ದಕ್ಷಿಣ ಕನ್ನಡ

ಶೀಘ್ರದಲ್ಲಿ ನಗರಗಳ ಸ್ವಚ್ಛತಾ ರೇಟಿಂಗ್‌ ಪ್ರಕಟ ; ಮಂಗಳೂರಿಗೆ ಅಗ್ರ ಸ್ಥಾನದ ನಿರೀಕ್ಷೆ…..

ಮಹಾನಗರ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ನವಮಂಗಳೂರು ಬಂದರು ಸ್ವಚ್ಛತೆಯಲ್ಲಿ ದೇಶದಲ್ಲಿಯೇ ನಂ. 1 ಸ್ಥಾನಕ್ಕೆ ಭಾಜನವಾದಂತೆ, ಬಹುನಿರೀಕ್ಷಿತ ‘ಸ್ವಚ್ಛ ಸರ್ವೇಕ್ಷಣ್‌’ ವರದಿ ಶೀಘ್ರದಲ್ಲಿ ಪ್ರಕಟವಾಗಲಿದ್ದು, ಮಹಾನಗರ ಪಾಲಿಕೆಗೆ ಅಗ್ರಸ್ಥಾನ ದೊರೆಯುವ ನಿರೀಕ್ಷೆ ಇದೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ‘ಸ್ವಚ್ಛ ಭಾರತ ಮಿಷನ್‌’ ಅಡಿಯಲ್ಲಿ ಸ್ವಚ್ಛತೆಗಾಗಿ ನಗರಗಳಿಗೆ ನೀಡುವ ರೇಟಿಂಗ್‌ ಸಂಬಂಧಿಸಿ, ಮಂಗಳೂರು ನಗರದಲ್ಲಿ ಸ್ವಚ್ಛತೆಗಾಗಿ ಕೈಗೊಂಡ ಅಂಶಗಳನ್ನು ಪರಿಶೀಲಿಸಲು ಉನ್ನತ ಮಟ್ಟದ ಅಧಿಕಾರಿಗಳ ತಂಡ ಇತ್ತೀಚೆಗೆ ನಗರಕ್ಕೆ
ಆಗಮಿಸಿ, ಪರಿಶೀಲನೆ ನಡೆಸಿ ಅಂಕಗಳನ್ನು ಹಂಚಿಕೆ ಮಾಡಿದೆ.

ಜತೆಗೆ ನಗರದ ಜನರಿಂದ ಕೆಲವು ಪ್ರಶ್ನೆಗಳಿಗೆ ಉತ್ತರ ಆಹ್ವಾನಿಸಿ ಅದರ ಮೂಲಕವೂ ಅಂಕಗಳ ಹಂಚಿಕೆ ನಡೆಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಅಂತಿಮ ಫಲಿತಾಂಶ ಬರಲು ಬಾಕಿಯಿದೆ.

ಕಳೆದ ಬಾರಿ 63ನೇ ಸ್ಥಾನ
ಕಳೆದ ಬಾರಿ ನಡೆದ ‘ಸ್ವಚ್ಛ ಸರ್ವೇಕ್ಷಣ’ ದಲ್ಲಿ ಕರ್ನಾಟಕದ 27 ನಗರಗಳು ಪಾಲ್ಗೊಂಡಿದ್ದವು. ಅವುಗಳ ಪೈಕಿ ಮಂಗಳೂರು ಪಾಲಿಕೆಯು ದೇಶದಲ್ಲಿಯೇ 63ನೇ ಸ್ಥಾನಗಳಿಸಿದೆ. 2017ರಲ್ಲಿ 1 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯುಳ್ಳ ನಗರಗಳನ್ನು ಆಯ್ಕೆ ಮಾಡಲಾಗಿತ್ತು. ಈ ಬಾರಿ ದೇಶದ ಎಲ್ಲ ನಗರಗಳನ್ನು ಆಯ್ಕೆ ಮಾಡಿರುವುದರಿಂದ ಇನ್ನಷ್ಟು ಸವಾಲಿನ ಸ್ಪರ್ಧೆಯನ್ನು ಮಂಗಳೂರು ಎದುರಿಸಲಿದೆ.

‘ಸ್ವಚ್ಛ ಮಂಗಳೂರು’ ಸಂಕಲ್ಪ
ಶ್ರೀ ರಾಮಕೃಷ್ಣ ಮಿಷನ್‌, ಮಾತಾ ಅಮೃತಾನಂದಮಯಿ ಬಳಗದಿಂದ ನಡೆದ ‘ಸ್ವಚ್ಛ ಮಂಗಳೂರು’ ಅಭಿಯಾನದಿಂದಾಗಿ ಮಂಗಳೂರು ಸ್ವಚ್ಛತೆಯಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿಸಿದೆ. ಇದು ಕೂಡ ಹೆಚ್ಚಿನ ಅಂಕಗಳಿಕೆಗೆ ಸಹಾಯವಾಗಬಹುದು ಎಂಬ ನಿರೀಕ್ಷೆ ಇದೆ.

