Featured

ಶಂಕರಪುರ ವಿಶ್ವಾಸದ ಮನೆಗೆ 75ಸಾವಿರ ವೆಚ್ಚದ ಆಹಾರ ಸಾಮಾಗ್ರಿ ವಿತರಣೆ : ಸಾಮಾಜಿಕ ಸಂಘಟನೆಗಳು ದೀನದಲಿತರ ನೋವಿಗೆ ಧ್ವನಿಯಾಗಬೇಕು : ಮೊಹಮ್ಮದ್ ಫಾರೂಕ್ ಚಂದ್ರನಗರ – Vishwanews24

ಶಂಕರಪುರ ವಿಶ್ವಾಸದ ಮನೆಗೆ 75ಸಾವಿರ ವೆಚ್ಚದ ಆಹಾರ ಸಾಮಾಗ್ರಿ ವಿತರಣೆ

ಸಾಮಾಜಿಕ ಸಂಘಟನೆಗಳು ದೀನದಲಿತರ ನೋವಿಗೆ ಧ್ವನಿಯಾಗಬೇಕು : ಮೊಹಮ್ಮದ್ ಫಾರೂಕ್ ಚಂದ್ರನಗರ

ಶಂಕರಪುರ ವಿಶ್ವಾಸದಮನೆ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಹಾಗೂ ವೃದ್ಧಾಶ್ರಮಕ್ಕೆ ಕಾಪು-ಕಳತ್ತೂರು ಸಮಾಜಸೇವಾ ವೇದಿಕೆಯ ವತಿಯಿಂದ ನೀಡಲಾದ 75ಸಾವಿರ ರೂ.ವೆಚ್ಚದ ಆಹಾರ ದಿನಸಿ, ಬಟ್ಟೆ ಇನ್ನಿತರ ದಿನಬಳಕೆಯ ಅಗತ್ಯ ಸಾಮಾಗ್ರಿಗಳನ್ನು ಮೊಹಮ್ಮದ್ ಫಾರೂಕ್ ಚಂದ್ರನಗರ ಶನಿವಾರ ವಿತರಿಸಿದರು.

ಶಿರ್ವ: ಪ್ರಸ್ತುತ ಪರಿಸ್ಥಿತಿಯಲ್ಲಿ ಸಮಾಜದಲ್ಲಿನ ದೀನದಲಿತರ ನೆರವಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸಾಮಾಜಿಕ ಸಂಘÀಟನೆಗಳು ಕೆಲಸ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಪ್ರತಿಯೊಬ್ಬ ಮನುಷ್ಯನೂ ಕೂಡಾ ಸಮಾಜದಲ್ಲಿನ ಕಟ್ಟಕಡೆಯ ವ್ಯಕ್ತಿಯ ನೋವಿಗೆ ಧ್ವನಿಯಾದಲ್ಲಿ ಮಾತ್ರ ಗಾಂಧೀಜಿಯವರು ಕಂಡ ರಾಮರಾಜ್ಯದ ಕನಸು ನನಸಾಗಲು ಸಾಧ್ಯವಿದೆ ಎಂದು ಕಾಪು-ಕಳತ್ತೂರು ಸಮಾಜಸೇವಾ ವೇದಿಕೆಯ ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ ತಿಳಿಸಿದ್ದಾರೆ.
ಶಂಕರಪುರ ವಿಶ್ವಾಸದಮನೆ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಹಾಗೂ ವೃದ್ಧಾಶ್ರಮಕ್ಕೆ ಕಾಪು-ಕಳತ್ತೂರು ಸಮಾಜಸೇವಾ ವೇದಿಕೆಯ ವತಿಯಿಂದ ನೀಡಲಾದ 75ಸಾವಿರ ರೂ.ವೆಚ್ಚದ ಆಹಾರ ದಿನಸಿ, ಬಟ್ಟೆ ಇನ್ನಿತರ ದಿನಬಳಕೆಯ ಅಗತ್ಯ ಸಾಮಾಗ್ರಿಗಳನ್ನು ಶನಿವಾರ ವಿತರಿಸಿ ಅವರು ಮಾತನಾಡಿದರು.

ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ಚಂದ್ರ ಸುವರ್ಣ ಅಡ್ವೆ ಮಾತನಾಡಿ, ಶಂಕರಪುರ ವಿಶ್ವಾಸದ ಮನೆಯಲ್ಲಿ ಬೀದಿಗೆ ಬಿದ್ದ ಅನಾಥರಿಗೆ ರಕ್ಷಣೆ ಹಾಗೂ ಆಸರೆಯನ್ನು ನೀಡುವ ಕೆಲಸ ಕಳೆದ 20ವರ್ಷಗಳಿಂದ ಸದ್ದಿಲ್ಲದೆ ನಡೆಯುತ್ತಿದೆ. ಈ ಸಂಸ್ಥೆಯ ಮಾನವೀಯ ಕಾರ್ಯ ದೇವರಿಗೆ ಪ್ರಿಯವಾದದ್ದು, ಇವರಿಗೆ ಸಮಾಜದ ಸಂಘ ಸಂಸ್ಥೆಗಳು ಮತ್ತು ಸರಕಾರ ಅಗತ್ಯವಾಗಿ ನೆರವು ನೀಡಬೇಕಾಗಿದೆ ಎಂದರು.

ಪಾದೂರು ಬದ್ರಿಯಾ ಜುಮ್ಮಾ ಮಸೀದಿಯ ಧರ್ಮಗುರು ಅಬ್ದುಲ್ ರಶೀದ್ ಸಖಾಫಿ, ಉದ್ಯಮಿ ರೂಪೇಶ್ ವಿ.ಕಲ್ಮಾಡಿ, ಸಮಾಜಸೇವಾ ವೇದಿಕೆಯ ಸಂಚಾಲಕರಾದ ದಿವಾಕರ ಡಿ.ಶೆಟ್ಟಿ ಕಳತ್ತೂರು, ಗೌರವಾಧ್ಯಕ್ಷರಾದ ದಿವಾಕರ ಬಿ. ಶೆಟ್ಟಿ ಕಳತ್ತೂರು, ಉಪಾಧ್ಯಕ್ಷರಾದ ರಾಜೇಶ್ ಕುಲಾಲ್, ಲಿಯೋ ಮೆಂಡೋನ್ಸ, ಕಳತ್ತೂರ್ ಸ್ಟಾನ್ಲಿಸನ್ ಕೊರ್ಡ, ಗೌರವ ಸಲಹೆಗಾರರಾದ ದಯಾನಂದ ಕೆ.ಶೆಟ್ಟಿ ದೆಂದೂರು, ಕಾರ್ಯದರ್ಶಿ ಲೋಕೇಶ್ ಭಟ್, ಕಾಪು ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಮೀರ್ ಮೊಹಮ್ಮದ್, ಮಾರಿಯೋ ಬರ್ಬೊಜಾ ಮುದರಂಗಡಿ, ಕಾಸಿಂ ಬಜ್ಪೆ, ಮೊಹಮ್ಮದ್ ಫಾಯಿಕ್ ಚಂದ್ರನಗರ, ಹರೀಶ್ ಶೆಟ್ಟಿ ಬೆಳ್ಳೆ, ಫಯಾಜ್ ಹಾಜಿ ಮಜೂರು, ಬಿ.ಎ.ಫಕ್ರುದ್ದೀನ್ ಆಲಿ, ತೆರೇಝ ಸಿಕ್ವೇರ, ಬಾಲಕೃಷ್ಣ ರಾವ್ ಕಳತ್ತೂರು, ಶರೋನ್ ಕುತ್ಯಾರು,ಪ್ರಶಾಂತ್ ಶಂಕರಪುರ ಉಪಸ್ಥಿತರಿದ್ದರು. ವಿಶ್ವಾಸದಮನೆಯ ಸಂಸ್ಥಾಪಕ ಪಾಸ್ಟರ್ ಸುನೀಲ್ ಜಾನ್ ಡಿಸೋಜಾ ಸ್ವಾಗತಿಸಿದರು. ಪತ್ರಕರ್ತ ಪ್ರಕಾಶ ಸುವರ್ಣ ಕಟಪಾಡಿ ನಿರೂಪಿಸಿದರು. ವ್ಯವಸ್ಥಾಪಕ ಬಾಬು ಮ್ಯಾಥ್ಯೂ ವಂದಿಸಿದರು.

