ಬೆಂಗಳೂರು: ನಮ್ಮ ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಬೇಕು ಎಂದು ಪ್ರತಿಪಾದಿಸುವವರು ಅತ್ಯಾಚಾರಿಗಳ ಸಮರ್ಥಕರಿದ್ದಂತೆ. ಉನ್ನಾವೋ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಅತ್ಯಾಚಾರವೆಸಗಿದಲ್ಲದೆ ಜೈಲಿನಿಂದಲೇ ಸಂತ್ರಸ್ತೆಯ ತಂದೆ ಹಾಗೂ ವಕೀಲರನ್ನು ಕೊಲ್ಲಿಸುತ್ತಾನೆ. ಯೋಗಿ ಆಡಳಿತದ ಶ್ರೀರಕ್ಷೆಯಿಲ್ಲದೆ ಬಿಜೆಪಿ ಶಾಸಕನಿಗೆ ಈ ಕೃತ್ಯ ನಡೆಸಲು ಸಾಧ್ಯವೇ ಎಂದು ಸರಣಿ ಪ್ರಶ್ನೆಗಳೊಂದಿಗೆ ಸರಣಿ ಟ್ವೀಟ್ ಮೂಲಕ ಬಿಜೆಪಿ (BJP) ನಾಯಕರ ವಿರುದ್ಧ ಕಾಂಗ್ರೆಸ್ (Congress) ನಾಯಕ ದಿನೇಶ್ ಗುಂಡೂರಾವ್ (Dinesh Gundu Rao) ವಾಗ್ದಾಳಿ ನಡೆಸಿದ್ದಾರೆ.
ಹತ್ರಾಸ್ ಉನ್ನಾವೋ ಅತ್ಯಾಚಾರ ಘಟನೆ ಮಾಸುವ ಮುುುನ್ನವೇ ಉ.ಪ್ರದೇಶದಲ್ಲಿ ಮತ್ತೊಂದು ಜೋಡಿ ಅತ್ಯಾಚಾರ ಹಾಗೂ ಹತ್ಯೆಯ ಘಟನೆ ನಡೆದಿದೆ. ಯೋಗಿ ಮಾದರಿ, ಯೋಗಿ ಮಾದರಿ ಎಂದು ಬಾಯಿ ಬಡಿದುಕೊಳ್ಳುವ ರಾಜ್ಯ ಬಿಜೆಪಿ ನಾಯಕರು, ಯೋಗಿ ಆಡಳಿತದಲ್ಲಿ ಹೆಣ್ಣು ಮಕ್ಕಳಿಗೆ ಹಾಗೂ ಪರಿಶಿಷ್ಟ ಜಾತಿಯವರಿಗೆ ಏನು ರಕ್ಷಣೆಯಿದೆ? ಅನಾಗರಿಕ ಯೋಗಿ ಮಾದರಿ ಆಡಳಿತ ನಮಗೆ ಬೇಕೆ?
ತೊಂದರೆಗಳಿಂದ ಮುಕ್ತಿ..ನೋಡಿ ಇಂದಿನ ದಿನ ಭವಿಷ್ಯ.. ಜ್ಯೋತಿಷ್ಯರು ವಿದ್ವಾನ್ ವಿದ್ಯಾಧರ್ ತಂತ್ರಿ ನಂ:- 9686268564
ಯೋಗಿ ಆಡಳಿತದಲ್ಲಿ ಉ.ಪ್ರದೇಶ ( ಅನಾಗರಿಕರ ನಾಡಾಗಿದೆ. ಕೊಲೆ, ಅತ್ಯಾಚಾರ ಈ ರಾಜ್ಯದಲ್ಲಿ ಸರ್ವೇ ಸಾಮಾನ್ಯ. ಇಂತಹ ಗೂಂಡಾ ರಾಜ್ಯ ನಮ್ಮ ರಾಜ್ಯ ಬಿಜೆಪಿ ನಾಯಕರಿಗೆ ಮಾದರಿ ಅಂತಾ ಅನ್ನಿಸಿದಾದರೂ ಹೇಗೆ? ಯೋಗಿ ಮಾದರಿ ಎಂದು ಕನವರಿಸುವ ಬಿಜೆಪಿಯವರಿಗೆ ನಮ್ಮ ರಾಜ್ಯ ದಕ್ಷಿಣದ ಉ.ಪ್ರದೇಶವಾಗಬೇಕೆ? ಉ.ಪ್ರದೇಶದಂತೆ ಕರ್ನಾಟಕ ಅತ್ಯಾಚಾರಿಗಳ ಸ್ವರ್ಗವಾಗಬೇಕೆ?
