ಕೇರಳ: ಹಿಂದುತ್ವಕ್ಕೆ ಧಕ್ಕೆ ಉಂಟಾದಾಗ ಅದರ ಪರವಾಗಿ ಧ್ವನಿ ಎತ್ತುವುದು ಬಿಜೆಪಿ ಮತ್ತು ಆರ್ಎಸ್ಎಸ್ ಮಾತ್ರ ಎಂಬುದು ಕೇವಲ ಬಾಯಿ ಮಾತಿಗೆ ಹೇಳಿಕೊಂಡಿಲ್ಲ ಬದಲಾಗಿ ಯಾವ ರೀತಿ ಸವಾಲುಗಳನ್ನು ಎದುರಿಸಬೇಕು ಎಂಬುದನ್ನು ಇದೀಗ ಕೇರಳದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜಕೀಯ ಚಾಣಕ್ಯ ಅಮಿತ್ ಶಾ ಕಮ್ಯುನಿಸ್ಟರಿಗೆ ಎಚ್ಚರಿಕೆ ನೀಡಿದ್ದಾರೆ. ಕಮ್ಯೂನಿಸ್ಟರು ಪದೇ ಪದೇ ಕೇರಳದಲ್ಲಿ ಹಿಂದೂ ಕಾರ್ಯಕರ್ತರ ಮತ್ತು ಬಿಜೆಪಿ ಕಾರ್ಯಕರ್ತರಿಗೆ ತೊಂದರೆ ನೀಡಿ ತನ್ನ ರಾಜಕೀಯ ಆಟ ಆಡುತ್ತಿದೆ, ಆದರೆ ಇದಕ್ಕೆಲ್ಲ ಕೊನೆ ಹಾಡುವ ಕಾಲ ಬಂದಿದೆ. ಶಬರಿಮಲೆ ವಿಚಾರವಾಗಿ ಮೂಗುತೂರಿಸುತ್ತಿರುವ ಕೇರಳ ಸರಕಾರ ಅಯ್ಯಪ್ಪ ಭಕ್ತರ ಮೇಲೆ ಯಾವುದೇ ದಬ್ಬಾಳಿಕೆ ನಡೆಸಿದರು ಅದರ ಪರಿಣಾಮ ಬಹಳ ಘೋರವಾಗಿರುತ್ತದೆ ಎಂದು ಕಮ್ಯುನಿಸ್ಟರ ಕೋಟೆ ಕಣ್ಣೂರಿನಲ್ಲಿ ನಿಂತು ಗುಡುಗಿದ ಚಾಣಕ್ಯ, ಅಯ್ಯಪ್ಪ ಭಕ್ತರ ರಕ್ಷಣೆಗೆ ಬಿಜೆಪಿ ಮತ್ತು ಆರ್ಎಸ್ಎಸ್ ಕಾರ್ಯಕರ್ತರು ಬಂಡಕಲ್ಲಿನಂತೆ ಕಾವಲಾಗಿರುತ್ತೇವೆ ಎನ್ನುವ ಮೂಲಕ ಕೇರಳ ಕಮ್ಯುನಿಸ್ಟ್ ಸರಕಾರಕ್ಕೆ ಸವಾಲೆಸೆದಿದ್ದಾರೆ.!
ಬಿಜೆಪಿ ಕಛೇರಿ ಉದ್ಘಾಟನೆ ಮಾಡಿ ರಣಕಹಳೆ ಮೊಳಗಿಸಿದ ಶಾ.!
ಈಗಾಗಲೇ ಕೇರಳದಲ್ಲಿ ಕಮ್ಯುನಿಸ್ಟರ ಅಟ್ಟಹಾಸಕ್ಕೆ ಅಂತ್ಯವಾಡುವ ಸಮಯ ಬಂದಿದೆ, ಕಮ್ಯುನಿಸ್ಟ್ ಕಾರ್ಯಕರ್ಯರಿಂದ ನಿರಂತರ ತೊಂದರೆ ಅನುಭವಿಸಿ ಕಂಗಾಲಾಗಿರುವ ಕೇರಳದ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂದರೆ ತಪ್ಪಾಗದು. ಅದೇ ರೀತಿ ಕೇರಳದಲ್ಲಿ ಆರ್ಎಸ್ಎಸ್ ಪ್ರಾಬಲ್ಯ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೇರಳದ ಜನ ಕೂಡ ಬಿಜೆಪಿ ಕಡೆ ಹೆಚ್ಚು ಒಲವು ತೋರಿಸುತ್ತಿದ್ದು ಬಿಜೆಪಿ ಬಲಿಷ್ಠವಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿದೆ. ಅದೇ ರೀತಿ ಇದೀಗ ಕೇರಳದ ಕಣ್ಣೂರಿನಲ್ಲಿ ಭಾರತೀಯ ಜನತಾ ಪಕ್ಷದ ಕಛೇರಿ ಉದ್ಘಾಟನೆಗೆ ಆಗಮಿಸಿದ ಅಮಿತ್ ಶಾ, ಶಬರಿಮಲೆ ವಿಚಾರವಾಗಿ ಯಾವುದೇ ಕಾರಣಕ್ಕೂ ಅಯ್ಯಪ್ಪ ಭಕ್ತರು ಭಯಪಡಬೇಕಾದ ಅವಶ್ಯಕತೆ ಇಲ್ಲ, ಅಯ್ಯಪ್ಪ ಭಕ್ತರ ಜೊತೆ ಬಿಜೆಪಿ ಆರ್ಎಸ್ಎಸ್ ಸದಾ ಇದೆ ಎಂದು ಭರವಸೆ ನೀಡಿದ್ಧಾರೆ.!
