ನವದೆಹಲಿ: ವಿವಾಹಿತ ಮಹಿಳೆ ಹಾಗೂ ಆತನ ಪ್ರಿಯಕರ ಇಬ್ಬರು ಸೇರಿ ಮಹಿಳೆಯ ಪತಿಯನ್ನು ಉಸಿರುಕಟ್ಟಿಸಿ ಕೊಲೆ ಮಾಡಿದಂತಹ ಆಘಾತಕಾರಿ ಘಟನೆ ಹರ್ಯಾಣದ ಹಿಸ್ಸಾರ್ನಲ್ಲಿ ನಡೆದಿದೆ.
ಘಟನೆಯ ಹಿನ್ನೆಲೆ
32 ವರ್ಷದ ರವೀನಾ ಹಾಗೂ ಸುರೇಶ್ ಇನ್ಸ್ಟಾಗ್ರಾಮ್ನಲ್ಲಿ ಪರಿಚಯವಾಗಿದ್ದು, ಬಳಿಕ ಇಬ್ಬರು ಜೊತೆಯಾಗಿ ರೀಲ್ಸ್ ಮಾಡಲು ಶುರು ಮಾಡಿದ್ದಾರೆ. ಆದರೆ ಇದಕ್ಕೆ ರವೀನಾಳ ಗಂಡ ಹಾಗೂ ಪೋಷಕರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವಿರೋಧವನ್ನು ಕ್ಯಾರೇ ಮಾಡದೇ ಕಳೆದ ಒಂದೂವರೆ ವರ್ಷದಿಂದಲೂ ಇವರು ಜೊತೆಯಾಗಿ ಕಂಟೆಂಟ್ ಕ್ರಿಯೇಟ್ ಮಾಡುವುದನ್ನು ಮುಂದುವರೆಸಿದ್ದಾರೆ.
ಶಾರ್ಟ್ ವಿಡಿಯೋಗಳು ಹಾಗೂ ಡಾನ್ಸ್ ರೀಲ್ಸ್ನಿಂದಾಗಿ ಈಕೆಗೆ ಇನ್ಸ್ಟಾಗ್ರಾಮ್ನಲ್ಲಿ 34,000 ಫಾಲೋವರ್ಸ್ಗಳಿದ್ದರು.ಅಲ್ಲದೇ ಇತರ ಕಲಾವಿದರ ಜೊತೆಗೆ ಸೇರಿ ಆಕೆ ಡಾನ್ಸ್ ಮಾಡಿದ್ದು ಅವುಗಳ ಹಲವು ವೀಡಿಯೋಗಳು ಯೂಟ್ಯೂಬ್ನಲ್ಲೂ ಇದ್ದವು. ರೀಲ್ಸ್ ಮಾಡುವ ಹುಚ್ಚು ಹಿಡಿಸಿಕೊಂಡಿದ್ದ ರವೀನಾ ಕುಟುಂಬದ ವಿರೋಧದ ನಡುವೆಯ ತನ್ನ ಇಷ್ಟದ ರೀಲ್ಸ್ ಕೆಲಸವನ್ನು ಮುಂದುವರೆಸಿದ್ದಳು. ಇದೇ ವಿಚಾರವಾಗಿ ಈಕೆಗೂ ಗಂಡನಿಗೂ ಆಗಾಗೇ ಜಗಳಗಳು ಆಗುತ್ತಿದ್ದವು.
