Featured

ರಾಜ್ಯ​ದಲ್ಲಿ 2023ರಲ್ಲಿ ನಡೆ​ಯುವ ವಿಧಾ​ನ​ಸಭಾ ಚುನಾ​ವಣೆ ನನ್ನ ಜೀವ​ನದ ಕೊನೆಯ ಹೋರಾಟ : ಎಚ್‌.ಡಿ.​ಕು​ಮಾ​ರ​ಸ್ವಾಮಿ -Vishwanews24

ರಾಜ್ಯ​ದಲ್ಲಿ 2023ರಲ್ಲಿ ನಡೆ​ಯುವ ವಿಧಾ​ನ​ಸಭಾ ಚುನಾ​ವಣೆ ನನ್ನ ಜೀವ​ನದ ಕೊನೆಯ ಹೋರಾಟ : ಎಚ್‌.ಡಿ.​ಕು​ಮಾ​ರ​ಸ್ವಾಮಿ –Vishwanews24

ರಾಮ​ನ​ಗರ: ರಾಜ್ಯ​ದಲ್ಲಿ 2023ರಲ್ಲಿ ನಡೆ​ಯುವ ವಿಧಾ​ನ​ಸಭಾ ಚುನಾ​ವಣೆ ನನ್ನ ಜೀವ​ನದ ಕೊನೆಯ ಹೋರಾಟ. ಜೆಡಿ​ಎಸ್‌ ಸ್ವತಂತ್ರ​ವಾಗಿ ಅಧಿ​ಕಾ​ರಕ್ಕೆ ಬರು​ವಂತೆ ಪಕ್ಷ ಸಂಘ​ಟಿ​ಸಲು ಸಂಕ್ರಾಂತಿ ಮರು​ದಿ​ನ ರಾಮ​ನ​ಗರ ಕ್ಷೇತ್ರ​ದಿಂದಲೇ ಚಾಲನೆ ನೀಡುತ್ತೇನೆ ಎಂದು ಮಾಜಿ ಮುಖ್ಯ​ಮಂತ್ರಿ ಎಚ್‌.ಡಿ.​ಕು​ಮಾ​ರ​ಸ್ವಾಮಿ ಹೇಳಿ​ದರು.

ನಗ​ರದ ವಿಶ್ವ​ನಾಥ ಕಲ್ಯಾಣ ಮಂಟ​ಪ​ದಲ್ಲಿ ರಾಮ​ನ​ಗರ ಕ್ಷೇತ್ರ ವ್ಯಾಪ್ತಿಯ ಗ್ರಾಪಂ ಚುನಾ​ವ​ಣೆ​ಯಲ್ಲಿ ಜೆಡಿಎಸ್‌ ಬೆಂಬ​ಲಿತ ಅಭ್ಯ​ರ್ಥಿ​ಗ​ಳ ಅಭಿ​ನಂದನಾ ಸಮಾ​ರಂಭ ಉದ್ಘಾ​ಟಿಸಿ          ಮಾತ​ನಾ​ಡಿ​ದರು.

ರಾಮ​ನ​ಗರ ನನಗೆ ರಾಜ​ಕೀ​ಯ​ವಾಗಿ ಪುನರ್‌ ಜನ್ಮ ನೀಡಿದ ಕ್ಷೇತ್ರ. ಹೀಗಾಗಿ ಜಾಲ​ಮಂಗ​ಲದ ಲಕ್ಷ್ಮೀ ನರ​ಸಿಂಹಸ್ವಾಮಿ ದೇವಾ​ಲ​ಯ​ದಲ್ಲಿ ನನ್ನಿಂದಾ​ಗಿ​ರುವ ಅಪ​ಚಾರ ಮನ್ನಿ​ಸು​ವಂತೆ ಕುಟುಂಬ ಸಮೇ​ತ​ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹೊಸ ರಾಜ​ಕೀಯ ಆರಂಭಿ​ಸು​ತ್ತೇನೆ ಎಂದರು.

