Featured

ವಿಶ್ವಕ್ಕೆ ಮಾದರಿಯಾದ ತುಳುನಾಡ ಸಾಧಕ – ಜಗ ಮಲ್ಲ ಜಗದೀಶ್ – Vishwnaews24

ವಿಶ್ವಕ್ಕೆ ಮಾದರಿಯಾದ ತುಳುನಾಡ ಸಾಧಕ – ಜಗ ಮಲ್ಲ ಜಗದೀಶ್

ಹುಡುಗಾಟದ ವಯಸ್ಸಿನಲ್ಲಿ ಎಲ್ಲರ ಚಿತ್ತವನ್ನು ತಮ್ಮತ್ತ ಸೆಳೆಯುವ ಮಂಗಳೂರಿನ ಅಡ್ಯಾರ್ ಪದವಿನ ಲಿಂಗಪ್ಪ ಮತ್ತು ಯಮುನಾ ದಂಪತಿಗಳ ಪುತ್ರ ಜಗದೀಶ್ ಪೂಜಾರಿ ಇವರು ಬಾಡಿ ಬಿಲ್ಡಿಂಗ್ ಸಾಧನೆಯಲ್ಲಿ ಸಫಲತೆಯನ್ನು ಕಂಡವರು.
ನೋವಿನಲ್ಲೂ ಗೆಲುವನ್ನು ಕಂಡ ಛಲಗಾರ, ಹಲವು ಬಾರಿ ಮಿಸ್ಟರ್ ಇಂಡಿಯಾ ಪ್ರಶಸ್ತಿ ಪಡೆದಿರುವ ಜಗದೀಶ್ ಪೂಜಾರಿ ವಿಕಲಚೇತನರಾಗಿದ್ದರೂ ರಾಷ್ಟ್ರದ ಗಮನ ಸೆಳೆದ ಸಾಹಸಿ .
ಜಗದೀಶ್ ಪೂಜಾರಿ ನಿರಂತರ ಅಭ್ಯಾಸದಿಂದ ಜಿಲ್ಲಾಮಟ್ಟದ ಸ್ಪರ್ಧೆಯಿಂದ ರಾಷ್ಟ್ರ ಮಟ್ಟದ ಸುಮಾರು 80 ಬಾರಿ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿ ಪುರಸ್ಕಾರಗಳು ಇವರಿಗೆ ಸಿಕ್ಕಿವೆ.
ಅವರಿಗೆ ಸಿಕ್ಕ ದೊಡ್ಡ ಮಟ್ಟದ ಕೆಲವು ಪ್ರಶಸ್ತಿಗಳು ಹೀಗಿವೆ,
1) ಮಿಸ್ಟರ್ ಕದಂಬ
2) ಮಿಸ್ಟರ್ ವಜ್ರದೇಹಿ
3) ಕರ್ನಾಟಕ ಭೂಷಣ
4) ಮಿಸ್ಟರ್ ಕಾಸರಗೋಡು
5) ಮಿಸ್ಟರ್ ಕರಾವಳಿ
6) ಮಿಸ್ಟರ್ ಸಾರ್ವೋತಮಕ ಸಾಧಕ
7) ಮಿಸ್ಟರ್ ಸ್ವಾಭಿಮಾನ್
ಮಡಿಲು ಸನ್ಮಾನ್ 2019 ಅಲ್ಲದೆ ಇತ್ತೀಚಿಗೆ ಅವರಿಗೆ 1) ಕರ್ನಾಟಕ ಅಚಿವರ್ಸ್ ಬುಕ್ ಆಫ್ ರೆಕಾರ್ಡ್ ಮತ್ತು 2) ಫ್ಯೂಚರ್ ಕಲಾಂ ಯುನಿವರ್ಸಲ್ ಬುಕ್ ಆಫ್ ರೆಕಾರ್ಡ್ ಕೂಡ ಆಗಿದೆ.
ಇವರ ಇಷ್ಟೆಲ್ಲ ಸಾಧನೆಗಳನ್ನು ಮೆಚ್ಚಿ ಸ್ವಾಮಿಜಿಯವರಿಂದ, ಮುಖ್ಯಮಂತ್ರಿಯವರಿಂದ ಹಾಗೂ ಹಲವಾರು ಗಣ್ಯವ್ಯಕ್ತಿಗಳಿಂದ ಅಲ್ಲದೆ ಹಿಂದೂ ಮುಸ್ಲಿಂ ಕ್ರಿಸ್ತ ಭೇದ ಭಾವ ಇಲ್ಲದೆ ಸುಮಾರು 68 ಬಾರಿ ಸನ್ಮಾನ ಪುರಸ್ಕಾರಗಳನ್ನು ಪಡೆದ ಏಕೈಕ ವ್ಯಕ್ತಿ ಇವರು, ರಾಷ್ಟ್ರಮಟ್ಟದಲ್ಲಿ ಮಿಂಚಿದ ಇವರು ಇನ್ನಷ್ಟು ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಆಸೆ ಹೊಂದಿದ್ದಾರೆ.
ಇವರ ಆಸೆ ಆಕಾಂಕ್ಷೆಗಳನ್ನು ಆ ದೇವರು ಈಡೇರಿಸಲಿ. ಇಷ್ಟೆಲ್ಲ ಸಾಧನೆ ಮಾಡಿದ ಇವರು ತನ್ನ ನೋವಿನ ಬದುಕಿನ ಪ್ರತಿ ಹೆಜ್ಜೆಯನ್ನು ಮರೆಯದ ಸಾಧಕ ಹಾಗೂ ಜಗದೀಶ್ ಪೂಜಾರಿ ಅತ್ಯಂತ ವಿನಯವಂತ ಹಾಗೂ ಅಹಂಭಾವ ತೋರದ ವ್ಯಕ್ತಿ.
Vishwa News 24

