ಮಂಗಳೂರಿನ ಭಯಸಿಂಹ ನಿರ್ದೇಶನದ ತುಳು ಸಿನೆಮಾವೊಂದು ನ್ಯೂಯಾರ್ಕ್ನಿಂದ ಸದ್ದು ಮಾಡುತ್ತಿದೆ.
ಚಿತ್ರದ ಹೆಸರು ‘ಪಡ್ಡಾಯಿ’. ಪಕ್ಕಾ ತುಳುನಾಡಿನ ಕಥೆಯೊಂದನ್ನು ಇಟ್ಟುಕೊಂಡು ಶೇಕ್ಸ್ಪಿಯರ್ನ ಪ್ರಸಿದ್ಧ ಕೃತಿ ಮ್ಯಾಕ್ಬೆತ್ ನಾಟಕದಿಂದ ಸ್ಫೂರ್ತಿ ಪಡೆದು ಈ ಚಿತ್ರವನ್ನು ಮಾಡಲಾಗಿದೆ. ತುಳುನಾಡಿನ ಮೊಗವೀರ ಸಮುದಾಯದ ಬದುಕು ಬವಣೆಯನ್ನು ಈ ಸಿನೆಮಾದ ಮೂಲಕ ವಿಭಿನ್ನವಾಗಿ ಕಟ್ಟಿಕೊಡಲಾಗಿದೆ. ಅದರಲ್ಲೂ ತುಳುನಾಡಿನ ನೇಮ, ಕೋಲ, ಯಕ್ಷಗಾನ ಸಹಿತ ಎಲ್ಲ ಪ್ರಕಾರಗಳು ಈ ಸಿನೆಮಾದಲ್ಲಿ ಹಾದುಹೋಗುತ್ತವೆ. ಹೀಗಾಗಿ ಪಕ್ಕಾ ತುಳುನಾಡಿನ ಕಥೆಯಾಧಾರಿತವಾಗಿ ಪಡ್ಡಾಯಿ ಮಾಡಲಾಗಿದೆ.
ನಿತ್ಯಾನಂದ ಪೈ ಸಿನೆಮಾ ನಿರ್ಮಿಸಿದ್ದು, ಕದ್ರಿ ಮಣಿಕಾಂತ್ ಸಂಗೀತದಲ್ಲಿ ಕೈ ಜೋಡಿಸಿದ್ದಾರೆ. ಮೇ 7ರಿಂದ 12ರವರೆಗೆ ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್ನಲ್ಲಿ ಪಡ್ಡಾಯಿ ಸಿನೆಮಾ ಪ್ರದರ್ಶನಕ್ಕೆ ಅವಕಾಶ ಪಡೆದಿದೆ.
ರಂಗಭೂಮಿಯಲ್ಲಿ ಬಹಳಷ್ಟು ಹೆಸರು ಪಡೆದ ಮೋಹನ್ ಶೇಣಿ, ಬಿಂದು ರಕ್ಷಿದಿ, ಗೋಪಿನಾಥ್ ಭಟ್, ಚಂದ್ರಹಾಸ್ ಉಳ್ಳಾಲ್, ಅವಿನಾಶ್, ಪ್ರಭಾಕರ ಕಾಪಿಕಾಡ್, ರವಿ ಭಟ್, ಸದಾಶಿವ, ಸಂತೋಷ್ ಶೆಟ್ಟಿ, ಶ್ರೀನಿಧಿ ಆಚಾರ್, ವಾಣಿ, ಮಲ್ಲಿಕಾ ಸೇರಿದಂತೆ ಹಲವು ಕಲಾವಿದರು ಚಿತ್ರದಲ್ಲಿದ್ದಾರೆ. ಕರಾವಳಿಯಲ್ಲಿ ಈ ಸಿನೆಮಾ ಯಾವಾಗ ರಿಲೀಸ್ ಎಂಬುದಕ್ಕೆ ಸದ್ಯಕ್ಕೆ ಉತ್ತರ ದೊರಕಿಲ್ಲ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…