Featured

ಶೀರೂರು ಶ್ರೀಗಳದ್ದು ಸ್ವಾಭಾವಿಕ ಸಾವಲ್ಲ , ಶ್ರೀಗಳ ಅಸಹಜ ಸಾವಿಗೆ ನ್ಯಾಯ ಸಿಗಲೇ ಬೇಕು : ವಕೀಲ ರವಿಕಿರಣ್‌ -Vishwanews24

ಉಡುಪಿ: ಶೀರೂರು ಶ್ರೀ ಲಕ್ಷ್ಮೇವರ ತೀರ್ಥರ ಮರಣೋತ್ತರ ಪರೀಕ್ಷೆ ನಡೆಸಿದ ಮಣಿಪಾಲ ಕೆಎಂಸಿ ಆಸ್ಪತ್ರೆಯ ತಜ್ಞ ವೈದ್ಯರು ಶ್ರೀಗಳ ರಕ್ತ, ಮೂತ್ರ ಹಾಗೂ ಉದರಾಂಗಗಳಲ್ಲಿ ವಿಷದ ಅಂಶ ಪತ್ತೆಯಾಗಿರುವ ಬಗ್ಗೆ ಉಲ್ಲೇಖ ಮಾಡಿದ್ದು ಹೀಗಾಗಿ ಅವರ ಸಾವು ಸ್ವಾಭಾವಿಕ ಸಾವಲ್ಲ ಅಂತ ವಕೀಲ ರವಿಕಿರಣ್‌ ಮುರ್ಡೇಶ್ವರ ತಿಳಿಸಿದ್ದಾರೆ.

ಅವರು ಶಿರೂರು ಸ್ವಾಮಿಗಳ ಸಾವಿಗೆ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆ ವಿಶೇಷ ಮಕ್ಕಳ ಸಮ್ಮುಖದಲ್ಲಿ ಸಂಸ್ಮರಣಾ ಕಾರ್ಯಕ್ರಮ ನಡೆಸಲಾಯಿತು. ಈ ವೇಳೆ ಮಾತನಾಡಿದ ಅವರು ಎ.ಸಿ ಕುಂದಾಪುರ ನ್ಯಾಯಲಯದಲ್ಲಿ ನಡೆಯುವ ಈ ಕೇಸು ಇನ್ನೂ ಕೂಡ ತೆರೆಯಲು ಅವಕಾಶ ಇದೆ. ಯಾವುದೆ ಕೊಲೆ ಅಥವಾ ಸಂಶಯಾಶ್ಪದ ಮರಣವಾಗಿದ್ದಲ್ಲಿ ಅದನ್ನು ಮತ್ತೆ ತೆರೆಯಲು ಅವಕಾಶವಿದೆ.

ಮಣಿಪಾಲದ ಕೆಎಮ್ ಸಿ ಆಸ್ಪತ್ರೆಯಲ್ಲಿ ನಡೆದ ಮರಣೋತ್ರರ ಪರೀಕ್ಷಯ ವರದಿ ಮತ್ತು ವಿಧಿ ವಿಜ್ಞಾನ ವರದಿ ಎರಡನ್ನ ಒಟ್ಟು ಗೂಡಿಸಿದ ಸಮಗ್ರ ವರದಿ( report-blood tested positive for organoprosporous urine sample tested for benzodiazepine)ಯನ್ನು ನ್ಯಾಯಲಯಕ್ಕೆ ಸಲ್ಲಿಸಲಾಗಿದ್ದರೂ ವಯೋ ಸಹಜ ಸಾವು ಎಂದು ತೀರ್ಪು ಬಂದಿದ್ದು ಒಪ್ಪತಕ್ಕದ್ದಲ್ಲ. ಇನ್ನೂ ಕೂಡ ಉಚ್ಚ ನ್ಯಾಯಾಲಯಲ್ಲಿ ರಿಟ್ ಪಿಟಿಷನ್ ಹಾಕುವ ಅವಕಾಶವಿದೆ. ಶ್ರೀಗಳ ಅಸಹಜ ಸಾವಿಗೆ ನ್ಯಾಯ ಸಿಗಲೇ ಬೇಕು. ಸ್ವಾಮೀಜಿಯ ಸುತ್ತಮುತ್ತ ಇದ್ದ ವಿರೋದ ಅಂಶಗಳನ್ನು ತೆಗೆದು ಕೊಳ್ಳಬೇಕು. ನ್ಯಾಯ ಪಡೆಯಲು ಎಲ್ಲಾ ದಿಕ್ಕಿನಿಂದ ಆಲೋಚನೆ ಮಾಡುವ ಅನಿವಾರ್ಯತೆ ಇದೆ ಎಂದು ವಕೀಲ ಒತ್ತಾಯಿಸಿದರು.

