ರೀ ಪುತ್ತಿಗೆ ಮಠಾಧೀಶರಾದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಬುಧವಾರ…

1 hour ago

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಮಣಿಪಾಲದಲ್ಲಿ ಬೃಹತ್‌ ತಿರಂಗ ಯಾತ್ರೆ – vishwanews24

ಉಡುಪಿ ಶಾಸಕ ಯಶ್ಪಾಲ್ ಸುವರ್ಣ ನೇತೃತ್ವದಲ್ಲಿ ಮಣಿಪಾಲದಲ್ಲಿ ಬೃಹತ್‌ ತಿರಂಗಾ ಯಾತ್ರೆ ಉಡುಪಿ: ಸ್ವಾತಂತ್ರ್ಯ ಹೋರಾಟವನ್ನು ಸ್ಮರಿಸುವ ಹಾಗೂ ನಾಗರಿಕರಲ್ಲಿ…

1 hour ago

ಭಜರಂಗದಳ ಮುಖಂಡ ಪುನೀತ್ ಅತ್ತಾವರಗೆ 3 ತಿಂಗಳು ಉಡುಪಿ ಜಿಲ್ಲೆ ಪ್ರವೇಶ ನಿರ್ಬಂಧ : ಜಿಲ್ಲಾಧಿಕಾರಿ ಆದೇಶ – vishwanews24

ಭಜರಂಗದಳ ಮುಖಂಡ ಪುನೀತ್ ಅತ್ತಾವರಗೆ 3 ತಿಂಗಳು ಉಡುಪಿ ಜಿಲ್ಲೆ ಪ್ರವೇಶ ನಿರ್ಬಂಧ : ಜಿಲ್ಲಾಧಿಕಾರಿ ಆದೇಶ ಉಡುಪಿ: ಕಾನೂನು…

1 hour ago

USನಲ್ಲಿ ಹೆತ್ತತಾಯಿ-ತಮ್ಮನನ್ನೇ ಕೊಂದ ಭಾರತೀಯ ಮೂಲದ ಬಾಲಕ ; ಹತ್ಯೆಗೆ Chat GPT ಸೇರಿದಂತೆ AI ಬಳಕೆ ಆರೋಪ – vishwanews24

USನಲ್ಲಿ ಹೆತ್ತತಾಯಿ-ತಮ್ಮನನ್ನೇ ಕೊಂದ ಭಾರತೀಯ ಮೂಲದ ಬಾಲಕ .. ಹತ್ಯೆಗೆ Chat GPT ಸೇರಿದಂತೆ AI ಬಳಕೆ ಆರೋಪ ವಾಷಿಂಗ್ಟನ್:…

2 hours ago

ಮಂಗಳೂರು : ಸ್ಕೂಟರ್ ಗೆ ಕಾರು ಡಿಕ್ಕಿ ; ಸವಾರ ಮೃತ್ಯು – vishwanews24

ಮಂಗಳೂರು : ಸ್ಕೂಟರ್ ಗೆ ಕಾರು ಡಿಕ್ಕಿ ; ಸವಾರ ಮೃತ್ಯು ಮಂಗಳೂರು: ಸ್ಕೂಟರ್ ಗೆ ಕಾರು ಡಿಕ್ಕಿ ಹೊಡೆದ…

2 hours ago