Vishwa News 24

Recent Posts

ಕುದುರೆಮುಖ ಆಫ್ ರೋಡಿಂಗ್ ಚಟುವಟಿಕೆ ವಿರುದ್ಧ ತೀವ್ರ ಆಕ್ರೋಶ – vishwanews24

ಕುದುರೆಮುಖದಲ್ಲಿ ಅನಧಿಕೃತ ಜೀಪುಗಳ ಆಫ್ ರೋಡಿಂಗ್ .. ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಸ್ಥಳೀಯರು, ಪರಿಸರ ಪ್ರೇಮಿಗಳ ಒತ್ತಾಯ ಮೋಜು-ಮಸ್ತಿಗಾಗಿ ಸೂಕ್ಷ್ಮ ಪರಿಸರದಲ್ಲಿ…

1 hour ago

ಕುಂದಾಪುರ: ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು; ಚಿನ್ನಾಭರಣ, ನಗದು ಕಳವು – vishwanews24

ಕುಂದಾಪುರ: ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು; ಚಿನ್ನಾಭರಣ, ನಗದು ಕಳವು ಕುಂದಾಪುರ: ಕುಂದಾಪುರದ ಬೊಬ್ಬರ್ಯನಕಟ್ಟೆಯ ಮನೆಯಲ್ಲಿ ಯಾರೂ ಇಲ್ಲದ…

2 hours ago

ಕರ್ನಾಟಕ ವಿಧಾನಸಭೆ ನೂತನ ಸ್ಪೀಕರ್​ ಆಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ – vishwanews24

ಕರ್ನಾಟಕ ವಿಧಾನಸಭೆ ಸ್ಪೀಕರ್​ ಆಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ ಬೆಂಗಳೂರು: ಕರ್ನಾಟಕ ವಿಧಾನಸಭಾಧ್ಯಕ್ಷರಾಗಿ ಗುರುಪಾದಗೌಡ ಸಂಗನಗೌಡ ಪಾಟೀಲ (ಜಿ.ಎಸ್.ಪಾಟೀಲ್)…

2 hours ago

ನಿರ್ಮಾಣ ಹಂತದಲ್ಲಿದ್ದ ಸುರಂಗದ ಒಳಗೆ ನುಗ್ಗಿದ ನೀರು : 7 ಕಾರ್ಮಿಕರ ದಾರುಣ ಸಾವು ; 14ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ – vishwanews24

ನಿರ್ಮಾಣ ಹಂತದಲ್ಲಿದ್ದ ಸುರಂಗದ ಒಳಗೆ ನುಗ್ಗಿದ ನೀರು .. 7 ಕಾರ್ಮಿಕರ ದಾರುಣ ಸಾವು ; 14ಕ್ಕೂ ಹೆಚ್ಚು ಮಂದಿಗೆ…

2 hours ago

ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಸಿಎಂಗೆ ಸಚಿವ ಜಮೀರ್ ಪತ್ರ ; ಮನವಿಗೆ  ಸ್ಪಂದಿಸಿದ ಸಿಎಂ  – vishwanews24

ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಸಿಎಂಗೆ ಸಚಿವ ಜಮೀರ್ ಪತ್ರ ; ಮನವಿಗೆ  ಸ್ಪಂದಿಸಿದ ಸಿಎಂ  ಚುನಾವಣೆ, ಪಕ್ಷ ಸಂಘಟನೆ ಕಾರಣ…

2 hours ago

ಮನೆ ತೆರಿಗೆ ಲಕ್ಷಾಂತರ ಹಣ ದುರುಪಯೋಗ: ಶಿವಪುರ ಗ್ರಾ.ಪಂ ಸಿಬ್ಬಂದಿ ವಜಾ – vishwanews24

ಮನೆ ತೆರಿಗೆ ಲಕ್ಷಾಂತರ ಹಣ ದುರುಪಯೋಗ: ಶಿವಪುರ ಗ್ರಾಪಂ ಸಿಬ್ಬಂದಿ ವಜಾ ಉಡುಪಿ: ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯಿತಿಯಲ್ಲಿ…

2 hours ago