ದೇವರ ನಾಡು ಎಂದು ಕರೆಯುತ್ತಿದ್ದ ಕೇರಳದಲ್ಲಿ ಇಂದು ನರಹಂತಕರು ಅಟ್ಟಹಾಸ ಮೆರೆಯುತ್ತಿದ್ದಾರೆ, ಆದರೆ ಇವೆಲ್ಲದಕ್ಕೂ ಕೊನೆಹಾಡಲು ಬಿಜೆಪಿ ತಯಾರಾಗಿದೆ ಎಂದಿರು ಶಾ, ಕಮ್ಯುನಿಸ್ಟರು ಹಿಂದೂಗಳ ಧಾರ್ಮಿಕ ವಿಚಾರವಾಗಿ ಕೈಹಾಕದೇ ಇದ್ದಷ್ಟು ಅವರಿಗೇ ಒಳ್ಳೆಯದು ಎಂದು ಹೇಳಿದ್ದಾರೆ. ಅಯ್ಯಪ್ಪ ಭಕ್ತರ ತಾಳ್ಮೆ ಪರೀಕ್ಷಿಸಿದ ಕೇರಳ ಸರಕಾರಕ್ಕೆ ಈಗಾಗಲೇ ಒಂದು ಬಾರಿ ಸೋಲಾಗಿದೆ, ಇದನ್ನು ಇಲ್ಲಿಗೆ ಕೈಬಿಟ್ಟರೆ ಒಳ್ಳೆಯದು, ಇಲ್ಲವಾದರೆ ಪರಿಣಾಮವನ್ನು ಎದುರಿಸಲು ತಯಾರಾಗಿ ಎಂದು ಸವಾಲು ಹಾಕಿದ್ದಾರೆ.!
ಭಕ್ತರು ಗೋಕರ್ಣದ ಗಣೇಶನ ವಿಗ್ರಹ ಸ್ಪರ್ಶಿಸಿ ಪೂಜೆ ಮಾಡುವಂತಿಲ್ಲ ಗೋಕರ್ಣ (ಉತ್ತರ ಕನ್ನಡ ಜಿಲ್ಲೆ): ಗೋಕರ್ಣದ ಮಹಾಗಣಪತಿ ದೇವಸ್ಥಾನದಲ್ಲಿರುವ ಸಾವಿರಾರು ವರ್ಷಗಳಷ್ಟು…
ಕೊಲಂಬೊ : ಅಕ್ರಮ ಪ್ರವೇಶಿಸಿ ಮೀನುಗಾರಿಕೆ ನಡೆಸಿದ ಆರೋಪ : 9 ಭಾರತೀಯ ಮೀನುಗಾರರನ್ನು ಬಂಧಿಸಿದ ಶ್ರೀಲಂಕಾ ಕೊಲಂಬೊ :…
ಸುಳ್ಯ: ಬೈಕ್-ಕಾರು ಅಪಘಾತ; ದ್ವಿತೀಯ ಪಿಯು ವಿದ್ಯಾರ್ಥಿ ಸಾವು ಅರಂತೋಡು: ಅರಂತೋಡು ಕುಲ್ಚಾರ್ ಸಮೀಪ ಬೈಕ್ ಕಾರು ನಡುವೆ ಅಪಘಾತ…
ಮಂಗಳೂರು: ವಿದ್ಯಾರ್ಥಿಗಳು, ವಿಪಕ್ಷ ನಾಯಕನ ಜೊತೆ ಆಡಳಿತ ಪಕ್ಷ ನಡೆಸಿಕೊಂಡ ರೀತಿ ಖಂಡನೀಯ: ರಮಾನಾಥ ರೈ ಮಂಗಳೂರು: ನೀಟ್ ಪರೀಕ್ಷೆಯಲ್ಲಿನ…
ಪ್ರಶ್ನೆ ಪತ್ರಿಕೆ ಸೋರಿಕೆ: ಕೇಂದ್ರ ಸರ್ಕಾರ ಯಾರನ್ನೂ ಕಾಪಾಡಬಾರದು : ಡಿ ಕೆ ಶಿವಕುಮಾರ್ ಆಗ್ರಹ ಬೆಂಗಳೂರು: ಪ್ರಶ್ನೆ ಪತ್ರಿಕೆ…
ವಿದ್ಯಾರ್ಥಿಗಳ ಹಿತಕ್ಕಾಗಿ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿದ್ದರೆ, ಬಿಜೆಪಿ ನಾಯಕರು ಮೋದಿ ಮೆಚ್ಚಿಸಲು ಪ್ರತಿಭಟಿಸುತ್ತಿದ್ದಾರೆ : ಗೃಹ ಸಚಿವ ಪ್ರಿಯಾಂಕ್ ಖರ್ಗೆ ಬೆಂಗಳೂರು:…