Featured

ಮೋದಿ ಹತ್ಯೆಗೆ ಸಂಚು ರೂಪಿಸಿದ್ದವರ ಅರೆಸ್ಟ್ ; ಮಾವೋ ಚಿಂತಕ ವರವರ ರಾವ್‌ ಬಂಧನ

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿ ಹತ್ಯೆಯ ಸಂಚಿನ ಭಾಗವಾಗಿರುವುದಾಗಿ ಆರೋಪಿಸಲ್ಪಟ್ಟಿರುವ ಮಾವೋ ಸಿದ್ಧಾಂತಿ, ಕ್ರಾಂತಿಕಾರಿ ಬರಹಗಾರ, ಪಿ ವರವರ ರಾವ್‌ ಅವರನ್ನು ಇಂದು ಪುಣೆ ಪೊಲೀಸರು ಹೈದರಾಬಾದಿನಲ್ಲಿ ಬಂಧಿಸಿರುವುದಾಗಿ ರಾವ್‌ ಅವರ ಕುಟುಂಬಕ್ಕೆ ನಿಕಟವಿರುವ ಮೂಲಗಳು ತಿಳಿಸಿವೆ.

ಗಾಂಧಿನಗರದಲ್ಲಿನ ರಾವ್‌ ಮತ್ತು ನಗರದ ವಿವಿಧ ಭಾಗಗಳಲ್ಲಿರುವ ಇತರ ಏಳು ಮಂದಿಯ ನಿವಾಸಗಳನ್ನು ಇಂದು ಪೊಲೀಸರು ಸುಮಾರು ಎಂಟು ತಾಸುಗಳ ಕಾಲ ಜಾಲಾಡಿದ್ದಾರೆ. ಈ ಏಳು ಮಂದಿಯ ಪೈಕಿ ಇಬ್ಬರು ಪತ್ರಕರ್ತರಾಗಿದ್ದು ಒಬ್ಬರು ವಿಶ್ವವಿದ್ಯಾಲಯದ ಇಂಗ್ಲಿಷ್‌ ಮತ್ತು ವಿದೇಶಿ ಭಾಷಾ ವಿಶ್ವವಿದ್ಯಾಲಯದ ಪ್ರೊಫೆಸರ್‌ ಆಗಿದ್ದಾರೆ.

ಪತ್ರಕರ್ತರಲ್ಲಿ ಒಬ್ಬರಾಗಿದ್ದು ಬಂಧಿತರಾಗಿರುವ ತೇಕುಲ ಕ್ರಾಂತಿ ಅವರ ಲ್ಯಾಪ್‌ ಟಾಪ್‌ ಮತ್ತು ಇತರ ಹಲವಾರು ದಾಖಲೆ ಪತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.  ಇವುಗಳು ತೇಕುಲ ಅವರಿಗೆ ಮಾವೋ ಪಕ್ಷದೊಂದಿಗಿರುವ ನಂಟನ್ನು ಬಯಲು ಮಾಡಿವೆ.

78ರ ಹರೆಯದ ವರವರ ರಾವ್‌ ಅವರನ್ನು ಬಿಗಿ ಭದ್ರತೆಯಲ್ಲಿ ಸಿಕಂದರಾಬಾದ್‌ ನಲ್ಲಿನ ಗಾಂಧಿ ಆಸ್ಪತ್ರೆಗೆ ಒಯ್ದು ಅಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಅವರನ್ನು ಇಂದು ಸಂಜೆ ಹೈದರಾಬಾದ್‌ ನ್ಯಾಯಾಲಯದಲ್ಲಿ ಹಾಜರುಪಡಿಸಿ ಬಳಿಕ ಪುಣೆಗೆ ತರುವ ಸಾಧ್ಯತೆ ಇದೆ.

ರಾವ್‌ ಅವರ ಬಂಧನವಾಗುತ್ತಲೇ ಅವರ ಅನೇಕ ಹಿಂಬಾಲಕರು ಮತ್ತು ವಿವಿಧ ಸಾಮಾಜಿಕ ಸಂಘಟನೆಗಳ ಪ್ರತಿನಿಧಿಗಳು ಅವರ ನಿವಾಸದಲ್ಲಿ ಜಮಾಯಿಸಿ, ಬಂಧನವನ್ನು ವಿರೋಧಿಸಿ ಫ‌ಲಕಗಳನ್ನು ಹಿಡಿದು ಘೋಷಣೆ ಕೂಗಿದರು.

ಮಾವೋ ಸಹಾನುಭೂತಿಯ ರೋಣ ಜೇಕಬ್‌ ವಿಲ್ಸನ್‌ ಎಂಬಾತನ ಮನೆಯಲ್ಲಿ ಪೊಲೀಸರಿಗೆ ಪತ್ರವೊಂದು ಸಿಕ್ಕಿತ್ತು. ಅದರಲ್ಲಿ ಎಂ-4 ರೈಫ‌ಲ್‌ ಮತ್ತು ನಾಲ್ಕು ಲಕ್ಷ ಸುತ್ತು ಮದ್ದುಗುಂಡು ಖರೀದಿಗೆ 8 ಕೋಟಿ ರೂ.ಗಳ ಅಗತ್ಯವಿದೆ ಎಂದು ಬರೆದಿತ್ತು.

ಈ ಪತ್ರದಲ್ಲಿ ರಾಜೀವ್‌ ಗಾಂಧಿ ಹತ್ಯೆ ರೀತಿಯ ಇನ್ನೊಂದು ಪ್ರಕರಣ ಸಾಧ್ಯತೆಯನ್ನು ಚರ್ಚಿಸಲಾಗಿತ್ತು ಎಂದು ಪೊಲೀಸರು ಸ್ಥಳೀಯ ಕೋರ್ಟಿಗೆ ಕಳೆದ ಜೂನ್‌ 8ರಂದು ಹೇಳಿದ್ದರು. ರೋಣ ವಿಲ್ಸನ್‌ ಮಾತ್ರವಲ್ಲದೆ ಅವರೊಂದಿಗೆ ನಂಟು ಹೊಂದಿದ್ದ ಇತರ ಐವರನ್ನೂ ಪೊಲೀಸರು ಆ ಸಂದರ್ಭದಲ್ಲಿ ಬಂಧಿಸಿದ್ದರು.

 

Vishwa News 24

Recent Posts

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…

3 hours ago

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ – vishwanews24

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು  :…

3 hours ago

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ  – vishwanews24

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…

3 hours ago

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ – vishwanews24

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…

4 hours ago

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ – vishwanews24

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್‌ಪೋರ್ಟ್…

5 hours ago

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…

5 hours ago