ಇತ್ತ ಜೊತೆಯಾಗಿ ರೀಲ್ಸ್ ಮಾಡಿ ಮಾಡಿ ರವೀನಾ ಹಾಗೂ ಸುರೇಶ್ ಮಧ್ಯೆ ಅಗತ್ಯಕ್ಕಿಂತ ಹೆಚ್ಚೇ ಬಾಂಧವ್ಯ ಬೆಳೆದಿದೆ. ಕಳೆದ ಮಾರ್ಚ್ 25ರಂದು ರವೀನಾಳ ಪತಿ ಪ್ರವೀಣ್ (35), ಇವರಿಬ್ಬರೂ ಅಕ್ರಮ ಸಂಬಂಧ ಇರುವುದನ್ನು ಪತ್ತೆಹಚ್ಚಿದ್ದ. ಇದರಿಂದ ಗಂಡ ಹೆಂಡತಿ ನಡುವಣ ಜಗಳ ತಾರಕಕ್ಕೇರಿದೆ. ಇದಾದ ನಂತರ ಇಬ್ಬರೂ ಸೇರಿ 35 ವರ್ಷದ ಪ್ರವೀಣ್ನನ್ನು ಶಾಲಿನಿಂದ ಉಸಿರುಕಟ್ಟಿಸಿ ಹತ್ಯೆ ಮಾಡಿದ್ದಾರೆ. ಇತ್ತ ಪ್ರವೀಣ್ ಮನೆಯವರು ರವೀನಾ ಬಳಿ ಪತಿಯ ಬಗ್ಗೆ ಕೇಳಿದಾಗ ಆಕೆ ತನಗೆ ಏನೂ ಗೊತ್ತಿಲ್ಲ ಎಂಬುವಂತೆ ನಾಟಕವಾಡಿದ್ದಾಳೆ.
ಇದಾದ ನಂತರ ಅದೇ ದಿನ ರಾತ್ರಿ 2.30ರ ಸುಮಾರಿಗೆ ಇಬ್ಬರು ಸೇರಿ ಪ್ರವೀಣ್ ದೇಹವನ್ನು ಬೈಕ್ನಲ್ಲಿ ಇರಿಸಿಕೊಂಡು ಹೋಗಿ ಮನೆಯಿಂದ ಆರು ಕಿಲೋ ಮೀಟರ್ ದೂರದಲ್ಲಿರುವ ಚರಂಡಿಗೆ ಎಸೆದಿದ್ದಾರೆ. ಇತ್ತ ಮಾರ್ಚ್ 28ರಂದು ಪ್ರವೀಣ್ ಶವ ಕೊಳೆತ ಸ್ಥಿತಿಯಲ್ಲಿ ಪೊಲೀಸರಿಗೆ ಸಿಕ್ಕಿದೆ. ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಸುತ್ತಮುತ್ತಲ ಹಾಗೂ ರಸ್ತೆ ಬದಿಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದು, ಅದರಲ್ಲಿ ಕಂಡು ಬಂದ ಸುಳಿವುಗಳು ಪೊಲೀಸರನ್ನು ಸೀದಾ ರವೀನಾ ಮನೆ ಮುಂದೆಯೇ ಬಂದು ನಿಲ್ಲುವಂತೆ ಮಾಡಿದೆ.
ಆಕೆಯ ಮನೆಗೆ ಹೋಗುವ ರಸ್ತೆಗಳ ಸಿಸಿಟಿವಿ ದೃಶ್ಯಗಳಲ್ಲಿ ಹೆಲ್ಮೆಟ್ ಧರಿಸಿ ಬೈಕ್ನಲ್ಲಿ ಬಂದ ವ್ಯಕ್ತಿಯೊಬ್ಬ ಬೈಕ್ ಬಿಡುತ್ತಿದ್ದರೆ ರವೀನಾ ಮುಖ ಮುಚ್ಚಿಕೊಂಡು ಹಿಂಬದಿ ಕುಳಿತು ಸವಾರಿ ಮಾಡುತ್ತಿರುವುದು ಕಂಡುಬಂದಿದೆ. ಪ್ರವೀಣ್ ಮೃತದೇಹ ಬೈಕ್ ರೈಡರ್ ಮತ್ತು ಹಿಂಬದಿ ಸವಾರರ ಮಧ್ಯದಲ್ಲಿತ್ತು. ಸುಮಾರು ಎರಡು ಗಂಟೆಗಳ ನಂತರ, ಆಕೆ ಅದೇ ಸವಾರನೊಂದಿಗೆ ಅದೇ ಬೈಕ್ನಲ್ಲಿ ಹಿಂಬದಿ ಕುಳಿತು ಮನೆಗೆ ಮರಳಿದ್ದಳು. ಈ ಸಮಯದಲ್ಲಿ, ಮಧ್ಯದಲ್ಲಿರುವ ಶವ ಕಾಣೆಯಾಗಿತ್ತು.
