Featured

ಶಬರಿಮಲೆಗೆ ಮಹಿಳೆಯರ ಪ್ರವೇಶ ದೇವರಿಗೆ ವಿರುದ್ಧವಾಗಿದೆ- ವಿದ್ವಾನ್ ಅನಂತ್ ಶರ್ಮಾ

ಬೆಂಗಳೂರು: ಮಹಿಳೆಯರು ದೇವಸ್ಥಾನವನ್ನು ಪ್ರವೇಶ ಮಾಡಬಾರದು ಎಂಬುದು ಹಿಂದೂ ಸಂಪ್ರದಾಯದಲ್ಲಿ ಎಲ್ಲೂ ಇಲ್ಲ. ಆದ್ರೆ ಅಯ್ಯಪ್ಪನ ಮಂದಿರಕ್ಕೆ ಯಾಕೆ ಮಹಿಳೆಯರಿಗೆ ನಿಷೇಧ ಯಾಕೆ ಎನ್ನುವುದು ಇದೀಗ ಪ್ರಶ್ನೆಯಾಗಿದೆ. ಅಯ್ಯಪ್ಪ ಸ್ವಾಮಿ ಬ್ರಹ್ಮಚರಿಯಾಗಿ ಇರುವ ಕಾರಣ ಮಹಿಳೆಯರು ಹೋದರೆ ಅಯ್ಯಪ್ಪ ಸ್ವಾಮಿಗೆ ತೊಂದರೆಯಾಗಬಹುದು. ಒಬ್ಬ ಬ್ರಹ್ಮಚರಿಯಾದವನಿಗೆ ಹೀಗೆಯೇ ನಡೆದುಕೊಳ್ಳಬೇಕು ಎನ್ನುವ ನಿಯಮಗಳಿರುತ್ತವೆ. ಒಟ್ಟಿನಲ್ಲಿ ಸಂಪ್ರದಾಯಕ್ಕೆ ಭಂಗ ಮಾಡುವುದರಿಂದ ದೇವಸ್ಥಾನಕ್ಕೆ ತೊಂದರೆಯಾಗಬಹುದು ಎಂದು ವಿದ್ವಾನ್ ಅನಂತ್ ಶರ್ಮಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಋಗ್ವೇದ, ಯಜುರ್ವೇದ, ಸಾಮವೇದ ಮತ್ತು ಅಥರ್ವಣವೇದವನ್ನು ಪ್ರಭುಸಂಹಿತೆ ಅಂತ ಹೇಳುತ್ತೇವೆ. ಹಾಗೆಯೇ ಕೆಲವೊಂದು ಶಾಸ್ತ್ರಗಳಿವೆ. ಅವುಗಳನ್ನು ಮಿತ್ರ ಸಂಹಿತ, ಕಾವ್ಯಗಳನ್ನು ಕಾಂತಾ ಸಂಹಿತಾ ಅಂತ ಕರೆಯುತ್ತೇವೆ. ಈ ಮೂರನ್ನು ಇಟ್ಟುಕೊಂಡು ನಾವು ಜೀವನ ಮಾಡಬೇಕಿದೆ.

ಎರಡು ದೇವತೆಗಳ ಶಕ್ತಿಯ ಮಿಶ್ರಣದಿಂದ ಉದ್ಭವಾಗಿರುವ ಈ ದೇವರು ಬ್ರಹ್ಮಚಾರಿ ಎನ್ನುವ ಸ್ವರೂಪವಿದೆ. ಹಾಗಿರುವ ಕಾರಣದಿಂದ ಹಿಂದಿನ ಸಂಪ್ರದಾಯದಿಂದ ಬಂದಂತಹ ಕ್ರಮದಲ್ಲಿ ಋತುಮತಿಯಾದ ಸ್ತ್ರೀಯರು ದೇವರನ್ನು ನೋಡಬಾರದೆಂಬ ಪ್ರತೀತಿ ಇದೆ.

ಅದೇ ರೀತಿಯಾಗಿ ಸ್ತ್ರೀಯರಿಗೆ ದೇವಾಲಯ ಪ್ರವೇಶ ನಿರ್ಬಂಧ ಎನ್ನುವುದು ಶಾಸ್ತ್ರದಲ್ಲಿ ಎಲ್ಲೂ ಉಲ್ಲೇಖವಾಗಿಲ್ಲ. ಆದ್ರೆ ಸಂಪ್ರದಾಯದಲ್ಲಿ ಉಲ್ಲೇಖವಿದೆ. ಈ ಮಿತ್ರ ಸಂಹಿತೆ ಎನ್ನುವುದು ಶಾಸ್ತ್ರ ಆಗಿರೋದ್ರಿಂದ, ಇದರಲ್ಲಿ ಸಂಪ್ರದಾಯ ಹಾಗೂ ಶಾಸ್ತ್ರ ಎರಡನ್ನೂ ಸೇರಿಸಿಕೊಂಡು ನಾವು ಮಂದೆ ಹೋಗಬೇಕಾಗಿದೆ.

