ದಕ್ಷಿಣ ಕನ್ನಡ

ಶೀಘ್ರದಲ್ಲಿ ನಗರಗಳ ಸ್ವಚ್ಛತಾ ರೇಟಿಂಗ್‌ ಪ್ರಕಟ ; ಮಂಗಳೂರಿಗೆ ಅಗ್ರ ಸ್ಥಾನದ ನಿರೀಕ್ಷೆ…..

ಮಹಾನಗರ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನವಮಂಗಳೂರು ಬಂದರು ಸ್ವಚ್ಛತೆಯಲ್ಲಿ ದೇಶದಲ್ಲಿಯೇ ನಂ. 1 ಸ್ಥಾನಕ್ಕೆ ಭಾಜನವಾದಂತೆ, ಬಹುನಿರೀಕ್ಷಿತ ‘ಸ್ವಚ್ಛ ಸರ್ವೇಕ್ಷಣ್‌’ ವರದಿ ಶೀಘ್ರದಲ್ಲಿ ಪ್ರಕಟವಾಗಲಿದ್ದು, ಮಹಾನಗರ ಪಾಲಿಕೆಗೆ ಅಗ್ರಸ್ಥಾನ ದೊರೆಯುವ ನಿರೀಕ್ಷೆ ಇದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ‘ಸ್ವಚ್ಛ ಭಾರತ ಮಿಷನ್‌’ ಅಡಿಯಲ್ಲಿ ಸ್ವಚ್ಛತೆಗಾಗಿ ನಗರಗಳಿಗೆ ನೀಡುವ ರೇಟಿಂಗ್‌ ಸಂಬಂಧಿಸಿ, ಮಂಗಳೂರು ನಗರದಲ್ಲಿ ಸ್ವಚ್ಛತೆಗಾಗಿ ಕೈಗೊಂಡ ಅಂಶಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಅಧಿಕಾರಿಗಳ ತಂಡ ಇತ್ತೀಚೆಗೆ ನಗರಕ್ಕೆ
ಆಗಮಿಸಿ, ಪರಿಶೀಲನೆ ನಡೆಸಿ ಅಂಕಗಳನ್ನು ಹಂಚಿಕೆ ಮಾಡಿದೆ.

ಜತೆಗೆ ನಗರದ ಜನರಿಂದ ಕೆಲವು ಪ್ರಶ್ನೆಗಳಿಗೆ ಉತ್ತರ ಆಹ್ವಾನಿಸಿ ಅದರ ಮೂಲಕವೂ ಅಂಕಗಳ ಹಂಚಿಕೆ ನಡೆಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅಂತಿಮ ಫಲಿತಾಂಶ ಬರಲು ಬಾಕಿಯಿದೆ.

ಕಳೆದ ಬಾರಿ 63ನೇ ಸ್ಥಾನ
ಕಳೆದ ಬಾರಿ ನಡೆದ ‘ಸ್ವಚ್ಛ ಸರ್ವೇಕ್ಷಣ’ ದಲ್ಲಿ ಕರ್ನಾಟಕದ 27 ನಗರಗಳು ಪಾಲ್ಗೊಂಡಿದ್ದವು. ಅವುಗಳ ಪೈಕಿ ಮಂಗಳೂರು ಪಾಲಿಕೆಯು ದೇಶದಲ್ಲಿಯೇ 63ನೇ ಸ್ಥಾನಗಳಿಸಿದೆ. 2017ರಲ್ಲಿ 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ನಗರಗಳನ್ನು ಆಯ್ಕೆ ಮಾಡಲಾಗಿತ್ತು. ಈ ಬಾರಿ ದೇಶದ ಎಲ್ಲ ನಗರಗಳನ್ನು ಆಯ್ಕೆ ಮಾಡಿರುವುದರಿಂದ ಇನ್ನಷ್ಟು ಸವಾಲಿನ ಸ್ಪರ್ಧೆಯನ್ನು ಮಂಗಳೂರು ಎದುರಿಸಲಿದೆ.

‘ಸ್ವಚ್ಛ ಮಂಗಳೂರು’ ಸಂಕಲ್ಪ
ಶ್ರೀ ರಾಮಕೃಷ್ಣ ಮಿಷನ್‌, ಮಾತಾ ಅಮೃತಾನಂದಮಯಿ ಬಳಗದಿಂದ ನಡೆದ ‘ಸ್ವಚ್ಛ ಮಂಗಳೂರು’ ಅಭಿಯಾನದಿಂದಾಗಿ ಮಂಗಳೂರು ಸ್ವಚ್ಛತೆಯಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಇದು ಕೂಡ ಹೆಚ್ಚಿನ ಅಂಕಗಳಿಕೆಗೆ ಸಹಾಯವಾಗಬಹುದು ಎಂಬ ನಿರೀಕ್ಷೆ ಇದೆ.

