ಕಾಪು: ಶಂಕರಪುರ ಸಾಯಿಬಾಬಾ ಮಂದಿರದ ಗುರೂಜಿ ಸಾಯಿ ಈಶ್ವರ್ ವತಿಯಿಂದ ಇಂದು ಬಡಕುಟುಂಬಗಳನ್ನು ಗುರುತಿಸಿ ಹಂಚಲು ಯುಗಾದಿ ಹಬ್ಬ ಆಚರಣೆಗೆ ಬೇಕಾಗುವ ಯುಗಾದಿ ಕಿಟ್ ತಯಾರಿಸಲಾಗಿದೆ.
ಸುಮಾರು ನೂರು ಕಿಟ್ ತಯಾರಿಸಿದ್ದು ಅರ್ಹ ಕುಟುಂಬಗಳಿಗೆ ಹಂಚುವ ಕಾರ್ಯ ಆದಿತ್ಯವಾರ ಮತ್ತು ಸೋಮವಾರ ನಡೆಯಲಿದೆ.
ಈ ಕಿಟ್ ನಲ್ಲಿ ಬೆಲ್ಲ,ಅಕ್ಕಿ,ಸಾಬಕಿ,ಕಡ್ಲೆಬೆಳೆ,ದ್ರಾಕ್ಷಿ, ಬೀಜ ತೆಂಗಿನ ಕಾಯಿ,ಸೌತೆಕಾಯಿ ಇರಲಿದೆ.
ಲಾಕ್-ಡೌನ್ ಸಮಯದಲ್ಲಿ ಯುಗಾದಿ ಆಚರಿಸಲು ಸಮಸ್ಯೆ ಇರುವ ಕುಟುಂಬದ ಕೈ ಸೇರಲಿದೆ ಈ ಕಿಟ್.
ಇದುವರೆಗೆ 500 ಕ್ಕೂ ಅಧಿಕ ಕುಟುಂಬಗಳಿಗೆ ಅಕ್ಕಿ ಸಾಂಬಾರು ಪದಾರ್ಥಗಳ ಕಿಟ್ಟ್ಗಳನ್ನು ಹಸ್ತಾಂತರಿಸಿದ್ದು,ಪ್ರತಿದಿನ ಮಧ್ಯಾಹ್ನ ಸಾಯಿ ತುತ್ತು ಹೆಸರಿನಲ್ಲಿ ನಿರ್ಗತಿಕರಿಗೆ ಅನ್ನದಾನ ಮಾಡುವ ಕಾರ್ಯ ಕೂಡ ನಡೆಯುತ್ತಿದೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಗುರೂಜಿ” ಪ್ರತಿಯೊಬ್ಬನಿಗೂ ಜೀವನದಲ್ಲಿ ಕಷ್ಟ ಸುಖ ಇರುವುದು ಸಾಮಾನ್ಯ ಅದು ಯುಗಾದಿ ಹಬ್ಬದ ಸಂಕೇತವು ಅದು ಬೇವು ಬೆಲ್ಲ ಸ್ವೀಕರಿಸಿದಂತೆ .ಈ ಇದುವರೆಗೆ ಲಾಕ್-ಡೌನ್ ಸಮಸ್ಯೆಯಾದ ಬಡ ಕುಟುಂಬಗಳಿಗೆ ನಮ್ಮಿಂದಾದ ಅಳಿಲು ಸೇವೆ ಮಾಡಿದ್ದೇವೆ.ಆದರೇ ಈ ಬಾರಿ ಯುಗಾದಿ ಕೂಡ ಲಾಕ್-ಡೌನ್ ಜತೆ ಸೇರಿಕೊಂಡಿರುವ ಕಾರಣದಿಂದ ಬಡವರು ಕೂಡ ಹಬ್ಬ ಆಚರಣೆ ಮಾಡಲಿ ಎಂಬ ಸದುದ್ದೇಶದಿಂದ ಈ ಕಿಟ್ ವಿತರಣೆ ಮಾಡುವ ಯೋಜನೆ ಮಾಡುತ್ತಿದ್ದು ಇವೆಲ್ಲವೂ ಕೂಡ ಬಾಬಾನ ಪ್ರೇರಣೆ ಮತ್ತು ಪ್ರಸಾದ ಎಂದರು.”
ಗುರೂಜಿ ಸಾಯಿ ಈಶ್ವರ್ ಜತೆ ಅವರ ಅನುಯಾಯಿಗಳಾದ ಸತೀಶ್ ದೇವಾಡಿಗ ,ಅಮಿತ್,ಮೊದಲಾದವರು ವಿತರಣೆಗೆ ಕೈ ಜೋಡಿಸಲಿದ್ದಾರೆ.
ಬ್ಯೂರೊ ರಿಪೋರ್ಟ್: vishwanews24
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…