ನಂತರ ಪೊಲೀಸರು ರವೀನಾ ಮತ್ತು ಸುರೇಶ್ ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮಹಿಳೆ ರವೀನಾ ಮತ್ತು ಪ್ರವೀಣ್ ಅವರಿಗೆ ಆರು ವರ್ಷದ ಮಗನಿದ್ದು, ಈಗ ತನ್ನ ಅಜ್ಜ ಸುಭಾಷ್ ಮತ್ತು ಚಿಕ್ಕಪ್ಪ ಸಂದೀಪ್ ಅವರೊಂದಿಗೆ ವಾಸಿಸುತ್ತಿದ್ದಾನೆ. ಅಮ್ಮ ಮಾಡಿದ ಕೃತ್ಯದಿಂದಾಗಿ ಈಗ ಆರು ವರ್ಷದ ಮಗ ಅತ್ತ ಅಪ್ಪನೂ ಇಲ್ಲದೇ ಅಮ್ಮನೂ ಇಲ್ಲದೇ ತಬ್ಬಲಿಯಾಗಿದ್ದಾನೆ. ಇತ್ತೀಚೆಗೆ ವಿವಾಹಿತರ ಅಕ್ರಮ ಸಂಬಂಧಗಳು ಹೆಚ್ಚಾಗುತ್ತಿದ್ದು, ಪತಿ ಪತ್ನಿಯನ್ನು ಪತ್ನಿ ಪತಿಯನ್ನು ಕೊಲ್ಲುವಂತಹ ಕೀಳು ಮಟ್ಟಕ್ಕೆ ಇಳಿಯುತ್ತಿರುವುದು ಅಲ್ಲಲ್ಲಿ ನಡೆಯುತ್ತಿದೆ.
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…
ಉಡುಪಿ ಜಿಲ್ಲೆಯ ಐದು ಗ್ರಾಮ ಪಂಚಾಯತ್ಗಳು ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಉಡುಪಿ: ಕೇಂದ್ರ ಸರ್ಕಾರದ ವಿವಿಧ ವಿಭಾಗಗಳ ಅಡಿಯಲ್ಲಿ ನೀಡಲಾಗುವ…
ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಹೊಸದಿಲ್ಲಿ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಟೆನಿಸ್ ಆಟಗಾರ…
ಬೀದರ್ : ಮಳೆ ಆರ್ಭಟ - ಸಿಡಿಲು ಬಡಿದು ಯುವಕ ಸಾವು ಬೀದರ್: ಸಿಡಿಲು ಬಡಿದು ಯುವಕನೊಬ್ಬ ಮೃತಪಟ್ಟ ಘಟನೆ ಔರಾದ್…
ಬೆಳ್ತಂಗಡಿ: ಏಕಾಏಕಿ ತೆರೆಯಲ್ಪಟ್ಟ ಬಸ್ಸಿನ ಬಾಗಿಲು ; ನಿಯಂತ್ರಣ ತಪ್ಪಿ ರಸ್ತೆಗೆ ಎಸೆಯಲ್ಪಟ್ಟು ಇಬ್ಬರು ವಿದ್ಯಾರ್ಥಿನಿಯರಿಗೆ ಗಾಯ ಬೆಳ್ತಂಗಡಿ: ಚಲಿಸುತ್ತಿದ್ದ ಬಸ್ಸಿನಿಂದ…