ಶಂಕರಪುರ ಸಾಯಿಬಾಬಾ ಮಂದಿರದ ವತಿಯಿಂದ ಯುಗಾದಿ ಆಹಾರದ ಕಿಟ್ ವಿತರಣೆಗೆ ತಯಾರಿ.vishwanews24

ಶಂಕರಪುರ ಸಾಯಿಬಾಬಾ ಮಂದಿರದ ವತಿಯಿಂದ ಯುಗಾದಿ ಆಹಾರದ ಕಿಟ್ ವಿತರಣೆಗೆ ತಯಾರಿ.

ಕಾಪು: ಶಂಕರಪುರ ಸಾಯಿಬಾಬಾ ಮಂದಿರದ ಗುರೂಜಿ ಸಾಯಿ ಈಶ್ವರ್ ವತಿಯಿಂದ ಇಂದು ಬಡಕುಟುಂಬಗಳನ್ನು ಗುರುತಿಸಿ ಹಂಚಲು ಯುಗಾದಿ ಹಬ್ಬ ಆಚರಣೆಗೆ ಬೇಕಾಗುವ ಯುಗಾದಿ ಕಿಟ್ ತಯಾರಿಸಲಾಗಿದೆ.
ಸುಮಾರು ನೂರು ಕಿಟ್ ತಯಾರಿಸಿದ್ದು ಅರ್ಹ ಕುಟುಂಬಗಳಿಗೆ ಹಂಚುವ ಕಾರ್ಯ ಆದಿತ್ಯವಾರ ಮತ್ತು ಸೋಮವಾರ ನಡೆಯಲಿದೆ.
ಈ ಕಿಟ್ ನಲ್ಲಿ ಬೆಲ್ಲ,ಅಕ್ಕಿ,ಸಾಬಕಿ,ಕಡ್ಲೆಬೆಳೆ,ದ್ರಾಕ್ಷಿ, ಬೀಜ ತೆಂಗಿನ ಕಾಯಿ,ಸೌತೆಕಾಯಿ ಇರಲಿದೆ.
ಲಾಕ್-ಡೌನ್ ಸಮಯದಲ್ಲಿ ಯುಗಾದಿ ಆಚರಿಸಲು ಸಮಸ್ಯೆ ಇರುವ ಕುಟುಂಬದ ಕೈ ಸೇರಲಿದೆ ಈ ಕಿಟ್.
ಇದುವರೆಗೆ 500 ಕ್ಕೂ ಅಧಿಕ ಕುಟುಂಬಗಳಿಗೆ ಅಕ್ಕಿ ಸಾಂಬಾರು ಪದಾರ್ಥಗಳ ಕಿಟ್ಟ್ಗಳನ್ನು ಹಸ್ತಾಂತರಿಸಿದ್ದು,ಪ್ರತಿದಿನ ಮಧ್ಯಾಹ್ನ ಸಾಯಿ ತುತ್ತು ಹೆಸರಿನಲ್ಲಿ ನಿರ್ಗತಿಕರಿಗೆ ಅನ್ನದಾನ ಮಾಡುವ ಕಾರ್ಯ ಕೂಡ ನಡೆಯುತ್ತಿದೆ.


ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಗುರೂಜಿ” ಪ್ರತಿಯೊಬ್ಬನಿಗೂ ಜೀವನದಲ್ಲಿ ಕಷ್ಟ ಸುಖ ಇರುವುದು ಸಾಮಾನ್ಯ ಅದು ಯುಗಾದಿ ಹಬ್ಬದ ಸಂಕೇತವು ಅದು ಬೇವು ಬೆಲ್ಲ ಸ್ವೀಕರಿಸಿದಂತೆ .ಈ ಇದುವರೆಗೆ ಲಾಕ್-ಡೌನ್ ಸಮಸ್ಯೆಯಾದ ಬಡ ಕುಟುಂಬಗಳಿಗೆ ನಮ್ಮಿಂದಾದ ಅಳಿಲು ಸೇವೆ ಮಾಡಿದ್ದೇವೆ.ಆದರೇ ಈ ಬಾರಿ ಯುಗಾದಿ ಕೂಡ ಲಾಕ್-ಡೌನ್ ಜತೆ ಸೇರಿಕೊಂಡಿರುವ ಕಾರಣದಿಂದ ಬಡವರು ಕೂಡ ಹಬ್ಬ ಆಚರಣೆ ಮಾಡಲಿ ಎಂಬ ಸದುದ್ದೇಶದಿಂದ ಈ ಕಿಟ್ ವಿತರಣೆ ಮಾಡುವ ಯೋಜನೆ ಮಾಡುತ್ತಿದ್ದು ಇವೆಲ್ಲವೂ ಕೂಡ ಬಾಬಾನ ಪ್ರೇರಣೆ ಮತ್ತು ಪ್ರಸಾದ ಎಂದರು.”
ಗುರೂಜಿ ಸಾಯಿ ಈಶ್ವರ್ ಜತೆ ಅವರ ಅನುಯಾಯಿಗಳಾದ ಸತೀಶ್ ದೇವಾಡಿಗ ,ಅಮಿತ್,ಮೊದಲಾದವರು ವಿತರಣೆಗೆ ಕೈ ಜೋಡಿಸಲಿದ್ದಾರೆ.

