ಬೆಂಗಳೂರು: ಗ್ರಾಹಕರಿಗೆ ಹೆಚ್ಚು ಸುರಕ್ಷತೆಯ ನೂತನ ಇಎಂವಿ ಚಿಪ್ನ ಎಟಿಎಂ ಕಾರ್ಡ್ಗಳನ್ನು ನೀಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸೇರಿದಂತೆ ಬಹುತೇಕ ಬ್ಯಾಂಕ್ಗಳು ಮುಂದಾಗಿವೆ. ಗ್ರಾಹಕರಿಂದ ಹಳೆಯ ಮ್ಯಾಗ್ನೆಟಿಕ್ ಸ್ಟ್ರೈಪ್ನ ಎಟಿಎಂ ಕಾರ್ಡ್(ಡೆಬಿಟ್ ಕಾರ್ಡ್) ಮತ್ತು ಕ್ರೆಡಿಟ್ ಕಾರ್ಡ್ ವಾಪಸ್ ಪಡೆದು, ಹೊಸ ಇಎಂವಿ ಕಾರ್ಡ್ಗಳ ನೀಡುವ ಪ್ರಕ್ರಿಯೆ ಚಾಲ್ತಿಯಲ್ಲಿದೆ.
ಹೆಚ್ಚುತ್ತಿರುವ ಡಿಜಿಟಲ್ ವಂಚನೆ ತಡೆಯುವ ನಿಟ್ಟಿನಲ್ಲಿ ಎಲ್ಲ ಗ್ರಾಹಕರಿಗೂ ಕೇವಲ ಇಎಂವಿ ಚಿಪ್ನ ಕಾರ್ಡ್ಗಳನ್ನು ಡಿ.31ರೊಳಗೆ ನೀಡುವಂತೆ ಆರ್ಬಿಐ ನಿರ್ದೇಶನ ನೀಡಿತ್ತು. ಇದರನ್ವಯ ಬ್ಯಾಂಕ್ಗಳು ಕ್ರಮ ಕೈಗೊಂಡಿವೆ. ”ಡಿ.31ರೊಳಗೆ ನಿಮ್ಮಲ್ಲಿನ ಹಳೆಯ ಮ್ಯಾಗ್ನೆಟಿಕ್ ಸ್ಟ್ರೈಪ್ನ ಕಾರ್ಡ್ಗಳನ್ನು ವಾಪಸ್ ಮಾಡಿ, ಇಎಂವಿ ಚಿಪ್ನ ಕಾರ್ಡ್ಗಳನ್ನು ಪಡೆಯಿರಿ. ಇಲ್ಲದೇ ಹೋದರೆ, ಡಿ.31ರ ಬಳಿಕ ನಿಮ್ಮ ಹಳೆಯ ಕಾರ್ಡ್ಗಳು ಬ್ಲಾಕ್ ಆಗುತ್ತವೆ,” ಎಂದು ಗ್ರಾಹಕರನ್ನು ಎಸ್ಬಿಐ ಎಚ್ಚರಿಸಿದೆ.
ಹೊಸ ಕಾರ್ಡ್ಗಳನ್ನು ಪಡೆಯುವಂತೆ ಎಸ್ಬಿಐ ತನ್ನ ಗ್ರಾಹಕರಿಗೆ ಎಸ್ಎಂಎಸ್, ಇಮೇಲ್ಗಳ ಮೂಲಕ ಸೂಚನೆ ನೀಡುತ್ತಿದೆ. ಈ ಸಂಬಂಧ ಶನಿವಾರ ಟ್ವೀಟ್ ಸಹಾ ಮಾಡಿದೆ. ದೇಶದ ಬೃಹತ್ ಬ್ಯಾಂಕ್ ಆದ ಎಸ್ಬಿಐ, ಜೂನ್ ಅಂತ್ಯದ ಹೊತ್ತಿಗೆ 28.9 ಕೋಟಿ ಎಟಿಎಂ ಕಾರ್ಡ್ಗಳನ್ನು ಹೊಂದಿದೆ. ಈಗಾಗಲೇ ಸಾಕಷ್ಟು ಹೊಸ ಕಾರ್ಡ್ಗಳನ್ನು ವಿತರಿಸಿದ್ದೇವೆ ಎಂದು ಬ್ಯಾಂಕ್ ಹೇಳಿದೆ.
