ಶಿರ್ವ: ರೈಲ್ವೆ ಟಿಕೇಟ್ ವಿಚಾರದಲ್ಲಿ ಯುವಕರಿಬ್ಬರು ಟ್ರಾವೆಲ್ ಏಜನ್ಸಿಯಾಗಿ ಕೆಲಸ ನಿರ್ವಹಿಸುತ್ತಿರುವ ಕಚೇರಿಗೆ ಅಕ್ರಮ ಪ್ರವೇಶ ಮಾಡಿ ಮಾಲಿಕರಿಗೆ ಹಲ್ಲೆ ನಡೆಸಿದ ಘಟನೆ ಮೇ. 23 ರಂದು ಮಧ್ಯಾಹ್ನ ನಡೆದಿದೆ. ಕಳತ್ತೂರು ಪೈಯ್ನಾರು ನಿವಾಸಿ ಗಣೇಶ್ ಕುಮಾರ್ ಹಲ್ಲೆಗೊಳಗಾದವರು.
ಘಟನೆಯ ವಿವರ
ಶಿರ್ವ ಮಂಚಕಲ್ ಪೇಟೆಯ ಮುಖ್ಯ ರಸ್ತೆಯ ಬದಿಯಲ್ಲಿರುವ ನಿಸರ್ಗ ಸರ್ವಿಸಸ್ ಟ್ರಾವೆಲ್ ಏಜನ್ಸಿ ಕಚೇರಿಗೆ ಮೇ. 21ರಂದು ಗ್ರಾಹಕರಾಗಿ ಬಂದ ಪಾದೂರಿನ ಸಂತೋಷ್ ಶೆಟ್ಟಿ ಮತ್ತು ಅಭಿಷೇಕ್ ಶೆಟ್ಟಿ ಮೇ 22 ರಂದು ಮುಂಬೈಗೆ ತೆರಳಲು 2 ಟಿಕೇಟ್ ಬುಕ್ ಮಾಡಿ ಟಿಕೇಟ್ನ ಹಣ ರೂ.3200/- ಪಾವತಿಸಿದ್ದರು. ಬುಕ್ ಮಾಡಿದ ಟಿಕೇಟ್ ವೈಟಿಂಗ್ ಲಿಸ್ಟ್ನಲ್ಲಿದ್ದು ಮೇ. 22 ರಂದು ಟಿಕೇಟ್ ಕನ್ಫರ್ಮ್ ಆಗದೇ ಇರುವುದರಿಂದ ಕ್ಯಾನ್ಸಲ್ ಮಾಡಲು ತಿಳಿಸಿದ್ದರು. ಆವಾಗಲೇ ಟಿಕೇಟ್ ಚಾರ್ಟ್ ಆಗಿರುವುದರಿಂದ ಕ್ಯಾನ್ಸಲ್ ಮಾಡಲು ಆಗುವುದಿಲ್ಲ, ಮೂರು ದಿನ ಬಿಟ್ಟು ಕ್ಯಾನ್ಸಲೇಶನ್ ಹಣ ಕಟ್ಟಾಗಿ ನನ್ನ ಖಾತೆಗೆ ಜಮಾ ಆಗುತ್ತದೆ ಎಂದು ತಿಳಿಸಿದ ಗಣೇಶ್ ಮೇ. 22 ರಂದು ರೂ. 2500/- ಸಂತೋಷ್ ಶೆಟ್ಟಿಗೆ ಪಾವತಿಸಿದ್ದಾರೆ. ಉಳಿದ ಹಣವನ್ನು 2 ದಿನ ಬಿಟ್ಟು ಗೂಗಲ್ ಪೇ ಮಾಡುವುದಾಗಿ ತಿಳಿಸಿದಾಗ ಅವರು ಒಪ್ಪಿದ್ದು, ಅಲ್ಲಿಂದ ತೆರಳಿದ್ದಾರೆ.
ಮೇ. 23 ರಂದು ಮಧ್ಯಾಹ್ನ ನಿಸರ್ಗ ಕಚೇರಿಗೆ ಏಕಾಎಕಿ ಅಕ್ರಮ ಪ್ರವೇಶ ಮಾಡಿದ ಆರೋಪಿಗಳಾದ ಅಭಿಷೇಕ್ ಶೆಟ್ಟಿ ಮತ್ತು ಸಂತೋಷ್ ಶೆಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಗಣೇಶನ ಮೇಲೆ ಹಲ್ಲೆ ನಡೆಸಿದ್ದಾರೆ. ತಲೆ ,ಮೂಗು,ಹಣೆ,ಮತ್ತು ಕೈಗೆ ಗಾಯಗೊಂಡಿದ್ದ ಗಣೇಶ್ ಶಿರ್ವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ರೈಲ್ವೆ ಟಿಕೇಟ್ ವಿಚಾರದಲ್ಲಿ ಆರೋಪಿಗಳು ಕಚೇರಿಗೆ ಅಕ್ರಮ ಪ್ರವೇಶ ಮಾಡಿ ಕಚೇರಿಯಲ್ಲಿದ್ದ ಸೊತ್ತುಗಳನ್ನು ಹಾನಿ ಮಾಡಿದ್ದು, 2,00,000/- ಲ.ರೂ. ಹಾನಿ ಸಂಭವಿಸಿದೆ ಅಲ್ಲದೆ ಸಂತೋಷ್ ಶೆೆಟ್ಟಿ ಸಂಜೆಯೊಳಗೆ ನಿನ್ನನ್ನು ತೆಗೆಯುತ್ತೇನೆಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಅಂಗಡಿ ಮಾಲಿಕ ಗಣೇಶ್ ನೀಡಿದ ದೂರಿನಂತೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…