Featured

ಯುದ್ಧಭೂಮಿಯಲ್ಲಿ ರಾಷ್ಟ್ರಧ್ವಜಕ್ಕೆ ಸಿಕ್ಕ ಗೌರವ, ದೇಶದ ಘನತೆಗೆ ಸಾಕ್ಷಿ : ಉಕ್ರೇನ್‌ನಿಂದ ಬಂದ ವಿದ್ಯಾರ್ಥಿ – VIshwanews24

ಬಾಂಬ್‍ಗಳ ಸ್ಪೋಟ ಗಳಿಂದ ಭಯಭೀತರಾಗಿದ್ದ ಸ್ನೇಹಿತರು ಭಾರತದ ಧ್ವಜ ತೋರಿಸುತ್ತ ರಕ್ಷಣೆ ಕೋರಿದ್ದು ಸ್ಮರಣೀಯ..

ಯುದ್ಧಭೂಮಿಯಲ್ಲೂ ಭಾರತ ರಾಷ್ಟ್ರಧ್ವಜ ಹಿಡಿದು ಬಂದಾಗ ಅಲ್ಲಿನ ಸೈನಿಕರು ಬೆಂಬಲಿಸಿ, ನಮಗೆ ದೇಶಕ್ಕೆ ಮರಳಲು ಸಹಾಯ ಮಾಡಿದ್ದು ಖುಷಿ ಮತ್ತು ಹೆಮ್ಮೆಯ ಸಂಗತಿ ..

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಕ್ರೇನ್‍ದಲ್ಲಿರುವ ಭಾರತೀಯರನ್ನು ಕರೆತರಲು ನಡೆಸುತ್ತಿರುವ ಪ್ರಯತ್ನ ಮೆಚ್ಚುವಂತಹದ್ದು..

ಲಿಂಗಸುಗೂರು: ರಷ್ಯಾ ಉಕ್ರೇನ್‍ ಯುದ್ಧಭೂಮಿಯಲ್ಲಿ ಪ್ರಯಾಣಿಸಿದ ಕ್ಷಣಗಳನ್ನೆ ನೆನೆದರೆ ಭಯವಾಗುತ್ತಿದೆ. ಆದರೆ, ಯುದ್ಧಭೂಮಿಯಲ್ಲೂ ಭಾರತ ರಾಷ್ಟ್ರಧ್ವಜ ಹಿಡಿದು ಬಂದಾಗ ಅಲ್ಲಿನ ಸೈನಿಕರು ಬೆಂಬಲಿಸಿ, ನಮಗೆ ದೇಶಕ್ಕೆ ಮರಳಲು ಸಹಾಯ ಮಾಡಿದ್ದು ಖುಷಿ ಮತ್ತು ಹೆಮ್ಮೆಯ ಸಂಗತಿಯಾಗಿದೆ..

ಇದು ಉಕ್ರೇನ್‌ನ ಖಾರ್ಕಿನ್‍ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ 3ನೇ ವರ್ಷದಲ್ಲಿ ಓದುತ್ತಿದ್ದ ವಿದ್ಯಾರ್ಥಿ ಪ್ರಜ್ವಲ್‍ ಕುಮಾರ ಹೂಗಾರ ಮಾತು.

ಉಕ್ರೇನ್‌ನಿಂದ ತಾಲ್ಲೂಕಿನ ಹೊನ್ನಳ್ಳಿ ಗ್ರಾಮಕ್ಕೆಆಗಮಿಸಿದ ನಂತರ ತಮ್ಮ ಅನುಭವಗಳನ್ನು ಹಂಚಿಕೊಂಡರು.