ಈ ಆಚರಣೆ ಹಿಂದಿನಿಂದ ಬಂದಿರುವಂತಹ ಒಂದು ಸಮಂಜಸವಾದ ಕ್ರಮ. ಅದರ ಬಗ್ಗೆ ನಾವು ಮಾತನಾಡಲು ಸಾಧ್ಯವಿಲ್ಲ. ಯಾಕಂದ್ರೆ ಶಾಸ್ತ್ರದ ದೃಷ್ಟಿಯಿಂದ ಕುಲ ಮತ್ತು ದೇಶ ಆಚಾರ ಧರ್ಮವನ್ನು ಉಲ್ಲಂಘನೆ ಮಾಡಬಾರದು ಅಂತ ಪುರಾಣದಲ್ಲಿದೆ. ಶಾಸ್ತ್ರದಲ್ಲಿ ಹೇಳಿರುವುದರಿಂದ ಆ ಸಂಪ್ರದಾಯವನ್ನೇ ಪಾಲಿಸಿಕೊಂಡು ಮುಂದುವರಿಯಬೇಕಾಗಿದೆ ಅಂತ ಹೇಳಿದರು.

ಇದೀಗ ಒಂದು ತೀರ್ಪು ಬಂದಿದೆ. ಯಾಕಂದ್ರೆ ಅದನ್ನು ಕಾನೂನು ತಜ್ಞರೇ ನೋಡಿಕೊಳ್ಳಬೇಕು. ಇಲ್ಲಿ ಮಹಿಳೆಯರಿಗೆ ಎನಾದ್ರೂ ಆಗುತ್ತೆ ಅಂತ ಅಲ್ಲ, ದೇವರಿಗೆ ತೊಂದರೆ ಆಗಲ್ಲ, ಆದ್ರೆ ದೇವರಿಗೆ ಇದು ಸಮಂಜಸವಲ್ಲ ಎಂದು ಅವರು ಪ್ರತಿಕ್ರಿಯಿಸಿದರು.

Vishwa News 24

Recent Posts

ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ – vishwanews24

ಕೇರಳದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಆಯ್ಕೆ ನವದೆಹಲಿ: ಹಲವು ದಿನಗಳಿಂದ ನಡೆಯುತ್ತಿದ್ದ ಹೈಡ್ರಾಮಕ್ಕೆ ತೆರೆ ಬಿದ್ದಿದ್ದು ಕೇರಳದ ನೂತನ…

4 minutes ago

ಹಿಜಾಬ್‌ಗೆ ಗ್ರೀನ್ ಸಿಗ್ನಲ್ : ಸರ್ಕಾರದ ನಡೆಗೆ ಹಿಂದೂ ಸಂಘಟನೆಗಳ ಭಾರೀ ವಿರೋಧ ; ರಾಜ್ಯಾದ್ಯಂತ  ಉಗ್ರ ಪ್ರತಿಭಟನೆ ಎಚ್ಚರಿಕೆ – vishwanews24

ಹಿಜಾಬ್‌ಗೆ ಗ್ರೀನ್ ಸಿಗ್ನಲ್ : ಸರ್ಕಾರದ ನಡೆಗೆ ಹಿಂದೂ ಸಂಘಟನೆಗಳ ಭಾರೀ ವಿರೋಧ ; ರಾಜ್ಯಾದ್ಯಂತ  ಉಗ್ರ ಪ್ರತಿಭಟನೆ ಎಚ್ಚರಿಕೆ…

11 minutes ago

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ -vishwanews24

ಕಿರುತೆರೆ ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ ಹಿಟ್ಲರ್ ಕಲ್ಯಾಣ’ ಧಾರವಾಹಿ ಖ್ಯಾತಿಯ ನಟ ದಿಲೀಪ್ ರಾಜ್ ಇಂದು ಬೆಳಗಿನ…

1 day ago

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  -vishwanews24

ಉಡುಪಿ : ಮಲಬಾರ್ ಗೋಲ್ಡ್‌ನಿಂದ 518 ವಿದ್ಯಾರ್ಥಿನಿಯರಿಗೆ 42 ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಣೆ  ಉಡುಪಿ : ಮಲಬಾರ್…

2 days ago

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ – vishwanews24

ಸುವೇಂದು ಆಪ್ತ ಚಂದ್ರನಾಥ್ ಹತ್ಯೆ ಪ್ರಕರಣ : ಸಿಬಿಐಗೆ ಹಸ್ತಾಂತರ ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ  ಬಿಜೆಪಿ ನಾಯಕ, ನೂತನ ಮುಖ್ಯಮಂತ್ರಿ…

2 days ago

ಭಸ್ಮಾಸುರ ಆಗಿರುವ ನರೇಂದ್ರ ಮೋದಿ ಅವರು ಪ್ರಜಾಪ್ರಭುತ್ವ ಸಂವಿಧಾನದ ಮೇಲೆ ಕೈ ಇಡದಿದ್ದರೆ ಸಾಕು : ಬಿ.ಕೆ ಹರಿಪ್ರಸಾದ್ ವಾಗ್ದಾಳಿ – vishwanews24

ಪ್ರಧಾನಿ  ಮೋದಿಯವರು ತಮ್ಮ ಕುರ್ಚಿ ಗಟ್ಟಿಯಾಗಿದೆಯೇ ನೋಡಿಕೊಳ್ಳಲಿ  .. ಪಂಚಾಯತಿ ಮೇಂಬರ್ ರೀತಿ ರಾಜಕಾರಣ ಮಾಡೋದು ಬಿಡಬೇಕು.. ಇಂದಿರಾ ಗಾಂಧಿ…

2 days ago