Featured

ರೈಲು ಟಿಕೆಟ್‌ಗೆ ಹೊಸ ನಿಯಮ: ಪ್ರಯಾಣಿಕರಿಗೆ ಭಾರತೀಯ ರೈಲ್ವೆಯಿಂದ ಹೊಸ ಮಾರ್ಗಸೂಚಿ ಪ್ರಕಟ – vishwanews24

ರೈಲಿನಲ್ಲಿ ಸಂಚರಿಸುವ ಮುನ್ನ ಹೊಸ ನಿಯಮ ತಿಳ್ಕೊಳ್ಳಿ : ಇನ್ಮುಂದೆ ಮೊಬೈಲ್​ನಲ್ಲಿ ಟಿಕಟ್ ತೋರಿಸಿದರೆ ದಂಡ ಫಿಕ್ಸ್

ನವದೆಹಲಿ :ಡಿಜಿಟಲ್ ಟಿಕೆಟ್‌ಗಳ ದುರುಪಯೋಗವನ್ನು ತಡೆಯುವ ಕ್ರಮಗಳ ಭಾಗವಾಗಿ, ವಾಟ್ಸಾಪ್ ಮೂಲಕ ಫಾರ್ವರ್ಡ್  ಮಾಡಲಾದ ಸ್ಕ್ರೀನ್‌ಶಾಟ್‌ಗಳು, ಛಾಯಾಚಿತ್ರಗಳು, ಪಿಡಿಎಫ್ ಪ್ರತಿಗಳು ಅಥವಾ ಟಿಕೆಟ್‌ಗಳನ್ನು ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದೆ.

ಪರಿಷ್ಕೃತ ಮಾರ್ಗಸೂಚಿಗಳ ಅಡಿಯಲ್ಲಿ, ಡಿಜಿಟಲ್ ಕಾಯ್ದಿರಿಸದ ಟಿಕೆಟ್‌ಗಳೊಂದಿಗೆ ಪ್ರಯಾಣಿಸುವ ಪ್ರಯಾಣಿಕರು ಟಿಕೆಟ್ ಪರಿಶೀಲಿಸುವ ಸಿಬ್ಬಂದಿ ವಿನಂತಿಸಿದಾಗ ರೈಲ್ ಒನ್ ಅಪ್ಲಿಕೇಶನ್‌ನಲ್ಲಿ ಮೂಲ ಟಿಕೆಟ್ ಅನ್ನು ಪ್ರಸ್ತುತಪಡಿಸಬೇಕು. ಟಿಕೆಟ್ ಬುಕ್‌ ಮಾಡಲು ಬಳಸುವ ಅದೇ ಮೊಬೈಲ್ ಫೋನ್ ಮತ್ತು ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ ಡಿಜಿಟಲ್ ಟಿಕೆಟ್‌ಗಳು ಲಭ್ಯವಿರಬೇಕು ಎಂದು ರೈಲ್ವೆ ಆಡಳಿತವು ಒತ್ತಿ ಹೇಳಿದೆ.

ಟಿಕೆಟ್‌ಗಳ ಸ್ಕ್ರೀನ್‌ಶಾಟ್‌ಗಳನ್ನು ಸ್ವೀಕರಿಸಲಾಗುವುದಿಲ್ಲ.ಟಿಕೆಟ್‌ಗಳ ಛಾಯಾಚಿತ್ರಗಳು ಅಮಾನ್ಯವಾಗಿವೆ. ಪ್ರಯಾಣಕ್ಕಾಗಿ ಪಿಡಿಎಫ್ ಪ್ರತಿಗಳನ್ನು ಬಳಸಲಾಗುವುದಿಲ್ಲ. ವಾಟ್ಸಾಪ್ ಅಥವಾ ಯಾವುದೇ ಇತರ ಸಂದೇಶ ವೇದಿಕೆಯ ಮೂಲಕ ಫಾರ್ವರ್ಡ್ ಮಾಡಲಾದ ಟಿಕೆಟ್‌ಗಳನ್ನು ಮಾನ್ಯವೆಂದು ಪರಿಗಣಿಸಲಾಗುವುದಿಲ್ಲ. ಟಿಕೆಟ್ ಬುಕ್ ಮಾಡಿದ ಮೊಬೈಲ್ ಫೋನ್‌ನಲ್ಲಿ ರೈಲ್ ಒನ್ ಅಪ್ಲಿಕೇಶನ್ ಮೂಲಕವೇ ಟಿಕೆಟ್ ಲಭ್ಯವಿರಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ರೈಲ್ವೆ ನಿಯಮಗಳ ಪ್ರಕಾರ, ‘Rail One’ ಆ್ಯಪ್‌ನಲ್ಲಿ ಬುಕ್ ಮಾಡಿದ ಡಿಜಿಟಲ್ ಟಿಕೆಟ್‌ಗಳನ್ನು ಮೊಬೈಲ್‌ನಲ್ಲಿ ಮಾತ್ರ ತೋರಿಸಬೇಕು.ಸ್ಕ್ರೀನ್‌ಶಾಟ್, ಫೋಟೋ, ಪಿಡಿಎಫ್ ಅಥವಾ ವಾಟ್ಸಾಪ್ ಫಾರ್ವರ್ಡ್‌ಗಳು ಮಾನ್ಯವಾಗಿರುವುದಿಲ್ಲ. ಫೋನ್‌ನಲ್ಲಿ ಬ್ಯಾಟರಿ ಇಟ್ಟುಕೊಳ್ಳುವುದು ಕಡ್ಡಾಯ. ಟಿಕೆಟ್ ರೈಲು ಹೊರಡುವ ಮುನ್ನವೇ ಬುಕ್ ಆಗಿರಬೇಕು.

