Featured

ಮೋದಿಜೀಯನ್ನು ಗೆಲ್ಲಿಸಲು ಚುನಾವಣಾ ಅಖಾಡಕ್ಕಿಳಿಯಲಿದ್ದಾರೆ ಬಾಲಿವುಡ್ ಸೂಪರ್‌ಸ್ಟಾರ್ ಗಳು..

ಮೋದಿ ಗೆದ್ದರೆ ಅದು ದೇಶದ ಗೆಲುವು.. ಒಂದು ವೇಳೆ ಮೋದಿಯವರಿಗೆ ಮತ್ತೊಮ್ಮೆ ಅವಕಾಶ ಕೊಡದಿದ್ದರೆ ಭಾರತಕ್ಕೆ ಉಳಿಗಾಲವಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಂಡು ಈ ಘಟಾನುಗಟಿಗಳು ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಲು ಅಖಾಡಕ್ಕೆ ಇಳಿಯಲಿದ್ದಾರೆ. ನೋಟ್ ಬ್ಯಾನ್ ಹಾಗೂ ಜಿಎಸ್ ಟಿ ಕುರಿತಾಗಿ ಕೆಲ ಜನರಲ್ಲಿ ತಪ್ಪು ತಿಳುವಳಿಕೆ ಮೂಡಿದೆ. ಇದನ್ನು ಮಾಡಿದವರು ವಿರೋಧಿಗಳು. ನೋಟ್ ಬ್ಯಾನ್ ಹಾಗೂ ಜಿಎಸ್ ಟಿಯಿಂದ ತುಂಬಾ ಕಷ್ಟವಾಗಿದೆ, ಇದರಿಂದ ದೇಶಕ್ಕೆ ನಷ್ಟವಾಗಿದೆ ಎಂದು ವಿರೋಧಿಗಳು ಜನರಲ್ಲಿ ಬಿತ್ತಿ ತಪ್ಪು ಕಲ್ಪನೆಗೀಡು ಮಾಡಿದ್ದಾರೆ. ಇದನ್ನು ಹೋಗಲಾಡಿಸಿ ಮತ್ತೆ ಮುಂದಿನ ಬಾರಿಯೂ ಬಿಜೆಪಿಯನ್ನೇ ಗೆಲ್ಲಿಸಿ ಈ ದೇಶವನ್ನು ಉಳಿಸಬೇಕು ಎನ್ನುವ ನಿಟ್ಟಿನಲ್ಲಿ ಪ್ರಧಾನಿ ಮೋದಿಯವರ ಪರವಾಗಿ ಈ ಬಾರಿ ಈ ರಾಷ್ಟ್ರವಾದಿ ಘಟಾನುಗಟಿಗಳು ಅಖಾಡಕ್ಕೆ ಇಳಿಯಲಿದ್ದಾರೆ.

ದೇಶದ ಕುರಿತಂತೆ, ಸೈನಿಕರ ಕುರಿತಂತೆ, ಈ ದೇಶದ ರೈತರ ಕುರಿತಂತೆ ಸದಾ ಮನಮಿಡಿಯುವ ಹಾಗೂ ಅವರಿಗೆಲ್ಲ ಸದಾ ಬೆನ್ನೆಲುಬಾಗಿ ಸಹಾಯ ಮಾಡುತ್ತಾ ಬಂದ ಅಕ್ಷಯ್ ಕುಮಾರ್, ಅನುಪಮ್ ಖೇರ್, ನಾನಾ ಪಾಟೇಕರ್ ಸೇರಿದಂತೆ ಹಲವು ರಾಷ್ಟ್ರವಾದಿಗಳು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿ ಮಾಡಲು ಅಖಾಡಕ್ಕೆ ಇಳಿಯಲಿದ್ದಾರೆ ಎನ್ನಲಾಗುತ್ತಿದೆ.  ಈ ರಾಷ್ಟ್ರವಾದಿ ನಟರು ರೈತರ ಮತ್ತು ಹುತಾತ್ಮ ಯೋಧರ ಕುಟುಂಬಕ್ಕೆ ಕೋಟ್ಯಾಂತರ ದುಡ್ಡನ್ನು ಕೊಟ್ಟು ತಮ್ಮ ಅನೇಕ ಬಾರಿ ದೇಶಪ್ರೇಮವನ್ನು ಮೆರೆದಿದ್ದಾರೆ. ದೇಶಕ್ಕಾಗಿ ಮನಮಿಡಿಯುವ ಇವರು ಇದೀಗ ಮೋದಿಯವರ ಪರವಾಗಿ ಅಖಾಡಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿ ಕೇಳಿ ದೇಶಪ್ರೇಮಿಗಳಿಗೆ ಖುಷಿಯಾಗಿದೆ.