ಬದ​ಲಾದ ರಾಜ​ಕೀಯ ಸನ್ನಿ​ವೇ​ಶ​ದಲ್ಲಿ ವಿಧಿ​ಯಿ​ಲ್ಲದೆ ಕಾಂಗ್ರೆಸ್‌ ಜತೆ​ ಕೈಜೋ​ಡಿಸಿ ಮೈತ್ರಿ ಸರ್ಕಾರ ರಚಿಸಿದೆವು. ದೋಸ್ತಿ ಸರ್ಕಾರ ಅಧಿ​ಕಾ​ರಕ್ಕೆ ಬಂದ ಒಂದೇ ತಿಂಗ​ಳಲ್ಲಿ ನಾನು ವೇದಿ​ಕೆ​ಯಲ್ಲಿ ಸಾರ್ವ​ಜ​ನಿ​ಕ​ವಾಗಿ ಕಣ್ಣೀರು ಹಾಕುವ ಸನ್ನಿ​ವೇಶ ಬಂತು. ಬಹುಶಃ ರಾಜ​ಕೀ​ಯ ಇತಿ​ಹಾಸದಲ್ಲಿ ಮುಖ್ಯ​ಮಂತ್ರಿ​ಯಾದ ಒಂದೇ ತಿಂಗ​ಳಲ್ಲಿ ಕಣ್ಣೀರು ಹಾಕಿದವನು ನಾನೊ​ಬ್ಬನೇ ಇರ​ಬೇಕು. ಕಾಂಗ್ರೆಸ್‌ ಜತೆ ಕೈಜೋ​ಡಿಸಿ ಮೈತ್ರಿ ಸರ್ಕಾರ ರಚಿಸಿದ್ದರಿಂದಾದ ತಪ್ಪಿನ ಅರಿ​ವಾ​ಗಿದೆ. ದೋಸ್ತಿ ಸರ್ಕಾ​ರಕ್ಕೆ ಬಂಡೆ ರೀತಿ ಆಸ​ರೆ​ಯಾ​ಗಿ ನಿಂತಿ​ದ್ದೇ​ವೆಂದು ಪರೋ​ಪ​ಕಾರ ಮಾಡಿ​ದ​ವ​ರಂತೆ ಪ್ರಚಾರ ಪಡೆ​ದ​ವರೇ ನನ್ನ ಮೇಲೆ ಕಲ್ಲು ಚಪ್ಪಡಿ ಎಳೆ​ದರು ಎಂದು ಕೆಪಿ​ಸಿಸಿ ಅಧ್ಯಕ್ಷ ಡಿ.ಕೆ.​ಶಿ​ವ​ಕು​ಮಾರ್‌ ವಿರುದ್ಧ ಪರೋ​ಕ್ಷ​ವಾಗಿ ವಾಗ್ದಾಳಿ ನಡೆ​ಸಿ​ದರು ಕುಮಾರಸ್ವಾಮಿ.

ಜೆಡಿ​ಎಸ್‌ ಬಲಿ​ಷ್ಠ​ವಾ​ಗಿದ್ದ ಕ್ಷೇತ್ರ​ಗ​ಳಲ್ಲೇ ಮೈತ್ರಿ ಸರ್ಕಾ​ರದ ಅವ​ಧಿ​ ದುರು​ಪ​ಯೋಗ ಪಡಿ​ಸಿ​ಕೊಂಡ ಕಾಂಗ್ರೆಸ್‌ ಪ್ರಾಬಲ್ಯ ಕಂಡು​ಕೊ​ಳ್ಳಲು ವೇದಿಕೆ ಸಿದ್ಧ​ಪ​ಡಿ​ಸಿ​ಕೊಂಡಿತು. ಇದೇ ಕಾರಣಕ್ಕೆ ಪಕ್ಷಕ್ಕೆ ಚುನಾ​ವ​ಣೆ​ಗ​ಳಲ್ಲಿ ಹಿನ್ನ​ಡೆ​ಯಾ​ಗು​ತ್ತಿದೆ. ನಾವು​ ಮಾಡಿದ ಲೋಪ​ಗ​ಳಿಗೆ ಪಕ್ಷದ ಮುಖಂಡರು, ಕಾರ್ಯ​ಕ​ರ್ತರು ದೋಷಿ​ಗ​ಳಿಲ್ಲ. ನನ್ನಿಂದಾ​ಗಿ​ರುವ ತಪ್ಪಿನ ಆತ್ಮಾ​ವ​ಲೋ​ಕನ ಮಾಡಿ​ಕೊಳ್ಳು​ತ್ತಿ​ದ್ದೇನೆ ಎಂದರು.