ಡಿಜಿಟಲ್ ಟಿಕೆಟ್‌ಗಳ ಪ್ರಮುಖ ನಿಯಮಗಳು ಇಲ್ಲಿವೆ:

ಅಸಲಿ ಆ್ಯಪ್ ಕಡ್ಡಾಯ: ಟಿಕೆಟ್ ಪರಿಶೀಲಕರ ಬಳಿ (TTE) ‘Rail One’ ಆ್ಯಪ್‌ನಲ್ಲಿರುವ ಅಸಲಿ ಟಿಕೆಟ್ ಅನ್ನು ಮಾತ್ರ ತೋರಿಸಬೇಕು.ಸ್ಕ್ರೀನ್‌ಶಾಟ್ ಇನ್‌ವ್ಯಾಲಿಡ್: ಟಿಕೆಟ್‌ನ ಸ್ಕ್ರೀನ್‌ಶಾಟ್‌ಗಳು, ಫೋಟೋಗಳು, ಪಿಡಿಎಫ್ ಪ್ರತಿಗಳು ಅಥವಾ ವಾಟ್ಸಾಪ್ ಮೂಲಕ ಬೇರೆಯವರಿಗೆ ಕಳುಹಿಸಿದ ಪ್ರತಿಗಳನ್ನು ಪ್ರಯಾಣದ ಪುರಾವೆಯಾಗಿ ಸ್ವೀಕರಿಸಲಾಗುವುದಿಲ್ಲ.

ಫೋನ್ ಚಾರ್ಜ್ ಇರಲಿ: ಪ್ರಯಾಣದುದ್ದಕ್ಕೂ ನಿಮ್ಮ ಬಳಿ ಮೊಬೈಲ್ ಇರಬೇಕು. ಫೋನ್ ಸ್ವಿಚ್ ಆಫ್ ಆದರೆ ಅಥವಾ ಟಿಕೆಟ್ ತೋರಿಸಲು ಸಾಧ್ಯವಾಗದಿದ್ದರೆ ದಂಡ ವಿಧಿಸಲಾಗುತ್ತದೆ.

ರೈಲು ಹೊರಡುವ ಮುನ್ನ ಬುಕಿಂಗ್: ಟಿಕೆಟ್ ಅನ್ನು ರೈಲು ನಿಲ್ದಾಣದಿಂದ ಹೊರಡುವ ಮುನ್ನವೇ ಖರೀದಿಸಬೇಕು. ರೈಲು ಹೊರಟ ನಂತರ ಬುಕ್ ಮಾಡಿದ ಟಿಕೆಟ್ ಗಳು ಅಮಾನ್ಯವಾಗಿರುವುದಿಲ್ಲ.

Vishwa News 24

Recent Posts

ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ – vishwanews24

ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ ಮಂಗಳೂರು: ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಆ. 25ರ ಮಂಗಳವಾರ…

10 hours ago

ಬದುಕಿದ್ದಾಗ ಭಿಕ್ಷುಕಿಯಾಗಿದ್ದ ವೃದ್ಧೆ ಸತ್ತ ಮೇಲೆ ಲಕ್ಷಾಧಿಪತಿ ..- vishwanews24

ಮೃತಪಟ್ಟ ಭಿಕ್ಷುಕಿಯ ಮನೆಯಲ್ಲಿ 30 ಲಕ್ಷ ರೂ. ನಗದು ಪತ್ತೆ ಮಂಡ್ಯ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದು,…

13 hours ago

ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ – vishwanews24

ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ ಉಡುಪಿ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ…

13 hours ago

ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ.. ಕಡತಗಳ ಪರಿಶೀಲನೆ – vishwanews24

ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್‌ ಭೇಟಿ.. ಕಡತಗಳ ಪರಿಶೀಲನೆ ಕಾರ್ಕಳ: ಸಾರ್ವಜನಿಕರ ಅರ್ಜಿ ಹಾಗೂ ಕಡತಗಳ ವಿಲೇವಾರಿ ಬಗ್ಗೆ…

13 hours ago

ಉಡುಪಿ : 25 ಗಂಟೆಗಳ ಕಾಲ ಗಾಯನ ; ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ ದಾಖಲೆ – vishwanews24

25 ಗಂಟೆಗಳ ಗಾಯನದಿಂದ ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್‌ ಬುಕ್‌ಆಫ್‌ ವರ್ಲ್ಡ್ ರೆಕಾರ್ಡ್‌ ದಾಖಲೆ 'ಗೀತ ಗಂಗೋತ್ರಿʼ ಬಿರುದು ನೀಡಿ…

13 hours ago

ಕಾಪು ಪುರಸಭೆಗೆ ಲೋಕಾಯುಕ್ತ ದಾಳಿ – vishwanews24

ಕಾಪು ಪುರಸಭೆಗೆ ಲೋಕಾಯುಕ್ತ ದಾಳಿ [gallery columns="1" size="large" ids="117027,117028,117029,117030,117031"]

14 hours ago