ನವ ಜೋಡಿಗೆ ರಕ್ಷಣೆಯ ಭರವಸೆ ನೀಡಿದ ಪೊಲೀಸರು..
ಹಿಂದೂ ಧರ್ಮದಲ್ಲಿ ಅಪಾರ ನಂಬಿಕೆ.. ಮುಸ್ಲಿಂ ಸಮಾಜದಲ್ಲಿ ಮಹಿಳೆಯರಿಗೆ ಗೌರವ ಸಿಗುವುದಿಲ್ಲ : ಹಿಂದೂ ಧರ್ಮಕ್ಕೆ ಮತಾಂತರಗೊಂಡ ಯುವತಿಯರು
ಹಿಂದೂ ಧರ್ಮಕ್ಕೆ ಮತಾಂತರಗೊಂಡ ನಂತರ ಇರಾಮ್ ಜೈದಿ ಸ್ವಾತಿ ಮತ್ತು ಶಹನಾಜ್ ಸುಮನ್ ಆದಳು.
ಮದಿನಾಥದಲ್ಲಿರುವ ಅಗಸ್ಟ್ ಮುನಿ ಆಶ್ರಮದಲ್ಲಿ ಪಂಡಿತ್ ಕೆ ಕೆ ಶಂಖಧರ್ ಅವರು ಹಿಂದೂ ಸಂಪ್ರದಾಯದಂತೆ ವಿವಾಹವನ್ನು ನೆರವೇರಿಸಿದರು. ಸ್ವಾತಿ ಆದೇಶ್ ಕುಮಾರ್ ಅವರನ್ನು ವಿವಾಹವಾದರು ಮತ್ತು ಸುಮನ್ ಅಜಯ್ ಎಂಬುವರನ್ನು ವಿವಾಹವಾದರು.
ಈ ಇಬ್ಬರೂ ಹುಡುಗಿಯರು ತಮಗೆ ಹಿಂದೂ ಧರ್ಮದಲ್ಲಿ ಅಪಾರ ನಂಬಿಕೆ ಇದೆ ಎಂದು ಹೇಳಿದರು. ‘ಮುಸ್ಲಿಂ ಸಮಾಜದಲ್ಲಿ ಮಹಿಳೆಯರಿಗೆ ಗೌರವ ಸಿಗುವುದಿಲ್ಲ. ಮುಸ್ಲಿಂ ಪುರುಷರು ಬಯಸಿದಾಗ, ಅವರು ಮೂರು ಬಾರಿ ತಲಾಖ್ ಅನ್ನು ಉಚ್ಚರಿಸಿ ವಿಚ್ಛೇದನ ನೀಡಿ ಹಲಾಲ ಸಂಸ್ಕಾರಕ್ಕೊಳಗೊಂಡು ಪುನಃ ತಾವು ವಿಚ್ಛೇದನ ನೀಡಿದ ಹೆಂಡತಿಯನ್ನು ಸೇರಿಸಿಕೊಳ್ಳುತ್ತಾರೆ’ ಎಂದು ಯುವತಿಯರು ಹೇಳಿದ್ದಾರೆ.
ಇಬ್ಬರು ಹುಡುಗಿಯರನ್ನು ಮೊದಲು ಪುರೋಹಿತರು ಶುದ್ಧೀಕರಿಸಿ ಹೆಸರುಗಳನ್ನು ಬದಲಾಯಿಸಿದ ನಂತರವೇ ಮದುವೆ ಶಾಸ್ತ್ರ ಪೂರೈಸಿದರು. ಮದುವೆ ಸಮಾರಂಭ ಪೂರ್ಣಗೊಂಡ ನಂತರ ವಧುಗಳು ಅರ್ಚಕರಿಂದ ಆಶೀರ್ವಾದ ಪಡೆದರು.
ಮದುವೆಯ ಕೆಲವು ಗಂಟೆಗಳ ನಂತರ ಯುವತಿಯರು ಬರೇಲಿಯ ಎಸ್ಎಸ್ಪಿ ಅವರನ್ನು ಭೇಟಿ ಮಾಡಿ, ಪೋಷಕರು ಮತ್ತು ಸಹೋದರರಿಂದ ನಮಗೆ ಜೀವಭಯವಿದೆ ಎಂದು ದೂರಿದರು. ಕುಟುಂಬಸ್ಥರು ತಮಗಾಗಿ ಸಮಾಧಿಯನ್ನು ಸಿದ್ಧಪಡಿಸಿರುವ ಆಘಾತಕಾರಿ ಸಂಗತಿಯನ್ನು ಪೊಲೀಸ್ ಅಧಿಕಾರಿಗೆ ತಿಳಿಸಿದರು. ಯುವತಿಯರಿಗೆ ಸಂಪೂರ್ಣ ಭದ್ರತೆಯನ್ನು ಒದಗಿಸುವ ಭರವಸೆಯನ್ನು ಪೊಲೀಸರು ನೀಡಿದ್ದಾರೆ.
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…
ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…
ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…