ಲಕ್ನೊ, : ಮದುವೆಯಾಗುವ ಏಕೈಕ ಉದ್ದೇಶದಿಂದ ಬಲವಂತವಾಗಿ ಮತಾಂತರ ಮಾಡುವುದನ್ನು ತಡೆಯುವ ಸಲುವಾಗಿ ಉತ್ತರ ಪ್ರದೇಶ ಸರಕಾರ ಅತ್ಯಂತ ಕಠಿಣವಾದ ಕಾನೂನು ಜಾರಿಗೊಳಿಸಿದೆ. ಲವ್ ಜೆಹಾದ್ ವಿರುದ್ಧ ತರಲಾದ ಕಾನೂನು ಇದು ಎನ್ನಲಾಗಿದೆ. ಬಲವಂತದ ಮತಾಂತರಕ್ಕೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಅಂಶ ಈ ಕಾನೂನಿನಲ್ಲಿದೆ.
ಯೋಗಿ ಆದಿತ್ಯನಾಥ ಸರ್ಕಾರ ಕರಡು ಸುಗ್ರೀವಾಜ್ಞೆಗೆ ಅನುಮೋದನೆಯನ್ನು ನೀಡಿದೆ. ವಿಶೇಷವೆಂದರೆ, ಈ ಸುಗ್ರೀವಾಜ್ಞೆಯಲ್ಲಿ ಲವ್ ಜೆಹಾದ್ ಎಂಬ ಶಬ್ದವನ್ನು ಬಳಸಿಲ್ಲ. ಬದಲಾಗಿ ಕರಡು ಮಸೂದೆಯನ್ನು “ಮತಾಂತರ ತಡೆಯುವ ವಿಧಿ”ಎಂದು ಹೆಸರಿಸಲಾಗಿದೆ.
ಅನ್ಯಧರ್ಮೀಯರನ್ನು ಪ್ರೇಮಿಸಿ ವಿವಾಹವಾಗುವುದಕ್ಕೆ ಧಾರ್ಮಿಕ ಮತಾಂತರವಾಗುವುದನ್ನು ಬಿಜೆಪಿ ನಾಯಕರು ಲವ್ ಜಿಹಾದ್ ಎಂದು ಹೇಳುತ್ತಿದ್ದು, ಅದನ್ನು ತಡೆಗಟ್ಟಲು ಉತ್ತರ ಪ್ರದೇಶ ಸರ್ಕಾರ ಕಠಿಣ ಕಾನೂನನ್ನು ಜಾರಿಗೊಳಿಸಿದೆ.
ಮಂಗಳವಾರ ನಡೆದ ಸಂಪುಟ ಸಭೆ ಈ ಕರಡನ್ನು ಅಂಗೀಕರಿಸಿದೆ. ಮಸೂದೆಯನ್ನು ಮತಾಂತರ ವಿರೋಧಿ ಕಾನೂನು ಎಂದು ಪರಿಗಣಿಸಲಾಗಿದೆ ಮತ್ತು ಇದು ಜನರನ್ನು ಬಲವಂತವಾಗಿ, ಪ್ರೀತಿಯ ನೆಪದಲ್ಲಿ ಅಥವಾ ಬೆದರಿಕೆ ಹಾಕುವ ಮೂಲಕ ಇತರ ಧರ್ಮಗಳಿಗೆ ಪರಿವರ್ತಿಸುವುದನ್ನು ತಡೆಯುತ್ತದೆ.
ಲವ್ ಜಿಹಾದ್ ಎಂಬ ಪದವನ್ನು ಮಸೂದೆಯಲ್ಲಿ ಬಳಸಲಾಗಿಲ್ಲ ಮತ್ತು ಎಲ್ಲಾ ಧರ್ಮಗಳಿಗೆ ಸಂಬಂಧಿಸಿದ ಮತಾಂತರಗಳನ್ನು ಹೊಸ ಕಾನೂನಿನ ವ್ಯಾಪ್ತಿಗೆ ತರಲಾಗುವುದು. ನಿಖರವಾಗಿ ಹೇಳಬೇಕೆಂದರೆ, ಅದು ಕೇವಲ ಹಿಂದೂ-ಮುಸ್ಲಿಂ ಮತಾಂತರಗಳು ಅಥವಾ ವಿವಾಹದ ನಿರ್ದಿಷ್ಟ ಉದ್ದೇಶದ ಮತಾಂತರಗಳ ಬಗ್ಗೆ ಗಮನ ಹರಿಸಿಲ್ಲ ಎಂದು ಕಾನೂನು ಆಯೋಗದ ಮುಖ್ಯಸ್ಥ ಜಸ್ಟಿಸ್ ಆದಿತ್ಯ ಮಿತ್ತಲ್ ಹೇಳಿದ್ದಾರೆ.
ಒಂದು ವೇಳೆ ಸಮುದಾಯವನ್ನೇ ಮತಾಂತರ ಮಾಡಲು ಮುಂದಾದರೆ 3-10 ವರ್ಷ ಜೈಲು ಮತ್ತು50,000 ದಂಡ ವಿಧಿಸಬಹುದಾಗಿದೆ. ಒಬ್ಬ ವ್ಯಕ್ತಿ ಮತಾಂತರಗೊಂಡು ಮದುವೆಯಾಗಲು ಬಯಸಿದರೆ ಆತ ಸಂಬಂಧಿಸಿದ ಅಧೀಕಾರಿಯ ಅನುಮತಿಯನ್ನು ಮದುವೆಗೂ ಎರಡೂ ತಿಂಗಳು ಮುನ್ನ ಪಡೆದುಕೊಳ್ಳಬೇಕಾಗುವುದು.
ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…
ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…
ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…
ಪುತ್ತೂರು: ಕೆಎಸ್ಆರ್ಟಿಸಿ ಬಸ್ ಮತ್ತು ಬೈಕ್ ನಡುವೆ ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…
ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…
ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…