Featured

ಶಿರ್ವ: ಕಚ್ಚಾ ಸಾಮಾಗ್ರಿ ಕಾಯಿಲ್‌ ಪೂರೈಸುವುದಾಗಿ ನಂಬಿಸಿ ಹಣ ಪಡೆದು ಕಾಯಿಲ್‌ ನೀಡದೆ ವಂಚನೆ; ದೂರು ದಾಖಲು – Vishwanews24

ಶಿರ್ವ: ಕಚ್ಚಾ ಸಾಮಾಗ್ರಿ ಕಾಯಿಲ್‌ ಪೂರೈಸುವುದಾಗಿ ನಂಬಿಸಿ ಹಣ ಪಡೆದು ಕಾಯಿಲ್‌ ನೀಡದೆ ವಂಚನೆ; ದೂರು ದಾಖಲು

ಶಿರ್ವ: ಬೆಳಪುವಿನಲ್ಲಿರುವ ರೂಫಿಂಗ್‌ ಶೀಟ್‌ ತಯಾರು ಮಾಡುವ ಘಟಕಕ್ಕೆ ಕಚ್ಚಾ ಸಾಮಾಗ್ರಿ ಕಾಯಿಲ್‌ ಪೂರೈಸುವುದಾಗಿ ನಂಬಿಸಿ ಹಣ ಪಡೆದು ಕಾಯಿಲ್‌ ನೀಡದೆ ವಂಚಿಸಿದ ಘಟನೆಯ ಬಗ್ಗೆ ಶಿರ್ವ ಠಾಣೆಯಲ್ಲಿ ದೂರು ದಾಖಲಾಗಿದೆ.

ದುರ್ಗಾ(55) ವಂಚನೆಗೊಳಗಾದವರು. ಅವರು ಕಾಪು ತಾಲೂಕಿನ ಬೆಳಪು ಇಂಡಸ್ಟ್ರಿಯಲ್‌ ಏರಿಯಾದಲ್ಲಿ ರೂಫಿಂಗ್‌ ಶೀಟ್‌ ತಯಾರು ಮಾಡುವ ಘಟಕವನ್ನು ಜ. 14 ರಂದು ಪ್ರಾರಂಭಿಸಿದ್ದರು. ಘಟಕದ ಕಚ್ಚಾ ಸಾಮಾಗ್ರಿಗಾಗಿ ಗೂಗಲ್‌ನಲ್ಲಿ ಸರ್ಚ್‌ ಮಾಡುತ್ತಿದ್ದ ವೇಳೆ ಅವರ ಮೊಬೈಲ್‌ಗೆ ಫ್ರಾನ್ಸಿಸ್‌ ಡಿಸೋಜಾ ಎಂಬ ಹೆಸರಿನ ವ್ಯಕ್ತಿ ಕರೆಮಾಡಿ ನಮ್ಮ ಬಳಿ ಒಳ್ಳೆಯ ಕಾಯಿಲ್‌ ಇದ್ದು ನೀವು ಹಣ ಕಳುಹಿಸಿದರೆ ಕಾಯಿಲ್‌ ಸರಬರಾಜು ಮಾಡುವುದಾಗಿ ನಂಬಿಸಿ ಪದೇಪದೇ ಕರೆ ಮಾಡಿದ್ದಾನೆ. ಆತ ಮುಂಬೈಗೆ ಬರುವಂತೆ ತಿಳಿಸಿದಂತೆ ದುರ್ಗಾ ಅವರು ಮಾ. 28ರಂದು ಮುಂಬೈಗೆ ತೆರಳಿದ್ದು, ಮಾ. 30 ರಂದು ಮುಂಬೈಯ ತಲೋಜ ಇಂಡಸ್ಟ್ರಿಯಲ್‌ ಏರಿಯಾಕ್ಕೆ ಬರುವಂತೆ ಲೊಕೇಶನ್‌ ಕಳುಹಿಸಿದ್ದಾನೆ. ದುರ್ಗಾ ಅವರು ಅಲ್ಲಿಗೆ ಹೋದಾಗ ಒಬ್ಬ ವ್ಯಕ್ತಿ ಮುಖಕ್ಕೆ ಮಾಸ್ಕ್ ಹಾಕಿಕೊಂಡು ನಿಂತಿದ್ದು, ತಾನೇ ಫ್ರಾನ್ಸಿಸ್‌ ಡಿಸೋಜಾ ಎಂದು ಪರಿಚಯಿಸಿಕೊಂಡು ಅಲ್ಲಿಯೇ ಇದ್ದ ಗೋಡೌನ್‌ ಒಳಗಡೆ ಕರೆದುಕೊಂಡು ಹೋಗಿ ಅಲ್ಲಿದ್ದ ಕಾಯಿಲ್‌ನ್ನು ತೋರಿಸಿ ಗೋಡೌನ್‌ ಮಾಲಿಕ ತಾನೇ ಎಂದು ತಿಳಿಸಿದ್ದಾನೆ.

