ಜ್ಞಾನ, ಬಲ, ಶಕ್ತಿ, ತೇಜಸ್ಸು, ಐಶ್ವರ್ಯ, ಸಿರಿಸಂಪತ್ತುಗಳು ಸರ್ವತೋಮುಖ ಅಭಿವೃದ್ಧಿ ಹೊಂದಲು ಸರ್ವಚೇತನ ಜ್ಞಾನ, ಧ್ಯಾನ, ಭಕ್ತಿ ಮತ್ತು ಕರ್ಮಯೋಗಗಳಿಂದ ಪಡೆಯಬಹುದು.
ಮೇಷ : ಸರ್ವಕಾರ್ಯಚತುರತೆ. ಹಣದ ಲೇವಾದೇವಿ ಬಂಡವಾಳ ಹೂಡಿಕೆಯಲ್ಲಿ ಪ್ರಗತಿ. ಬೆಳ್ಳಿ ಬಂಗಾರ ಮತ್ತು ರತ್ನ ವ್ಯಾಪಾರಗಳಲ್ಲಿ ಅಧಿಕಲಾಭ. ವಿದೇಶ ಪ್ರವಾಸ. ಸಂಶೋಧನೆ ಮತ್ತು ವಿಜ್ಞಾನದಲ್ಲಿ ಪ್ರಗತಿ ಉಂಟಾಗುತ್ತದೆ.
ವೃಷಭ : ಡಿಸೆಂಬರ್ 24ರಿಂದ ಶುಭಯೋಗ. ರಾಜಕೀಯ ಮತ್ತು ಸಮಾಜ ಸೇವೆಯಲ್ಲಿ ಪಟ್ಟಾಭಿಷೇಕ. ಚಂದ್ರದೆಸೆಯಲ್ಲಿ ಜನನವಾಗಿದ್ದರೆ, ಅವಘಡ, ಅಘಾತ, ಸಾಲದ ಭಾದೆ ದೂರವಾಗುತ್ತದೆ. ವಿದ್ಯಾ ಕ್ಷೇತ್ರದಲ್ಲಿ ಪ್ರಗತಿ
ಮಿಥುನ : ಆಗಸ್ಟ್ 29 ರಿಂದ ಶುಕ್ರ ಪಂಚಮ ಸ್ಥಾನದಲ್ಲಿ ಇರುವುದರಿಂದ ರಾಜಯೋಗ, ಅಮೃತಸಿದ್ಧಯೋಗ, ಗಜಕೇಸರಿಯೋಗಗಳು ಆರಂಭ. ಕೈಗೊಳ್ಳುವ ಎಲ್ಲಾ ಯೋಜನೆಗಳು ಕಾರ್ಯರೂಪಕ್ಕೆ ಬರುತ್ತವೆ. ಸಾಲಗಳಿಂದ ವಿಮುಕ್ತಿ.
ಕಟಕ : ಸೆಪ್ಟೆಂಬರ್ 23 ರಿಂದ ರಾಜಯೋಗ ಆರಂಭ. ವಾಹನ ನಿವೇಶನ ಮತ್ತು ಭೂ ಖರೀದಿ. ಕಾಲ ಗಣನಾಚಕ್ರದಲ್ಲಿ ಶನಿ, ಕುಜ ಮತ್ತು ಕಾಳ ಸರ್ಪದೋಷಗಳು ನಿವಾರಣೆಯಾಗಲಿದೆ. ದೇವಾಲಯ ಹಾಗೂ ಪ್ರೇಕ್ಷ ಣೀಯ ಸ್ಥಳಗಳ ದರ್ಶನ.
ಸಿಂಹ : ಕಳೆದ ಡಿಸೆಂಬರ್ 24ರಿಂದಲೇ ರಾಜಯೋಗ ಆರಂಭವಾಗಿದ್ದು ಮುಂದಿನ ಮೂರು ವರ್ಷಗಳು ಅದೃಷ್ಟದ ವರ್ಷಗಳಾಗಿರುತ್ತವೆ. ಆರ್ಥಿಕ, ಸಾಮಾಜಿಕ, ರಾಜಕೀಯ ಮತ್ತು ವಿದ್ಯಾಕ್ಷೇತ್ರಗಳಲ್ಲಿ ಪ್ರಗತಿ. ವಿದೇಶ ಪ್ರವಾಸ ಉಂಟಾಗುತ್ತದೆ.
