ಮೈಸೂರು: ಶೀಘ್ರದಲ್ಲಿಯೇ ಜಿಲ್ಲೆಯ ಪಾಸಿಟಿವಿಟಿ ಪ್ರಮಾಣವನ್ನು ಶೇ. 5ಕ್ಕಿಂತ ಕಡಿಮೆ ಮಾಡಿ ಅನ್ಲಾಕ್ ಮಾಡುವಂತೆ ಕೆಲಸ ಮಾಡುತ್ತೇವೆ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಮೈಸೂರಿನಲ್ಲಿ ಮೇ ತಿಂಗಳು ಒಂದರಲ್ಲೇ ಸಾವಿರಕ್ಕಿಂತ ಹೆಚ್ಚು ಜನ ನಿಧನರಾಗಿದ್ದಾರೆ. ಗ್ರಾಮಾಂತರ ಭಾಗದ ಸೋಂಕಿತರು ಕಾಯಿಲೆ ಉಲ್ಬಣಗೊಂಡ ಬಳಿಕ ಮೈಸೂರಿಗೆ ಬಂದು ನಿಧನರಾಗುತ್ತಿದ್ದಾರೆ. ಶೇ.10ಕ್ಕಿಂತ ಹೆಚ್ಚು ಪಾಸಿಟಿವಿಟಿ ರೇಟ್ ಇದೆ. ಅದನ್ನು ಕಡಿಮೆ ಮಾಡಬೇಕಿದೆ. ಪಾಸಿಟಿವ್ ರೇಟ್ ಕಡಿಮೆ ಮಾಡಲು 10 ದಿನಗಳಿಂದ ಸಮಾರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದೇವೆ. ನೂತನ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಇದೆಲ್ಲದರ ಬಗ್ಗೆ ಅರಿವಿರುವುದರಿಂದ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ,” ಎಂದರು.
“ಮೈಸೂರಿನಲ್ಲಿ ಕೆಟ್ಟ ಪರಿಸ್ಥಿತಿ ಇದೆ. ಹಳ್ಳಿ ಕಡೆಗೆ ಜಿಲ್ಲಾಡಳಿತ ಗಮನಹರಿಸಲಿ ಎಂದು ಒಂದು ತಿಂಗಳ ಹಿಂದೆಯೇ ಬಹಿರಂಗವಾಗಿ ಹೇಳಿದ್ದೆ. ನಾನು ಅವತ್ತು ಹೇಳಿದ್ದು ಸತ್ಯ ಎಂದು ಈಗ ಜನರಿಗೆ ಅರಿವಾಗಿದೆ,” ಎಂದು ಹೇಳಿದರು.
”ಮೂರನೇ ಅಲೆ ತಡೆಯಲು ಈಗಾಗಲೇ ಸಜ್ಜಾಗಿದ್ದೇವೆ. ಸ್ಕ್ಯಾನ್ ರೇನಲ್ಲಿ ಕಳೆದ ತಿಂಗಳಿನಲ್ಲಿಯೇ ಮೂರನೇ ಅಲೆ ಬಗ್ಗೆ ಸಭೆ ನಡೆಸಿದ್ದೇವೆ. ಈ ವೇಳೆ 29 ಮಕ್ಕಳ ತಜ್ಞರು ಬಂದಿದ್ದರು. ಒಂದೇ ಕ್ಯಾಂಪಸ್ನಲ್ಲಿ ಮಕ್ಕಳಿಗಾಗಿ 500 ಬೆಡ್ಗಳ ವ್ಯವಸ್ಥೆ ಮಾಡಲಾಗುತ್ತದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಟ್ರಾಮಾ ಕೇರ್, ಜಿಲ್ಲಾಸ್ಪತ್ರೆ ಸೇರಿ ಒಂದೇ ಕಡೆ ವ್ಯವಸ್ಥೆ ಮಾಡಲು ಆಲೋಚಿಸಲಾಗಿದೆ,” ಎಂದು ಹೇಳಿದರು.
”ವೆಂಟಿಲೇಟರ್ ಯಾವ ಮಕ್ಕಳಿಗೆ ಮಾಡಿ ಫೈ ಮಾಡಬೇಕು ಅನ್ನುವುದನ್ನು ಯೋಚನೆ ಮಾಡಿದ್ದೇವೆ. ಯಾವ ಮಕ್ಕಳು ಕೊರೊನಾದಿಂದ ದಾಖಲಾಗಬಾರದು ಅನ್ನೋದಷ್ಟೇ ನಮ್ಮ ಉದ್ದೇಶ. ಮಕ್ಕಳಲ್ಲಿ ಕೊರೊನಾ ತಡೆಯಲು ಪೋಷಕರಿಗೆ ವ್ಯಾಕ್ಸಿನ್ ನೀಡಲು ಸಿದ್ದತೆ ಮಾಡಿಕೊಂಡಿದ್ದೇವೆ,” ಎಂದು ತಿಳಿಸಿದರು.
ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ…
ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು ಶಿರ್ವ : ಶಂಕರಪುರದ…
ಹಜ್ ಯಾತ್ರೆ - 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ ಬೆಂಗಳೂರು: ಮುಂದಿನ (2027ನೇ) ಸಾಲಿನಲ್ಲಿ…
ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್ ಅಲರ್ಟ್ ಘೋಷಣೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ…
ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ ನವದೆಹಲಿ: ಇಂದಿನಿಂದ ದೇಶಾದ್ಯಂತ ಹಲವು…
ಬ್ರಹ್ಮಾವರ :ಭೀಕರ ರಸ್ತೆ ಅಪಘಾತ: ಪ್ರಸಿದ್ಧ ಹುಲಿ ವೇಷ ಕಲಾವಿದ ಸಾವು ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದ ಹೇರೂರು…