ಆತನ ಮಾತನ್ನು ನಂಬಿ ಕಾಯಿಲ್‌ ಬೇಕು ಎಂದು ಒಪ್ಪಿ ಊರಿಗೆ ಹಿಂತಿರುಗಿ ಬಂದು ಮೂಲ್ಕಿಯ ಬ್ಯಾಂಕ್‌ ಆಫ್‌ ಬರೋಡಾ ಶಾಖೆಯಲ್ಲಿ 20 ಲ. ರೂ.ಸಾಲ ಮಾಡಿ ಸಾಲ ಮಂಜೂರಾದ ಬಳಿಕ ಎ. 18 ರಂದು ಫ್ರಾನ್ಸಿಸ್‌ ಡಿಸೋಜಾನಿಗೆ ಕರೆಮಾಡಿ ಹಣ ಯಾರ ಹೆಸರಿಗೆ ಕಳುಹಿಸಬೇಕು ಎಂದು ವಿಚಾರಿಸಿದ್ದಾರೆ. ಆತ ಕೊಟೇಶನ್‌ ಕಳುಹಿಸಿ ಮೊಬೈಲ್‌ ಮೂಲಕ ತಿಳಿಸಿದಂತೆ ಕೊಟೇಶನ್‌ನಲ್ಲಿದ್ದ ಖಾತೆ ನಂಬ್ರಕ್ಕೆ ಬ್ಯಾಂಕ್‌ ಆಫ್‌ ಬರೋಡಾ ಮೂಲ್ಕಿ ಶಾಖೆಯಿಂದ 8 ಲ. ರೂ. ಹಣವನ್ನು ಆರ್‌ಟಿಜಿಎಸ್‌ ಮೂಲಕ ಕಳುಹಿಸಿದ್ದಾರೆ. ಹಣ ಪಡೆದ ಬಳಿಕ ಆತನ ಮೊಬೈಲ್‌ ಸ್ವಿಚ್‌ಆಫ್‌ ಬರುತ್ತಿದ್ದು, ಮೊಬೈಲ್‌ನಲ್ಲಿ ಮೆಸೇಜ್‌ ಮೂಲಕ ಕಾಯಿಲ್‌ ಕೂಡಲೇ ಕಳುಹಿಸಿ ಕೊಡುತ್ತೇನೆಂದು ಉತ್ತರಿಸುತ್ತಿದ್ದಾನೆ. ಆದರೆ ಫ್ರಾನ್ಸಿಸ್‌ ಡಿಸೋಜಾ ಕಾಯಿಲ್‌ ನೀಡುವುದಾಗಿ ನಂಬಿಸಿ 8 ಲ. ರೂ. ಪಡೆದು ಕಾಯಿಲ್‌ ನೀಡದೆ,ಪಡೆದ ಹಣ ವಾಪಾಸು ನೀಡದೆ ನಂಬಿಕೆ ದ್ರೋಹ ಎಸಗಿದ್ದಾನೆಂದು ದುರ್ಗಾ ಅವರು ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vishwa News 24

