ಬೆಂಗಳೂರು: 2006-07ರಲ್ಲಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಜಾರಿಗೆ ಬಂದಿದ್ದ, ಉಚಿತ ಸೈಕಲ್ ಯೋಜನೆಯನ್ನು ಕುಮಾರಸ್ವಾಮಿ ಯವರ ದೋಸ್ತಿ ಸರಕಾರ ನಿಲ್ಲಿಸುವುದಕ್ಕೆ ಮುಂದಾಗಿದೆ.. ಎನ್ನುವ ಇಂತಹದ್ದೊಂದು ಅನುಮಾನ ಇದೀಗ ಮೂಡಿದೆ.
ಇದಕ್ಕೆ ಕಾರಣ ಸೈಕಲ್ ವಿತರಣೆಯಲ್ಲಿ ಆಗಿರುವ ಕೋಟ್ಯಾಂತರ ರೂಪಾಯಿ ಭ್ರಷ್ಟಾಚಾರ.ರಾಜ್ಯದ 5.14ಲಕ್ಷ ವಿದ್ಯಾರ್ಥಿಗಳಿಗೆ ವಿತರಿಸುತ್ತಿರುವ ಸೈಕಲ್ಗಳು ಕಳಪೆಯಾಗಿವೆ ಅಂತ ಅಂತಾ ಆರೋಪಿಸಿದ್ದಾರೆ.
ತಪಾಸಣೆಗೆ ಬರುವ ಸೈಕಲ್ಗಳು ಉತ್ತಮ ಗುಣಮಟ್ಟದ್ದೇ ಆಗಿರುತ್ತದೆ, ಆದರೆ ನಂತರ ಕಳಪೆ ಗುಣಮಟ್ಟದ ಸೈಕಲ್ಗಳನ್ನ ವಿತರಿಸಲಾಗ್ತಿದೆ. ಇದಕ್ಕೆ ಜಿಲ್ಲಾ ಮಟ್ಟದ ಡಿಡಿಪಿಐ ಅಧಿಕಾರಿಗಳು ಕಾರಣ ಅಂತಾ ದೂರಿದ್ದಾರೆ. ಬಾಲಕಿಯರ ಸೈಕಲ್ಗೆ 3,900ರೂಪಾಯಿಯಂತೆ ಹಾಗೂ ಬಾಲಕರ ಸೈಕಲ್ಗೆ 3,600 ರೂಪಾಯಿ ವೆಚ್ಚದಲ್ಲಿ ಒಟ್ಟಾರೆ 185 ಕೋಟಿ ವೆಚ್ಚದಲ್ಲಿ ರಾಜ್ಯ ಸರ್ಕಾರ ಸೈಕಲ್ ವಿತರಣೆ ಮಾಡ್ತಿದೆ. ಕಳಪೆ ಗುಣಮುಟ್ಟದ ಸೈಕಲ್ ವಿತರಣೆಯ ಕಾರಣ ಹಾಗೂ ಸರ್ಕಾರದ ಖಜಾನೆಗೆ ಹೊರೆ ಕಮ್ಮಿ ಮಾಡುವ ನಿಟ್ಟಿನಲ್ಲಿ, ಇಡೀ ಯೋಜನೆಯನ್ನ ಸ್ಥಗಿತಗೊಳಿಸುವ ಇಂಗಿತದಲ್ಲಿ ಸರ್ಕಾರ ಇದೆ ..
ಕೂಡಲೇ ಸಿಎಂ ಈಗಾಗಲೇ ಸಪ್ಲೈ ಆಗಿರುವ ಸೈಕಲ್ಗಳಿಗೆ ಪೇಮೆಂಟ್ ನೀಡದಂತೆ, ಹಾಗೂ ಕಳಪೆ ಗುಣಮಟ್ಟದ ಸೈಕಲ್ಗಳನ್ನ ವಿತರಣೆ ನಿಲ್ಲಿಸುವಂತೆ ಸೂಚಿಸಿದ್ದಾರೆ ಎನ್ನಲಾಗಿದ್ದು, ಕಳಪೆ ಸೈಕಲ್ಗಳ ವಿತರಣೆ ಸಂಬಂಧ ಇಲಾಖಾವಾರು ತನಿಖೆಗೆ ಸೂಚಿಸಿದ್ದಾರೆ.
ಉಡುಪಿ : ನೇರ ಸಂದರ್ಶನ ಉಡುಪಿ : ನಗರದ ಮಣಿಪಾಲದ ಮನೋಹರ್ ಭವನ್ ಹೋಟೆಲ್ ಮುಂಭಾಗದ ಮಣಿಪಾಲ್ ಪೇಮೆಂಟ್ ಐಡೆಂಟಿಟಿ…
ಚಾ.ನಗರ: ಗ್ರೈಂಡರ್ನಿಂದ ವಿದ್ಯುತ್ ಶಾಕ್ – ನಾಲ್ಕು ವರ್ಷದ ಬಾಲಕಿ ದುರ್ಮರಣ ಚಾಮರಾಜನಗರ: ಗ್ರೈಂಡರ್ನಿಂದ ವಿದ್ಯುತ್ ಶಾಕ್ ಹೊಡೆದು ನಾಲ್ಕು…
ಉಡುಪಿ : ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ: ಜೂ. 23ರಿಂದ ಜಿಲ್ಲೆಯ ಮನೆಮನೆಗೆ ತೆರಳಿ ಜನಜಾಗೃತಿ: ಕೆ.ಜಯಪ್ರಕಾಶ್ ಹೆಗ್ಡೆ ಉಡುಪಿ:…
ಆರ್ಎಸ್ಎಸ್ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಂತರ ಸಚಿವ ಯತೀಂದ್ರ…
ಬೆಳ್ತಂಗಡಿ: ಎಸ್ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ ಮಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಎಸ್ಪಿ ಪ್ರಯಾಣಿಸುತ್ತಿದ್ದ…
ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ ನವದೆಹಲಿ:…