ಮತಾಂಧ ಖಾನ್ ಗಳ ಮಧ್ಯೆಯೇ ಸೆಡ್ಡು ಹೊಡೆದು ಬಾಲಿವುಡ್ ಅಂಗಳದಲ್ಲಿ ಬೆಳೆದವರು ಇವರು..ಪಾಕಿಸ್ತಾನದ ಜನತೆಗೆ ಏನಾದರೂ ಆದರೆ ತತಕ್ಷಣ ಮನಮಿಡಿಯುವ ಈ ಖಾನ್ ಗಳಿಗೆ, ಈ ದೇಶದ ಕುರಿತಂತೆ ಯಾವತ್ತೂ ಮನಮಿಡಿಯಲಿಲ್ಲ. ಆದರೆ ನಾನಾ ಪಾಟೇಕರ್, ಅಕ್ಷಯ್ ಕುಮಾರರು ರಾಷ್ಟ್ರವಾದಿಗಳಾಗಿದ್ದರಿಂದ ದೇಶಕ್ಕಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ!! ಹೀಗಾಗಿಯೇ ಆ ಖಾನ್ ಗಳ ಮಧ್ಯೆ ಸೆಡ್ಡು ಹೊಡೆದು ಈ ರಾಷ್ಟ್ರವಾದಿ ನಾಯಕರು ಬೆಳೆದಿದ್ದಾರೆ!! ಅಂದಹಾಗೆ ಈ ರಾಷ್ಟ್ರವಾದಿ ನಟರು ದೇಶಕ್ಕಾಗಿ ಮಾಡಿದ ಯಾವುದೇ ಕಾರ್ಯವನ್ನು, ಸಹಾಯವನ್ನು ಯಾವುದೇ ಮಾಧ್ಯಮಗಳು ತೋರಿಸಿಲ್ಲ, ತೋರಿಸೋದು ಇಲ್ಲ. ಯಾಕಂದ್ರೆ ಈ ರಾಷ್ಟ್ರವಾದಿ ನಟರು ಹಿಂದುಗಳು..

ಈ ಬಾರಿಯೂ ಬಿಜೆಪಿ ಅಂತದ್ದೊಂದು ಮಾಸ್ಟರ್ ಪ್ಲ್ಯಾನ್ ಗೆ ಕೈಹಾಕಿದೆ. ಅಂದಹಾಗೆ ಈ ರಾಷ್ಟ್ರವಾದಿ ಸೆಲೆಬ್ರಿಟಿಗಳು ಯಾವತ್ತೂ ಕಾಂಗ್ರೆಸ್ಸಿನೊಂದಿಗೆ ಕೈಜೋಡಿಸೋದಿಲ್ಲ. ಅದರಂತೆ ಕಾಂಗ್ರೆಸ್ ಎಂದಿಗೂ ತನ್ನ ಪಕ್ಷಕ್ಕೆ ರಾಷ್ಟ್ರವಾದಿಗಳನ್ನು ಸೇರಿಸಿಕೊಳ್ಳಲ್ಲ,, ಅದರಲ್ಲಿರೋರು ಹೇಗಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ರಾಷ್ಟ್ರವಾದಿ ಸೆಲೆಬ್ರಿಟಿಗಳೆಲ್ಲ ಒಟ್ಟಾಗಿ ಈ ಮುಂದಿನ ಬಾರಿ ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿಯನ್ನಾಗಿಸಲು ಅಖಾಡಕ್ಕೆ ಇಳಿಯಲಿದ್ದಾರೆ. ಕಾರಣವಷ್ಟೇ ದೇಶದ ಹಿತಾಸಕ್ತಿಗೆ. ಒಂದುವೇಳೆ ಪ್ರಧಾನಿ ಮೋದಿಯವರಿಗೆ ಅವಕಾಶ ಕೊಡದಿದ್ದರೆ ಈ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ..ಈ ನಿಟ್ಟಿನಲ್ಲಿ ನಾವೆಲ್ಲ ಒಟ್ಟಾಗಿ ನಮ್ಮಿಂದ ಎಷ್ಟಾಗುತ್ತೋ ಅಷ್ಟು ಕೆಲಸವನ್ನು ಮಾಡೋಣ. ಇದು ಮೋದಿಗಾಗಿಯೂ ಅಲ್ಲ, ಬಿಜೆಪಿಗಾಗಿಯೂ ಅಲ್ಲ. ಬರೀ ದೇಶಕ್ಕಾಗಿ ಮಾತ್ರ,, ಎಲ್ಲರೂ ಒಟ್ಟಾಗ್ತೀರಾ ತಾನೇ??



 

Vishwa News 24

Recent Posts

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

19 hours ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

19 hours ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

19 hours ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

22 hours ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

22 hours ago

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ – vishwanews24

ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್‌ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…

22 hours ago