ಉಚ್ಚಿಲ: ಗ್ರಾಮಭಿವೃದ್ಧಿಯ ಹರಿಕಾರ ಎಂದೇ ಖ್ಯಾತಿ ಪಡೆದ ಬೆಳಪು ಗ್ರಾಮ ಪಂಚಾಯತ್ ಸದಸ್ಯ ಮಾಜಿ ಅಧ್ಯಕ್ಷ ಕಾಂಗ್ರೇಸ್ ಮುಖಂಡ ಡಾ ದೇವಿಪ್ರಸಾದ್ ಶೆಟ್ಟಿ ಪ್ರತಿಸಲವೂ ಹೊಸ ವಿಷಯಗಳ ಬಗ್ಗೆ ವಿಮರ್ಶೆಗೆ ಸಿಗುವ ವ್ಯಕ್ತಿ. ಕಳೆದ ಹಲವಾರು ವರುಷಗಳ ಸತತ ಪ್ರಯತ್ನದಿಂದ ಕುಗ್ರಾಮವಾಗಿದ್ದ ಬೆಳಪುವಿಗೆ ಹೊಸ ಸ್ಪರ್ಶ ನೀಡಿ ಬೆಳಕು ತೋರಿದ ಹರಿಕಾರ ಇಂದು ರಾಷ್ಟೀಯ ಮಟ್ಟದಲ್ಲಿ ಈ ಗ್ರಾಮವನ್ನು ಕೊಂಡಾಡುವಂತೆ ಮಾಡಿರುತ್ತಾರೆ.
ಅದಕ್ಕೆ ಪೂರಕವಾಗಿ ಈ ಬಾರಿ ಹೊಸ ಯೋಜನೆ ಆರಂಭಗೊಂಡು ಕಳೆದ ಕೆಲವು ದಿನಗಳ ಹಿಂದೆ ದೇಸಿ ಗೋವುಗಳಿಗೆ ನಿರ್ಮಾಣದ ಕನಸು ಹೊತ್ತ ಶೆಟ್ಟಿಯ ಗೋಶಾಲೆ ಸೋಮವಾರದಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ “ಗೋಗೃಹ” ಪ್ರವೇಶ ಕಂಡಿದೆ.
ಸುಮಾರು ನೂರಕ್ಕು ಅಧಿಕ ದೇಸಿ ಗೋವುಗಳಿಗೆ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಗೋಶಾಲೆಯಲ್ಲಿ ಅತ್ಯಾಧುನಿಕ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.ಫ್ಯಾನ್,ಮ್ಯಾಟ್, ಸೇರಿದಂತೆ ಗೋವುಗಳ ಸೇವೆಗಾಗಿ ಹತ್ತಾರು ಪರಿಚಾರಕರು ಕೂಡ ನೇಮಕವಾಗಿದ್ದಾರೆಂಬುದು ವಿಶೇಷ.
ವಿಶೇಷ ಭಧ್ರತೆಯ ನಿಟ್ಟಿನಲ್ಲಿ ಸಿಸಿ ಕ್ಯಾಮರಾ ಸೇರಿದಂತೆ ರಾತ್ರಿ ಹಗಳು ಪಾಲಿಯಾಲ್ಲಿ ಕೆಲಸ ನಿರ್ವವಹಿಸಲು ವಾಚ್ ಮ್ಯಾನ್ ಮತ್ತು ಕೊಳಲು ಧ್ವನಿ ಹಾಗೂ ಭಕ್ತಿಗೀತೆ ಸ್ವಾಧಿಸಲು ಧ್ವನಿವರ್ದಕಗಳನ್ನು ಈ ಗೋಶಾಲೆಯಲ್ಲಿ ಅಳವಡಿಕೆಯಾಗಿದೆ.ಪ್ರತಿದಿನ ಬೆಳಗ್ಗೆ ಹಾಗು ಸಂಜೆ ದೇವಿಪ್ರಸಾದ್ ಶೆಟ್ಟಿ ಈ ಗೋಶಾಲೆ ಭೇಟಿ ನೀಡಿ ಗೋವುಗಳ ಜತೆ ಸಮಯ ಕಳೆದುಬರುವುದು ರೂಢಿಯಾಗಿದೆ ಅನ್ನುತ್ತಾರೆ ಅಲ್ಲಿನ ಗೊಲ್ಲ.
ಸುಮಾರು ಲಕ್ಷ ರೂಪಾಯಿ ವ್ಯಯಿಸಿ ನಿರ್ಮಾಣವಾಗಿರುವ ಈ ಗೋಶಾಲೆ ಇದರ ಗೋಶಾಲೆಗಿಂತ ಅತ್ಯಂತ ಮಾದಿಯಾಗಿದೆಂಬುದು ಇಲ್ಲಿನ ವಿಶೇಷ.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…