http://ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ನಡೆಯಲಿರುವ ನಿಧಿ ಸಂಗ್ರಹಕ್ಕಾಗಿ ಕರಾವಳಿಯಲ್ಲಿ ಸಾವಿರಾರು ಕಾರ್ಯಕರ್ತರು ಸಿದ್ಧರಾಗಿದ್ದಾರೆ : ಶರಣ್ ಪಂಪ್‌ವೆಲ್‌ -Vishwanews24

Vishwa News 24

Recent Posts

ಆರ್‌ಎಸ್‌ಎಸ್​ ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ – vishwanews24

ಆರ್‌ಎಸ್‌ಎಸ್​ನವರು ಹಿಂದುಗಳೇ ಅಲ್ಲ, ಕೇವಲ ಹಿಂದುತ್ವವಾದಿಗಳು: ಯತೀಂದ್ರ ಸಿದ್ದರಾಮಯ್ಯ ಮೈಸೂರು: ಗೃಹ ಸಚಿವ ಪ್ರಿಯಾಂಕ್ ಖರ್ಗೆ ನಂತರ ಸಚಿವ ಯತೀಂದ್ರ…

3 hours ago

ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ – vishwanews24

ಬೆಳ್ತಂಗಡಿ: ಎಸ್‌ಐಟಿ ಅಧಿಕಾರಿಗಳಿದ್ದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ ಮಂಗಳೂರು: ಧರ್ಮಸ್ಥಳ  ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದಎಸ್ಪಿ ಪ್ರಯಾಣಿಸುತ್ತಿದ್ದ…

4 hours ago

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ – vishwanews24

ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣ ಮರುಅಭಿವೃದ್ಧಿಗೆ ಕೇಂದ್ರದ ಗ್ನೀನ್ ಸಿಗ್ನಲ್ : ಎರಡು ಹೊಸ ಪ್ಲಾಟ್‌ಫಾರ್ಮ್ ನಿರ್ಮಾಣಕ್ಕೆ ಪ್ರಸ್ತಾವನೆ ನವದೆಹಲಿ:…

4 hours ago

ತಮಿಳುನಾಡಿನ ರೈತರಿಗೆ ಬಂಪರ್ ಕೊಡುಗೆ: 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಮಾಡಿದ ಸಿಎಂ ವಿಜಯ್ – vishwanews24

ತಮಿಳುನಾಡಿನ ರೈತರಿಗೆ ಬಂಪರ್ ಕೊಡುಗೆ: 75,000 ರೂ. ವರೆಗಿನ ಸಾಲ ಸಂಪೂರ್ಣ ಮನ್ನಾ ಮಾಡಿದ ಸಿಎಂ ವಿಜಯ್ ಚೆನ್ನೈ: ಸಿಎಂ ಸಿ.…

4 hours ago

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ – vishwanews24

ಉಡುಪಿ : ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಆರೋಪ ಆತಂಕಕಾರಿ ಬೆಳವಣಿಗೆ : ಶೀರೂರು ಶ್ರೀ ಉಡುಪಿ :…

8 hours ago

ಆರೆಸ್ಸೆಸ್ ಅನ್ನು ಹಿಂದೂ ಧರ್ಮಕ್ಕೆ ಹೋಲಿಸಿರುವುದು ಖಂಡನೀಯ: ಬಿ.ಕೆ. ಹರಿಪ್ರಸಾದ್ – vishwanews24

"ಹಿಂದೂ ಧರ್ಮವೂ ನೋಂದಣಿಯಾಗಿಲ್ಲ ಎಂಬ ಮೋಹನ್ ಭಾಗವತ್ ಅವರ ಹೇಳಿಕೆಗೆ ಬಿ.ಕೆ. ಹರಿಪ್ರಸಾದ್ ಪ್ರತಿಕ್ರಿಯೆ ಬೆಂಗಳೂರು: ಆರೆಸ್ಸೆಸ್ ಮುಖ್ಯಸ್ಥ ಮೋಹನ್…

9 hours ago