ನಾಸಿಕ್/ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ “ಯುವ ನ್ಯಾಯ’, “ನಾರಿ ನ್ಯಾಯ’ದ ಬಳಿಕ ಈಗ ಕಾಂಗ್ರೆಸ್ ರೈತರ ಓಲೈಕೆಗೆ ಮುಂದಾಗಿದೆ. ಅದಕ್ಕಾಗಿ “ರೈತ ನ್ಯಾಯ’ದ ಹೆಸರಿನಲ್ಲಿ “ಐದು ಗ್ಯಾರಂಟಿ’ ಗಳನ್ನು ಗುರುವಾರ ಪ್ರಕಟಿಸಿದೆ. ಈ ಪೈಕಿ ಅಗತ್ಯವಿರುವ ಕೃಷಿ ಸಾಲಮನ್ನಾ ಮೊತ್ತವನ್ನು ನಿರ್ಧ
ರಿಸುವುದಕ್ಕಾಗಿ “ಕೃಷಿ ಸಾಲ ಮನ್ನಾ ಆಯೋಗ’ ಸೃಷ್ಟಿ ಮತ್ತು “ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಗೆ ಕಾನೂನು ಮಾನ್ಯತೆ’ ನೀಡುವುದು ಪಕ್ಷದ ಪ್ರಮುಖ ಭರವಸೆಯಾಗಿದೆ.
ಕನಿಷ್ಠ ಬೆಂಬಲ ಬೆಲೆಗಾಗಿ ರೈತರು “ದಿಲ್ಲಿ ಚಲೋ’ ಕಾರ್ಯಕ್ರಮ ಹಮ್ಮಿ ಕೊಂಡಿರುವಂತೆಯೇ ಈ ಬೆಳವಣಿಗೆ ನಡೆದಿದೆ. ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಈ ಐದು ಗ್ಯಾರಂಟಿಗಳನ್ನು ಒಳಗೊಂಡಿರುವ ಕಿಸಾನ್ ನ್ಯಾಯ (ರೈತ ನ್ಯಾಯ) ಪ್ರಕಟಿಸಿದ್ದಾರೆ. ಇದೇ ವೇಳೆ ನಾಸಿಕ್ನಲ್ಲಿ ಮಾತನಾಡಿದ ಅವರು ದೇಶದ ರೈತ ವರ್ಗವನ್ನು ಜಿಎಸ್ಟಿ ಯಿಂದ ಹೊರಗಿಡುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಐಎನ್ಡಿಐಎ ಒಕ್ಕೂಟದ ಸರಕಾರ ರೈತರ ಪರವಾಗಿ ಕೆಲಸ ಮಾಡಲಿದೆ ಎಂದು ಹೇಳಿದ್ದಾರೆ.
ದೇಶದ ಅನ್ನದಾತರ ಎಲ್ಲ ಸಮಸ್ಯೆಗಳನ್ನು ಬೇರು ಸಮೇತ ಕಿತ್ತೆಸೆಯುವ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ನೀಡಲಿದೆ. ಬೆವರು ಸುರಿಸಿ, ಉಳುಮೆ ಮಾಡುವ ರೈತರ ಬದುಕನ್ನು ಸಂತೋಷಗೊಳಿಸುವ ಗುರಿಯನ್ನು ಕಾಂಗ್ರೆಸ್ ಹಾಕಿಕೊಂಡಿದೆ. ಐತಿಹಾಸಿಕ ಈ ಐದು ನಿರ್ಧಾರಗಳನ್ನು ಕೈಗೊಳ್ಳಲಾಗಿದೆ ಎಂದು ರಾಹುಲ್ ಗಾಂಧಿ ಅವರು ಟ್ವೀಟ್ ಮಾಡಿದ್ದಾರೆ.
ರೈತ ನ್ಯಾಯದ 5 ಗ್ಯಾರಂಟಿಗಳು
1 .ಕನಿಷ್ಠ ಬೆಂಬಲ ಬೆಲೆಗೆ ಕಾನೂನು ಮಾನ್ಯತೆ
ಸ್ವಾಮಿನಾಥನ್ ಶಿಫಾರಸುಗಳ ಅನ್ವಯ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಗೆ ಕಾನೂನು ಮಾನ್ಯತೆ.
2. ಕೃಷಿ ಸಾಲ ಮನ್ನಾ ಆಯೋಗ
ರೈತರ ಸಾಲ ಮನ್ನಾ ಮತ್ತು ಮನ್ನಾ ಮೊತ್ತವನ್ನು ನಿರ್ಧ ರಿಸುವುದಕ್ಕಾಗಿ ಕೃಷಿ ಸಾಲಮನ್ನಾ ಶಾಶ್ವತ ಆಯೋಗ ರಚನೆ.
3 .ವಿಮಾ ಗ್ಯಾರಂಟಿ
ಬೆಳೆ ನಾಶವಾದ ಸಂದರ್ಭದಲ್ಲಿ 30 ದಿನದೊಳಗೇ ರೈತರ ಖಾತೆಗಳಿಗೆ ನೇರವಾಗಿ ಹಣ. ಈ ಸಂಬಂಧ ವಿಮಾ ಯೋಜನೆ ಮರುವಿನ್ಯಾಸ.
4 .ಹೊಸ ಆಮದು-ರಫ್ತು ನೀತಿ
ರೈತರ ಹಿತಾಸಕ್ತಿಗಳನ್ನು ಗಮನದಲ್ಲಿ ಇರಿಸಿಕೊಂಡು ಹೊಸ ಆಮದು-ರಫ್ತು ನೀತಿ ಜಾರಿ.
5. ಜಿಎಸ್ಟಿ ಮುಕ್ತ ರೈತ
ಕೃಷಿ ಉತ್ಪನ್ನಗಳನ್ನು ಜಿಎಸ್ಟಿ ಯಿಂದ ಹೊರಗಿಡಲು ಜಿಎಸ್ಟಿಗೆ ತಿದ್ದುಪಡಿಯ ಗ್ಯಾರಂಟಿ.
ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…
ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು :…
ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…
ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…
ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್ಪೋರ್ಟ್…
ದೆಹಲಿ-ಪುಣೆ ಸ್ಪೈಸ್ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್ಜೆಟ್ (Spice Jet) ವಿಮಾನದಲ್ಲಿ…