 

ಸ್ವಚ್ಛ ಸರ್ವೆಕ್ಷಣೆ; ಅಂಕಗಳ ಹಂಚಿಕೆ
ಸ್ವಚ್ಛ ಸರ್ವೇಕ್ಷಣ- 2018 ರಲ್ಲಿ ಎಲ್ಲ ನಗರಗಳಿಗೆ 4 ಹಂತಗಳಲ್ಲಿ ಅಂಕಗಳನ್ನು ನಿಗದಿಪಡಿಸಲಾಗಿದೆ. ಅದರಲ್ಲಿ ಸ್ಥಳೀಯ ಸಂಸ್ಥೆಗಳಿಂದ ಸಲ್ಲಿಸಲಾಗುವ ದಾಖಲೆಗಳಿಗೆ +1,400, ಸಾರ್ವಜನಿಕ ಅಭಿಪ್ರಾಯಗಳಿಗೆ +1,400, ಕೇಂದ್ರ ತಂಡದ ನೇರ ಸಮೀಕ್ಷೆಗೆ + 1,200 ಹಾಗೂ ಸ್ವಂತ ದೃಢೀಕರಣಕ್ಕೆ 440 ಅಂಕ ನಿಗದಿಪಡಿಸಲಾಗಿದೆ. ಸಮೀಕ್ಷೆಯಲ್ಲಿ ಸಾರ್ವಜನಿಕರ ಪಾಲ್ಗೊಳ್ಳುವಿಕೆಗೆ ವಿಶೇಷ ಆದ್ಯತೆ ನೀಡಿದ್ದು, ಸ್ವಚ್ಛತಾ ಆ್ಯಪ್‌ ಮುಖಾಂತರ ಪ್ರಶ್ನೆಗಳಿಗೆ ಉತ್ತರ ನಿರೀಕ್ಷಿಸಲಾತ್ತು. ಇದರಲ್ಲಿ ಬಂದ ಉತ್ತರದ ಆಧಾರದಲ್ಲಿ ಅಂಕಗಳ ಹಂಚಿಕೆ ಮಾಡಲಾಗುತ್ತದೆ.

ಏರ್‌ಪೋರ್ಟ್‌- ಎನ್‌ಎಂಪಿಟಿಗೆ ಸ್ವಚ್ಛತೆಯ ಗೌರವ
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದೇಶದಲ್ಲಿಯೇ ನಂ. 1 ‘ಸ್ವಚ್ಛ ನಿಲ್ದಾಣ ಎಂಬ ಹೆಗ್ಗಳಿಕೆ ಲಭಿಸಿದೆ. ಕೇಂದ್ರ ಸರಕಾರ ಫೆಬ್ರವರಿಯಲ್ಲಿ ನಡೆಸಿದ ಸಮೀಕ್ಷೆಯಲ್ಲಿ 15ರಿಂದ 50 ಲಕ್ಷದವರೆಗಿನ ಪ್ರಯಾಣಿಕರ ನಿರ್ವಹಣೆಯ ವಿಭಾಗದಲ್ಲಿ ಮೊದಲ ಸ್ಥಾನ ಲಭಿಸಿದೆ. ನವಮಂಗಳೂರು ಬಂದರು ಸ್ವತ್ಛತೆಯಲ್ಲಿ ದೇಶದ 12 ಬಂದರುಗಳ ಪೈಕಿ ಮೊದಲ ಸ್ಥಾನ ಗಳಿಸಿದ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ನೌಕಾಯಾನ ಇಲಾಖೆಯು ಅಧ್ಯಯನ ನಡೆಸಿ ವರದಿ ನೀಡಲು ಕ್ವಾಲಿಟಿ ಕೌನ್ಸೆಲ್‌ ಆಫ್‌ ಇಂಡಿಯಾ ಸಂಸ್ಥೆಯನ್ನು ನೇಮಿಸಿತ್ತು. ಅದರಂತೆ ಬಂದರು ಒಳಭಾಗ, ಸರಕು ನಿರ್ವಹಣೆ ಪ್ರದೇಶ, ಬಂದರು ಕಚೇರಿ, ಹಸಿರು ವಲಯ ನಿರ್ಮಾಣ ಹೀಗೆ ವಿವಿಧ ವಿಭಾಗದ ಸಾಧನೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗಿದೆ.