Recent Posts

ಮಂಗಳೂರು: ಮಸೀದಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ ; ಗುರುಪುರ ಸೇತುವೆ ಮೇಲೆ ಸ್ಕೂಟರ್ ಪತ್ತೆ – vishwanews24

ಮಂಗಳೂರು: ಮಸೀದಿಗೆ ತೆರಳಿದ್ದ ವ್ಯಕ್ತಿ ನಾಪತ್ತೆ ; ಗುರುಪುರ ಸೇತುವೆ ಮೇಲೆ ಸ್ಕೂಟರ್ ಪತ್ತೆ  - ಫಲ್ಗುಣಿ ನದಿಯಲ್ಲಿ ಶೋಧ…

3 minutes ago

ಉಳ್ಳಾಲ: ಕೆರೆಬೈಲ್ ಗುಡ್ಡೆಯಲ್ಲಿ ಮನೆ ಮೇಲೆ ಕುಸಿದ ಕಾಂಪೌಂಡ್ ಹಾಲ್: ತಪ್ಪಿದ ಭಾರೀ ದುರಂತ – vishwanews24

ಉಳ್ಳಾಲ: ಕೆರೆಬೈಲ್ ಗುಡ್ಡೆಯಲ್ಲಿ ಮನೆ ಮೇಲೆ ಕುಸಿದ ಕಾಂಪೌಂಡ್ ಹಾಲ್: ತಪ್ಪಿದ ಭಾರೀ ದುರಂತ ಉಳ್ಳಾಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ…

18 minutes ago

ನಾಗುರಿ ದುರಂತ – ಕಳಪೆ ಕಾಮಗಾರಿಯ ಶಂಕೆ : ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ – vishwanews24

ನಾಗುರಿ ದುರಂತ - ಕಳಪೆ ಕಾಮಗಾರಿಯ ಶಂಕೆ : ತಪ್ಪಿತಸ್ಥರ ವಿರುದ್ಧ ಪ್ರಕರಣ ದಾಖಲಿಸಲು ಆದೇಶ ಮಂಗಳೂರು: ನಾಗುರಿಯಲ್ಲಿ ಮನೆ…

41 minutes ago

ನಕಲಿ ಪಾಸ್‌ಪೋರ್ಟ್‌ ಪ್ರಕರಣ: ಮಂಗಳೂರು ಟ್ರಾವೆಲ್‌ ಏಜೆಂಟ್‌ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ – vishwanews24

ನಕಲಿ ಪಾಸ್‌ಪೋರ್ಟ್‌ ಪ್ರಕರಣ: ಮಂಗಳೂರು ಟ್ರಾವೆಲ್‌ ಏಜೆಂಟ್‌ ವಿರುದ್ಧದ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ ಬೆಂಗಳೂರು: ಆಂಧ್ರಪ್ರದೇಶದ ಭಯೋತ್ಪಾದನಾ ನಿಗ್ರಹ…

48 minutes ago

ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ : ಇಂದಿನಿಂದಲೇ ಪರಿಷ್ಕೃತ ದರ ಜಾರಿ – vishwanews24

ವಾಣಿಜ್ಯ LPG ಸಿಲಿಂಡರ್ ದರದಲ್ಲಿ ಭಾರೀ ಇಳಿಕೆ : ಇಂದಿನಿಂದಲೇ ಪರಿಷ್ಕೃತ ದರ ಜಾರಿ ನವದೆಹಲಿ: ವಾಣಿಜ್ಯ ಬಳಕೆಯ ಎಲ್‌ಪಿಜಿ ಪೂರೈಕೆ…

2 hours ago

ಆಟೋ ಎಲ್‌ಪಿಜಿ ದರ 10 ರೂ. ಇಳಿಕೆ – vishwanews24

ಆಟೋ ಚಾಲಕರಿಗೆ ಸಿಹಿ ಸುದ್ದಿ: ಎಲ್‌ಪಿಜಿ ದರ 10 ರೂ. ಇಳಿಕೆ ಬೆಂಗಳೂರು: ನಿರಂತರ ಎಲ್‌ಪಿಜಿ  ದರ ಏರಿಕೆಯಿಂದ ಕಂಗಾಲಾಗಿದ್ದ ಆಟೋ…

2 hours ago