 

ಸ್ವಚ್ಛ ಸರ್ವೆಕ್ಷಣೆ; ಅಂಕಗಳ ಹಂಚಿಕೆ
ಸ್ವಚ್ಛ ಸರ್ವೇಕ್ಷಣ- 2018 ರಲ್ಲಿ ಎಲ್ಲ ನಗರಗಳಿಗೆ 4 ಹಂತಗಳಲ್ಲಿ ಅಂಕಗಳನ್ನು ನಿಗದಿಪಡಿಸಲಾಗಿದೆ. ಅದರಲ್ಲಿ ಸ್ಥಳೀಯ ಸಂಸ್ಥೆಗಳಿಂದ ಸಲ್ಲಿಸಲಾಗುವ ದಾಖಲೆಗಳಿಗೆ +1,400, ಸಾರ್ವಜನಿಕ ಅಭಿಪ್ರಾಯಗಳಿಗೆ +1,400, ಕೇಂದ್ರ ತಂಡದ ನೇರ ಸಮೀಕ್ಷೆಗೆ + 1,200 ಹಾಗೂ ಸ್ವಂತ ದೃಢೀಕರಣಕ್ಕೆ 440 ಅಂಕ ನಿಗದಿಪಡಿಸಲಾಗಿದೆ. ಸಮೀಕ್ಷೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ವಿಶೇಷ ಆದ್ಯತೆ ನೀಡಿದ್ದು, ಸ್ವಚ್ಛತಾ ಆ್ಯಪ್‌ ಮುಖಾಂತರ ಪ್ರಶ್ನೆಗಳಿಗೆ ಉತ್ತರ ನಿರೀಕ್ಷಿಸಲಾತ್ತು. ಇದರಲ್ಲಿ ಬಂದ ಉತ್ತರದ ಆಧಾರದಲ್ಲಿ ಅಂಕಗಳ ಹಂಚಿಕೆ ಮಾಡಲಾಗುತ್ತದೆ.

ಏರ್‌ಪೋರ್ಟ್‌- ಎನ್‌ಎಂಪಿಟಿಗೆ ಸ್ವಚ್ಛತೆಯ ಗೌರವ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೇಶದಲ್ಲಿಯೇ ನಂ. 1 ‘ಸ್ವಚ್ಛ ನಿಲ್ದಾಣ ಎಂಬ ಹೆಗ್ಗಳಿಕೆ ಲಭಿಸಿದೆ. ಕೇಂದ್ರ ಸರಕಾರ ಫೆಬ್ರವರಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ 15ರಿಂದ 50 ಲಕ್ಷದವರೆಗಿನ ಪ್ರಯಾಣಿಕರ ನಿರ್ವಹಣೆಯ ವಿಭಾಗದಲ್ಲಿ ಮೊದಲ ಸ್ಥಾನ ಲಭಿಸಿದೆ. ನವಮಂಗಳೂರು ಬಂದರು ಸ್ವತ್ಛತೆಯಲ್ಲಿ ದೇಶದ 12 ಬಂದರುಗಳ ಪೈಕಿ ಮೊದಲ ಸ್ಥಾನ ಗಳಿಸಿದ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ನೌಕಾಯಾನ ಇಲಾಖೆಯು ಅಧ್ಯಯನ ನಡೆಸಿ ವರದಿ ನೀಡಲು ಕ್ವಾಲಿಟಿ ಕೌನ್ಸೆಲ್‌ ಆಫ್‌ ಇಂಡಿಯಾ ಸಂಸ್ಥೆಯನ್ನು ನೇಮಿಸಿತ್ತು. ಅದರಂತೆ ಬಂದರು ಒಳಭಾಗ, ಸರಕು ನಿರ್ವಹಣೆ ಪ್ರದೇಶ, ಬಂದರು ಕಚೇರಿ, ಹಸಿರು ವಲಯ ನಿರ್ಮಾಣ ಹೀಗೆ ವಿವಿಧ ವಿಭಾಗದ ಸಾಧನೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ.