ಅಗ್ರಸ್ಥಾನದ ವಿಶ್ವಾಸ
ಈಗಾಗಲೇ ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ‘ಸ್ವಚ್ಛ  ಭಾರತ ಮಿಷನ್‌’ ಅಡಿಯಲ್ಲಿ ನಗರಗಳಿಗೆ ನೀಡುವ ಸ್ವಚ್ಛತಾ ರೇಟಿಂಗ್‌ ಬಗ್ಗೆ ಪರಿಶೀಲನ ತಂಡ ಮಂಗಳೂರಿಗೆ ಆಗಮಿಸಿ ಪರಿಶೀಲಿಸಿದೆ. ಮಂಗಳೂರಿಗೆ ಅಗ್ರಸ್ಥಾನ ದೊರೆಯುವ ವಿಶ್ವಾಸವಿದೆ.
 ಮೊಹಮ್ಮದ್‌ ನಝೀರ್‌,
ಮನಪಾ ಆಯುಕ್ತರು

 

Vishwa News 24

Recent Posts

ಉಡುಪಿ: ಮೀನುಗಾರರಿಗೆ ಯೋಜನೆಗಳ ಮಾಹಿತಿ ತಲುಪಿಸಿ: ಶಾಸಕ ಯಶ್‌ಪಾಲ್ ಸುವರ್ಣ – vishwanews24

ಉಡುಪಿ: ಮೀನುಗಾರರಿಗೆ ಯೋಜನೆಗಳ ಮಾಹಿತಿ ತಲುಪಿಸಿ: ಶಾಸಕ ಯಶ್‌ಪಾಲ್ ಸುವರ್ಣ ಉಡುಪಿ: ಮೀನುಗಾರಿಕೆ ದೇಶದ ಆರ್ಥಿಕತೆಗೆ ಮಹತ್ತರ ಕೊಡುಗೆ ನೀಡುವ…

1 hour ago

ನಾಳೆ ಮಧ್ಯಾಹ್ನ ಸಿಜೆಪಿಗೆ ಸರ್ಕಾರದ ನಿರ್ಧಾರ ತಿಳಿಸುತ್ತೇವೆ: ಜೆಪಿ ನಡ್ಡಾ – vishwanews24

ನಾಳೆ ಮಧ್ಯಾಹ್ನ ಸಿಜೆಪಿಗೆ ಸರ್ಕಾರದ ನಿರ್ಧಾರ ತಿಳಿಸುತ್ತೇವೆ: ಜೆಪಿ ನಡ್ಡಾ ನವದೆಹಲಿ: ನಾಳೆ ಮಧ್ಯಾಹ್ನ ಮತ್ತೆ ಕಾಕ್ರೋಚ್‌ ಜನತಾ ಪಾರ್ಟಿ…

2 hours ago

ಉಡುಪಿ ಅಕ್ಕಪಡೆ ತ್ವರಿತ ಕಾರ್ಯಾಚರಣೆ : ಕಾಣೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿ ಸುರಕ್ಷಿತವಾಗಿ ಪತ್ತೆ – vishwanews24

ಉಡುಪಿ ಅಕ್ಕಪಡೆ ತ್ವರಿತ ಕಾರ್ಯಾಚರಣೆ : ಕಾಣೆಯಾಗಿದ್ದ 8ನೇ ತರಗತಿ ವಿದ್ಯಾರ್ಥಿ ಸುರಕ್ಷಿತವಾಗಿ ಪತ್ತೆ ಉಡುಪಿ :ಜಿಲ್ಲೆಯಲ್ಲಿ ಕಾಣೆಯಾಗಿದ್ದ ಎಂಟನೇ…

2 hours ago

ಧರ್ಮೇಂದ್ರ ಪ್ರಧಾನ್ ವಜಾಗೊಳಿಸುವವರೆಗೆ ವಿಪಕ್ಷಗಳು ಸಂಸತ್ತಿನ ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ : ರಾಹುಲ್ ಗಾಂಧಿ – vishwanews24

ಧರ್ಮೇಂದ್ರ ಪ್ರಧಾನ್ ವಜಾಗೊಳಿಸುವವರೆಗೆ ವಿಪಕ್ಷಗಳು ಸಂಸತ್ತಿನ ಯಾವುದೇ ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ : ರಾಹುಲ್ ಗಾಂಧಿ ನವದೆಹಲಿ: ಧರ್ಮೇಂದ್ರ ಪ್ರಧಾನ್ ಅವರನ್ನ…

2 hours ago

ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಕೀಟನಾಶಕ ತಯಾರಿಸಿ ರೈತರಿಗೆ ಮಾರಾಟ : ಕೃಷಿ ಅಧಿಕಾರಿಗಳ ದಾಳಿ – vishwanews24

ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಕೀಟನಾಶಕ ತಯಾರಿಸಿ ರೈತರಿಗೆ ಮಾರಾಟ : ಕೃಷಿ ಅಧಿಕಾರಿಗಳ ದಾಳಿ ಚಿಕ್ಕಬಳ್ಳಾಪುರ: ಪ್ರತಿಷ್ಠಿತ ಕಂಪನಿಗಳ…

2 hours ago

ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ: ಇಂದಿನಿಂದಲೇ ಪರಿಷ್ಕೃತ ದರ ಜಾರಿ – vishwanews24

ನಂದಿನಿ ತುಪ್ಪ, ಬೆಣ್ಣೆ ಬೆಲೆ ಏರಿಕೆ: ಇಂದಿನಿಂದಲೇ ಪರಿಷ್ಕೃತ ದರ ಜಾರಿ ಬೆಂಗಳೂರು : ರಾಜ್ಯದಲ್ಲಿ ಕರ್ನಾಟಕ ರಾಜ್ಯ ಹಾಲು…

4 hours ago