ಹೈದರಾಬಾದ್ : ಹಸೆ ಮಣೆ ಏರಿದ 23ರ ಹರೆಯದ ನೂತನ ವಧುವಿಗೆ ವರನು ಮಂಗಲ ಸೂತ್ರ ಕಟ್ಟಿದ ಒಡನೆಯೇ, ವಧು ಮದುವೆ ಮಂಟಪದಲ್ಲಿ ಹೃದಯಾಘಾತದಿಂದ ಕುಸಿದು ಬಿದ್ದು ಮೃತ ಪಟ್ಟ ಕರುಣಾಜನಕ ಘಟನೆ ತೆಲಂಗಾಣ ಪಟ್ಟಣದಲ್ಲಿ ನಡೆದಿದೆ.
ತೆಲಂಗಾಣದ ಕರ್ನೂಲ್ ಜಿಲ್ಲೆಯ ಅಚಾಮ್ಪೆಟ್ ಪಟ್ಟಣದಲ್ಲಿ ಈ ದುರ್ಘಟನೆ ನಡೆಯಿತು. ಮೃತ ಪಟ್ಟ ವಧುವಿನ ಹೆಸರು ಕೊಂಡಿ ನಿರಂಜನಮ್ಮ ಅಲಿಯಾಸ್ ಲಕ್ಷ್ಮೀ. ವರ ವೆಂಕಟೇಶ್ ಅವರು ಮಂಗಲ ಸೂತ್ರ ಕಟ್ಟಿದ ಒಡನೆಯೇ ವಧು ನಿರಂಜನಮ್ಮ ಹೃದಯಾಘಾತಕ್ಕೆ ಗುರಿಯಾಗಿ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಮೃತಪಟ್ಟರು. ಮದುವೆ ಸಮಾರಂಭವನ್ನು ವಧುವಿನ ಮನೆಯಲ್ಲೇ ಏರ್ಪಡಿಸಲಾಗಿತ್ತು.
ವರನು ತಾಳಿ ಕಟ್ಟಿದ ಬಳಿಕ ಮನೆಯವರೆಲ್ಲ ನೂತನ ವಧು-ವರನ ಮೇಲೆ ಅಕ್ಷತೆ ಹಾಕಿದ ಬಳಿಕ ಪುರೋಹಿತರು ಅರುಂಧತಿ ನಕ್ಷತ್ರ ನೋಡಲು ಎದ್ದೇಳಿ ಎಂದು ಹೇಳಿದರು. ಆದರೆ ಅಷ್ಟರೊಳಗಾಗಿ ಮದುವೆ ಮಂಟಪದಲ್ಲೇ ಕುಸಿದು ಬಿದ್ದ ವಧು ನಿರಂಜನಮ್ಮ ಮೇಲೇಳಲೇ ಇಲ್ಲ. ಒಡನೆಯೇ ಮನೆಯವರು ವಧುವನ್ನು ಆಸ್ಪತ್ರೆಗೆ ಒಯ್ದರು. ಆದರೆ ಆಕೆ ಅದಾಗಲೇ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ವೈದ್ಯರು ಪ್ರಕಟಿಸಿದರು.
ವಧುವಿನ ಹಠಾತ್ ಸಾವಿಗೆ ಎರಡೂ ಕಡೆಯವರು ಯಾವುದೇ ಸಂದೇಹ ವ್ಯಕ್ತಪಡಿಸಿಲ್ಲ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಮಲ್ಪೆ : ಸೈಂಟ್ಮೇರೀಸ್ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…
ಜೂನ್ 21ರಂದು ನೀಟ್ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್ 21 ರಂದು ನೀಟ್–ಯುಜಿ ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…