ಆದ್ರೆ ಮಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲದಿಂದ ಬಂದ ಅಂತಿಮ ವರದಿಯಲ್ಲಿ ಯಾವುದೇ ವಿಷಕಾರಿ ಅಂಶ ಇಲ್ಲ ಎಂದು ಹೇಳಲಾಗಿತ್ತು. ಎರಡನೇ ವರದಿಯ ಆಧಾರದಲ್ಲಿ ತನಿಖಾಧಿಕಾರಿಗಳು ಇದೊಂದು ಸ್ವಾಭಾವಿಕ ಸಾವು ಎಂಬ ನಿರ್ಣಯಕ್ಕೆ ಬಂದಿದ್ದರು. ವಿಷಕಾರಿ ಅಂಶಗಳಿರುವ ವರದಿಯನ್ನಿಟ್ಟುಕೊಂಡು ಪ್ರಕರಣ ರೀ ಓಪನ್ ಮಾಡಬಹುದು ಅ ಅಂತ ಹೇಳಿದರು.

ಈ ಸಂದರ್ಭದಲ್ಲಿ, ಸಾಯಿರಾಧ ಡೆವಲಪರ್ ನ ಮ್ಯಾನೇಜಿಂಗ್ ಡೈರೆಕ್ಟರ್ ಮನೋಹರ್ ಶೆಟ್ಟಿ, ಬಡಗುಬೆಟ್ಟು ಕ್ರೆಡಿಟ್ ಕೋಪರೇಟಿವ್ ನ ಜನರಲ್ ಮ್ಯಾನೇಜರ್ ಜಯಕರ್ ಶೇಟ್ಟಿ ಇಂದ್ರಾಳಿ, ಏಸ್ ಸಂಸ್ಥೆಯ ನಿರ್ದೇಶಕರಾದ ಲತಾವ್ಯ ಆಚಾರ್ಯ ಶ್ರೀಕಾಂತ್ ಶೆಟ್ಟಿ, ಸ್ಪಂಧನ ಶಾಲೆಯ ಮುಖ್ಯಸ್ಥರಾದ ಜನಾರ್ಧನ, ನವೀನ್ ರಾವ್, ರಾಧಾ ಕೃಷ್ಣ ಶೆಟ್ಟಿ, ಸಂತೋಷ್, ಭಾಸ್ಕರ್ ಮತ್ತಿರರು ಉಪಸ್ಥಿತರಿದ್ದರು.

Vishwa News 24

Recent Posts

ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ – vishwanews24

ತುಳುನಾಡಿನ ಸಾಂಪ್ರದಾಯಿಕ ಆಚರಣೆಗಳಲ್ಲಿ ಒಂದಾದ ಪ್ರೇತ ಮದುವೆ : ಸತ್ತು 25 ವರ್ಷ ಆದ್ಮೇಲೆ ಒಂದಾದ ಜೋಡಿ ತುಳುನಾಡಿನ ಸಾಂಪ್ರದಾಯಿಕ…

7 hours ago

ಮಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಶಾರುಖ್ ಖಾನ್ – vishwanews24

ಮಂಗಳೂರಿಗೆ ಆಗಮಿಸಿದ ಬಾಲಿವುಡ್ ನಟ ಶಾರುಖ್ ಖಾನ್ ಮಂಗಳೂರು: ನಗರದಲ್ಲಿ ಆಯೋಜಿಸಲಾಗಿರುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಾಲಿವುಡ್ ನಟ ಶಾರುಖ್ ಖಾನ್…

7 hours ago

ರಾಜ್ಯದ 13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಉಸ್ತುವಾರಿಯಾಗಿ ಯು.ಟಿ ಖಾದರ್ – vishwanews24

ರಾಜ್ಯದ 13 ಸಚಿವರಿಗೆ ಜಿಲ್ಲಾ ಉಸ್ತುವಾರಿ ಹಂಚಿಕೆ.. ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳ ಉಸ್ತುವಾರಿಯಾಗಿ…

7 hours ago

ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ – vishwanews24

ಪಠ್ಯಪುಸ್ತಕ ವಿವಾದದ ಬೆನ್ನಲ್ಲೇ NCERT ಸ್ಪಷ್ಟನೆ ನವದೆಹಲಿ: 6ನೇ ತರಗತಿಯ ಕನ್ನಡ ಪಠ್ಯಪುಸ್ತಕ ‘ಕೃಷ್ಣ’ ಕುರಿತು ಎದ್ದಿರುವ ವಿವಾದಕ್ಕೆ NCERT(ರಾಷ್ಟ್ರೀಯ…

7 hours ago

ಮುಲ್ಕಿ : ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ; 4 ಕೆ.ಜಿ ಗಾಂಜಾ ವಶ – vishwanews24

ಮುಲ್ಕಿ : ಗಾಂಜಾ ಮಾರಾಟ ಹಾಗೂ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ ; 4 ಕೆ.ಜಿ ಗಾಂಜಾ ವಶ ಮುಲ್ಕಿ:…

8 hours ago

ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ – vishwanews24

ಎನ್‌ಸಿಇಆರ್‌ಟಿ ಬಿಡುಗಡೆ ಮಾಡಿದ ಕನ್ನಡ ಪಠ್ಯಪುಸ್ತಕಕ್ಕೆ ಮಧು ಬಂಗಾರಪ್ಪ ವಿರೋಧ ಬೆಂಗಳೂರು: 6ನೇ ತರಗತಿಗಾಗಿ ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ…

8 hours ago