Recent Posts

ಉಪ್ಪೂರು : ವಯೋವಂದನ ಆತಿಥ್ಯ ಗೃಹ “ಸೈಟ್ ಆಫೀಸ್” ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ -vishwanews24

ಉಪ್ಪೂರು : ವಯೋವಂದನ ಆತಿಥ್ಯ ಗೃಹ "ಸೈಟ್ ಆಫೀಸ್" ಉದ್ಘಾಟನೆ ; ರಾಷ್ಟ್ರಧ್ವಜಾರೋಹಣ, ವೃಕ್ಷಾರೋಪಣ ಕಾರ್ಯಕ್ರಮ ಉಡುಪಿ ಜಿಲ್ಲೆ ಬ್ರಹ್ಮಾವರ…

3 hours ago

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ – ಬೈಕ್ ನಡುವೆ ಭೀಕರ ಅಪಘಾತ : ಸವಾರ ಸ್ಥಳದಲ್ಲೇ ಮೃತ್ಯು – vishwanews24

ಪುತ್ತೂರು:  ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ  ಭೀಕರ ಅಪಘಾತ: ಸವಾರ ಸ್ಥಳದಲ್ಲೇ ಮೃತ್ಯು ಪುತ್ತೂರು: ಕೆಯ್ಯರು ಗ್ರಾಮದ ಬೊಳಿಕ್ಕಳ…

23 hours ago

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ – vishwanews24

ಸೆ.30ರೊಳಗೆ ಎಲ್ಲ ಪಡಿತರ ಚೀಟಿದಾರರು e-KYC ಮಾಡಿಸುವುದು ಕಡ್ಡಾಯ : ಸಚಿವ ರಿಜ್ವಾನ್ ಅರ್ಷದ್ ಬೆಂಗಳೂರು : ಕೇಂದ್ರ ಸರಕಾರದ…

23 hours ago

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ – vishwanews24

ಬೆಂಗಳೂರು: ಕೌಟುಂಬಿಕ ಕಲಹ ; ಹೆಂಡತಿ ಕೊಂದು ಗಂಡ ಆತ್ಮಹತ್ಯೆ ಬೆಂಗಳೂರು: ನಗರದ ರಾಜೇಶ್ವರಿ ನಗರದಲ್ಲಿ ಹೆಂಡತಿಯನ್ನು ಕೊಂದು ಗಂಡ…

23 hours ago

ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ ಕಲಿಯಬೇಕಿಲ್ಲ : ವಿಪಕ್ಷಗಳಿಗೆ ಜಮೀರ್ ಅಹ್ಮದ್ ಖಾನ್‌  ತಿರುಗೇಟು – vishwanews24

ಸ್ವಕ್ಷೇತ್ರದಲ್ಲಿ 80ನೇ ಸ್ವಾತಂತ್ರ್ಯೋತ್ಸವ  ಧ್ವಜಾರೋಹಣ ಕಾರ್ಯಕ್ರಮದಲ್ಲಿ ಜಮೀರ್‌ ಅಹ್ಮದ್‌ ಭಾಗಿ ನಾನು ಹಿಂದೂಸ್ತಾನಿ, ನಾನು ಕನ್ನಡಿಗ, ದೇಶದ ಅಭಿಮಾನವನ್ನ ಬಿಜೆಪಿಯವರಿಂದ…

24 hours ago

ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ – vishwanews24

ಗುಟ್ಕಾ, ಪಾನ್ ಮಸಾಲ ನಿಷೇಧ ಆದೇಶ ನಾವು ವಾಪಸ್ ಪಡೆದಿಲ್ಲ: ಯು.ಟಿ.ಖಾದರ್ ಸ್ಪಷ್ಟನೆ ಅಡಿಕೆ ಬೆಲೆ ಕುಸಿಯಲ್ಲ, ಬೆಳೆಗಾರರಿಗೆ ಸಮಸ್ಯೆ…

24 hours ago