ರಷ್ಯಾ– ಉಕ್ರೇನ್‍ ಯುದ್ಧ ಆರಂಭಗೊಳ‍್ಳುವ ಮಾಹಿತಿಗಳು ವಿದೇಶಾಂಗ ಇಲಾಖೆಯಿಂದ ಬಂದಿದ್ದವು. ಆದರೆ, ಮೂರು ಮತ್ತು ಆರನೇ ವರ್ಷದ ಎಲಿಜಿಬಿಲಿಟಿ ಪರೀಕ್ಷೆಗಳು ಇದ್ದುದರಿಂದ ತಾಯ್ನಾಡಿಗೆ ಬರಲು ಮೀನಾಮೇಷ ಮಾಡಿದ್ದೆವು. ವಿಶ್ವವಿದ್ಯಾಲಯದ ಉಪನ್ಯಾಸಕರು ಕೂಡ ತರಗತಿಗಳು ನಡೆಸುವುದಾಗಿ ಹೇಳಿದ್ದರಿಂದ ಯುದ್ಧಭೂಮಿಯಲ್ಲಿ ಸಿಲುಕೊಳ್ಳುವಂತಾಗಿತ್ತು.

ಇದನ್ನೂ ಓದಿ :

ಒಂದು ವಾರ ತಾವು ವಾಸಿಸುವ ಮನೆಗಳನ್ನು ತೊರೆದು ಬಂಕರ್‌ಗಳಲ್ಲಿ ನೆಲೆಸಿದ್ದೆವು. ನಿತ್ಯ ವೈಮಾನಿಕ ದಾಳಿ, ಸುತ್ತಮುತ್ತಲ ಪ್ರದೇಶಗಳಲ್ಲಿ ಬಾಂಬ್‍ ದಾಳಿ, ಸಾವು ನೋವಿನ ಮಾಹಿತಿಗಳಿಂದ ಸಾವು ನಿಶ್ಚಿತ ಎಂದು ಅಂದುಕೊಂಡಿದ್ದೆವು. ಆದರೆ, ಕೇಂದ್ರ ಸರ್ಕಾರದ ಮುನ್ಸೂಚನೆ ಆಧರಿಸಿ ಭಾರತದ ರಾಷ್ಟ್ರಧ್ವಜ ಹಿಡಿದು ಜೀವ ಭಯದಲ್ಲಿಯೆ ಪ್ರಯಾಣ ಆರಂಭಿಸಿದ್ದೇವು.

ಖಾರ್ಕಿವ್‍ ರೈಲ್ವೆ ನಿಲ್ದಾಣಕ್ಕೆ 10 ಕಿ.ಮೀ ನಡೆದುಕೊಂಡು ಹೋಗುವಾಗ, ಅಲ್ಲಿಂದ ರೈಲ್ವೆ ಮೂಲಕ ಪ್ರಯಾಣಿಸುವ ಪ್ರತಿ ಕ್ಷಣವು ಸಾವಿನ ದವಡೆಯಿಂದ ಪಾರಾದ ಅನುಭವ. ಖಾರ್ಕಿವ್‌ನಿಂದ ಲಿವಿವ್‍ ತಲುಪಿದೆವು. ಅಲ್ಲಿಂದ ಟ್ಯಾಕ್ಸಿ ವಾಹನಗಳ ಮೂಲಕ ಪೋಲೆಂಡ್ ಗಡಿ ಪ್ರದೇಶಕ್ಕೆ ಬಂದು ತಲುಪಿದೆವು.

ಪ್ರಯಾಣದುದ್ದಕ್ಕೂ ಅಲ್ಲಲ್ಲಿ ಸೈನಿಕರ ಗುಂಡಿನ ದಾಳಿ, ವೈಮಾನಿಕ ದಾಳಿ, ಬಾಂಬ್‍ಗಳ ಸ್ಪೋಟ್‍ಗಳಿಂದ ಭಯಭೀತರಾಗಿದ್ದ ಸ್ನೇಹಿತರು ಭಾರತದ ಧ್ವಜ ತೋರಿಸುತ್ತ ರಕ್ಷಣೆ ಕೋರಿದ್ದು ಸ್ಮರಣೀಯ. ಯುದ್ಧಭೂಮಿಯಲ್ಲಿ ರಾಷ್ಟ್ರಧ್ವಜಕ್ಕೆ ಸಿಕ್ಕ ಗೌರವ, ದೇಶದ ಘನತೆಗೆ ಸಾಕ್ಷಿಯಾಗಿದೆ. ವಿದೇಶಾಂಗ ಇಲಾಖೆ ಸೂಕ್ತ ರಕ್ಷಣೆ ಮೂಲಕ ಸ್ವದೇಶಕ್ಕೆ ಕರೆತಂದಿದೆ ಎಂದು ಅವರು ಶ್ಲಾಘಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉಕ್ರೇನ್‍ದಲ್ಲಿರುವ ಭಾರತೀಯರನ್ನು ಕರೆತರಲು ನಡೆಸುತ್ತಿರುವ ಪ್ರಯತ್ನ ಮೆಚ್ಚುವಂತಹದ್ದು. ಪೋಲೆಂಡ್‌ನಿಂದ ಮನೆ ತಲುಪುವವರೆಗೆ ಸರ್ಕಾರವೇ ಖರ್ಚು ಭರಿಸಿದೆ. ಮುಂದಿನ ದಿನಗಳಲ್ಲಿ ಪರಿಸ್ಥಿತಿ ತಿಳಿಯಾಗಿ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವ ನಿರೀಕ್ಷೆಯಿದೆ ಎಂದು ವಿದ್ಯಾರ್ಥಿ ಪ್ರಜ್ವಲ್‍ಕುಮಾರ ತಮ್ಮ ಅನುಭವ ಹಂಚಿಕೊಂಡರು.