ಕನ್ಯಾ : ಬೆಳ್ಳಿ ಬಂಗಾರ ಮತ್ತು ರತ್ನ ವ್ಯಾಪಾರದಲ್ಲಿ ಪ್ರಗತಿ, ದಿನಸಿ ವ್ಯಾಪಾರಗಳಲ್ಲಿ ಅಧಿಕಲಾಭ, ಶನಿ ಅಲ್ಪ ನೀಚನಾಗಿರುವುದರಿಂದ ಸದಾ ಮಾನಸಿಕ ಚಿಂತೆ, ಸಾಲದ ಬಾಧೆ, ನಿವಾಸದಲ್ಲಿ ಅಶಾಂತಿ ಉಂಟಾಗುತ್ತದೆ.
ತುಲಾ : ರವಿ ದೆಸೆ ಸದಾ ಇರುವುದರಿಂದ ಜೀವನದಲ್ಲಿ ಅವಘಡ ಮತ್ತು ಆಘಾತಗಳು ಸಂಭವಿಸಲಾರವು. ಸೆಪ್ಟೆಂಬರ್ 23ರಂದು ರಾಜಯೋಗ ಆರಂಭದಿಂದಲೇ ಗ್ರಹದೋಷಗಳು ಧೂಳಿಪಟ ಆಗಲಿವೆ.
ವೃಶ್ಚಿಕ : ಗುರು ಪಂಚಮ ಸ್ಥಾನದಲ್ಲಿ ಸಂಚರಿಸುವುದರಿಂದ ಮಿತ್ರರು ಮತ್ತು ಬಂಧುವರ್ಗದವರಿಂದ ಸಹಾಯದ ಹಸ್ತ ದೊರೆಯುತ್ತದೆ. ಮಾರ್ಚಿ 21ರಿಂದಲೇ ರಾಜಯೋಗ ಆರಂಭವಾಗಿರುವುದರಿಂದ ಜ್ಞಾಪಕ ಶಕ್ತಿ ಅಧಿಕವಾಗುತ್ತದೆ.
ಧನಸ್ಸು : ಸೆಪ್ಟೆಂಬರ್ 23 ರಿಂದ ರಾಜಯೋಗ ಪ್ರಾರಂಭ. ಕೋರ್ಟ್ ಕಚೇರಿಗಳ ವ್ಯಾಜ್ಯ ಇತ್ಯರ್ಥ. ಆಕಸ್ಮಿಕ ಚರಾಸ್ಥಿಗಳ ಆಗಮನ. ವಾಹನ ಖರೀದಿ, ನಿವೇಶನ ಕೊಳ್ಳುವಿಕೆ, ಗೃಹ ನಿರ್ಮಾಣಗಳು ಸಂಭವವಿದೆ.
ಮಕರ : ಆಗಸ್ಟ್ 29ರಿಂದ ರಾಜಯೋಗ ಆರಂಭ. ಚಂದ್ರದೆಸೆ ಸದಾ ಇರುವುದರಿಂದ ಕಾರ್ಯಸಿದ್ಧಿ. ಆಕಸ್ಮಿಕ ಧನಲಾಭ. ಸಾಲಗಳಿಂದ ಮುಕ್ತಿ. ಕಾಳಸರ್ಪದೋಷಗಳು ಧೂಳಿಪಠ ಆಗಲಿವೆ.
ಕುಂಭ : ಮೇ 19ರಂದೇ ರಾಜಯೋಗ ಬಂದಿರುವುದರಿಂದ ಉನ್ನತ ಪದವಿ, ರಾಜಕೀಯ ಪಟ್ಟಾಭಿಷೇಕ. ವಿದ್ಯಾಬುದ್ಧಿಯಲ್ಲಿ ಪ್ರಗತಿ. ಚಿತ್ರ ನಿರ್ಮಾಪಕರು, ರೇಷ್ಮೆ ಉದ್ದಿಮೆದಾರರು, ಸಾಗರ ಸಂಶೋಧಕರಿಗಿದು ಸಕಾಲ.
ಮೀನ : ಮಾರ್ಚಿ 21ರಿಂದಲೇ ರಾಜಯೋಗ, ಅಮೃತಸಿದ್ಧಯೋಗ, ಗಜಕೇಸರಿಯೋಗ ಮತ್ತು ಶುಕ್ರದೆಸೆಗಳು ಮರುಕಳಿಸುತ್ತಲೇ ಇರುತ್ತವೆ. ನವಗ್ರಹಗಳ ಅನುಗ್ರಹ. ಜ್ಞಾನ, ಛಲ, ಕೀರ್ತಿ ಸಂಭವ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…