ಬ್ಯೂರೊ ರಿಪೋರ್ಟ್: vishwanews24

Vishwa News 24

Recent Posts

ತುಳು ಸಿನಿಮಾ ನಿರ್ಮಾಣ ಮಾಡಿದ ಗಣೇಶ್ ಪತ್ನಿ ಶಿಲ್ಪಾ – vishwanews24

ತುಳು ಸಿನಿಮಾ ನಿರ್ಮಾಣ ಮಾಡಿದ ಗಣೇಶ್ ಪತ್ನಿ ಶಿಲ್ಪಾ ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬರುತ್ತಿರುವ…

6 minutes ago

ಬೆಂಗಳೂರು: ಡೇ ಕೇರ್‌ ಸೆಂಟರ್‌ ಪ್ರಕರಣ ; ಇಬ್ಬರು ಮಹಿಳಾ ಸಿಬ್ಬಂದಿ ಬಂಧನ – vishwanews24

ಬೆಂಗಳೂರು: ಡೇ ಕೇರ್‌ ಸೆಂಟರ್‌ ಪ್ರಕರಣ ; ಇಬ್ಬರು ಮಹಿಳಾ ಸಿಬ್ಬಂದಿ ಬಂಧನ ಬೆಂಗಳೂರು: ಇಲ್ಲಿನ ಬ್ರೂಕ್‌ಫೀಲ್ಡ್‌ನಲ್ಲಿರುವ ಡೇಕೇರ್ ಸೆಂಟರ್…

14 minutes ago

ಮಂಗಳೂರು : ಜೈಲಿನೊಳಗೆ ಗಾಂಜಾ ಎಸೆತ ಪ್ರಕರಣ ; ಓರ್ವನ ಬಂಧನ – vishwanews24

ಮಂಗಳೂರು : ಜೈಲಿನೊಳಗೆ ಗಾಂಜಾ ಎಸೆತ ಪ್ರಕರಣ ; ಓರ್ವನ ಬಂಧನ ಮಂಗಳೂರು: ನಗರದ ಜಿಲ್ಲಾ ಕಾರಾಗೃಹದ ಆವರಣದೊಳಗೆ ಗಾಂಜಾ…

48 minutes ago

ಮುಂಬಯಿ : ಮುಂಗಾರು ಮಳೆ ಅಬ್ಬರ; ಜನಜೀವನ  ಅಸ್ತವ್ಯಸ್ತ: ಆರೆಂಜ್‌ ಅಲರ್ಟ್‌ ಘೋಷಣೆ – vishwanews24

ಮುಂಬಯಿ : ಮುಂಗಾರು ಮಳೆ ಅಬ್ಬರ; ಜನಜೀವನ  ಅಸ್ತವ್ಯಸ್ತ: ಆರೆಂಜ್‌ ಅಲರ್ಟ್‌ ಘೋಷಣೆ ಮುಂಬಯಿ: ಮುಂಬಯಿಯಲ್ಲಿ ಮುಂಗಾರು ಮಳೆಯ ಅಬ್ಬರ…

1 hour ago

ಉಡುಪಿ: ಐವನ್ ಡಿಸೋಜರಿಗೆ ಸಚಿವ ಸ್ಥಾನ ನೀಡುವಂತೆ ಕೆಥೋಲಿಕ್ ಸಭಾದಿಂದ ಸಿಎಂಗೆ ಮನವಿ – vishwanews24

ಉಡುಪಿ: ಐವನ್ ಡಿಸೋಜರಿಗೆ ಸಚಿವ ಸ್ಥಾನ ನೀಡುವಂತೆ ಕೆಥೋಲಿಕ್ ಸಭಾದಿಂದ ಸಿಎಂಗೆ ಮನವಿ ಉಡುಪಿ: ಕಥೊಲಿಕ್ ಸಭಾ ಉಡುಪಿ ಹಾಗೂ…

2 hours ago

ಬ್ರಹ್ಮಾವರ : ಅಪ್ರಾಪ್ತ ಬಾಲಕನ ಅಪಹರಣ, ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣ ; ಇಬ್ಬರು ಆರೋಪಿಗಳ ಬಂಧನ – vishwanews24

ಬ್ರಹ್ಮಾವರ : ಅಪ್ರಾಪ್ತ ಬಾಲಕನ ಅಪಹರಣ, ಹಲ್ಲೆ ಹಾಗೂ ಜೀವ ಬೆದರಿಕೆ ಪ್ರಕರಣ ; ಇಬ್ಬರು ಆರೋಪಿಗಳ ಬಂಧನ ಉಡುಪಿ:…

2 hours ago