ಇದನ್ನೂ ಓದಿ :

Vishwa News 24

Recent Posts

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ – vishwanews24

ಉಡುಪಿ: ಆಸ್ತಿಯನ್ನು ಬಲವಂತವಾಗಿ ತನ್ನ ಹೆಸರಿಗೆ ವರ್ಗಾಯಿಸಿಕೊಂಡು ವೃದ್ಧ ಪೋಷಕರನ್ನು ಮನೆಯಿಂದ ಹೊರಹಾಕಿದ ಮಗ ಉಡುಪಿ: ತಾಯಿಯ ಹೆಸರಿನಲ್ಲಿದ್ದ ಆಸ್ತಿಯನ್ನು…

10 hours ago

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು – vishwanews24

ವಿಟ್ಲ : ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ ಹಾಗೂ ವಿದ್ಯುತ್ ಕಂಬ: ದಂಪತಿ ಅಪಾಯದಿಂದ ಪಾರು ವಿಟ್ಲ: ಮರ ಹಾಗೂ…

11 hours ago

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ – vishwanews24

ಮಂಗಳೂರು: ಉದ್ಯಮಿಯ ಕಾರು ಅಡ್ಡಗಟ್ಟಿ ಕಾರು ಸಹಿತ ಚಿನ್ನಾಭರಣ ದರೋಡೆ ಮಂಗಳೂರು: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಕಾರು…

11 hours ago

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ – vishwanews24

ವಯೋವಂದನ ಯೋಜನೆ : ವೇದಿಕೆಯ ನೇತೃತ್ವಕ್ಕೆ ಸಮಾಜದ ಸಹಭಾಗಿತ್ವ ಅಗತ್ಯ : ಸಿ ಎಂ ಗುಜ್ಜಾಡಿ ಪ್ರಭಾಕರ್ ನಾಯಕ್ ಜಿ…

12 hours ago

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ – vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ‘ನುವಾ’ ವಜ್ರಾಭರಣ ಅನಾವರಣ ಉಡುಪಿ: ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಮೈನ್ ಬ್ರಾಂಡಿನ…

12 hours ago

ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ ವಿರುದ್ಧ ಅವಹೇಳನಕಾರಿ ಹೇಳಿಕೆ: ವಿಠಲ ಗೌಡ ವಿರುದ್ಧ ಅರೆಸ್ಟ್​​​​​​ ವಾರಂಟ್ – vishwanews24

ಧರ್ಮಸ್ಥಳ ಪ್ರಕರಣ : ವಿಠಲ್‌ ಗೌಡ ವಿರುದ್ಧ ಅರೆಸ್ಟ್‌ ವಾರಂಟ್:‌ ಪೊಲೀಸರಿಂದ ಹುಡುಕಾಟ ಬೆಳ್ತಂಗಡಿ: ಧರ್ಮಸ್ಥಳ ಮತ್ತು ವೀರೇಂದ್ರ ಹೆಗ್ಗಡೆ…

2 days ago