ಶಂಕರಪುರ ಸಾಯಿಬಾಬಾ ಮಂದಿರದ ವತಿಯಿಂದ ಯುಗಾದಿ ಆಹಾರದ ಕಿಟ್ ವಿತರಣೆಗೆ ತಯಾರಿ.vishwanews24

ಶಂಕರಪುರ ಸಾಯಿಬಾಬಾ ಮಂದಿರದ ವತಿಯಿಂದ ಯುಗಾದಿ ಆಹಾರದ ಕಿಟ್ ವಿತರಣೆಗೆ ತಯಾರಿ.

ಕಾಪು: ಶಂಕರಪುರ ಸಾಯಿಬಾಬಾ ಮಂದಿರದ ಗುರೂಜಿ ಸಾಯಿ ಈಶ್ವರ್ ವತಿಯಿಂದ ಇಂದು ಬಡಕುಟುಂಬಗಳನ್ನು ಗುರುತಿಸಿ ಹಂಚಲು ಯುಗಾದಿ ಹಬ್ಬ ಆಚರಣೆಗೆ ಬೇಕಾಗುವ ಯುಗಾದಿ ಕಿಟ್ ತಯಾರಿಸಲಾಗಿದೆ.
ಸುಮಾರು ನೂರು ಕಿಟ್ ತಯಾರಿಸಿದ್ದು ಅರ್ಹ ಕುಟುಂಬಗಳಿಗೆ ಹಂಚುವ ಕಾರ್ಯ ಆದಿತ್ಯವಾರ ಮತ್ತು ಸೋಮವಾರ ನಡೆಯಲಿದೆ.
ಈ ಕಿಟ್ ನಲ್ಲಿ ಬೆಲ್ಲ,ಅಕ್ಕಿ,ಸಾಬಕಿ,ಕಡ್ಲೆಬೆಳೆ,ದ್ರಾಕ್ಷಿ, ಬೀಜ ತೆಂಗಿನ ಕಾಯಿ,ಸೌತೆಕಾಯಿ ಇರಲಿದೆ.
ಲಾಕ್-ಡೌನ್ ಸಮಯದಲ್ಲಿ ಯುಗಾದಿ ಆಚರಿಸಲು ಸಮಸ್ಯೆ ಇರುವ ಕುಟುಂಬದ ಕೈ ಸೇರಲಿದೆ ಈ ಕಿಟ್.
ಇದುವರೆಗೆ 500 ಕ್ಕೂ ಅಧಿಕ ಕುಟುಂಬಗಳಿಗೆ ಅಕ್ಕಿ ಸಾಂಬಾರು ಪದಾರ್ಥಗಳ ಕಿಟ್ಟ್ಗಳನ್ನು ಹಸ್ತಾಂತರಿಸಿದ್ದು,ಪ್ರತಿದಿನ ಮಧ್ಯಾಹ್ನ ಸಾಯಿ ತುತ್ತು ಹೆಸರಿನಲ್ಲಿ ನಿರ್ಗತಿಕರಿಗೆ ಅನ್ನದಾನ ಮಾಡುವ ಕಾರ್ಯ ಕೂಡ ನಡೆಯುತ್ತಿದೆ.


ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಗುರೂಜಿ” ಪ್ರತಿಯೊಬ್ಬನಿಗೂ ಜೀವನದಲ್ಲಿ ಕಷ್ಟ ಸುಖ ಇರುವುದು ಸಾಮಾನ್ಯ ಅದು ಯುಗಾದಿ ಹಬ್ಬದ ಸಂಕೇತವು ಅದು ಬೇವು ಬೆಲ್ಲ ಸ್ವೀಕರಿಸಿದಂತೆ .ಈ ಇದುವರೆಗೆ ಲಾಕ್-ಡೌನ್ ಸಮಸ್ಯೆಯಾದ ಬಡ ಕುಟುಂಬಗಳಿಗೆ ನಮ್ಮಿಂದಾದ ಅಳಿಲು ಸೇವೆ ಮಾಡಿದ್ದೇವೆ.ಆದರೇ ಈ ಬಾರಿ ಯುಗಾದಿ ಕೂಡ ಲಾಕ್-ಡೌನ್ ಜತೆ ಸೇರಿಕೊಂಡಿರುವ ಕಾರಣದಿಂದ ಬಡವರು ಕೂಡ ಹಬ್ಬ ಆಚರಣೆ ಮಾಡಲಿ ಎಂಬ ಸದುದ್ದೇಶದಿಂದ ಈ ಕಿಟ್ ವಿತರಣೆ ಮಾಡುವ ಯೋಜನೆ ಮಾಡುತ್ತಿದ್ದು ಇವೆಲ್ಲವೂ ಕೂಡ ಬಾಬಾನ ಪ್ರೇರಣೆ ಮತ್ತು ಪ್ರಸಾದ ಎಂದರು.”
ಗುರೂಜಿ ಸಾಯಿ ಈಶ್ವರ್ ಜತೆ ಅವರ ಅನುಯಾಯಿಗಳಾದ ಸತೀಶ್ ದೇವಾಡಿಗ ,ಅಮಿತ್,ಮೊದಲಾದವರು ವಿತರಣೆಗೆ ಕೈ ಜೋಡಿಸಲಿದ್ದಾರೆ.

ಬ್ಯೂರೊ ರಿಪೋರ್ಟ್: vishwanews24

Vishwa News 24

Recent Posts

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ -vishwanews24

ಉಳ್ಳಾಲ: ನಾಪತ್ತೆಯಾಗಿದ್ದ ಕುಂದಾಪುರ ಮೂಲದ ಮೀನುಗಾರನ  ಮೃತದೇಹ ಪತ್ತೆ ಉಳ್ಳಾಲ : ಮೀನುಗಾರಿಕೆಗೆ ತೆರಳಿದ್ದ ವೇಳೆ ದೈತ್ಯ ಗಾತ್ರದ ಅಲೆಗೆ…

6 hours ago

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ -vishwanews24

ನಿರೂಪಣಾ ವೃತ್ತಿಗೆ ಅಧಿಕೃತವಾಗಿ ನಿವೃತ್ತಿ ಘೋಷಿಸಿದ ಅನುಪಮಾ ಗೌಡ ಬೆಂಗಳೂರು : ನಟಿ ಅನುಪಮಾ ಗೌಡ ಅವರು ನಟನೆಯ ಮೂಲಕ…

6 hours ago

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

2 days ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

3 days ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

3 days ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

3 days ago