ಶಿರ್ವ: ಬೆಳಪುವಿನಲ್ಲಿರುವ ರೂಫಿಂಗ್ ಶೀಟ್ ತಯಾರು ಮಾಡುವ ಘಟಕಕ್ಕೆ ಕಚ್ಚಾ ಸಾಮಾಗ್ರಿ ಕಾಯಿಲ್ ಪೂರೈಸುವುದಾಗಿ ನಂಬಿಸಿ ಹಣ ಪಡೆದು ಕಾಯಿಲ್ ನೀಡದೆ ವಂಚಿಸಿದ ಘಟನೆಯ ಬಗ್ಗೆ ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.
ದುರ್ಗಾ(55) ವಂಚನೆಗೊಳಗಾದವರು. ಅವರು ಕಾಪು ತಾಲೂಕಿನ ಬೆಳಪು ಇಂಡಸ್ಟ್ರಿಯಲ್ ಏರಿಯಾದಲ್ಲಿ ರೂಫಿಂಗ್ ಶೀಟ್ ತಯಾರು ಮಾಡುವ ಘಟಕವನ್ನು ಜ. 14 ರಂದು ಪ್ರಾರಂಭಿಸಿದ್ದರು. ಘಟಕದ ಕಚ್ಚಾ ಸಾಮಾಗ್ರಿಗಾಗಿ ಗೂಗಲ್ನಲ್ಲಿ ಸರ್ಚ್ ಮಾಡುತ್ತಿದ್ದ ವೇಳೆ ಅವರ ಮೊಬೈಲ್ಗೆ ಫ್ರಾನ್ಸಿಸ್ ಡಿಸೋಜಾ ಎಂಬ ಹೆಸರಿನ ವ್ಯಕ್ತಿ ಕರೆಮಾಡಿ ನಮ್ಮ ಬಳಿ ಒಳ್ಳೆಯ ಕಾಯಿಲ್ ಇದ್ದು ನೀವು ಹಣ ಕಳುಹಿಸಿದರೆ ಕಾಯಿಲ್ ಸರಬರಾಜು ಮಾಡುವುದಾಗಿ ನಂಬಿಸಿ ಪದೇಪದೇ ಕರೆ ಮಾಡಿದ್ದಾನೆ. ಆತ ಮುಂಬೈಗೆ ಬರುವಂತೆ ತಿಳಿಸಿದಂತೆ ದುರ್ಗಾ ಅವರು ಮಾ. 28ರಂದು ಮುಂಬೈಗೆ ತೆರಳಿದ್ದು, ಮಾ. 30 ರಂದು ಮುಂಬೈಯ ತಲೋಜ ಇಂಡಸ್ಟ್ರಿಯಲ್ ಏರಿಯಾಕ್ಕೆ ಬರುವಂತೆ ಲೊಕೇಶನ್ ಕಳುಹಿಸಿದ್ದಾನೆ. ದುರ್ಗಾ ಅವರು ಅಲ್ಲಿಗೆ ಹೋದಾಗ ಒಬ್ಬ ವ್ಯಕ್ತಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ನಿಂತಿದ್ದು, ತಾನೇ ಫ್ರಾನ್ಸಿಸ್ ಡಿಸೋಜಾ ಎಂದು ಪರಿಚಯಿಸಿಕೊಂಡು ಅಲ್ಲಿಯೇ ಇದ್ದ ಗೋಡೌನ್ ಒಳಗಡೆ ಕರೆದುಕೊಂಡು ಹೋಗಿ ಅಲ್ಲಿದ್ದ ಕಾಯಿಲ್ನ್ನು ತೋರಿಸಿ ಗೋಡೌನ್ ಮಾಲಿಕ ತಾನೇ ಎಂದು ತಿಳಿಸಿದ್ದಾನೆ.
ಆತನ ಮಾತನ್ನು ನಂಬಿ ಕಾಯಿಲ್ ಬೇಕು ಎಂದು ಒಪ್ಪಿ ಊರಿಗೆ ಹಿಂತಿರುಗಿ ಬಂದು ಮೂಲ್ಕಿಯ ಬ್ಯಾಂಕ್ ಆಫ್ ಬರೋಡಾ ಶಾಖೆಯಲ್ಲಿ 20 ಲ. ರೂ.ಸಾಲ ಮಾಡಿ ಸಾಲ ಮಂಜೂರಾದ ಬಳಿಕ ಎ. 18 ರಂದು ಫ್ರಾನ್ಸಿಸ್ ಡಿಸೋಜಾನಿಗೆ ಕರೆಮಾಡಿ ಹಣ ಯಾರ ಹೆಸರಿಗೆ ಕಳುಹಿಸಬೇಕು ಎಂದು ವಿಚಾರಿಸಿದ್ದಾರೆ. ಆತ ಕೊಟೇಶನ್ ಕಳುಹಿಸಿ ಮೊಬೈಲ್ ಮೂಲಕ ತಿಳಿಸಿದಂತೆ ಕೊಟೇಶನ್ನಲ್ಲಿದ್ದ ಖಾತೆ ನಂಬ್ರಕ್ಕೆ ಬ್ಯಾಂಕ್ ಆಫ್ ಬರೋಡಾ ಮೂಲ್ಕಿ ಶಾಖೆಯಿಂದ 8 ಲ. ರೂ. ಹಣವನ್ನು ಆರ್ಟಿಜಿಎಸ್ ಮೂಲಕ ಕಳುಹಿಸಿದ್ದಾರೆ. ಹಣ ಪಡೆದ ಬಳಿಕ ಆತನ ಮೊಬೈಲ್ ಸ್ವಿಚ್ಆಫ್ ಬರುತ್ತಿದ್ದು, ಮೊಬೈಲ್ನಲ್ಲಿ ಮೆಸೇಜ್ ಮೂಲಕ ಕಾಯಿಲ್ ಕೂಡಲೇ ಕಳುಹಿಸಿ ಕೊಡುತ್ತೇನೆಂದು ಉತ್ತರಿಸುತ್ತಿದ್ದಾನೆ. ಆದರೆ ಫ್ರಾನ್ಸಿಸ್ ಡಿಸೋಜಾ ಕಾಯಿಲ್ ನೀಡುವುದಾಗಿ ನಂಬಿಸಿ 8 ಲ. ರೂ. ಪಡೆದು ಕಾಯಿಲ್ ನೀಡದೆ,ಪಡೆದ ಹಣ ವಾಪಾಸು ನೀಡದೆ ನಂಬಿಕೆ ದ್ರೋಹ ಎಸಗಿದ್ದಾನೆಂದು ದುರ್ಗಾ ಅವರು ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…