ನಮ್ಮ ರಾಜ್ಯದಲ್ಲಿ ಯೋಗಿ ಮಾದರಿ ಆಡಳಿತ ಬೇಕು ಎಂದು ಪ್ರತಿಪಾದಿಸುವವರು ಅತ್ಯಾಚಾರಿಗಳ ಸಮರ್ಥಕರಿದ್ದಂತೆ. ಉನ್ನಾವೋ ಪ್ರಕರಣದಲ್ಲಿ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಅತ್ಯಾಚಾರವೆಸಗಿದಲ್ಲದೆ ಜೈಲಿನಿಂದಲೇ ಸಂತ್ರಸ್ತೆಯ ತಂದೆ ಹಾಗೂ ವಕೀಲರನ್ನು ಕೊಲ್ಲಿಸುತ್ತಾನೆ. ಯೋಗಿ ಆಡಳಿತದ ಶ್ರೀರಕ್ಷೆಯಿಲ್ಲದೆ ಬಿಜೆಪಿ ಶಾಸಕನಿಗೆ ಈ ಕೃತ್ಯ ನಡೆಸಲು ಸಾಧ್ಯವೇ?
ಹತ್ರಾಸ್ ಪ್ರಕರಣದಲ್ಲಿ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾದ ಬಾಲಕಿಯ ಶವವನ್ನು ಪೋಷಕರಿಗೂ ತಿಳಿಯದಂತೆ ಕದ್ದುಮುಚ್ಚಿ ಉ.ಪ್ರದೇಶ ಪೊಲೀಸರು ಅಂತ್ಯಸಂಸ್ಕಾರ ನಡೆಸುತ್ತಾರೆ. ಯೋಗಿ ಆಡಳಿತದಲ್ಲಿ ಮಾತ್ರ ಇಂತಹ ಭೀಭತ್ಸ್ಯ ಕೃತ್ಯಗಳು ನಡೆಯಲು ಸಾಧ್ಯ. ಯೋಗಿ ಮಾದರಿ ಎಂದು ಬೊಬ್ಬಿರಿಯುವ ರಾಜ್ಯ ಬಿಜೆಪಿ ನಾಯಕರು ನಮ್ಮ ರಾಜ್ಯದಲ್ಲೂ ತರಲು ಹೊರಟಿರಯವುದು ಈ ಮಾದರಿಯನ್ನೇ ಎಂದು ಪ್ರಶ್ನಿಸಿ ಟೀಕಿಸಿದ್ದಾರೆ.
ಪಡುಬಿದ್ರಿ: ಹೆಜಮಾಡಿ ಟೋಲ್ ಗೇಟ್ ವಿರುದ್ಧ ಪ್ರತಿಭಟನೆ .. ಟೋಲ್ ಗೇಟ ನ್ನು ತಕ್ಷಣ ತೆರವುಗೊಳಿಸಬೇಕು ಎಂದು ಆಗ್ರಹ 15…
ಪೊಲೀಸ್ ಕಾನ್ಸ್ ಟೇಬಲ್ ಪರೀಕ್ಷೆ: ಹಿಜಾಬ್ ಧರಿಸಿ ಪರೀಕ್ಷೆ ಬರೆಯುವಂತಿಲ್ಲ : ಪ್ರಿಯಾಂಕ ಖರ್ಗೆ ಸ್ಪಷ್ಟನೆ ಬೆಂಗಳೂರು: ಕರ್ನಾಟಕದ ಪೊಲೀಸ್…
ಸಾಂಸ್ಕೃತಿಕ ನಗರಿ ಮೈಸೂರಿಗೆ ಆಗಮಿಸಿದ ಪ್ರಧಾನಿ ಮೋದಿ ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ವಿಶೇಷ ಸೇನಾ…
ಕಡಬ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ :ಭಕ್ತರಿಗೆ ಡ್ರಮ್ಗಳಲ್ಲಿ ಪರ್ಯಾಯ ಸ್ನಾನ ವ್ಯವಸ್ಥೆ ಕಡಬ:ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರಂತರ ಸುರಿಯುತ್ತಿರುವ…
ಮೀನುಗಾರಿಕಾ ಋತು ಆರಂಭ ಹಿನ್ನೆಲೆ : ಮಲ್ಪೆ ಬಂದರಿಗೆ ಶಾಸಕ ಯಶ್ಪಾಲ್ ಸುವರ್ಣ ಭೇಟಿ ಉಡುಪಿ: ಜೂನ್ ಮತ್ತು ಜುಲೈ…
ಕುಂದಾಪುರ ರಿಚರ್ಡ್ ಹತ್ಯೆ ಪ್ರಕರಣ : ಆರೋಪಿ ಭಟ್ಕಳದಲ್ಲಿ ಬಂಧನ ಕುಂದಾಪುರ: ಇಲ್ಲಿನ ಚರ್ಚ್ ರಸ್ತೆಯ ಸಮೀಪ ಗುರುವಾರ ತಡರಾತ್ರಿ…