ಅಗ್ರಸ್ಥಾನದ ವಿಶ್ವಾಸ
ಈಗಾಗಲೇ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ‘ಸ್ವಚ್ಛ  ಭಾರತ ಮಿಷನ್‌’ ಅಡಿಯಲ್ಲಿ ನಗರಗಳಿಗೆ ನೀಡುವ ಸ್ವಚ್ಛತಾ ರೇಟಿಂಗ್‌ ಬಗ್ಗೆ ಪರಿಶೀಲನ ತಂಡ ಮಂಗಳೂರಿಗೆ ಆಗಮಿಸಿ ಪರಿಶೀಲಿಸಿದೆ. ಮಂಗಳೂರಿಗೆ ಅಗ್ರಸ್ಥಾನ ದೊರೆಯುವ ವಿಶ್ವಾಸವಿದೆ.
 ಮೊಹಮ್ಮದ್‌ ನಝೀರ್‌,
ಮನಪಾ ಆಯುಕ್ತರು

 

Vishwa News 24

Recent Posts

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ 4 ತಿಂಗಳ ಕಾಲ ನಿಷೇಧ – vishwanews24

ಮಲ್ಪೆ : ಸೈಂಟ್‌ಮೇರೀಸ್‌ ದ್ವೀಪ ಪ್ರವೇಶ ಹಾಗೂ ಜಲ ಕ್ರೀಡೆಗಳಿಗೆ ಮೇ 16ರಿಂದ ಸೆಪ್ಟೆಂಬರ್15ರ ವರೆಗೆ ಸಂಪೂರ್ಣ ನಿಷೇಧ ಮಲ್ಪೆ:…

13 hours ago

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ – vishwanews24

ಜೂನ್‌ 21ರಂದು ನೀಟ್‌ ಯುಜಿ ಮರು ಪರೀಕ್ಷೆ ನವದೆಹಲಿ: ಜೂನ್‌ 21 ರಂದು ನೀಟ್‌–ಯುಜಿ  ಮರು ಪರೀಕ್ಷೆ ನಡೆಸಲಾಗುವುದು ರಾಷ್ಟ್ರೀಯ…

13 hours ago

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್ ಶೆಟ್ಟಿ ಬಿಲ್ಲಾಡಿ – vishwanews24

ಉಡುಪಿ ಜಿಲ್ಲೆಯ ನಿರ್ಲಕ್ಷ್ಯ : ಮೇ 16ರಂದು ಜಿಲ್ಲಾ ಉಸ್ತುವಾರಿ ಸಚಿವರಿಗೆ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ :  ಪೃಥ್ವಿರಾಜ್…

1 day ago

ಜನಿವಾರ, ಹಿಜಾಬ್, ಉಡುದಾರ, ರುದ್ರಾಕ್ಷಿ ಹಾಕಿಕೊಳ್ಳಬಹುದು ಹೊರತು ಕೇಸರಿ ಶಾಲಿಗೆ ಅವಕಾಶ ಇಲ್ಲ : ಸಿಎಂ ಸ್ಪಷ್ಟನೆ – vishwanews24

ಸಾಂಪ್ರದಾಯಿಕ ಧಾರ್ಮಿಕ ಸಂಕೇತಗಳನ್ನು ಧರಿಸಬಹುದು, ಹೊಸದಾಗಿ ಮಾಡುವಂತಿಲ್ಲ : ಸಿಎಂ ಸ್ಪಷ್ಟನೆ ಮೈಸೂರು : "ಪ್ರಾಥಮಿಕ ತರಗತಿಯಿಂದ 12ನೇ ತರಗತಿಯವರೆಗೆ…

1 day ago

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ : ತಮಿಳುನಾಡು ಸರ್ಕಾರ ಆದೇಶ – vishwanews24

ಮದ್ಯ ಖರೀದಿ, ಮಾರಾಟ ಮಾಡಲು 21 ವರ್ಷ ಕಡ್ಡಾಯ :  ಸಿಎಂ ವಿಜಯ್ ಸರ್ಕಾರ ಆದೇಶ ಚೆನ್ನೈ: ಇನ್ನು ಮುಂದೆ…

1 day ago

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ – vishwanews24

ಇಂದಿರಾ ಗಾಂಧಿ ನಂತರ ಯಾರಾದ್ರೂ ಮಾಸ್ ಲೀಡರ್ ಇದ್ರೆ, ಅದು ಮೋದಿ ಮಾತ್ರ: ಕೆ.ಎನ್‌ ರಾಜಣ್ಣ ನಾನು ಮೋದಿಯವರನ್ನು ಹೊಗಳುತ್ತಿಲ್ಲ.…

1 day ago