ಹೊಸ ಕಾರ್ಡ್ ಪಡೆಯುವುದು ಹೇಗೆ?ಗ್ರಾಹಕರು ನೆಟ್ ಬ್ಯಾಂಕಿಂಗ್ ಮೂಲಕ, ಇಲ್ಲವೇ ಮೊಬೈಲ್ ಆ್ಯಪ್ ಮೂಲಕ ಹೊಸ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳನ್ನು ಪಡೆಯಬಹುದು. ಇಲ್ಲವೇ, ನೇರ ಶಾಖೆಗೆ ತೆರಳಿ ಹೊಸ ಕಾರ್ಡ್ಗೆ ಮನವಿ ಸಲ್ಲಿಸಬಹುದು. ಈ ಸೇವೆಗೆ ಗ್ರಾಹಕರು ಯಾವುದೇ ಶುಲ್ಕ ತೆರುವ ಅಗತ್ಯವಿಲ್ಲ. ಉಚಿತವಾಗಿ ಪಡೆಯಬಹುದಾಗಿದೆ.
ಏನಿದು ಇಎಂವಿ ಕಾರ್ಡ್?
ಇಎಂವಿ ಎಂದರೆ ‘ಯುರೊಪೇ ಮಾಸ್ಟರ್ಕಾರ್ಡು ವೀಸಾ’. ಆಧುನಿಕ ತಂತ್ರಜ್ಞಾನದ ಈ ಕಾರ್ಡ್ಗಳು ಹೆಚ್ಚಿನ ಸುರಕ್ಷತೆಯನ್ನು ನೀಡುತ್ತವೆ. ಗ್ರಾಹಕರ ಕಾರ್ಡ್ ಕಳೆದು ಹೋದರೆ, ಇಲ್ಲವೇ ಕಳ್ಳರ ಪಾಲಾದರೆ ಸುಲಭವಾಗಿ ಹಣ ದೋಚಲು ಹಳೆಯ ಕಾರ್ಡ್ಗಳಲ್ಲಿ ಅವಕಾಶವಿದೆ. ಇವಿಎಂ ಚಿಪ್ ಆಧಾರಿತ ಕಾರ್ಡುಗಳು ಗ್ರಾಹಕರನ್ನು ರಕ್ಷಿಸುತ್ತದೆ. ಎಟಿಎಂ ಯಂತ್ರಗಳಿಗೆ ವಂಚಕರು ಪುಟ್ಟ ಉಪಕರಣವನ್ನು ಅಳವಡಿಸಿ ಗ್ರಾಹಕರ ಕಾರ್ಡ್ಗಳ ಮಾಹಿತಿ ಕಳವು(ಸ್ವಿಮ್ಮಿಂಗ್) ಮಾಡಲು ಅವಕಾಶವಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಇಎಂವಿ ಕಾರ್ಡ್ಗಳು ಸಮರ್ಥವಾಗಿವೆ ಎಂದು ಹೇಳಲಾಗಿದೆ.
ನಿಮ್ಮಲ್ಲಿರುವುದು ಇಎಂವಿ ಕಾರ್ಡಾ?
ಇಎಂವಿ ಕಾರ್ಡ್ ಅನ್ನು ಗುರ್ತಿಸುವುದು ಬಹಳ ಸುಲಭ. ಈ ಕಾರ್ಡ್ಗಳ ಮುಂಭಾಗದಲ್ಲಿ ಚಿನ್ನದ ಬಣ್ಣದ ಚಿಪ್ ಕಣ್ಣಿಗೆ ಗೋಚರಿಸುವಂತಿರುತ್ತದೆ. ನಿಮ್ಮಲ್ಲಿರುವ ಕಾರ್ಡ್ನ ಹಿಂಭಾಗದಲ್ಲಿ ದಟ್ಟ ಕಪ್ಪು ಬಣ್ಣದ ಮ್ಯಾಕ್ನೆಟಿಕ್ ಪಟ್ಟಿ ಇದೆ ಅನ್ನುವುದಾದರೆ, ಅದು ಹಳೆಯದು ಎಂದರ್ಥ. ನೀವು ಹೊಸ ಕಾರ್ಡ್ ಪಡೆಯಲು ಮುಂದಾಗಬೇಕು.
ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ : ಪೃಥ್ವಿರಾಜ್…
ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…
ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…
ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…
ಸಕ್ಕರೆ ರಫ್ತಿಗೆ ಸೆ.30 ರವರೆಗೆ ಸಂಪೂರ್ಣ ನಿಷೇಧ ಹೇರಿದ ಸರ್ಕಾರ ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಸಕ್ಕರೆ ಬೆಲೆಯನ್ನು ನಿಯಂತ್ರಿಸಲು ಮತ್ತು…
ಹಿಜಬ್ ಬಗ್ಗೆ ಮಾತಾಡುವ ಬಿಜೆಪಿಯವರು ನೀಟ್ ಬಗ್ಗೆ ಮಾತಾಡಲಿ : ಮಧು ಬಂಗಾರಪ್ಪ ಆಕ್ರೋಶ ಬೆಂಗಳೂರು: ಹಿಜಬ್ ಬಗ್ಗೆ ಮಾತಾಡುವ…